Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರದ ವಿದುರಾಶ್ವತ್ಥದಲ್ಲಿ ಕೋತಿಗಳ ಉಪಟಳ: ಓಡಿಸುವುದಕ್ಕೆ ಮಾರುವೇಷ ಧರಿಸಿದ ಅರಣ್ಯ ಸಿಬ್ಬಂದಿ

ಪ್ರವಾಸಿ ತಾಣದಲ್ಲಿ ಕೋತಿಗಳ ಉಪಟಳ ನಿಯಂತ್ರಿಸುವಂತೆ ಪ್ರವಾಸಿಗರು ಹಾಗೂ ಸ್ಥಳಿಯರು ಅರಣ್ಯ ಇಲಾಖೆಗೆ ದೂರು ನೀಡಿದ ಕಾರಣ ಸ್ವತಃ ಅರಣ್ಯ ಇಲಾಖೆ ಸಿಬ್ಬಂದಿ ಕೋತಿಗಳನ್ನು ಕಾಡಿಗಟ್ಟಲು ಹರಸಾಹಸ ಪಡುತ್ತಿದ್ದಾರೆ. ಪಟಾಕಿ ಹೊಡೆದು, ಬೆದರಿಸಿದರು ಕೋತಿಗಳು ಹೋಗುತ್ತಿಲ್ಲ.

ಚಿಕ್ಕಬಳ್ಳಾಪುರದ ವಿದುರಾಶ್ವತ್ಥದಲ್ಲಿ ಕೋತಿಗಳ ಉಪಟಳ: ಓಡಿಸುವುದಕ್ಕೆ ಮಾರುವೇಷ ಧರಿಸಿದ ಅರಣ್ಯ ಸಿಬ್ಬಂದಿ
ಕಪ್ಪು ಕೋತಿಯ ಮಾರುವೇಷ ಧರಿಸಿದ ಅರಣ್ಯ ಸಿಬ್ಬಂದಿ
Follow us
sandhya thejappa
|

Updated on: Mar 14, 2021 | 12:59 PM

ಚಿಕ್ಕಬಳ್ಳಾಪುರ: ಜಿಲ್ಲೆಯ ವಿದುರಾಶ್ವತ್ಥ ಪ್ರಸಿದ್ಧ ಪ್ರವಾಸಿ ತಾಣ. ದೇಶದ ವಿವಿಧ ಭಾಗಗಳಿಂದ ವಿದುರಾಶ್ವತ್ಥಕ್ಕೆ ಪ್ರತಿದಿನ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಪ್ರವಾಸಿಗರು ವಿಧುರಾಶ್ವತ್ಥಕ್ಕೆ ಬಂದು ಪ್ರವಾಸಿ ತಾಣ ವಿಕ್ಷಣೆ ಮಾಡುವುದಕ್ಕೂ ಮುನ್ನ ಅಲ್ಲಿರುವ ಕೋತಿಗಳ ಕಾಟವನ್ನು ಸಹಿಸಿಕೊಳ್ಳುವ ಪರಿಸ್ಥಿತಿ ಇದೀಗ ಎದುರಾಗಿದೆ.

ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ ಎಂದರೆ ಒಂದೆಡೆ ಅಶ್ವತ್ಥನಾರಾಯಣಸ್ವಾಮಿಯ ಪುರಾಣ ಪ್ರಸಿದ್ಧ ಧಾರ್ಮಿಕ ತಾಣ. ಮತ್ತೊಂದೆಡೆ ಸ್ವಾತಂತ್ರ್ಯ ಸೇನಾನಿಗಳು ಹುತಾತ್ಮರಾದ ತಾಣ. ಇದರಿಂದ ವಿದುರಾಶ್ವತ್ಥ ನೋಡಲು ಪ್ರತಿದಿನ ಸಾವಿರಾರು ಪ್ರವಾಸಿಗರು ಆಗಮಿಸ್ತಾರೆ. ಆದರೆ ಇಲ್ಲಿರುವ ಕೋತಿಗಳ ಉಪಟಳ ಒಂದಲ್ಲ ಎರಡಲ್ಲ. ಸ್ವತಃ ಅರಣ್ಯ ಇಲಾಖೆ ಸಿಬ್ಬಂದಿ ಮುಖಕ್ಕೆ ಕಪ್ಪು ಕೋತಿಯ ಮಾರುವೇಷ ಧರಿಸಿ ಕೋತಿಗಳನ್ನು ಹೆದುರಿಸುವ ಪರಿಸ್ಥಿತಿ ಉದ್ಭವವಾಗಿದೆ.

ಪ್ರವಾಸಿ ತಾಣದಲ್ಲಿ ಕೋತಿಗಳ ಉಪಟಳ ನಿಯಂತ್ರಿಸುವಂತೆ ಪ್ರವಾಸಿಗರು ಹಾಗೂ ಸ್ಥಳಿಯರು ಅರಣ್ಯ ಇಲಾಖೆಗೆ ದೂರು ನೀಡಿದ ಕಾರಣ ಸ್ವತಃ ಅರಣ್ಯ ಇಲಾಖೆ ಸಿಬ್ಬಂದಿ ಕೋತಿಗಳನ್ನು ಕಾಡಿಗಟ್ಟಲು ಹರಸಾಹಸ ಪಡುತ್ತಿದ್ದಾರೆ. ಪಟಾಕಿ ಹೊಡೆದು, ಬೆದರಿಸಿದರು ಕೋತಿಗಳು ಹೋಗುತ್ತಿಲ್ಲ. ಆದರೆ ನಾಡಿನ ಕೋತಿಗಳಿಗೆ ಕಾಡಿನ ಕಪ್ಪು ಕೋತಿ ಹಾಗೂ ಲಂಗೂರು ಕೋತಿ ಕಂಡರೆ ಪ್ರಾಣ ಭಯ. ಇದರಿಂದ ಅರಣ್ಯ ಇಲಾಖೆ ಸಿಬ್ಬಂದಿ ಪ್ರತಿದಿನ ಕಪ್ಪು ಕೋತಿಯ ವೇಷ ಧರಿಸಿ ಕೋತಿಗಳು ಇರುವ ಕಡೆ ಹೋಗಿ ಕೋತಿಗಳನ್ನು ಓಡಿಸುತ್ತಾರೆ.

ವಿದುರಾಶ್ವತ್ಥ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿರುವ ಭಕ್ತರು

ಕೋತಿಗಳನ್ನು ಓಡಿಸುವುದಕ್ಕೆ ಅರಣ್ಯ ಸಿಬ್ಬಂದಿಯ ಮಾರುವೇಷ

ವಿದುರಾಶ್ವತ್ಥಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ದೇವರ ಪೂಜೆ ಮಾಡಲು ಹೋಗೋಣ ಎಂದರೆ ಕೋತಿಗಳು ಕೈಯಲ್ಲಿರುವ ಪೂಜಾ ಸಾಮಾಮಗ್ರಿಗಳು ಕಿತ್ತು ಬಿಸಾಡುತ್ತವೆ. ದೇವರಿಗೆ ನೈವೇದ್ಯ ಮಾಡೋಣ ಅಂತ ಹಾಲು, ಮೊಸರು ತೆಗೆದುಕೊಂಡರೆ ದೇವರ ಗುಡಿ ತಲುಪುವ ಮೊದಲೇ ಕೋತಿಗಳ ಪಾಲಾಗುತ್ತದೆ. ಈಗ ಬೇಸಿಗೆಯಾದ ಕಾರಣ ಕಾಡಿನ ಕೋತಿಗಳು ಸಹಜವಾಗಿ ಜನ ಜಂಗುಳಿಯ ಪ್ರವಾಸಿ ಧಾಮದತ್ತ ಲಗ್ಗೆಯಿಡುತ್ತವೆ. ಆದರೆ ವಿದುರಾಶ್ವತ್ಥಸ್ವಾಮಿ ದೇವಸ್ಥಾನದ ಬಳಿ ಇರುವ ಕೋತಿಗಳು ಭಕ್ತರಿಗೆ ತೀರಾ ತೊಂದರೆಗಳನ್ನು ನಿಡುತ್ತಿವೆ. ಇದಕ್ಕಾಗಿ ಮಂಗಗಳ ಕಾಟದಿಂದ ಪಾರು ಮಾಡುವಂತೆ ಭಕ್ತರು ಅರಣ್ಯ ಇಲಾಖೆಗೆ ಆಗ್ರಹಿಸಿದ್ದು, ಕೋತಿಗಳನ್ನು ಓಡಿಸಲು ಅರಣ್ಯ ಇಲಾಖೆ ಹರಸಾಹಸ ಪಡುತ್ತಿದೆ.

ವಿದುರಾಶ್ವತ್ಥ ದೇವಸ್ಥಾನದ ಬಳಿಯಿರುವ ಕೋತಿ

ಇದನ್ನೂ ಓದಿ

ಮಹಾರಾಷ್ಟ್ರ: ಥಾಣೆ ಬಳಿ ವಸತಿ ಕಟ್ಟಡದಲ್ಲಿ ಬೆಂಕಿ ಅವಘಡ; 28 ವಿದ್ಯುತ್ ಮೀಟರ್​ಗಳು ಭಸ್ಮ

ಜೊಮ್ಯಾಟೊ ಫುಡ್​ ಡೆಲಿವರಿ ಬಾಯ್ ಕಾಮರಾಜು​ ಪರ ನಿಂತ ಬಾಲಿವುಡ್​ನ ಖ್ಯಾತ​ ನಟಿ; ಆರೋಪ ಮಾಡಿದ ಮಹಿಳೆ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ

ಮುಂಬೈ ಸೋಲಿಗೆ ಕಾರಣವಾಯ್ತು ಸಾಲ್ಟ್ ಹಿಡಿದ ಕ್ಯಾಚ್
ಮುಂಬೈ ಸೋಲಿಗೆ ಕಾರಣವಾಯ್ತು ಸಾಲ್ಟ್ ಹಿಡಿದ ಕ್ಯಾಚ್
ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?