AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ನಿರ್ಮಾಣವಾಗಿರುವ ದೇಶದ ಮೊದಲ ಕೇಂದ್ರೀಕೃತ ಎಸಿ ರೈಲ್ವೆ ಟರ್ಮಿನಲ್ ಮಾರ್ಚ್​ 15ರಿಂದ ಕಾರ್ಯಾರಂಭ?

ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿ ಅತಿದೊಡ್ಡ, ಆಧುನಿಕ ಸೌಕರ್ಯವುಳ್ಳ ಕೇಂದ್ರೀಕೃತ ಎಸಿ ಕೇಂದ್ರೀಕೃತ ಎಸಿ ರೈಲ್ವೆ ಟರ್ಮಿನಲ್ ನಿರ್ಮಾಣಕ್ಕೆ 2015-16ರಲ್ಲೇ ಅನುಮೋದನೆ ಸಿಕ್ಕಿದೆ. 2018ರಿಂದಲೇ ಇದು ಕಾರ್ಯನಿರ್ವಹಿಸಬೇಕಿತ್ತು.

ಬೆಂಗಳೂರಿನಲ್ಲಿ ನಿರ್ಮಾಣವಾಗಿರುವ ದೇಶದ ಮೊದಲ ಕೇಂದ್ರೀಕೃತ ಎಸಿ ರೈಲ್ವೆ ಟರ್ಮಿನಲ್ ಮಾರ್ಚ್​ 15ರಿಂದ ಕಾರ್ಯಾರಂಭ?
ಬೈಯಪ್ಪನಹಳ್ಳಿಯಲ್ಲಿ ನಿರ್ಮಾಣಗೊಂಡ ಕೇಂದ್ರೀಕೃತ ಎಸಿ ರೈಲ್ವೆ ಟರ್ಮಿನಲ್​
Lakshmi Hegde
| Edited By: |

Updated on:Feb 20, 2021 | 5:01 PM

Share

ಬೆಂಗಳೂರು: ದೇಶದಲ್ಲಿ ಮೊದಲ ಕೇಂದ್ರೀಕೃತ ಎಸಿ ರೈಲ್ವೆ ಟರ್ಮಿನಲ್ ಹೊಂದಿದ ನಗರ ಎಂಬ ಖ್ಯಾತಿಗೆ ಬೆಂಗಳೂರು ಪಾತ್ರವಾಗಿದೆ. ​ಭಾರತೀಯ ರೈಲ್ವೆ ಇಲಾಖೆ, ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಬಳಿ ಈ ಆಧುನಿಕ ಟರ್ಮಿನಲ್​ ಸಿದ್ಧಗೊಂಡಿದ್ದು, ಇದಕ್ಕೆ ಸರ್​.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಎಂಬ ಹೆಸರೂ ನಿಗದಿಯಾಗಿದೆ. ಟರ್ಮಿನಲ್​ನಲ್ಲಿ ಹಲವು ಮುಂದುವರಿದ ಸೌಲಭ್ಯಗಳನ್ನು ಅಳವಡಿಸಲಾಗಿದ್ದು, ಇತ್ತೀಚೆಗಷ್ಟೇ ರೈಲ್ವೆ ಇಲಾಖೆ ಸಚಿವ ಪಿಯುಷ್ ಗೋಯಲ್​ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಇನ್ನು ದೇಶದ ಮೊದಲ ಕೇಂದ್ರೀಕೃತ ಎಸಿ ಟರ್ಮಿನಲ್​ ಆಗಿರುವ ಇದರಲ್ಲಿ ವಿಐಪಿಗಳ ವಿರಾಮ ಕೊಠಡಿ, ಫುಡ್​ ಕೋರ್ಟ್​, ನೈಜ ಸಮಯದಲ್ಲಿರುವ ಪ್ರಯಾಣಿಕರ ಮಾಹಿತಿ ನೀಡುವ ಡಿಜಿಟಲ್​ ವ್ಯವಸ್ಥೆ ಇದೆ ಎಂದು ಭಾರತೀಯ ರೈಲ್ವೆ ಸಚಿವಾಲಯ ತಿಳಿಸಿದೆ. ಹಾಗೇ, ಈ ಕೇಂದ್ರೀಕೃತ ಎಸಿ ಟರ್ಮಿನಲ್ ದೇಶದಲ್ಲೇ ಅತ್ಯಂತ ದೊಡ್ಡ ಟರ್ಮಿನಲ್​ ಆಗಿದೆ ಎಂದೂ ಹೇಳಿದೆ.

ಹೇಗಿದೆ ಟರ್ಮಿನಲ್​? ಅತ್ಯಾಧುನಿಕ ವ್ಯವಸ್ಥೆಯುಳ್ಳ ಸರ್​.ಎಂ.ವಿಶ್ವೇಶ್ವರಯ್ಯ ಟರ್ಮಿನಲ್​, ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದ್ದು, ದೇಶಾದ್ಯಂತ ಇರುವ ವಿವಿಧ ರೈಲ್ವೆ ನಿಲ್ದಾಣಗಳಿಗೆ ಇಲ್ಲಿಂದ ರೈಲು ವ್ಯವಸ್ಥೆ ಇರಲಿದೆ. ಸುಮಾರು 4200 ಚದರ ಕಿಮೀ ವಿಸ್ತೀರ್ಣದಲ್ಲಿ, 314 ಕೋಟಿ ರೂ.ವೆಚ್ಚದಲ್ಲಿ ಟರ್ಮಿನಲ್​ ನಿರ್ಮಾಣ ಮಾಡಲಾಗಿದ್ದು, ದಿನಕ್ಕೆ 50 ರೈಲುಗಳು ಕಾರ್ಯಾಚರಣೆ ಮಾಡಲಿದ್ದು, 50,000 ಪ್ರಯಾಣಿಕರು ಸಂಚರಿಸಬಹುದಾಗಿದೆ. ಇಲ್ಲಿ, ಎಲ್ಲ 7 ಪ್ಲಾಟ್​ಫಾರಂಗಳನ್ನೂ ಸಂಪರ್ಕಿಸುವಂತೆ ಎರಡು ಸುರಂಗ ಹಾದಿಯನ್ನು ನಿರ್ಮಿಸಲಾಗಿದ್ದು, ಒಂದು ಓವರ್​ ಬ್ರಿಜ್​ ಸಹ ಇದೆ. ಮೂರು ಪಿಟ್​ಲೈನ್​ಗಳು ಹಾಗೂ ಎಂಟು ಸ್ಟೇಬಲಿಂಗ್​ ಲೈನ್​ಗಳಿವೆ. ಪ್ಲಾಟ್​ಫಾರಂ ಒಳಗೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸಲು ಲಿಫ್ಟ್, ಎಸ್ಕಲೇಟರ್​ ವ್ಯವಸ್ಥೆಗಳನ್ನೂ ಮಾಡಲಾಗಿದೆ. ವೇಟಿಂಗ್ ಹಾಲ್​ ಕೂಡ ವಿಶಾಲವಾಗಿದೆ.

ಇದರೊಂದಿಗೆ 900 ದ್ವಿಚಕ್ರವಾಹನಗಳು, 250 ಕಾರುಗಳು, 5 ಬಿಎಂಟಿಸಿ ಬಸ್​ ಮತ್ತು 50 ಆಟೋರಿಕ್ಷಾಗಳು, 20 ಕ್ಯಾಬ್​ಗಳನ್ನು ಪಾರ್ಕಿಂಗ್ ಮಾಡಲೂ ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟಾರೆ ಬೆಂಗಳೂರು ಏರ್​ಪೋರ್ಟ್ ಮಾದರಿಯಲ್ಲೇ ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಕಟ್ಟಲಾಗಿದೆ.

ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿ ಅತಿದೊಡ್ಡ, ಆಧುನಿಕ ಸೌಕರ್ಯವುಳ್ಳ ಕೇಂದ್ರೀಕೃತ ಎಸಿ ಕೇಂದ್ರೀಕೃತ ಎಸಿ ರೈಲ್ವೆ ಟರ್ಮಿನಲ್ ನಿರ್ಮಾಣಕ್ಕೆ 2015-16ರಲ್ಲೇ ಅನುಮೋದನೆ ಸಿಕ್ಕಿದೆ. 2018ರಿಂದಲೇ ಇದು ಕಾರ್ಯನಿರ್ವಹಿಸಬೇಕಿತ್ತು. ಆದರೆ ಹಲವು ಅಡೆತಡೆಗಳಿಂದಾಗಿ ಮತ್ತೆ ಎರಡು ವರ್ಷ ಮುಂದೂಡಲ್ಪಟ್ಟಿತು.

ಮಾರ್ಚ್​ 15ರೊಳಗೆ ಉದ್ಘಾಟನೆ ಫೆಬ್ರವರಿ ಅಂತ್ಯಕ್ಕೆ ಟರ್ಮಿನಲ್ ಉದ್ಘಾಟನೆಗೊಳ್ಳಲಿದೆ ಎಂದು ಹೇಳಲಾಗಿತ್ತು.  ಆದರೆ ಅದು ಇನ್ನೂ ಮುಂದೆ ಹೋಗುವ ಸಾಧ್ಯತೆ ಇದೆ. ದೇಶದ ಮೊದಲ ಕೇಂದ್ರೀಕೃತ ಎಸಿ ಟರ್ಮಿನಲ್ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಆಹ್ವಾನ ನೀಡಲಾಗಿದೆ. ಈ ಬಗ್ಗೆ ಮಾತನಾಡಿರುವ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ್​ ಕುಮಾರ್ ವರ್ಮಾ, ನಾವು ಪ್ರಧಾನಿ ಕಚೇರಿ ನೀಡುವ ದಿನಾಂಕಕ್ಕಾಗಿ ಕಾಯುತ್ತಿದ್ದೇವೆ. ಮಾರ್ಚ್​ 15ರೊಳಗೆ ಉದ್ಘಾಟನೆಗೊಳ್ಳುವ ಭರವಸೆ ಇದೆ. ಒಟ್ಟು ಏಳು ಪ್ಲಾಟ್​ಫಾರಂಗಳಲ್ಲಿ 5 ಸಂಪೂರ್ಣಗೊಂಡಿದ್ದು, ಇನ್ನೂ 2  ಪ್ಲಾಟ್​ಫಾರಂಗಳನ್ನು ಮುಂದಿನ 2-3 ತಿಂಗಳುಗಳಲ್ಲಿ ಪೂರ್ತಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:Bhaskar Rao ರೈಲ್ವೆ ADGP ಆಗಿ ಭಾಸ್ಕರ್ ರಾವ್ ವರ್ಗಾವಣೆ

Published On - 4:43 pm, Sat, 20 February 21

Follow Us
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?