ಗದಗ KSRTC ಡಿಪೋ ಕರ್ಮಕಾಂಡ ಬಯಲು: ನೋ ಗ್ಯಾರಂಟಿ ಗಾಡಿ, ಡಿಪೋ ಮ್ಯಾನೇಜರ್ ಜೊತೆ ಸೆಟ್ಟಿಂಗ್ ಮಾಡಿಕೊಂಡ್ರೆ ಡ್ಯೂಟಿ ಎಂದ ಚಾಲಕ

ಕೆಎಸ್​ಆರ್​ಟಿಸಿಯ ಗದಗ ಜಿಲ್ಲೆ ಡಿಪೋದಲ್ಲಿನ ಬಸ್​​ಗಳ ಅಸಲಿಯತ್ತು ಬಯಲಾಗಿದೆ. ಈ ಡಿಪೋದ ಬಸ್​​ಗಳು ಎಷ್ಟು ಡೇಂಜರಸ್​ ಮತ್ತು ಸರಿಯಾದ ನಿರ್ವಹಣೆಯಿಲ್ಲದೆ ಗುಜುರಿಗೆ ಸೇರುತ್ತಿವೆ ಎಂದು ಚಾಲಕರು ಬಯಲು ಮಾಡಿದ್ದಾರೆ. ಡಿಪೋದಲ್ಲಿ ಲಂಚ ಹೇಗೆ ತಾಂಡವವಾಡಿತ್ತಿದೆ. ಡ್ಯೂಟಿ ಪಡೆಯಲು ಗುಂಡು-ತುಂಡು ನೀಡಬೇಕು ಎಂಬುವುದರ ಬಗ್ಗೆ ಬಸ್​ ಚಾಲಕರು ಟಿವಿ9 ಡಿಜಿಟಲ್​​ಗೆ ತಿಳಿಸಿದ್ದಾರೆ. ಹಾಗಿದ್ದರೆ ಚಾಲಕರು ತಿಳಿಸಿದ ಅಸಲಿ ಸತ್ಯವೇನು ಇಲ್ಲಿದೆ ಓದಿ..

Follow us
| Updated By: ವಿವೇಕ ಬಿರಾದಾರ

Updated on:Dec 13, 2023 | 9:42 AM

ಗದಗ, ಡಿಸೆಂಬರ್​ 13: ರಾಜ್ಯದಲ್ಲಿ ಶಕ್ತಿ ಯೋಜನೆ (Shakti Schme) ಜಾರಿಯಾದ ಹಿನ್ನಲೆಯಲ್ಲಿ ಸರ್ಕಾರಿ ಬಸ್​​ಗಳ ಬಳಕೆಯು ಹೆಚ್ಚಾಗಿದೆ. ಕೇವಲ ರಾಜ್ಯ ಮಾತ್ರವಲ್ಲದೇ ಅಂತರಾಜ್ಯಕ್ಕೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಸಂಪರ್ಕ ಕಲ್ಪಿಸುತ್ತಿದೆ. ಕೆಎಸ್​ಆರ್​ಟಿಸಿಗೆ ಇತ್ತೀಚಿಗೆ 2023ನೇ ಸಾಲಿನ ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರ್ಯಾಂಡ್ ಪ್ರಶಸ್ತಿ ಲಭಿಸಿತ್ತು. ಆದರೆ ಇದೇ ಕೆಎಸ್​ಆರ್​ಟಿಸಿಯ ಗದಗ ಜಿಲ್ಲೆ ಡಿಪೋದಲ್ಲಿನ ಬಸ್​​ಗಳ ಅಸಲಿಯತ್ತು ಬಯಲಾಗಿದೆ. ಈ ಡಿಪೋದ ಬಸ್​​ಗಳು ಎಷ್ಟು ಡೇಂಜರಸ್​ ಮತ್ತು ಸರಿಯಾದ ನಿರ್ವಹಣೆಯಿಲ್ಲದೆ ಗುಜುರಿಗೆ ಸೇರುತ್ತಿವೆ ಎಂದು ಚಾಲಕರು ಬಯಲು ಮಾಡಿದ್ದಾರೆ.

ಅಲ್ಲದೆ ಡಿಪೋದಲ್ಲಿ ಲಂಚ ಹೇಗೆ ತಾಂಡವವಾಡಿತ್ತಿದೆ. ಡ್ಯೂಟಿ ಪಡೆಯಲು ಗುಂಡು-ತುಂಡು ನೀಡಬೇಕು ಎಂಬುವುದರ ಬಗ್ಗೆ ಬಸ್​ ಚಾಲಕರು ಟಿವಿ9 ಡಿಜಿಟಲ್​​ಗೆ ತಿಳಿಸಿದ್ದಾರೆ. ಹಾಗಿದ್ದರೆ ಚಾಲಕರು ತಿಳಿಸಿದ ಅಸಲಿ ಸತ್ಯವೇನು ಇಲ್ಲಿದೆ ಓದಿ..

ಚಾಲಕ: ನಮಸ್ಕಾರಿ ಸರ್

ಟಿವಿ9: ಏನ್ ಸಮಸ್ಯೆ ಇದೆ.

ಚಾಲಕ: ನೋ ಗ್ಯಾರಂಟಿ ಗಾಡಿ ರೀ. ಒಂದು ಗಾಡಿನೂ ಓಕೆ ಗಾಡಿ ಇಲ್ಲ

ಟಿವಿ9: ಹೇಗೆ ಚಾಲಕರ ಪರಿಸ್ಥಿತಿ ?

ಚಾಲಕ: ದೇವರೇ ಕಾಪಾಡಬೇಕು.

ಟಿವಿ9: ಏನಾದ್ರೂ ಹೆಚ್ಚುಕಡಿಮೆ ಆದ್ರೆ ?

ಚಾಲಕ: ದೇವರೇ ಕಾಪಾಡಬೇಕು.

ಟಿವಿ9: ಸಮಸ್ಯೆ ಏನಿದೆ ?

ಚಾಲಕ: ಗಾಡಿ ಮೆಂಟೆನೆನ್ಸ್ ಇಲ್ಲ.

ಟಿವಿ9: ಹೇಗೆ ತೆಗೆದುಕೊಂಡು ಹೋಗುತ್ತೀರಿ ?

ಚಾಲಕ: ಏನ್ ಮಾಡೋದು ಸರ್ ಹೊಟ್ಟೆಪಾಡು.. ನೌಕರಿ ಆಗಬೇಕಲ್ಲ. ನೀ ಒಲ್ಲೆ ಅಂದ್ರೆ ಬಿಡು ಅಂತಾರೆ. ಹೋಗೋಗೆ 10 ಚಾಲಕರು ರೆಡಿ ಇರುತ್ತಾರೆ. ಅಂತ ಹೇಳುತ್ತಾರೆ.

ಟಿವಿ9: ಒಂದೂ ಗಾಡಿ ಕಂಡಿಷನ್ ಇಲ್ವಾ ?

ಚಾಲಕ: ನೋ ಗ್ಯಾರಂಟಿ ಗಾಡಿ. ಒಂದು ಗಾಡಿ ಕಂಡಿಷನ್ ಇಲ್ಲ. ಕ್ಲಚ್ ಇಲ್ಲ. ಬ್ರೇಕ್ ಇಲ್ಲಾ. ಇಂಜೀನ್ ಆಯಿಲ್ ಇಲ್ಲ.

ಟಿವಿ9: ಸರ್ಕಾರದಿಂದ ಹಣ ಬರುತ್ತೋ ಇಲ್ವೋ ?

ಚಾಲಕ: ಸರ್ಕಾರದ ಹಣ ಡಿಸೇಲ್, ವೇತನಕ್ಕೆ ಅಷ್ಟೇ ಕೊಡುತ್ತಿದ್ದಾರೆ ಸರ್​​.

ಟಿವಿ9: ಮೆಂಟೆನೆನ್ಸ್ ಇಲ್ವಾ ?

ಚಾಲಕ : ದುಡ್ಡು ಬರುವಾಗ್ಲೇ ಮಾಡಿಲ್ಲ ಈಗ ಮಾಡ್ತಾರಾ…

ಟಿವಿ9: ರಿಪೇರಿ ಗಾಡಿ ಒಳಗೆ ಬಹಳ ಇದಾವಾ ?

ಚಾಲಕ: 57 ಸ್ಕ್ಯ್ರಾಪ್ ಗಾಡಿ ಇವೆ. ಹೊರಗೆ ತೆಗೆಯಬಾರದು ಅಂಥ ಗಾಡಿ ಅವು.

ಟಿವಿ9: ನಿಲ್ಲಿಸಿದ್ದಾರಾ… ?

ಚಾಲಕ: ನಿಲ್ಲಿಸಿಲ್ಲಾ ಅವೇ ಓಡಿಸ್ತಾಯಿದ್ದಾರೆ.

ಟಿವಿ9: ಚಾಲಕರಿಗೆ ಡ್ಯೂಟಿ ಕೊಡ್ತಾಯಿಲ್ಲವಂತೆ ?

ಚಾಲಕ: ಅಯ್ಯೋ ದೊಡ್ಡ ಸಮಸ್ಯೆ ಇದೆ. ಯಾರೂ ಹೇಳಲ್ಲ.

ಟಿವಿ9: ಡ್ಯೂಟಿ ಕೊಡ್ತಾರೋ ಇಲ್ವೋ ?

ಚಾಲಕ: ಎಲ್ಲಿ ಡ್ಯೂಟಿ, ಕುಂತಿದ್ದಾರೆ ಕಟ್ಟಿಗೆ.. ಇಲ್ಲಿ ನೋಡಿ. ಈಗ ಹೋದ್ನಲ್ಲ ಅವ್ನೇ ಡಿಪೋ ಮ್ಯಾನೇಜರ್

ಟಿವಿ9: ಡಿಪೋ ಮ್ಯಾನೇಜರ್ ಎಲ್ಲಿಗೆ ಹೋದಾ ?

ಚಾಲಕ: ಇವರು ಡಿಪೋ ಮ್ಯಾನೇಜರ್ ಅಲ್ಲಾ. ಡಿಪೋ ಮ್ಯಾನೇಜರ್ ಲೆಕ್ಕಕ್ಕೆ ಅದಾನ್. ಅವ್ನ ತಗೊಂಡು ದುರ್ಗಾವಿಹಾರ ಹೋಟೆಲ್​ಗೆ ಹೋಗ್ಬೇಕು. ಸೆಟ್ಟಿಂಗ್ ಮಾಡಬೇಕು. ಚಹಾ ಕುಡಿಸಿ, ಎಣ್ಣೆ ಹೊಡಿಸಿ ಸೆಟಿಂಗ್ ಮಾಡಬೇಕು.

ಟಿವಿ9: ಯಾರು ಅವರು ?

ಚಾಲಕ: ಎಟಿಎಸ್ (ಅಸಿಸ್ಟಂಟ್ ಟ್ರಾಫಿಕ್ ಇನ್ಸಪೆಕ್ಟರ್) ಧನ್ಯಾಳ ಅಂತ.

ಟಿವಿ9: ಎಟಿಎಸ್​ಗೆ ಬೆಣ್ಣೆ ಹಚ್ಚಿದ್ರೆ ಅಷ್ಟೇ ಡ್ಯೂಟಿನಾ ?

ಚಾಲಕ: ಹಾಂ ಬೆಣ್ಣೆ ಹಚ್ಚಿದ್ರೆ, ರೊಕ್ಕಾ ಕೊಟ್ರೆ. ಕುಡಿಸಿದ್ರೆ ತಿನಿಸಿದ್ರೆ ಅಷ್ಟೇ.

ಟಿವಿ9: ಗಾಡಿ ರಿಪೇರಿ ಬಹಳ ಇದಾವಾ ?

ಚಾಲಕ: ಸಾಕಷ್ಟು ಗಾಡಿ ಅದಾವ್ರಿ. ಒಳಗೆ ನಿಮಗೆ ಅಲಾವ್ ಇಲ್ಲಾ..

ಟಿವಿ9: ಎಲ್ಲಾ ರಿಪೇರಿ ಇದ್ರೆ. ನಿಮ್ಮ ಡ್ಯೂಟಿ ಹೇಗೆ ?

ಚಾಲಕ: ಯಾರೂ ರೊಕ್ಕಾ ಕೊಟ್ಟು ಒಂದು ಟ್ರಿಪ್ ತೊಗೊಂಡು ಹೋಗ್ತಾರೆ.. ಗಾಡಿ ಅಲ್ಲೇ ನಿಲ್ಲುತ್ತೆ. ಅವ್ರಿಗೆ ನೌಕರಿ ಹಾಕ್ತಾರೆ. 1 ಟ್ರಿಪ್​ಗೆ ಸೆಟಿಂಗ್ ಇದ್ದ ಗಿರಾಕಿಗೆ ಹಾಗೆ. ಸೆಟಿಂಗ್​ಗೆ ನಾವು ದುಡ್ಡು ಕೊಡಲ್ಲ. ಈ ತಿಂಗಳ 5 ದಿನ ಪಗಾರ ತೆಗೆದಿಲ್ಲ. 3 ದಿನಕ್ಕೆ ಒಂದು ವಾರದ ಪಗಾರ ಹಾಕಿಲ್ಲ. 5-6 ಸಾವಿರ ನಮ್ದು ಹೊಯ್ತು. 20 ವರ್ಷ ದುಡಿದ ನಮಗೆ ಈ ಹಣೆ ಬರಹ ಇದೆ. ಹೊಸಬರ ಪರಿಸ್ಥಿತಿ ಹೇಗೆ…

ಟಿವಿ9: ಹೀಗಾದ್ರೆ ನಿಮ್ಮ ಪರಿಸ್ಥಿತಿ ಹೇಗೆ

ಚಾಲಕ: ನಮಗೆ ದೇವರೇ ಕಾಪಾಡಬೇಕು. ಎಲ್ಲಿ ಹೋದ್ರು ನ್ಯಾಯ ಸಿಗಲ್ಲ. ಎಲ್ಲ ಪ್ರಯತ್ನ ಮಾಡಿವಿ. ಪೊಲೀಸ್ ಠಾಣೆಗೆ ಹೋಗಿವಿ. ಕೋರ್ಟ್​ಗೆ ಹೋಗಿವಿ ಎಲ್ಲೂ ನ್ಯಾಯ ಸಿಕ್ಕಿಲ್ಲ. ಎಂಡಿ ಭೇಟಿ ಆಗಿವಿ. ಎಲ್ಲೆಲ್ಲೂ ಸಣ್ಣ ಕಾರ್ಮಿಕರಿಗೆ ನ್ಯಾಯ ಸಿಕ್ಕಿಲ್ಲ.

ಟಿವಿ9 : ಶಕ್ತಿ ಯೋಜನೆ ಜಾರಿಯಾದಾಗಿನಿಂದ ಸಮಸ್ಯೆನಾ..

ಚಾಲಕ: ಶಕ್ತಿ ಯೋಜನೆಗಿಂತ ಮೊದಲು ಬಾದ್ ಆಗಿದೆ… ಅಂತ ಚಾಲಕ ಮಾತು ಮುಗಿಸಿ ಹೋದರು.

ಹೀಗೆ ಗದಗ ಡಿಪೋದಲ್ಲಿನ ಕರ್ಮಕಾಂಡವನ್ನು ಚಾಲಕ ಟಿವಿ9 ಡಿಜಿಟಿಲ್​ ಎದುರು ಬಿಚ್ಚಿಟ್ಟಿದ್ದಾರೆ. ಈಗಲದರೂ ಸಂಬಂಧಪಟ್ಟ ಅಧಿಕಾರಿಗಳು, ಸಚಿವರು ಎಚ್ಚತ್ತಕೊಳ್ಳಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:38 am, Wed, 13 December 23