AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ಪಿಜ್ಜಾದಿಂದ ದೊಡ್ಡ ಎಡವಟ್ಟು ಮಾಡಿಕೊಂಡ ಅಮೆರಿಕನ್​ ರೆಸ್ಟೋರೆಂಟ್​; 1 ಕೋಟಿ ರೂ.ಪರಿಹಾರ ಬೇಕೆಂದು ಕೋರ್ಟ್ ಮೆಟ್ಟಿಲೇರಿದ ಮಹಿಳೆ

ಇನ್ನು ದೀಪಾಲಿಯವರು, ಅಮೆರಿಕ್​ ರೆಸ್ಟೋರೆಂಟ್​ ತಮಗೆ ಪ್ರತಿಕ್ರಿಯಿಸಿದ ವಿಧಾನದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೊಂದು ದೊಡ್ಡ ವಿಷಯವೇ ಅಲ್ಲ ಎಂಬಂತೆ ಮಾತನಾಡಿದ್ದಾರೆ ಎಂದೂ ದೀಪಾಲಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಒಂದು ಪಿಜ್ಜಾದಿಂದ ದೊಡ್ಡ ಎಡವಟ್ಟು ಮಾಡಿಕೊಂಡ ಅಮೆರಿಕನ್​ ರೆಸ್ಟೋರೆಂಟ್​; 1 ಕೋಟಿ ರೂ.ಪರಿಹಾರ ಬೇಕೆಂದು ಕೋರ್ಟ್ ಮೆಟ್ಟಿಲೇರಿದ ಮಹಿಳೆ
ಪಿಜ್ಜಾ
Lakshmi Hegde
|

Updated on:Mar 14, 2021 | 11:48 AM

Share

ದೆಹಲಿ: ಉತ್ತರಪ್ರದೇಶದ ಘಾಜಿಯಾಬಾದ್​ನ ಮಹಿಳೆಯೊಬ್ಬರು ಅಮೆರಿಕನ್ ಪಿಜ್ಜಾ​ ರೆಸ್ಟೋರೆಂಟ್ ವಿರುದ್ಧ ಗ್ರಾಹಕರ ಕೋರ್ಟ್​ ಮೆಟ್ಟಿಲೇರಿದ್ದು, 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಈ ಅಮೆರಿಕನ್​ ರೆಸ್ಟೋರೆಂಟ್​ ನನ್ನ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ. ಅದರ ತಪ್ಪಿನಿಂದಾಗಿ ನಾನು ಪಾಪ ಮಾಡಿದಂತಾಯ್ತು. ಇದೀಗ ನನ್ನ ಪಾಪ ತೊಳೆದುಕೊಳ್ಳಲು ಕಠಿಣ ಪೂಜೆ ಮಾಡಬೇಕು.. ಅದು ದುಬಾರಿಯೂ ಹೌದು ಎಂದು ಮಹಿಳೆ ಕೋರ್ಟ್​ಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಮಹಿಳೆಯ ಹೆಸರು ದೀಪಾಲಿ ತ್ಯಾಗಿ. ನಾನು ಸಸ್ಯಾಹಾರಿ.. ಅಮೆರಿಕನ್​ ರೆಸ್ಟೋರೆಂಟ್​ನಿಂದ ಪಿಜ್ಜಾ ಆರ್ಡರ್​ ಮಾಡಿದ್ದೆ. ಆದರೆ ಅವರು ನಾನ್​ವೆಜ್​ ಪಿಜ್ಜಾ ಕಳಿಸಿದ್ದರು. ನಾನು ಗೊತ್ತಾಗದೆ ಒಂದು ಚೂರು ತಿಂದುಬಿಟ್ಟೆ. ನನಗೆ ಮಾಂಸ ತಿನ್ನಲು ಯಾವತ್ತೂ ಮನಸು ಒಪ್ಪುವುದಿಲ್ಲ. ನಮ್ಮ ಧಾರ್ಮಿಕ ನಂಬಿಕೆಗಳು, ಕುಟುಂಬ ಸಂಪ್ರದಾಯದಂತೆ ಯಾವ ಕಾರಣಕ್ಕೂ ಮಾಂಸಾಹಾರ ಮುಟ್ಟುವುದಿಲ್ಲ. ನನ್ನ ಆಯ್ಕೆ ಯಾವತ್ತೂ ನಾನ್​ವೆಜ್​ ಅಲ್ಲವೇ ಅಲ್ಲ ಎಂದೂ ಗ್ರಾಹಕರ ಕೋರ್ಟ್​ಗೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದ್ದಾರೆ.

ಘಟನೆಯ ವಿವರ 2019ರ ಮಾರ್ಚ್​ 21ರಂದು ಹೋಳಿ ಹಬ್ಬವಿತ್ತು. ಅಂದು ಹಬ್ಬದ ಆಚರಣೆಯ ಬಳಿಕ ನನಗೆ, ನನ್ನ ಮಕ್ಕಳಿಗೆ ತುಂಬ ಹಸಿವಾಯಿತು. ಹಾಗಾಗಿ ಈ ಅಮೆರಿಕನ್​ ರೆಸ್ಟೋರೆಂಟ್​​ನಿಂದ ವೆಜ್​ ಪಿಜ್ಜಾ ತರಿಸಲು ನಿಶ್ಚಯಮಾಡಿದೆವು. ಅದರಂತೆ ಆರ್ಡರ್​ ಕೂಡ ಮಾಡಿದ್ದೇವೆ. ಅಂದು ಪಿಜ್ಜಾ ಡೆಲಿವರಿ ಆಗಬೇಕಾದ ನಿಗದಿತ ಸಮಯಕ್ಕಿಂತ ಅರ್ಧಗಂಟೆ ತಡವಾಗಿಯೇ ಮನೆಗೆ ಬಂತು. ಕಂಪನಿ ಕೊಟ್ಟ ಸಮಯಕ್ಕಿಂತ ಅರ್ಧಗಂಟೆ ನಂತರ ಡೆಲಿವರಿ ಬಾಯ್​ ಬಂದರೂ ನಾನು ಅದನ್ನು ದೊಡ್ಡ ವಿಷಯ ಮಾಡಲಿಲ್ಲ. ಆದರೆ ಪಿಜ್ಜಾ ಒಂದು ಚೂರು ತಿನ್ನುತ್ತಿದ್ದಂತೆ ಅದು ನಾನ್​ವೆಜ್​ ಎಂಬುದು ಗೊತ್ತಾಯಿತು. ನಾವು ಮಶ್ರೂಮ್​ ಪಿಜ್ಜಾ ಆರ್ಡರ್ ಮಾಡಿದ್ದರೆ, ಅದರ ಬದಲು ಮಾಂಸವನ್ನು ಹಾಕಲಾಗಿತ್ತು ಎಂದು ಕೋರ್ಟ್​ಗೆ ನೀಡಿದ ದೂರಿನಲ್ಲಿ ದೀಪಾಲಿ ವಿವರಿಸಿದ್ದಾರೆ.

ಗ್ರಾಹಕರ ಕೋರ್ಟ್​​ನಲ್ಲಿ ದೀಪಾಲಿ ಪರ ವಕೀಲರಾದ ಪರ್ಹತ್​ ವಾರ್ಸಿ ವಾದಿಸುತ್ತಿದ್ದಾರೆ. ದೀಪಾಲಿಯವರು ಪಿಜ್ಜಾ ತಿನ್ನುತ್ತಿದ್ದಂತೆ ಅದು ನಾನ್​ವೆಜ್​ ಎಂಬುದು ಅವರ ಅರಿವಿಗೆ ಬಂತು. ಕೂಡಲೇ ಅವರು ಕಸ್ಟಮರ್​ ಕೇರ್​​ಗೆ ಕರೆ ಮಾಡಿ, ದೂರು ನೀಡಿದರು. ಸಸ್ಯಾಹಾರ ಮಾತ್ರ ತಿನ್ನುವ ನಾವು, ಅದನ್ನೇ ಆರ್ಡರ್​ ಮಾಡಿದಾಗ್ಯೂ.. ನಮಗೆ ನಾನ್​ವೆಜ್​ ಪಿಜ್ಜಾ ನೀಡಿದ್ದಾರೆ ಎಂದು ಕಸ್ಟಮರ್​ ಕೇರ್​ಗೆ ತಿಳಿಸಿದರು. ಅದಾದ ಬಳಿಕ ಮಾರ್ಚ್​ 29ರಂದು, ಅಮೆರಿಕನ್​ ರೆಸ್ಟೋರೆಂಟ್​ನ ಜಿಲ್ಲಾ ಮ್ಯಾನೇಜರ್​ ಎಂದು ಹೇಳಿಕೊಂಡು ಒಬ್ಬರು ದೀಪಾಲಿಯವರಿಗೆ ಕರೆ ಮಾಡಿದ್ದರು. ಅಲ್ಲದೆ, ತಮ್ಮಿಂದಾದ ತಪ್ಪನ್ನು ನಿಮಗೆ ಉಚಿತವಾಗಿ ಪಿಜ್ಜಾ ನೀಡುವ ಮೂಲಕ ಸರಿಪಡಿಸಿಕೊಳ್ಳುತ್ತೇವೆ ಎಂದೂ ಆಫರ್​ ನೀಡಿದರು. ಆದರೆ ದೀಪಾಲಿ ಒಪ್ಪಲಿಲ್ಲ. ಇದು ನೀವಂದುಕೊಂಡಷ್ಟು ಸರಳವಲ್ಲ ಎಂದೂ ಆ ಮ್ಯಾನೇಜರ್​ಗೆ ಹೇಳಿದರು ಎಂದು ಪರ್ಹತ್​ ವಾರ್ಸಿ ಕೋರ್ಟ್​ಗೆ ತಿಳಿಸಿದ್ದಾರೆ.

ಅಷ್ಟೇ ಅಲ್ಲ, ಇದು ಧಾರ್ಮಿಕ ಭಾವನೆಗೆ ಧಕ್ಕೆ ತಂದ ವಿಚಾರ. ನಾನ್​ವೆಜ್​ ಪಿಜ್ಜಾ ತಿಂದಿದ್ದರಿಂದ ನನ್ನ ಮನಸಲ್ಲಿ ಪಾಪ ಪ್ರಜ್ಞೆ ಕಾಡತೊಡಗಿದೆ. ಇದರಿಂದ ಹೊರಬರುವುದು ಅಷ್ಟು ಸುಲಭವಲ್ಲ. ನಾವು ಆಚರಿಸಿಕೊಂಡು ಬಂದ ಸಂಪ್ರದಾಯ ಹಾಳಾಯಿತು. ನಾನಿದನ್ನು ಸರಿಪಡಿಸಿಕೊಳ್ಳಲು ಕೆಲವು ಕಠಿಣ, ದುಬಾರಿ ವೆಚ್ಚದ ಧಾರ್ಮಿಕ ಆಚರಣೆಗಳನ್ನು ಮಾಡಬೇಕಾಗುತ್ತದೆ. ಲಕ್ಷಾಂತರ ರೂಪಾಯಿ ಬೇಕಾಗುತ್ತದೆ. ನೀವು ಆ ವೆಚ್ಚವನ್ನೂ ಕೊಡಬೇಕಾಗುತ್ತದೆ ಎಂದು ಅಮೆರಿಕನ್​ ರೆಸ್ಟೋರೆಂಟ್​ ಜಿಲ್ಲಾ ಮ್ಯಾನೇಜರ್​ಗೆ ದೀಪಾಲಿ ತಿಳಿಸಿದ್ದಾರೆ. ಅದಕ್ಕೆ ಪ್ರತ್ಯುತ್ತರ ನೀಡಿದ ಅವರು, ನನಗೆ ಹಣಕಾಸಿನ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಅಧಿಕಾರವಿಲ್ಲ. ನಾನು ಈ ಪ್ರಕರಣವನ್ನು ನಮ್ಮ ಲೀಗಲ್​ ತಂಡಕ್ಕೆ ವರ್ಗಾಯಿಸುತ್ತೇನೆ ಎಂದು ಹೇಳಿದ್ದಾರೆ ಎಂದೂ ವಕೀಲರು ತಿಳಿಸಿದ್ದಾರೆ.

ಇನ್ನು ದೀಪಾಲಿಯವರೂ ಸಹ ಅಮೆರಿಕ್​ ರೆಸ್ಟೋರೆಂಟ್​ ತಮಗೆ ಪ್ರತಿಕ್ರಿಯಿಸಿದ ವಿಧಾನದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೊಂದು ದೊಡ್ಡ ವಿಷಯವೇ ಅಲ್ಲ ಎಂಬಂತೆ ಮಾತನಾಡಿದ್ದಾರೆ ಎಂದೂ ದೀಪಾಲಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ತಮ್ಮ ಮಾನಸಿಕ ಹಿಂಸೆಗೆ ಕಾರಣವಾದ ಅಮೆರಿಕ್​ ರೆಸ್ಟೋರೆಂಟ್​ ವಿರುದ್ಧ ಕ್ರಮ ಕೈಗೊಳ್ಳಬೇಕು. ತಮಗೆ 1 ಕೋಟಿ ರೂ.ಪರಿಹಾರ ಕೊಡಿಸಬೇಕು ಎಂದು ಗ್ರಾಹಕರ ನ್ಯಾಯಾಲಯಕ್ಕೆ ದೀಪಾಲಿ ಮನವಿ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ದೆಹಲಿ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗ ಪಿಜ್ಜಾ ರೆಸ್ಟೋರೆಂಟ್​ಗೆ ಸೂಚನೆ ನೀಡಿದ್ದು, ಮುಂದಿನ ವಿಚಾರಣೆಯನ್ನು ಮಾರ್ಚ್​ 17ರಂದು ನಡೆಸುವುದಾಗಿ ತಿಳಿಸಿದೆ.

ಇದನ್ನೂ ಓದಿ: ಮಹಿಳೆ ಮೇಲೆ ಹಲ್ಲೆಗೈದಿದ್ದ ಜೊಮ್ಯಾಟೊ ಫುಡ್ ಡೆಲಿವರಿ ಬಾಯ್ ಕಾಮರಾಜು ಅರೆಸ್ಟ್​

Viral Video: ಅಡ್ಡಾದಿಡ್ಡಿ ಸ್ಕೂಟರ್​​ ಓಡಿಸಿದ ಯುವತಿ.. ಪ್ರಶ್ನಿಸಿದವನಿಗೆ ಧಮ್ಕಿ ಹಾಕಿ, ಮಧ್ಯ ಬೆರಳು ತೋರಿಸಿ ಪರಾರಿ!

Published On - 11:46 am, Sun, 14 March 21

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ