AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದಿ ಬದಿಯಲ್ಲಿ ಮಲಗಿದ್ದ ವೃದ್ಧೆಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಹಾವೇರಿ ಜನ

ಬಿಸಿಲಿನ ಝಳಕ್ಕೆ ತೀವ್ರ ಅಸ್ವಸ್ಥರಾಗಿ ಮಲಗಿದ್ದ ವೃದ್ಧೆಯನ್ನು ನೋಡಿದ ಜನರು ಹಾಗೆ ಓಡಾಡುತ್ತಿದ್ದರು. ಹುಕ್ಕೇರಿ ಮಠದ ಬಳಿ ಇರುವ ಕೆಲವು ಮಹಿಳೆಯರು ಹಾಗೂ ಸ್ಥಳೀಯರು ವೃದ್ಧೆಯ ಪರಿಸ್ಥಿತಿ ಕಂಡು ಮಮ್ಮಲ ಮರುಗುತ್ತಿದ್ದರು.

ಬೀದಿ ಬದಿಯಲ್ಲಿ ಮಲಗಿದ್ದ ವೃದ್ಧೆಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಹಾವೇರಿ ಜನ
ರಸ್ತೆ ಬದಿಯಲ್ಲಿ ಮಲಗಿರುವ ವೃದ್ಧೆ, ವೃದ್ಧೆಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವ ಜನ
sandhya thejappa
|

Updated on: May 02, 2021 | 9:33 AM

Share

ಹಾವೇರಿ: ಕಳೆದ ಕೆಲವು ತಿಂಗಳಿನಿಂದ ಕೊರೊನಾ ಎರಡನೇ ಅಲೆಯ ಅಬ್ಬರ ಹೆಚ್ಚಾಗುತ್ತಿದೆ. ಅದರಲ್ಲೂ ಯಾರನ್ನೂ ಮುಟ್ಟಿ ಆಸ್ಪತ್ರೆಗೆ ಸೇರಿಸಲು ಹಿಂದೇಟು ಹಾಕುವ ಪರಿಸ್ಥಿತಿ ಈಗ ರಾಜ್ಯದಲ್ಲಿ ನಿರ್ಮಾಣವಾಗಿದೆ. ಅನಾರೋಗ್ಯಕ್ಕೆ ಒಳಗಾದವರನ್ನು ಅವರ ಮನೆಯವರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಭಯಪಡುವ ವಾತಾವರಣವಿದೆ. ಆದರೆ ಹಾವೇರಿ ನಗರದಲ್ಲಿರುವ ಹುಕ್ಕೇರಿ ಮಠದ ಸಮೀಪ ಸುಮಾರು ಅರವತ್ತು ವರ್ಷದ ವೃದ್ಧೆಯೊಬ್ಬರು ಅಸ್ವಸ್ಥಗೊಂಡು ರಸ್ತೆ ಬದಿಯಲ್ಲಿರುವ ಚರಂಡಿ ಬಳಿ ಮಲಗಿದ್ದರು. ಆ ವೃದ್ಧೆಯನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಜನರು ಮಾನವೀಯತೆ ಮೆರೆದಿದ್ದಾರೆ.

ಬಿಸಿಲಿನ ಝಳಕ್ಕೆ ತೀವ್ರ ಅಸ್ವಸ್ಥರಾಗಿ ಮಲಗಿದ್ದ ವೃದ್ಧೆಯನ್ನು ನೋಡಿದ ಜನರು ಹಾಗೆ ಓಡಾಡುತ್ತಿದ್ದರು. ಹುಕ್ಕೇರಿ ಮಠದ ಬಳಿ ಇರುವ ಕೆಲವು ಮಹಿಳೆಯರು ಹಾಗೂ ಸ್ಥಳೀಯರು ವೃದ್ಧೆಯ ಪರಿಸ್ಥಿತಿ ಕಂಡು ಮಮ್ಮಲ ಮರುಗುತ್ತಿದ್ದರು. ಬಿಸಿಲಿನ ಬೇಗೆಯಿಂದ ರಕ್ಷಣೆ ಪಡೆಯಲು ಏನೇನೋ ಹಾಕಿಕೊಂಡು ಮಲಗಿದ್ದ ವೃದ್ಧೆಯನ್ನು ನೋಡಿದ ಮಹಿಳೆಯರು ಹಾಗೂ ಕೆಲವು ಸ್ಥಳೀಯರು ಆಸ್ಪತ್ರೆಗೆ ಸೇರಿಸುವ ಮನಸ್ಸು ಮಾಡಿದರು. ಕೆಲಕಾಲ ವೃದ್ಧೆಯನ್ನು ಸ್ಥಳಾಂತರ ಮಾಡಲು ಸೂಕ್ತ ವ್ಯವಸ್ಥೆಯಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಗಮನಿಸಿದ ಸ್ಥಳೀಯ ಯುವಕರಾದ ಕಿರಣ ಅಂಗಡಿ ಹಾಗೂ ಕೆಲವು ಸ್ಥಳೀಯರು ಸೇರಿಕೊಂಡು 108 ಅಂಬ್ಯುಲೆನ್ಸ್ ವಾಹನ ಕರೆಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಇದು ಸ್ಥಳೀಯರ ಮಾನವೀಯತೆಗೆ ಸಾಕ್ಷಿಯಾಗಿತ್ತು.

ಸ್ಥಳೀಯರು ಹಾಗೂ ಮಹಿಳೆಯರು ಸುಮಾರು ಎರಡು ಗಂಟೆಗಳ ಕಾಲ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನ ಪಟ್ಟರು. ಕೊನೆಗೂ ಹರಸಾಹಸ ಮಾಡಿ ವೃದ್ಧೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಕಾರ್ಯ ಮಾಡಿದ್ದಾರೆ. ಆದರೆ ತೀವ್ರ ಅನಾರೋಗ್ಯಕ್ಕೆ ಒಳಗಾದಂತೆ ಕಂಡುಬಂದ ವೃದ್ಧೆ ತನ್ನ ಮನೆಯವರ ಪರಿಚಯ ಹೇಳುವ ಸ್ಥಿತಿಯಲ್ಲಿ ಇರಲಿಲ್ಲ. ಅದರಲ್ಲೂ ಬಿಸಿಲಿಗೆ ಬಹಳಷ್ಟು ಸುಸ್ತಾಗಿದ್ದರಿಂದ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿದೆವು. ಯಾರೇ ಆಗಲಿ ವಯಸ್ಸಾದ ತಂದೆ- ತಾಯಿ, ಅಜ್ಜಿಯರನ್ನು ಹೀಗೆ ಹೊರಗಡೆ ಬಿಡಬಾರದು. ವಯಸ್ಸಾದವರನ್ನು ಆರೈಕೆ ಮಾಡಬೇಕು. ಇಲ್ಲದಿದ್ದರೆ ಎಲ್ಲ ಇದ್ದರೂ ಏನೂ ಇಲ್ಲ ಎಂಬಂತಹ ನೋವಿನಲ್ಲಿ ದಿನಗಳನ್ನು ಕಳೆಯಬೇಕಾಗುತ್ತದೆ ಎಂದು ಸ್ಥಳೀಯ ಯುವಕ ಕಿರಣ ಅಂಗಡಿ ಅಭಿಪ್ರಾಯಪಟ್ಟರು.

ಇದನ್ನೂ ಓದಿ

ರೋಗಿಗಳ ನೆರವಿಗೆ ನಿಂತು, ಅನಾಥ ಶವಗಳಿಗೆ ಮುಕ್ತಿ ಕೊಡುತ್ತಿದ್ದಾರೆ ಹಾವೇರಿಯ ಅಬ್ದುಲ್ ಖಾದರ

ಕುಡಿಯುವ ನೀರಿಗಾಗಿ ಹಾಹಾಕಾರ; ಕೊರೊನಾ ಮರೆತು ನಾ ಮುಂದು ತಾ ಮುಂದು ಎಂದು ಮುಗಿಬಿದ್ದ ಜನ

(haveri People admitted old woman to hospital)