Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗನ ಹೇರ್​​ ಕಟಿಂಗ್ ಸರಿ ಮಾಡದಿದ್ದಕ್ಕೆ ಕ್ಷೌರಿಕರ ಮೇಲೆ ಅಪ್ಪನಿಂದ ಹಲ್ಲೆ: ಇಬ್ಬರ ಬಂಧನ​

ಹುಬ್ಬಳ್ಳಿಯ ನವನಗರದಲ್ಲಿ ಮಗನ ಕಟಿಂಗ್ ಸರಿಯಾಗಿಲ್ಲ ಎಂದು ರೊಚ್ಚಿಗೆದ್ದ ವ್ಯಕ್ತಿಯೊಬ್ಬ ಕ್ಷೌರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕರ ಮೇಲೆ ಹಲ್ಲೆ ಮಾಡಿರುವಂತಹ ಘಟನೆ ನಡೆದಿದೆ. ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಲ್ಲೆಗೈದ ವಿಜಯ್ ಕುಮಾರ್ ಅಪ್ಪಾಜಿ ಹಾಗೂ ಅವನ ಸಹಾಯಕ ಗಣೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಮಗನ ಹೇರ್​​ ಕಟಿಂಗ್ ಸರಿ ಮಾಡದಿದ್ದಕ್ಕೆ ಕ್ಷೌರಿಕರ ಮೇಲೆ ಅಪ್ಪನಿಂದ ಹಲ್ಲೆ: ಇಬ್ಬರ ಬಂಧನ​
ಮಗನ ಹೇರ್​​ ಕಟಿಂಗ್ ಸರಿ ಮಾಡದಿದ್ದಕ್ಕೆ ಕ್ಷೌರಿಕರ ಮೇಲೆ ಅಪ್ಪನಿಂದ ಹಲ್ಲೆ: ಇಬ್ಬರ ಬಂಧನ​
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಗಂಗಾಧರ​ ಬ. ಸಾಬೋಜಿ

Updated on:Dec 13, 2024 | 3:42 PM

ಹುಬ್ಬಳ್ಳಿ, ಡಿಸೆಂಬರ್​ 13: ಮಗನ ಕಟಿಂಗ್ (barber shop) ಸರಿ ಮಾಡದಿದ್ದಕ್ಕೆ ಕಟಿಂಗ್ ಅಂಗಡಿಯಲ್ಲಿ ಕೆಲಸ ಮಾಡುವ ಯುವಕರ ಮೇಲೆ ಹಲ್ಲೆ ಮಾಡಿರುವಂತಹ ಘಟನೆ ಹುಬ್ಬಳ್ಳಿಯ ನವನಗರದಲ್ಲಿ ನಡೆದಿದೆ. ಸದ್ಯ ಹಲ್ಲೆ ಮಾಡಿದ್ದ ವಿಜಯ್ ಕುಮಾರ್ ಅಪ್ಪಾಜಿ ಹಾಗೂ ಸಹಾಯ ಮಾಡಿದ ಗಣೇಶ್​ರನ್ನು ಪೊಲೀಸರು ಬಂಧಿಸಿದ್ದಾರೆ. ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಮಗನ ಕಟಿಂಗ್ ಸರಿ ಮಾಡಿಲ್ಲ ಎಂದು ರೊಚ್ಚಿಗೆದ್ದ ವಿಜಯ್ ಕುಮಾರ್ ಅಪ್ಪಾಜಿ ಕಟಿಂಗ್ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಮೂವರ ಮೇಲೆ ಪರದೆ ಹಾರುವ ಸ್ಟೀಲ್ ಸ್ಟ್ಯಾಂಡ್​ನಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ವಿಜಯಕುಮಾರ್ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದು, ಜೊತೆಗೆ ‘ಅಪ್ಪಾಜಿ’ ಜನಸೇನಾ ಎಂದು ಸಂಘಟನೆ ಕಟ್ಟಿಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ವಿವಾಹಿತ ಮಹಿಳೆ ಕೊಂದು ಪ್ರಿಯಕರ ಆತ್ಮಹತ್ಯೆ

ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್​​ ಪ್ರತಿಕ್ರಿಯಿಸಿದ್ದು, ಹುಬ್ಬಳ್ಳಿಯ ನವನಗರ ಬಳಿಯಿರುವ ಲೋರೆಯಲ್ ಕಟಿಂಗ್ ಶಾಪ್​ನಲ್ಲಿ ಪ್ರತಿ ಬಾರಿ ವಿಜಯಕುಮಾರ್ ಮಗ ಕಟಿಂಗ್ ಮಾಡಿಸುತ್ತಿದ್ದ. ಕಳೆದ ತಿಂಗಳು 11ರಂದು‌ ಕಟಿಂಗ್ ಮಾಡಿಸಿದ್ದ. ಆದರೆ ಪ್ರತಿ ಬಾರಿ ಕಟಿಂಗ್ ಮಾಡುವ ಹುಡುಗ ಇರಲಿಲ್ಲ. ಬೇರೆ ಹುಡುಗನೊಬ್ಬ ಕಟಿಂಗ್ ಮಾಡಿದ್ದಾನೆ. ವಿಜಯಕುಮಾರ್ ಮಗ ಮನೆಗೆ ಹೋಗಿ ಕಟಿಂಗ್ ಸರಿ ಆಗಿಲ್ಲ ಎಂದಿದ್ದಾನೆ‌. ಹೀಗಾಗಿ ರೊಚ್ಚಿಗೆದ್ದು ವಿಜಯಕುಮಾರ್ ಕಟಿಂಗ್ ಶಾಪ್​​ಗೆ ನುಗ್ಗಿ ಪರದೆ ಹಾಕುವ ಸ್ಟ್ಯಾಂಡ್​ನಿಂದ ಹಲ್ಲೆ ಮಾಡಿದ್ದಾರೆ‌ ಎಂದಿದ್ದಾರೆ.

ಹಲ್ಲೆ ವಿಡಿಯೋ ವೈರಲ್ ಆಗುತ್ತಲೇ ವಿಜಯಕುಮಾರ್ ಅಪ್ಪಾಜಿ ಹಾಗೂ ಗಣೇಶ್ ರಾಣೆಬೆನ್ನೂರ್​ನ್ನು ಬಂಧಿಸಲಾಗಿದೆ. ಘಟನೆ‌ ನಡೆದ ಬಳಿಕ‌ ಆತಂಕದಿಂದ ಲೋರಿಯಲ್ ಕಟಿಂಗ್ ಶಾಪ್ ಮಾಲೀಕರು ಅಂಗಡಿ ಬಂದ್ ಮಾಡಿದ್ದಾರೆ.

ವಿದ್ಯುತ್​ ಪ್ರವಹಿಸಿ ಬಾಲಕ ದುರ್ಮರಣ

ಮತ್ತೊಂದು ಪ್ರಕರಣದಲ್ಲಿ ಕಲಬುರಗಿಯಲ್ಲಿ ವಿದ್ಯುತ್​ ಪ್ರವಹಿಸಿ ಬಾಲಕ ದುರ್ಮರಣ ಹೊಂದಿರುವಂತಹ ಘಟನೆ ಕಲಬುರಗಿಯ ಬಸವನಗರದಲ್ಲಿ ನಡೆದಿದೆ. ಕಮಲ್ ರಾಜ್(14) ಮೃತ ಬಾಲಕ. ಬಸ್​ ನಿಲ್ದಾಣದ ಬಳಿ ರಸ್ತೆ ಮಧ್ಯೆ ಡಿವೈಡರ್​​ ದಾಟುವಾಗ ಘಟನೆ ಸಂಭವಿಸಿದೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಅತುಲ್ ಸುಭಾಷ್ ಆತ್ಮಹತ್ಯೆ ಕೇಸ್​: ಬಾಮೈದ, ಅತ್ತೆಯನ್ನು ಬಂಧಿಸಿದ ಬೆಂಗಳೂರು ಪೊಲೀಸ್

ರಸ್ತೆ ಮಧ್ಯೆ ಅಳವಡಿಸಿದ್ದ ಕಬ್ಬಿಣದ ರಾಡ್​ಗೆ​​ ಅಂಟಿಕೊಂಡಿದ್ದ ವಿದ್ಯುತ್ ತಂತಿ, ಈ ವೇಳೆ ಕಬ್ಬಿಣದ ರಾಡ್​ನಿಂದ ವಿದ್ಯುತ್​ ಪ್ರವಹಿಸಿ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿದ್ಯುತ್​ ಶಾಕ್​ನಿಂದ ಬಾಲಕ ಮೃತಪಟ್ಟಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಕಲಬುರಗಿ ಪಾಲಿಕೆ ಮತ್ತು ಜೆಸ್ಕಾಂ ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯ ಆರೋಪ ಕೇಳಿಬಂದಿದೆ. ಕಲಬುರಗಿ ಪಾಲಿಕೆ ಅಧಿಕಾರಿಗಳ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:33 pm, Fri, 13 December 24

ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ