ಗದಗದಲ್ಲಿ ಮನೆ, ನಿವೇಶನ ನೀಡುವುದಾಗಿ ಜನರಿಗೆ ಕೋಟಿ ಕೋಟಿ ರೂ. ವಂಚನೆ ಮಾಡಿದ್ದ ಫೈನಾನ್ಸ್ ಮಾಲೀಕ ಅರೆಸ್ಟ್!

ಹೆಚ್ಚಿನ ಬಡ್ಡಿ ಹಣ, ನಿವೇಶನ ಹಾಗೂ ಜಮೀನು ನೀಡುವ ದುರಾಸೆ ಹುಟ್ಟಿಸಿ ಹಣ ಹೂಡಿಕೆ ಮಾಡಿಕೊಳ್ಳುತ್ತಿದ್ದ. ಚಿಟ್ ಫಂಡ್, ಬಂಗಾರದ ವ್ಯಾಪಾರ, ಪಿಗ್ಮಿ ಹೆಸರಲ್ಲಿ ವಿಜಯ ಶಿಂಧೆ ಫೈನಾನ್ಸ್ ನಡೆಸುತ್ತಿದ್ದ.

ಗದಗದಲ್ಲಿ ಮನೆ, ನಿವೇಶನ ನೀಡುವುದಾಗಿ ಜನರಿಗೆ ಕೋಟಿ ಕೋಟಿ ರೂ. ವಂಚನೆ ಮಾಡಿದ್ದ ಫೈನಾನ್ಸ್ ಮಾಲೀಕ ಅರೆಸ್ಟ್!
ಬಂಧಿತ ಆರೋಪಿ ವಿಜಯ್ ಶಿಂಧೆ
Edited By:

Updated on: Jul 20, 2022 | 10:54 AM

ಗದಗ: ಮನೆ (Home) ಹಾಗೂ ನಿವೇಶನ (Site) ನೀಡುವುದಾಗಿ ಕೋಟಿ ಕೋಟಿ ರೂ. ಹಣ ಪಡೆದು ಜನರಿಗೆ ವಂಚನೆ ಮಾಡಿದ್ದ ಫೈನಾನ್ಸ್ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ರಾಜೀವ್ ಗಾಂಧಿ ನಗರದ ನಿವಾಸಿ ವಿಜಯ್ ಶಿಂಧೆ ಬಂಧಿತ ಆರೋಪಿ. ಆರೋಪಿ ಗದಗ ನಗರದ ಸಣ್ಣ ಪುಟ್ಟ ವ್ಯಾಪಾರಸ್ಥರು ಸೇರಿದಂತೆ ಹಲವರಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ್ದಾನೆ. ಈ ಬಗ್ಗೆ ಮಾಹಿತಿ ನೀಡಿರುವ ಗದಗ ಎಸ್​ಪಿ ಶಿವಪ್ರಕಾಶ್ ದೇವರಾಜು, ಕಳೆದ ಹಲವು ವರ್ಷಗಳಿಂದ ವಿಜಯ ಶಿಂಧೆ ಶ್ರೀ ಪುಟ್ಟರಾಜ ಫೈನಾನ್ಸ್ ಕಾರ್ಪೊರೇಷನ್ ಹೆಸರಿನಲ್ಲಿ ಫೈನಾನ್ಸ್ ನಡೆಸುತ್ತಿದ್ದ. ಈತ ಹಲವರಿಗೆ ವಂಚಿಸಿದ್ದಾನೆ ಎಂದು ಹೇಳಿದರು.

ಹೆಚ್ಚಿನ ಬಡ್ಡಿ ಹಣ, ನಿವೇಶನ ಹಾಗೂ ಜಮೀನು ನೀಡುವ ದುರಾಸೆ ಹುಟ್ಟಿಸಿ ಹಣ ಹೂಡಿಕೆ ಮಾಡಿಕೊಳ್ಳುತ್ತಿದ್ದ. ಚಿಟ್ ಫಂಡ್, ಬಂಗಾರದ ವ್ಯಾಪಾರ, ಪಿಗ್ಮಿ ಹೆಸರಲ್ಲಿ ವಿಜಯ ಶಿಂಧೆ ಫೈನಾನ್ಸ್ ನಡೆಸುತ್ತಿದ್ದ. ಇದ್ದಕ್ಕಿದ್ದಂತೆ ಕಳೆದ ಎರಡು ವರ್ಷಗಳ ಹಿಂದೆ ಲಾಸ್ ಆಗಿದ್ದೀನಿ ಎಂದು ಹೇಳಿದ್ದ ವಿಜಯ ಶಿಂಧೆ ಬಗ್ಗೆ ಯಾರೂ ದೂರು ಕೊಡಲು ಮುಂದಾಗಿರಲಿಲ್ಲ. ಆದರೆ ಓರ್ವ ವ್ಯಕ್ತಿ ಆತನ ವಿರುದ್ಧ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು ಎಂದು ಎಸ್​ಪಿ ದೇವರಾಜು ತಿಳಿಸಿದರು.

ಇದನ್ನೂ ಓದಿ: ಖಾಸಗಿ ಶಾಲೆಗಳಿಗೆ ಠಕ್ಕರ್ ನೀಡಲು ಮುಂದಾದ ಶಿಕ್ಷಣ ಇಲಾಖೆ: ಇನ್ನುಂದೆ ರಾಜ್ಯದ ಸರ್ಕಾರಿ ಶಾಲೆಗಳಲ್ಲಿಯೂ ಸ್ಪೋಕನ್ ಇಂಗ್ಲೀಷ್ ಕ್ಲಾಸ್

ಇದನ್ನೂ ಓದಿ
Gold Price Today: ಬೆಂಗಳೂರು ಸೇರಿ ಹಲವೆಡೆ ಚಿನ್ನದ ಬೆಲೆ ಏರಿಕೆ; ಬೆಳ್ಳಿ ದರ 400 ರೂ. ಕುಸಿತ
High BP: ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿ ಫೈಬರ್ ಭರಿತ ಆಹಾರಗಳು: ಇಲ್ಲಿದೆ ಆಹಾರಗಳ ಪಟ್ಟಿ
Siddhanth Kapoor: ಬೆಂಗಳೂರಿನಲ್ಲಿ ಡ್ರಗ್ಸ್​ ಪಾರ್ಟಿ ಪ್ರಕರಣ; ನಟಿ ಶ್ರದ್ಧಾ ಕಪೂರ್​ ಸೋದರ ಸಿದ್ಧಾಂತ್​ಗೆ ನೋಟಿಸ್ ಸಾಧ್ಯತೆ
ದೇವೇಗೌಡರು, ಕುಮಾರಸ್ವಾಮಿಗೆ ಅವಕಾಶ ಮಾಡಿಕೊಟ್ಟಿದ್ದೀರಿ, ನನಗೂ ಅವಕಾಶ ಮಾಡಿಕೊಡಿ; ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್

ಆರೋಪಿ ಕಳೆದ 10 ವರ್ಷಗಳಿಂದ ಅವಳಿ ನಗರದ ಜನರಿಗೆ ಮೋಸ ಮಾಡುತ್ತಿದ್ದಾನೆ ಎಂದು ಹೇಳಿದ ಎಸ್​ಪಿ,
ಯಾರ್ಯಾರು ಮೋಸ ಹೋಗಿದ್ದೀರೋ ಅವರು ಎಸ್ಪಿ ಕಚೇರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

ಪೊಲೀಸರೆಂದು ಹೇಳಿಕೊಂಡು ಚಿನ್ನಾಭರಣ ದೋಚಿದ ಖದೀಮರು:
ಚಿತ್ರದುರ್ಗ: ಪೊಲೀಸರೆಂದು ಹೇಳಿಕೊಂಡು ಖದೀಮರು ಚಿನ್ನಾಭರಣ ದೋಚಿರುವ ಘಟನೆ  ಹೊಳಲ್ಕೆರೆ ತಾಲೂಕಿನ ಟಿ.ನುಲೇನೂರು ಗ್ರಾಮದ ಬಳಿ ನಡೆದಿದೆ. ಕಳ್ಳರು ಬೈಕ್ ಸವಾರ ವಿಶ್ವನಾಥ್​ ಬಳಿಯಿದ್ದ ಚಿನ್ನಾಭರಣವನ್ನು ದೋಚಿದ್ದಾರೆ. ಚಿನ್ನಾಭರಣ ರಿಪೇರಿಗೆಂದು ವಿಶ್ವನಾಥ್ ಬೈಕ್​ನಲ್ಲಿ ಅನ್ನೇಹಾಳ್​ನಿಂದ ಹೊಳಲ್ಕೆರೆಗೆ ತೆರಳುತ್ತಿದ್ದರು. ಟಿ.ನುಲೇನೂರು ಬಳಿ ಪೊಲೀಸರೆಂದು ಹೇಳಿಕೊಂಡು ಬೈಕ್​ನ ತಡೆದಿದ್ದಾರೆ. ಖದೀಮರು ಗಾಂಜಾ ಸಾಗಣೆ ಮಾಡುತ್ತಿದ್ದೀರೆಂದು ಪರಿಶೀಲಿಸಿದರು. ಕಳ್ಳರಿದ್ದಾರೆಂದು ಎಚ್ಚರಿಸುವ ನೆಪದಲ್ಲಿ ಚಿನ್ನಾಭರಣ ತೆಗೆದುಕೊಂಡು ಪರಾರಿಯಾಗಿದ್ದಾರೆ. ಇಬ್ಬರು 2.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದು, ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ವಾಹನ ತಪಾಸಣೆ ವೇಳೆ ಮಹಿಳಾ ಪೊಲೀಸ್ ಮೇಲೆ ವ್ಯಾನ್​ ಹತ್ತಿಸಿ ಕೊಲೆ; ಜಾರ್ಖಂಡ್​​ನಲ್ಲಿ ಮತ್ತೊಂದು ಆಘಾತಕಾರಿ ಘಟನೆ

Published On - 10:52 am, Wed, 20 July 22