ಪರಸ್ತ್ರೀ ವ್ಯಾಮೋಹ, ಪ್ರಶ್ನಿಸಿದ್ದಕ್ಕೆ ಪತ್ನಿಯನ್ನೇ ಹತ್ಯೆಗೈದ ಸದ್ದಾಂ, ಎರಡು ಮಕ್ಕಳು ಅನಾಥ

ಪರಸ್ತ್ರೀ ವ್ಯಾಮೋಹಕ್ಕೆ ಪತಿಯೊಬ್ಬ ಪತ್ನಿಯನ್ನು ಕತ್ತು ಹಿಸುಕಿ ಸಾಯಿಸಿ ಪರಾರಿಯಾಗಿರುವ ಘಟನೆ ಗದಗ ( Gadaga)ಜಿಲ್ಲೆಯಲ್ಲಿ ನಡೆದಿದೆ. ಮತ್ತೊಂದೆಡೆ ನೀರು ಕುಡಿಯಲು ಹೋಗಿದ್ದ ವ್ಯಕ್ತಿಯೋರ್ವ ಕೆರೆಗೆ ಬಿದ್ದು ಮೃತಪಟ್ಟಿದ್ದಾನೆ. ಈ ಎರಡು ಪ್ರತ್ಯೇಕ ಘಟನೆಗಳ ವಿವರ ಇಲ್ಲಿದೆ.

ಪರಸ್ತ್ರೀ ವ್ಯಾಮೋಹ, ಪ್ರಶ್ನಿಸಿದ್ದಕ್ಕೆ ಪತ್ನಿಯನ್ನೇ ಹತ್ಯೆಗೈದ ಸದ್ದಾಂ, ಎರಡು ಮಕ್ಕಳು ಅನಾಥ
ಮೃತ ಸನಾ ಮನೆ ಮುಂದೆ ಸೇರಿದ ಜನ
Edited By:

Updated on: Aug 20, 2023 | 5:18 PM

ಗದಗ (ಆಗಸ್ಟ್ 20): ಪರಸ್ತ್ರೀ ವ್ಯಾಮೋಹಕ್ಕೆ ಒಳಗಾಗಿದ್ದ ಪತಿಯೊಬ್ಬ(Husband) ಪತ್ನಿಯನ್ನು(Wife) ಕತ್ತು ಹಿಸುಕಿ ಸಾಯಿಸಿ ಪರಾರಿಯಾಗಿರುವ ಘಟನೆ ಗದಗ (Gadag) ತಾಲೂಕಿನ ಹೊಂಬಾಳ ಗ್ರಾಮದಲ್ಲಿ ನಡೆದಿದೆ, ಗದಗ ತಾಲೂಕಿನ ಹೊಂಬಾಳ ಗ್ರಾಮದ ಸದ್ದಾಂ ಅಗಸ ಎನ್ನುವಾತನಿಗೆ ಮದ್ವೆಯಾಗಿ ಎರಡು ಮಕ್ಕಳು ಇವೆ. ಆದರೂ ಈತ ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ, ಇದನ್ನು ಪ್ರಶ್ನಿಸಿದ್ದಕ್ಕೆ ಪತ್ನಿ ಸನಾಳನ್ನು ( 25) ಕತ್ತು ಹಿಸುಕಿ ಸಾಯಿಸಿದ್ದಾನೆ ಎಂದು ಸನಾ ಕುಟುಂಬಸ್ಥರು ಆರೋಪಿಸಿದ್ದಾರೆ.

ಇದಕ್ಕೆ ಪುಷ್ಠಿ ನೀಡುವಂತೆ ಸನಾರವರ ಮುಖ ಹಾಗೂ ಕತ್ತಿನ ಮೆಲೆ ಗಾಯದ ಕುರುಹುಗಳಿವೆ ಎಂದು ಸದ್ದಾಂ ಹಾಗೂ ಅವನ ಕುಟುಂಬಸ್ಥರ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಸದ್ದಾಂ ಹಾಗೂ ಸನಾರವರ ಮದುವೆಯಾಗಿ ಆರು ವರ್ಷವಾಗಿತ್ತು. ಮದುವೆಯಾದರೂ ಬೇರೆ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ. ಇದನ್ನು ಪತ್ನಿ ಸನಾ ಪ್ರಶ್ನಿಸಿದ್ದಕ್ಕೆ ನಿತ್ಯವೂ ಜಗಳ, ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಸನಾ ಸಾವಿನಿಂದ ಎರಡು ಮಕ್ಕಳು ಅನಾಥವಾಗಿವೆ.

ಇದನ್ನೂ ಓದಿ: ಬೆಡ್​​ ರೂಮ್​ನಲ್ಲಿ ಯುವಕನ ಜೊತೆ ಹೆಂಡ್ತಿ ಕಂಡು ಹೌಹಾರಿದ ಪತಿ, ಡೆತ್​ನೋಟ್ ನಲ್ಲಿ ಭಾವುಕ ನುಡಿ ಬರೆದಿಟ್ಟು ಬಿಬಿಎಂಪಿ ನೌಕರ ಆತ್ಮಹತ್ಯೆ

ಈ ಕುರಿತು ಗದಗ ತಾಲೂಕಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೀರು ಕುಡಿಯಲು ಹೋಗಿದ್ದ ವ್ಯಕ್ತಿ ನೀರುಪಾಲು

ಗದಗ (ಆಗಸ್ಟ್ 20) : ನೀರು ಕುಡಿಯಲು ಹೋಗಿ ವ್ಯಕ್ತಿಯೊಬ್ಬ ಕೆರೆಗೆ ಬಿದ್ದು ಸಾವನಪ್ಪಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹುಣಸಹಟ್ಟಿ ಗ್ರಾಮದಲ್ಲಿ ನಡೆದಿದೆ. ಕೆರೆಗೆ ನೀರು ಕುಡಿಯಲು ಹೋಗಿದ್ದ ಶಂಕರಗೌಡ ( 38) ಎಂಬಾತ ನೀರು ಪಾಲಾಗಿದ್ದಾನೆ. ನಿನ್ನೆ ( ಆ.19) ರಾತ್ರಿ ಕೆರೆಗೆ ನೀರು ಕುಡಿಯಲು ಹೋಗಿದ್ದ ವ್ಯಕ್ತಿ ಕಾಲು ಜಾರಿ ಬಿದ್ದಿದ್ದ. ಸ್ಥಳಕ್ಕೆ ನರಗುಂದ ಪೊಲೀಸ್ ರು ಭೇಟಿ ನೀಡಿದ್ದು, ಇಂದು ಈಜುಗಾರರ ಸಹಾಯದಿಂದ ಮೃತದೇಹವನ್ನು ಹೊರತೆಗೆಯಲಾಗಿದೆ. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.