AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೋಧನ ಹೆಸರಿನಲ್ಲಿ ವಂಚನೆ; ಬೆಳಗಾವಿ ಶಾಲಾ ಆಡಳಿತ ಮಂಡಳಿಯ ಬ್ಯಾಂಕ್​ ಖಾತೆಯಿಂದ 90 ಸಾವಿರ ರೂಪಾಯಿ ಹಣ ಲೂಟಿ

ವಾಟ್ಸಪ್ ಮೂಲಕ ಫೋಟೋ ಕಳಿಸಿ ನಂಬಿಸಿದ್ದ ವ್ಯಕ್ತಿ. ಬಳಿಕ ಅಡ್ಮಿಶನ್ ಶುಲ್ಕ ಆನ್‌ಲೈನ್‌ನಲ್ಲಿ ಪಾವತಿಸುವುದಾಗಿ ತಿಳಿಸಿದ್ದು, ಬ್ಯಾಂಕ್ ಖಾತೆ ವಿವರ ಪಡೆದಿದ್ದಾನೆ. ಖಾತೆ ಕನ್ಫರ್ಮ್ ಮಾಡಲು 1 ರೂಪಾಯಿ ವರ್ಗಾಯಿಸುತ್ತಿರುವುದಾಗಿ ಹೇಳಿದ್ದ ವ್ಯಕ್ತಿ. ತಾನು ಆನ್‌ಲೈನ್ ಮೂಲಕ ಕಳಿಸಿದ 1 ರೂಪಾಯಿ ಹಣ ಸ್ವೀಕರಿಸಿ ಖಾತೆ ಕನ್ಫರ್ಮ್ ಮಾಡಿ ಎಂದು ಪುನಃ ಕರೆ ಮಾಡಿದ್ದಾನೆ.

ಯೋಧನ ಹೆಸರಿನಲ್ಲಿ ವಂಚನೆ; ಬೆಳಗಾವಿ ಶಾಲಾ ಆಡಳಿತ ಮಂಡಳಿಯ ಬ್ಯಾಂಕ್​ ಖಾತೆಯಿಂದ 90 ಸಾವಿರ ರೂಪಾಯಿ ಹಣ ಲೂಟಿ
ಸಂಗ್ರಹ ಚಿತ್ರ
TV9 Web
| Edited By: |

Updated on:Jul 10, 2021 | 11:45 AM

Share

ಬೆಳಗಾವಿ: ಶಾಲಾ ಆಡಳಿತ ಮಂಡಳಿಯ ಬ್ಯಾಂಕ್ ಖಾತೆಯನ್ನು ಹ್ಯಾಕ್​ ಮಾಡಿ ಹಣವನ್ನು ದೋಚಿದ ಘಟನೆ ಬೆಳಗಾವಿ ತಾಲೂಕಿನ ಶಿಂಧೊಳ್ಳಿ ಬಳಿ ನಡೆದಿದೆ. ಯೋಧನ ಹೆಸರಿನಲ್ಲಿ ಶಾಲಾ ಆಡಳಿತ ಮಂಡಳಿಗೆ ಕರೆ ಮಾಡಿದ್ದು, ಎಲ್​ಕೆಜಿಗೆ ಅಡ್ಮಿಶನ್​ ಬೇಕಿದೆ ಎಂದು ಬ್ಯಾಂಕ್​ ಖಾತೆ ವಿವರ ಪಡೆದು 90 ಸಾವಿರ ರೂಪಾಯಿಯನ್ನು ವ್ಯಕ್ತಿಯೊರ್ವ ದೋಚಿದ್ದಾನೆ. ತಾನು ಜಮ್ಮು ಕಾಶ್ಮೀರದಲ್ಲಿ ವಾಸವಿದ್ದು ಮಗು, ಪತ್ನಿ ಬೆಳಗಾವಿಯಲ್ಲಿ ಇದ್ದಾರೆ. ಬೆಳಗಾವಿಯಲ್ಲಿರುವ ಮಗನಿಗೆ ಎಲ್‌ಕೆಜಿ ಅಡ್ಮಿಶನ್ ಬೇಕಾಗಿದೆ ಎಂದು ಕರೆ ಮಾಡಿದ್ದಾನೆ.

ವಾಟ್ಸಪ್ ಮೂಲಕ ಫೋಟೋ ಕಳಿಸಿ ನಂಬಿಸಿದ್ದ ವ್ಯಕ್ತಿ. ಬಳಿಕ ಅಡ್ಮಿಶನ್ ಶುಲ್ಕ ಆನ್‌ಲೈನ್‌ನಲ್ಲಿ ಪಾವತಿಸುವುದಾಗಿ ತಿಳಿಸಿದ್ದು, ಬ್ಯಾಂಕ್ ಖಾತೆ ವಿವರ ಪಡೆದಿದ್ದಾನೆ. ಖಾತೆ ಕನ್ಫರ್ಮ್ ಮಾಡಲು 1 ರೂಪಾಯಿ ವರ್ಗಾಯಿಸುತ್ತಿರುವುದಾಗಿ ಹೇಳಿದ್ದ ವ್ಯಕ್ತಿ. ತಾನು ಆನ್‌ಲೈನ್ ಮೂಲಕ ಕಳಿಸಿದ 1 ರೂಪಾಯಿ ಹಣ ಸ್ವೀಕರಿಸಿ ಖಾತೆ ಕನ್ಫರ್ಮ್ ಮಾಡಿ ಎಂದು ಪುನಃ ಕರೆ ಮಾಡಿದ್ದಾನೆ.

ಇದನ್ನು ನಂಬಿದ ಶಾಲಾ ಆಡಳಿತ ಮಂಡಳಿ ಸಿಬ್ಬಂದಿ, ಆ ವ್ಯಕ್ತಿ ಕಳಿಸಿದ್ದ ಲಿಂಕ್ ಕ್ಲಿಕ್ ಮಾಡಿದ್ದಾರೆ. ಬಳಿಕ ಈ ಖಾತೆಯಿಂದಲೇ 90 ಸಾವಿರ ರೂಪಾಯಿಯನ್ನು ಆ ವ್ಯಕ್ತಿ ವರ್ಗಾವಣೆ ಮಾಡಿಕೊಂಡಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಶಾಲಾ ಆಡಳಿತ ಮಂಡಳಿ ಬೆಳಗಾವಿಯ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಸಿಇಎನ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಸ್ಟಮರ್ ಕೇರ್​ ಹೆಸರಿನಲ್ಲಿ ಪಾಸ್​ವರ್ಡ್​ ಪಡೆದು ದಾವಣಗೆರೆ ವ್ಯಕ್ತಿಗೆ ವಂಚನೆ ಕಸ್ಟಮರ್ ಕೇರ್​ ಹೆಸರಿನಲ್ಲಿ ಬ್ಯಾಂಕ್​ನ ಪಾಸ್​ವರ್ಡ್​ ಪಡೆದು ವಂಚನೆ ಮಾಡಿದ ಘಟನೆಯೊಂದು ದಾವಣಗೆರೆ ಜಿಲ್ಲೆ ಹೊನ್ನಾಳಿ ಬಳಿ ನಡೆದಿದೆ. ಕೇರಳ‌ ಮೂಲದ ಕೃಷ್ಣನ್ ಉನ್ನಿತನ್ ಆನ್​ಲೈನ್ ಬ್ಯಾಂಕಿಂಗ್ ಪಾಸ್ ವರ್ಡ್ ಬ್ಲಾಕ್ ಆಗಿದನ್ನು ಸರಿ ಪಡಿಸಲು ಕಸ್ಟಮರ್ ಕೇರ್​ಗೆ ಪೋನ್ ಮಾಡಿ ಎಲ್ಲಾ ವಿವರ ನೀಡಿದ್ದಾರೆ. ಇದನ್ನೇ ಬಂಡವಾಳವಾಗಿಸಿಕೊಂಡ ಕಸ್ಟಮರ್​ ಕೇರ್​ ಹೆಸರಿನ ವ್ಯಕ್ತಿ ಬುಧವಾರ ಹಂತ ಹಂತವಾಗಿ ಕೃಷ್ಣನ್ ಬ್ಯಾಂಕ್​ ಖಾತೆಯಿಂದ 13.45 ಲಕ್ಷ ರೂಪಾಯಿ ಡ್ರಾ ಮಾಡಿ, ವಂಚನೆ ಮಾಡಿದ್ದಾರೆ.

ಕೇರಳ‌ ಮೂಲದ ಕೃಷ್ಣನ್ ಸದ್ಯ ದಾವಣಗೆರೆಯಲ್ಲಿ ವಾಸವಾಗಿದ್ದು, ಕೇರಳದ ಅಲಪುಳ ಜಿಲ್ಲೆಯ ನಂಗಿಯಾರ್ಕುಲಂಗರ ನಗರದ ಸೌತ್ ಇಂಡಿಯನ್ ಬ್ಯಾಂಕ್​ನಲ್ಲಿ ಎಸ್​ಬಿ ಖಾತೆ ಹೊಂದಿದ್ದಾರೆ. ಬುಧವಾರ ಕಸ್ಟಮರ್​ ಕೇರ್​ ಜತೆ ಮಾತನಾಡಿದ ಕೃಷ್ಣನ್​ಗೆ ಮರುದಿನ ಅಂದರೆ ಗುರುವಾರ ಮತ್ತೆ ವ್ಯಕ್ತಿಯೊಬ್ಬ ಅದೇ ಬ್ಯಾಂಕ್ ಹೆಸರು ಹೇಳಿಕೊಂಡು ಪೋನ್ ಮಾಡಿದ್ದು, ನೀವು ಹೌಸಿಂಗ್ ಲೋನ್​ಗೆ ಅರ್ಜಿ ಹಾಕಿದ್ದೀರಾ ಎಂದು ಕೇಳಿದ್ದಾನೆ. ಇಲ್ಲಾ ಎಂದಾಗ ನಿಮ್ಮ ಎಸ್​ಬಿ ಐಮಿರರ್ ಪ್ಲಸ್ ಅಪ್ಲಿಕೇಶನ್ ಯಾರೋ ಬಳಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಆ ವ್ಯಕ್ತಿಯ ಮಾತನ್ನು ಕೇಳಿದ ಕೃಷ್ಣನ್ ಉನ್ನಿತನ್ ಬ್ಯಾಂಕ್​ನ ಖಾತೆಯನ್ನು ಪರಿಶೀಲನೆ ಮಾಡಿದ್ದಾರೆ. ಆಗ ಖಾತೆಯಲ್ಲಿ 13.45 ಲಕ್ಷ ರೂಪಾಯಿ ಕಡಿತಗೊಂಡಿದ್ದ ವಿಷಯ ಬೆಳಕಿಗೆ ಬಂದಿದೆ. ಸದ್ಯ ಈ ಬಗ್ಗೆ ದಾವಣಗೆರೆ ಸಿಇನ್ ಪೊಲೀಸ್ ಠಾಣೆಗೆ ಎಸ್ ಕೃಷ್ಣನ್ ದೂರು ಸಲ್ಲಿಸಿದ್ದು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಕಸ್ಟಮರ್ ಕೇರ್​ ಹೆಸರಿನಲ್ಲಿ ಪಾಸ್​ವರ್ಡ್​ ಪಡೆದು ದಾವಣಗೆರೆ ವ್ಯಕ್ತಿಗೆ ವಂಚನೆ; ಬ್ಯಾಂಕ್​ನಿಂದ 13.45 ಲಕ್ಷ ರೂಪಾಯಿ ಡ್ರಾ

ಬಿಬಿಎಂಪಿ ಜಾಗವನ್ನೇ ಅಡವಿಟ್ಟು ಬ್ಯಾಂಕ್​ನಲ್ಲಿ ಸಾಲ ಎತ್ತಿ ಭಾರೀ ವಂಚನೆ! ಏನಿದು ಮಹಾವೀರ್ ಜೈನ್ ಆಸ್ಪತ್ರೆಯ ವಂಚನೆ ಪುರಾಣ?

Published On - 11:43 am, Sat, 10 July 21

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ