IPS Transfer: ಹಲವು ಐಪಿಎಸ್ ಅಧಿಕಾರಿಗಳಿಗೆ ಬಡ್ತಿ, ವರ್ಗಾವಣೆ, ವಿವಿಧ ಸ್ಥಾನಗಳಿಗೆ ನಿಯುಕ್ತಿ

ಐಪಿಎಸ್ ಬಡ್ತಿ ಪಡೆದಿದ್ದ ಪೊಲೀಸ್ ಅಧಿಕಾರಿಗಳಿಗೆ ಸ್ಥಳ ನಿಯುಕ್ತಿಗೊಳಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.

IPS Transfer: ಹಲವು ಐಪಿಎಸ್ ಅಧಿಕಾರಿಗಳಿಗೆ ಬಡ್ತಿ, ವರ್ಗಾವಣೆ, ವಿವಿಧ ಸ್ಥಾನಗಳಿಗೆ ನಿಯುಕ್ತಿ
ಪ್ರಾತಿನಿಧಿಕ ಚಿತ್ರ
Edited By:

Updated on: Dec 31, 2021 | 11:20 PM

ಬೆಂಗಳೂರು: ಐಪಿಎಸ್ ಬಡ್ತಿ ಪಡೆದಿದ್ದ ಪೊಲೀಸ್ ಅಧಿಕಾರಿಗಳಿಗೆ ಸ್ಥಳ ನಿಯುಕ್ತಿಗೊಳಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಎಂ.ವಿ.ಚಂದ್ರಕಾಂತ್ (ಎಸ್​ಪಿ, ಅರಣ್ಯ ವಿಭಾಗ, ಕೊಡಗು), ಮಧುರವೀಣಾ (ಪೊಲೀಸ್ ವರಿಷ್ಠಾಧಿಕಾರಿ, ಸಿಐಡಿ), ಚೆನ್ನಬಸವಣ್ಣ ಲಂಗೋಟಿ (ಎಸ್​ಪಿ, ಗುಪ್ತದಳ, ಬೆಳಗಾವಿ), ಜಯಪ್ರಕಾಶ್ (ಎಸ್​ಪಿ, ಭ್ರಷ್ಟಾಚಾರ ನಿಗ್ರಹ ದಳ, ದಾವಣಗೆರೆ), ಕೆ.ಪಿ.ಅಂಜಲಿ (ಎಸ್​ಪಿ, ಕರ್ನಾಟಕ ಲೋಕಾಯುಕ್ತ), ಎಂ.ನಾರಾಯಣ (ಎಸ್​ಪಿ, ಗುಪ್ತದಳ, ಬೆಂಗಳೂರು), ಎಂ.ಮುತ್ತುರಾಜ್ (ಎಸ್​ಪಿ, ಗುಪ್ತದಳ, ಮೈಸೂರು), ಶೇಖರ್ ಎಚ್.ಟೆಕ್ಕಣ್ಣನವರ್ (ಎಸ್​ಪಿ, ಐಎಸ್​ಡಿ), ರವೀಂದ್ರ ಕಾಶಿನಾಥ್ ಗಡಾಡಿ, ಎಸ್​ಪಿ (ಹೆಸ್ಕಾಂ, ಹುಬ್ಬಳ್ಳಿ), ಅನಿತಾ ಹದ್ದಣ್ಣವರ್ (ಎಸ್​ಪಿ, ಲೋಕಾಯುಕ್ತ, ವಿಜಯಪುರ), ಎ.ಕುಮಾರಸ್ವಾಮಿ (ಎಸ್​ಪಿ, ಲೋಕಾಯುಕ್ತ, ಮಂಗಳೂರು), ಸಾರಾ ಫಾತೀಮಾ (ಪೊಲೀಸ್ ವರಿಷ್ಠಾಧಿಕಾರಿ, ಸಿಐಡಿ), ರಶ್ಮಿ ಪರದ್ದಿ (ಎಸ್​ಪಿ, ಚೆಸ್ಕಾಂ, ಮೈಸೂರು), ಎಂ.ಎ.ಅಯ್ಯಪ್ಪ (ಎಸ್​ಪಿ, ಕೆಪಿಸಿಎಲ್ ವಿಜಿಲೆನ್ಸ್​), ಡಾ.ಶಿವಕುಮಾರ್ (ಎಸ್​ಪಿ, ಗುಪ್ತದಳ, ಬೆಂಗಳೂರು), ಮಲ್ಲಿಕಾರ್ಜುನ ಬಾಲದಂಡಿ (ಎಸ್​ಪಿ, ಗುಪ್ತದಳ, ಬೆಂಗಳೂರು), ಅಮರನಾಥ ರೆಡ್ಡಿ (ಎಸ್​ಪಿ, ಭ್ರಷ್ಟಾಚಾರ ನಿಗ್ರಹ ದಳ).

11 ಐಪಿಎಸ್​ ಅಧಿಕಾರಿಗಳಿಗೆ ಬಡ್ತಿ ನೀಡಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ. ಮುರುಗನ್ (ಎಡಿಜಿಪಿ, ಲಾಜಿಸ್ಟಿಕ್ ಮತ್ತು ಮಾಡರ್ನೈಸೇಷನ್), ಕೆ.ವಿ.ಶರತ್​ ಚಂದ್ರ (ಎಡಿಜಿಪಿ, ಅಪರಾಧ ವಿಭಾಗ), ಎಂ.ನಂಜುಂಡಸ್ವಾಮಿ (ಎಡಿಜಿಪಿ, ಗೃಹರಕ್ಷಕ ದಳ), ಸೌಮೇಂದು ಮುಖರ್ಜಿ (ಐಜಿಪಿ, ಗುಪ್ತದಳ), ಎಸ್.ರವಿ (ಐಜಿಪಿ, ಕೆಎಸ್​ಆರ್​ಪಿ, ಬೆಂಗಳೂರು), ವಿಪುಲ್ ಕುಮಾರ್, (ಐಜಿಪಿ, ಆಂತರಿಕ ಭದ್ರತಾ ವಿಭಾಗ), ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ (ಐಜಿಪಿ, ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ), ಲಾಬೂರಾಮ್ (ಐಜಿಪಿ, ಹು-ಧಾ ನಗರ ಪೊಲೀಸ್ ಆಯುಕ್ತ, ಬಡ್ತಿ ನೀಡಿ ಪೊಲೀಸ್ ಆಯುಕ್ತರ ಹುದ್ದೆಯಲ್ಲೇ ಮುಂದುವರಿಕೆ), ಸಂದೀಪ್ ಪಾಟೀಲ್ (ಐಜಿಪಿ, ಹೆಚ್ಚುವತಿ ಪೊಲೀಸ್ ಆಯುಕ್ತ, ಬೆಂಗಳೂರು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ), ಡಾ.ಪಿ.ಎಸ್.ಹರ್ಷ (ಐಜಿಪಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ), ವಿಕಾಸ್ ಕುಮಾರ್ (ಐಜಿಪಿ, ವ್ಯವಸ್ಥಾಪಕ ನಿರ್ದೇಶಕರು, ಎಂಎಸ್​ಐಎಲ್).

ನಾಲ್ವರು ಐಪಿಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ರಮಣ್ ಗುಪ್ತಾ (ಡಿಐಜಿಪಿ, ಸಿಸಿಬಿ ಜಂಟಿ ಪೊಲೀಸ್ ಆಯುಕ್ತ), ಡಾ.ತ್ಯಾಗರಾಜನ್ (ಡಿಐಜಿಪಿ, ನೇಮಕಾತಿ ವಿಭಾಗ, ಬೆಂಗಳೂರು), ಡಾ.ಬೋರಲಿಂಗಯ್ಯ (ಡಿಐಜಿಪಿ, ಬೆಳಗಾವಿ ಪೊಲೀಸ್​ ಆಯುಕ್ತ), ರಾಮ್ ನಿವಾಸ್ ಸೆಪಟ್ ಮತ್ತು ಡಾ.ರೋಹಿಣಿ ಕಟೋಚ್ (ಸಹಾಯಕ ನಿರ್ದೇಶಕರು, ಹೈದರಾಬಾದ್​ನಲ್ಲಿರುವ ನ್ಯಾಷನಲ್ ಪೊಲೀಸ್ ಅಕಾಡೆಮಿ).

YouTube video playerಇದನ್ನೂ ಓದಿ: Sachin Atulkar: ವೈರಲ್​ ಆಯ್ತು ಐಪಿಎಸ್​ ಅಧಿಕಾರಿಯ ಫೋಟೋ; ಪೊಲೀಸ್​ ಎಂದರೆ ಹೀಗೆ ಇರಬೇಕು ಎಂದ ನೆಟ್ಟಿಗರು
ಇದನ್ನೂ ಓದಿ: ನಟ ರಾಜ್​​ಕುಮಾರ್​ ಸಿನಿಮಾಗಳನ್ನು ನೋಡಿ ಕನ್ನಡ ಕಲಿತ ಐಪಿಎಸ್​ ಅಧಿಕಾರಿ

 

Loading...
Unable to load recommendations.
Follow Us