AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಸ್ಟಮರ್ ಕೇರ್​ ಹೆಸರಿನಲ್ಲಿ ಪಾಸ್​ವರ್ಡ್​ ಪಡೆದು ದಾವಣಗೆರೆ ವ್ಯಕ್ತಿಗೆ ವಂಚನೆ; ಬ್ಯಾಂಕ್​ನಿಂದ 13.45 ಲಕ್ಷ ರೂಪಾಯಿ ಡ್ರಾ

ಕೇರಳ‌ ಮೂಲದ ಕೃಷ್ಣನ್ ಉನ್ನಿತನ್ ಆನ್​ಲೈನ್ ಬ್ಯಾಂಕಿಂಗ್ ಪಾಸ್ ವರ್ಡ್ ಬ್ಲಾಕ್ ಆಗಿದನ್ನು ಸರಿ ಪಡಿಸಲು ಕಸ್ಟಮರ್ ಕೇರ್​ಗೆ ಪೋನ್ ಮಾಡಿ ಎಲ್ಲಾ ವಿವರ ನೀಡಿದ್ದಾರೆ. ಇದನ್ನೇ ಬಂಡವಾಳವಾಗಿಸಿಕೊಂಡ ಕಸ್ಟಮರ್​ ಕೇರ್​ ಹೆಸರಿನ ವ್ಯಕ್ತಿ ಬುಧವಾರ ಹಂತ ಹಂತವಾಗಿ ಕೃಷ್ಣನ್ ಬ್ಯಾಂಕ್​ ಖಾತೆಯಿಂದ 13.45 ಲಕ್ಷ ರೂಪಾಯಿ ಡ್ರಾ ಮಾಡಿ, ವಂಚನೆ ಮಾಡಿದ್ದಾರೆ.

ಕಸ್ಟಮರ್ ಕೇರ್​ ಹೆಸರಿನಲ್ಲಿ ಪಾಸ್​ವರ್ಡ್​ ಪಡೆದು ದಾವಣಗೆರೆ ವ್ಯಕ್ತಿಗೆ ವಂಚನೆ; ಬ್ಯಾಂಕ್​ನಿಂದ 13.45 ಲಕ್ಷ ರೂಪಾಯಿ ಡ್ರಾ
ಸಾಂದರ್ಭಿಕ ಚಿತ್ರ
Follow us
TV9 Web
| Updated By: preethi shettigar

Updated on: Jul 09, 2021 | 12:23 PM

ದಾವಣಗೆರೆ: ಕಸ್ಟಮರ್ ಕೇರ್​ ಹೆಸರಿನಲ್ಲಿ ಬ್ಯಾಂಕ್​ನ ಪಾಸ್​ವರ್ಡ್​ ಪಡೆದು ವಂಚನೆ ಮಾಡಿದ ಘಟನೆಯೊಂದು ದಾವಣಗೆರೆ ಜಿಲ್ಲೆ ಹೊನ್ನಾಳಿ ಬಳಿ ನಡೆದಿದೆ. ಕೇರಳ‌ ಮೂಲದ ಕೃಷ್ಣನ್ ಉನ್ನಿತನ್ ಆನ್​ಲೈನ್ ಬ್ಯಾಂಕಿಂಗ್ ಪಾಸ್ ವರ್ಡ್ ಬ್ಲಾಕ್ ಆಗಿದನ್ನು ಸರಿ ಪಡಿಸಲು ಕಸ್ಟಮರ್ ಕೇರ್​ಗೆ ಪೋನ್ ಮಾಡಿ ಎಲ್ಲಾ ವಿವರ ನೀಡಿದ್ದಾರೆ. ಇದನ್ನೇ ಬಂಡವಾಳವಾಗಿಸಿಕೊಂಡ ಕಸ್ಟಮರ್​ ಕೇರ್​ ಹೆಸರಿನ ವ್ಯಕ್ತಿ ಬುಧವಾರ ಹಂತ ಹಂತವಾಗಿ ಕೃಷ್ಣನ್ ಬ್ಯಾಂಕ್​ ಖಾತೆಯಿಂದ 13.45 ಲಕ್ಷ ರೂಪಾಯಿ ಡ್ರಾ ಮಾಡಿ, ವಂಚನೆ ಮಾಡಿದ್ದಾರೆ.

ಕೇರಳ‌ ಮೂಲದ ಕೃಷ್ಣನ್ ಸದ್ಯ ದಾವಣಗೆರೆಯಲ್ಲಿ ವಾಸವಾಗಿದ್ದು, ಕೇರಳದ ಅಲಪುಳ ಜಿಲ್ಲೆಯ ನಂಗಿಯಾರ್ಕುಲಂಗರ ನಗರದ ಸೌತ್ ಇಂಡಿಯನ್ ಬ್ಯಾಂಕ್​ನಲ್ಲಿ ಎಸ್​ಬಿ ಖಾತೆ ಹೊಂದಿದ್ದಾರೆ. ಬುಧವಾರ ಕಸ್ಟಮರ್​ ಕೇರ್​ ಜತೆ ಮಾತನಾಡಿದ ಕೃಷ್ಣನ್​ಗೆ ಮರುದಿನ ಅಂದರೆ ಗುರುವಾರ ಮತ್ತೆ ವ್ಯಕ್ತಿಯೊಬ್ಬ ಅದೇ ಬ್ಯಾಂಕ್ ಹೆಸರು ಹೇಳಿಕೊಂಡು ಪೋನ್ ಮಾಡಿದ್ದು, ನೀವು ಹೌಸಿಂಗ್ ಲೋನ್​ಗೆ ಅರ್ಜಿ ಹಾಕಿದ್ದೀರಾ ಎಂದು ಕೇಳಿದ್ದಾನೆ. ಇಲ್ಲಾ ಎಂದಾಗ ನಿಮ್ಮ ಎಸ್​ಬಿ ಐಮಿರರ್ ಪ್ಲಸ್ ಅಪ್ಲಿಕೇಶನ್ ಯಾರೋ ಬಳಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಆ ವ್ಯಕ್ತಿಯ ಮಾತನ್ನು ಕೇಳಿದ ಕೃಷ್ಣನ್ ಉನ್ನಿತನ್ ಬ್ಯಾಂಕ್​ನ ಖಾತೆಯನ್ನು ಪರಿಶೀಲನೆ ಮಾಡಿದ್ದಾರೆ. ಆಗ ಖಾತೆಯಲ್ಲಿ 13.45 ಲಕ್ಷ ರೂಪಾಯಿ ಕಡಿತಗೊಂಡಿದ್ದ ವಿಷಯ ಬೆಳಕಿಗೆ ಬಂದಿದೆ. ಸದ್ಯ ಈ ಬಗ್ಗೆ ದಾವಣಗೆರೆ ಸಿಇನ್ ಪೊಲೀಸ್ ಠಾಣೆಗೆ ಎಸ್ ಕೃಷ್ಣನ್ ದೂರು ಸಲ್ಲಿಸಿದ್ದು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಯೆಸ್ ಬ್ಯಾಂಕ್​ಗೆ 11 ಆರೋಪಿಗಳಿಂದ 712 ಕೋಟಿ ರೂ ವಂಚನೆ ಪ್ರತಿಷ್ಠಿತ ಖಾಸಗಿ ಬ್ಯಾಂಕ್​ಗಳಲ್ಲಿ ಒಂದಾದ ಯೆಸ್ ಬ್ಯಾಂಕ್​ಗೆ ಬರೋಬ್ಬರಿ 712 ಕೋಟಿ ರೂಪಾಯಿ ವಂಚನೆ ಮಾಡಿರುವ ಪ್ರಕರಣದಲ್ಲಿ 11 ಆರೋಪಿಗಳ ವಿರುದ್ಧ ಬೆಂಗಳೂರಿನ ಕಬ್ಬನ್​ಪಾರ್ಕ್ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್ ದಾಖಲು ಮಾಡಲಾಗಿದೆ. ನಿತೇಶ್ ರಿಯಲ್ ಎಸ್ಟೇಟ್ ಕಂಪನಿಗಳ (Nitesh Real Estate) ಹೆಸರಿನಲ್ಲಿ ಸಾಲ ಪಡೆದು ಮರುಪಾವತಿ ಮಾಡದೆ, ಒಪ್ಪಂದ ಉಲ್ಲಂಘಿಸಿದ ಆರೋಪ ಈ 11 ಮಂದಿಯ ವಿರುದ್ಧ ದಾಖಲಾಗಿದೆ.

ಎಲ್ಲ 11 ಮಂದಿ ಆರೋಪಿಗಳು 2016 ರಿಂದ ಯೆಸ್ ಬ್ಯಾಂಕ್ ನಲ್ಲಿ (Yes Bank) ವ್ಯವಹಾರ ಮಾಡುತ್ತಿದ್ದರು. ಕಂಪನಿಯ ಹೆಸರಿನಲ್ಲಿ ವಿವಿಧ ಯೋಜನೆಗಳಿಗೆಂದು ಸಾಲ ಪಡೆದಿದ್ದರು. ಮುಂದೆ 2019ರ ವರೆಗೆ ಲೋನ್ ಕಟ್ಟಿದ್ದ ಆರೋಪಿಗಳು 2019 ಡಿಸೆಂಬರ್ ನಿಂದ ಲೋನ್ ಮರುಪಾವತಿ ಮಾಡದೇ ಯಾಮಾರಿಸಿದ್ದಾರೆ. ಈಗ ಕೋವಿಡ್ ಹಿನ್ನೆಲೆ ಹಣ ಮರುಪಾವತಿ ಮಾಡಲು ಸಾಧ್ಯವಿಲ್ಲ ಎಂದೂ ಆರೋಪಿಗಳು ಹೇಳುತ್ತಿದ್ದಾರೆ.

ಕಳೆದೆರೆಡು ವರ್ಷದಿಂದ ಇಎಂಐ ಮರು ಪಾವತಿ ಮಾಡದ ಹಿನ್ನೆಲೆ ಕಸ್ತೂರ ಬಾ ರಸ್ತೆಯಲ್ಲಿರುವ ಯೆಸ್ ಬ್ಯಾಂಕ್ ಮ್ಯಾನೇಜರ್ 11 ಮಂದಿ ಆರೋಪಿಗಳು ವಿರುದ್ಧ ದೂರು ನೀಡಿದ್ದಾರೆ. ಯೆಸ್ ಬ್ಯಾಂಕ್ ಮ್ಯಾನೇಜರ್ ಆಶೀಶ್ ವಿನೋದ್ ಜೋಶಿ ಇಂದು ಕಬ್ಬನ್ ಪಾರ್ಕ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಇದನ್ನೂ ಓದಿ: ಯೆಸ್ ಬ್ಯಾಂಕ್​ಗೆ 11 ಆರೋಪಿಗಳಿಂದ 712 ಕೋಟಿ ರೂ ವಂಚನೆ: ಕಬ್ಬನ್​ಪಾರ್ಕ್ ಠಾಣೆಯಲ್ಲಿ ಎಫ್​ಐಆರ್ ದಾಖಲು

ಬಿಬಿಎಂಪಿ ಜಾಗವನ್ನೇ ಅಡವಿಟ್ಟು ಬ್ಯಾಂಕ್​ನಲ್ಲಿ ಸಾಲ ಎತ್ತಿ ಭಾರೀ ವಂಚನೆ! ಏನಿದು ಮಹಾವೀರ್ ಜೈನ್ ಆಸ್ಪತ್ರೆಯ ವಂಚನೆ ಪುರಾಣ?

ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಧಗಧಗನೆ ಹೊತ್ತಿ ಉರಿದ ಚೀನಾದ ರೆಸ್ಟೋರೆಂಟ್; 22 ಜನ ಸಾವು
ಧಗಧಗನೆ ಹೊತ್ತಿ ಉರಿದ ಚೀನಾದ ರೆಸ್ಟೋರೆಂಟ್; 22 ಜನ ಸಾವು
ಉಗ್ರರ ದಾಳಿ: ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ
ಉಗ್ರರ ದಾಳಿ: ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ
ದರಿದ್ರ ದೇಶವಾದ ಪಾಕಿಸ್ತಾನದ ವಿರುದ್ಧ ಯುದ್ಧವಾಗಲೇಬೇಕು; ಎಂ.ಬಿ ಪಾಟೀಲ್
ದರಿದ್ರ ದೇಶವಾದ ಪಾಕಿಸ್ತಾನದ ವಿರುದ್ಧ ಯುದ್ಧವಾಗಲೇಬೇಕು; ಎಂ.ಬಿ ಪಾಟೀಲ್