AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀವಂತವಾಗಿದೆಯೇ ಬಿಬಿಎಂಪಿ ಆರೋಗ್ಯ ವಿಭಾಗ? ಶವ ದಹನ ಹೊಗೆಯಿಂದ ಕಂಗಾಲಾಗಿದ್ದಾರೆ ಸ್ಥಳೀಯರು

ಕೆಂಗೇರಿ ಉಪನಗರ ಕೊಮ್ಮಘಟ್ಟ ರಸ್ತೆಯಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ಪ್ರತಿನಿತ್ಯ 25ರಿಂದ 30 ಶವಗಳನ್ನು ದಹನ ಮಾಡಲಾಗುತ್ತಿದೆ. ಹೀಗಾಗಿ ಬೆಳಗ್ಗೆಯಿಂದ ರಾತ್ರಿಯವರೆಗೂ ನಿರಂತರವಾಗಿ ಚಿತಾಗಾರದಿಂದ ದಟ್ಟ ಹೊಗೆ ಹೊರ ಹೊಮ್ಮುತ್ತಿದೆ. ಇದರಿಂದಾಗಿ ಚಿತಾಗಾರದ ಸುತ್ತಮುತ್ತಲಿನ ಪ್ರದೇಶದಲ್ಲಿ ಹೊಗೆ ತುಂಬಿಕೊಂಡಿದ್ದು ಜನ ಆತಂಕಪಡುವ ಸ್ಥಿತಿ ನಿರ್ಮಾಣವಾಗಿದೆ.

ಜೀವಂತವಾಗಿದೆಯೇ ಬಿಬಿಎಂಪಿ ಆರೋಗ್ಯ ವಿಭಾಗ? ಶವ ದಹನ ಹೊಗೆಯಿಂದ ಕಂಗಾಲಾಗಿದ್ದಾರೆ ಸ್ಥಳೀಯರು
ಶವ ದಹನ ಹೊಗೆ ಹೊರ ಹೊಮ್ಮುತ್ತಿರುವುದು
ಆಯೇಷಾ ಬಾನು
|

Updated on: May 02, 2021 | 10:27 AM

Share

ಬೆಂಗಳೂರು: ಮಹಾಮಾರಿ ಕೊರೊನಾದ ಎರಡನೇ ಅಲೆಯ ಭೀಕರತೆ ಗಂಟೆ ಗಂಟೆಗೂ ಹೆಚ್ಚುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಿಲ್ಲರ್ ಕೊರೊನಾ ಮರಣ ಮೃದಂಗ ಬಾರಿಸುತ್ತಿದೆ. ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರ ನಡುವೆ ಕೊರೊನಾ ಮೃತರ ಶವಗಳ ದಹನದಿಂದ ಜನ ಸಾಮಾನ್ಯರಿಗೂ ಭಾರಿ ತೊಂದರೆ ಉಂಟಾಗುತ್ತಿದ್ದು ಚಿತಾಗಾರಗಳಿರುವ ಸುತ್ತಮುತ್ತಲಿನ ಪ್ರದೇಶ ದುರ್ನಾತ ಬೀರುತ್ತಿದೆ.

ಕೊವಿಡ್ನಿಂದ ಮೃತಪಟ್ಟವರ ದಹನ ಕ್ರಿಯೆಗೆಂದು ಸೂಚಿಸಲಾಗಿರುವ ಬೆಂಗಳೂರಿನ ಚಿತಾಗಾರಗಳಲ್ಲಿ ಪ್ರತಿ ದಿನವೂ 20-30 ಮೃತ ದೇಹಗಳನ್ನು ಸುಡಲಾಗುತ್ತಿದೆ. ಇದರಿಂದ ಮೃತದೇಹಗಳನ್ನು ತಂದು ಕ್ಯೂನಲ್ಲಿ ನಿಲ್ಲುವ ಸ್ಥಿತಿ ಕುಟುಂಬಸ್ಥರು, ಆಂಬ್ಯುಲೆನ್ಸ್ಗಳಿಗಿದ್ದರೆ.. ಕೊಂಚವೂ ಬಿಡುವಿಲ್ಲದೆ ತಿಂಡಿ-ಊಟಕ್ಕೂ ಸಮಯವಿಲ್ಲದೆ ದೇಹ ಸುಡುವ ಕಾರ್ಯದಲ್ಲಿ ಚಿತಾಗಾರ ಸಿಬ್ಬಂದಿ ಬೇಸತ್ತಿದ್ದಾರೆ. ಇದರ ನಡುವೆ ಚಿತಾಗಾರಗಳಿರುವ ಸುತ್ತಮುತ್ತಲಿನ ಪ್ರದೇಶಗಳ ಜನ ಮತ್ತೊಂದು ರೀತಿಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ಕೆಂಗೇರಿ ಉಪನಗರ ಕೊಮ್ಮಘಟ್ಟ ರಸ್ತೆಯಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ಪ್ರತಿನಿತ್ಯ 25ರಿಂದ 30 ಶವಗಳನ್ನು ದಹನ ಮಾಡಲಾಗುತ್ತಿದೆ. ಹೀಗಾಗಿ ಬೆಳಗ್ಗೆಯಿಂದ ರಾತ್ರಿಯವರೆಗೂ ನಿರಂತರವಾಗಿ ಚಿತಾಗಾರದಿಂದ ದಟ್ಟ ಹೊಗೆ ಹೊರ ಹೊಮ್ಮುತ್ತಿದೆ. ಇದರಿಂದಾಗಿ ಚಿತಾಗಾರದ ಸುತ್ತಮುತ್ತಲಿನ ಪ್ರದೇಶದಲ್ಲಿ ಹೊಗೆ ತುಂಬಿಕೊಂಡಿದ್ದು ಜನ ಆತಂಕಪಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಕಂಗೇರಿ ಚಿತಾಗಾರದಲ್ಲಿ 4ರಿಂದ 5 ಶವ ದಹನ ಮಾಡಲಾಗುತ್ತಿತ್ತು. ಈಗ ಇಲ್ಲಿ ಏಕಕಾಲದಲ್ಲಿ 2 ಶವ ಸಂಸ್ಕಾರಕ್ಕೆ ಅವಕಾಶವಿದೆ. ಗಂಟೆಗೆ 2 ಶವ ಸಂಸ್ಕಾರ ಆಗುತ್ತಿದೆ ಎಂದರೂ ದಿನ 14 -16ಗಂಟೆ ಅವಧಿಯಲ್ಲಿ 25 -30 ಕೊವಿಡ್ ಸೋಂಕಿನಿಂದ ಮೃತಪಟ್ಟವರ ಸಂಸ್ಕಾರ ನಡೆಯುತ್ತಿದೆ. ಪಿಪಿಇ ಕಿಟ್ ಸಹಿತ ಪಾರ್ಥಿವ ಶರೀರ ದಹನ ಮಾಡುತ್ತಿರುವುದರಿಂದ ಇಡೀ ಪ್ರದೇಶದಲ್ಲಿ ದುರ್ನಾತ ಬರುತ್ತಿದೆ.

ಬಂಡೇಮಠ, ವಿನಾಯಕ ನಗರ, ಸನ್ ಸಿಟಿ ಸೇರಿ ಕಂಗೇರಿ ಉಪನಗರದ ಹಲವು ಪ್ರದೇಶಗಳಲ್ಲಿ ಬೂದಿ, ಹೊಗೆ ವಾತಾವರಣ ಸೇರುತ್ತಿದೆ. ನೆಮ್ಮದಿಯಿಂದ ಉಸಿರಾಡಲೂ ಆಗದೆ ಬಡಾವಣೆಯ ಜನ ಮನೆ ಬಾಗಿಲು, ಕಿಟಕಿ ಹಾಕಿಕೊಂಡು ಜೀವನ ನಡೆಸಬೇಕಾದ ಸ್ಥಿತಿ ಬಂದಿದೆ. ಹೀಗೆ ನಿರಂತರವಾಗಿ ಶವ ಸಂಸ್ಕಾರದ ಹೊಗೆ ಕೆಂಗೇರಿ ಸುತ್ತಮುತ್ತಲ ಪ್ರದೇಶದಲ್ಲಿ ಆವರಿಸುತ್ತಿದ್ದರೆ ಅದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಆಗುವ ಹಾನಿ ಅಂದಾಜು ಮಾಡುವುದೂ ಕಷ್ಟಸಾಧ್ಯ. ಬಿಬಿಎಂಪಿಯಲ್ಲಿರುವ ಆರೋಗ್ಯ ಇಲಾಖೆ ಏನು ಮಾಡುತ್ತಿದೆ? ಎಂಬ ಪ್ರಶ್ನೆ ಎದುರಾಗಿದೆ. ಆದಷ್ಟು ಬೇಗ ಅಧಿಕಾರಿಗಳು ಈ ಸಮಸ್ಯೆ ಬಗ್ಗೆ ಚರ್ಚೆ ನಡೆಸಿ ಸಾರ್ವಜನಿಕರ ಆತಂಕವನ್ನು ದೂರ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇನ್ನು ಶವಸಂಸ್ಕಾರವನ್ನು ನಿರ್ವಹಿಸಲು ಇಲಾಖೆಯಿಂದ ನಿಯೋಜನೆಯಾಗಿರುವ ನೋಡಲ್ ಅಧಿಕಾರಿ ರಾಘವೇಂದ್ರ ಈ ಕುರಿತು ಮಾತನಾಡಿದ್ದು “ನಗರದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಚಿತಾಗಾರದಲ್ಲಿ ಅನಿವಾರ್ಯವಾಗಿ 25ರಿಂದ 30 ಶವಗಳ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ. ನಗರದ ಹೊರವಲಯದಲ್ಲಿ ಎರಡು ಚಿತಾಗಾರಗಳು ನಿರ್ಮಾಣವಾಗಿರುವುದರಿಂದ ಮುಂದಿನ ದಿನಗಳಲ್ಲಿ ಶವ ದಹನದ ಪ್ರಮಾಣ ಕಡಿಮೆಯಾಗಬವುದು” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸುಮನಹಳ್ಳಿ ಚಿತಾಗಾರದಲ್ಲಿ ಸಾಲು ಸಾಲು ಶವ | ಕರ್ಫ್ಯೂ ನಡುವೆಯೂ ಕೊರೊನಾ ರಣಕೇಕೆ

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!