ಗ್ರಾ.ಪಂ. ಚುನಾವಣೆ ಮತ ಎಣಿಕೆ: ಕರ್ತ್ಯವ್ಯದಲ್ಲಿದ್ದ ಚುನಾವಣಾಧಿಕಾರಿ ಹೃದಯಘಾತದಿಂದ ಸಾವು

ಲೋಕೋಪಯೋಗಿ ಇಲಾಖೆ ಅಭಿಯಂತರರಾಗಿದ್ದ ಬೋರೆಗೌಡ ಸಾವನ್ನಪ್ಪಿರುವ ದುರ್ದೈವಿಯಾಗಿದ್ದಾರೆ. ಪಿರಿಯಾಪಟ್ಟಣ ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಮ ಪಂಚಾಯತಿ ಚುನಾವಣಾಧಿಕಾರಿಯಾಗಿದ್ದ ಬೋರೆಗೌಡ ಅವರು ಮತ ‌ಎಣಿಕೆ ಕೇಂದ್ರದ ಬಳಿ ಅಸ್ವಸ್ಥರಾಗಿದ್ದಾರೆ.

ಗ್ರಾ.ಪಂ. ಚುನಾವಣೆ ಮತ ಎಣಿಕೆ: ಕರ್ತ್ಯವ್ಯದಲ್ಲಿದ್ದ ಚುನಾವಣಾಧಿಕಾರಿ ಹೃದಯಘಾತದಿಂದ ಸಾವು
ಮೃತ ಚುನಾವಣಾಧಿಕಾರಿ ಬೋರೆಗೌಡ

Updated on: Dec 30, 2020 | 11:20 AM

ಮೈಸೂರು: ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಸಂದರ್ಭದಲ್ಲಿ ಕರ್ತ್ಯವ್ಯದಲ್ಲಿದ್ದ ಚುನಾವಣಾಧಿಕಾರಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದಿದೆ.

ಲೋಕೋಪಯೋಗಿ ಇಲಾಖೆ ಅಭಿಯಂತರರಾಗಿದ್ದ ಬೋರೆಗೌಡ ಸಾವನ್ನಪ್ಪಿರುವ ದುರ್ದೈವಿಯಾಗಿದ್ದಾರೆ. ಪಿರಿಯಾಪಟ್ಟಣ ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಮ ಪಂಚಾಯತಿ ಚುನಾವಣಾಧಿಕಾರಿಯಾಗಿದ್ದ ಬೋರೆಗೌಡ ಅವರು ಮತ ‌ಎಣಿಕೆ ಕೇಂದ್ರದ ಬಳಿ ಅಸ್ವಸ್ಥರಾಗಿದ್ದಾರೆ. ತಕ್ಷಣವೇ ಸಿಬ್ಬಂದಿಗಳು ಬೋರೆಗೌಡ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ತೀವ್ರ ಹೃದಯಾಘಾತದಿಂದ ಬೋರೆಗೌಡ ಅವರು ಮಾರ್ಗ ಮಧ್ಯದಲ್ಲಿಯೆ ಕೊನೆಯುಸಿರೆಳೆದಿದ್ದಾರೆ.

ಕಾಲುವೆಗೆ ಉರುಳಿದ ಕಾರು: ಮತ ಎಣಿಕೆ ಏಜೆಂಟ್ ಆಗಲು ಹೊರಟ್ಟಿದ್ದವರು ಸೇರಿದ್ದು ಮಸಣಕ್ಕೆ

Published On - 10:47 am, Wed, 30 December 20