AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ನಿರ್ಮಾಣವಾಗಿರುವ ದೇಶದ ಮೊದಲ ಕೇಂದ್ರೀಕೃತ ಎಸಿ ರೈಲ್ವೆ ಟರ್ಮಿನಲ್ ಮಾರ್ಚ್​ 15ರಿಂದ ಕಾರ್ಯಾರಂಭ?

ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿ ಅತಿದೊಡ್ಡ, ಆಧುನಿಕ ಸೌಕರ್ಯವುಳ್ಳ ಕೇಂದ್ರೀಕೃತ ಎಸಿ ಕೇಂದ್ರೀಕೃತ ಎಸಿ ರೈಲ್ವೆ ಟರ್ಮಿನಲ್ ನಿರ್ಮಾಣಕ್ಕೆ 2015-16ರಲ್ಲೇ ಅನುಮೋದನೆ ಸಿಕ್ಕಿದೆ. 2018ರಿಂದಲೇ ಇದು ಕಾರ್ಯನಿರ್ವಹಿಸಬೇಕಿತ್ತು.

ಬೆಂಗಳೂರಿನಲ್ಲಿ ನಿರ್ಮಾಣವಾಗಿರುವ ದೇಶದ ಮೊದಲ ಕೇಂದ್ರೀಕೃತ ಎಸಿ ರೈಲ್ವೆ ಟರ್ಮಿನಲ್ ಮಾರ್ಚ್​ 15ರಿಂದ ಕಾರ್ಯಾರಂಭ?
ಬೈಯಪ್ಪನಹಳ್ಳಿಯಲ್ಲಿ ನಿರ್ಮಾಣಗೊಂಡ ಕೇಂದ್ರೀಕೃತ ಎಸಿ ರೈಲ್ವೆ ಟರ್ಮಿನಲ್​
Lakshmi Hegde
| Edited By: |

Updated on:Feb 20, 2021 | 5:01 PM

Share

ಬೆಂಗಳೂರು: ದೇಶದಲ್ಲಿ ಮೊದಲ ಕೇಂದ್ರೀಕೃತ ಎಸಿ ರೈಲ್ವೆ ಟರ್ಮಿನಲ್ ಹೊಂದಿದ ನಗರ ಎಂಬ ಖ್ಯಾತಿಗೆ ಬೆಂಗಳೂರು ಪಾತ್ರವಾಗಿದೆ. ​ಭಾರತೀಯ ರೈಲ್ವೆ ಇಲಾಖೆ, ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಬಳಿ ಈ ಆಧುನಿಕ ಟರ್ಮಿನಲ್​ ಸಿದ್ಧಗೊಂಡಿದ್ದು, ಇದಕ್ಕೆ ಸರ್​.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಎಂಬ ಹೆಸರೂ ನಿಗದಿಯಾಗಿದೆ. ಟರ್ಮಿನಲ್​ನಲ್ಲಿ ಹಲವು ಮುಂದುವರಿದ ಸೌಲಭ್ಯಗಳನ್ನು ಅಳವಡಿಸಲಾಗಿದ್ದು, ಇತ್ತೀಚೆಗಷ್ಟೇ ರೈಲ್ವೆ ಇಲಾಖೆ ಸಚಿವ ಪಿಯುಷ್ ಗೋಯಲ್​ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಇನ್ನು ದೇಶದ ಮೊದಲ ಕೇಂದ್ರೀಕೃತ ಎಸಿ ಟರ್ಮಿನಲ್​ ಆಗಿರುವ ಇದರಲ್ಲಿ ವಿಐಪಿಗಳ ವಿರಾಮ ಕೊಠಡಿ, ಫುಡ್​ ಕೋರ್ಟ್​, ನೈಜ ಸಮಯದಲ್ಲಿರುವ ಪ್ರಯಾಣಿಕರ ಮಾಹಿತಿ ನೀಡುವ ಡಿಜಿಟಲ್​ ವ್ಯವಸ್ಥೆ ಇದೆ ಎಂದು ಭಾರತೀಯ ರೈಲ್ವೆ ಸಚಿವಾಲಯ ತಿಳಿಸಿದೆ. ಹಾಗೇ, ಈ ಕೇಂದ್ರೀಕೃತ ಎಸಿ ಟರ್ಮಿನಲ್ ದೇಶದಲ್ಲೇ ಅತ್ಯಂತ ದೊಡ್ಡ ಟರ್ಮಿನಲ್​ ಆಗಿದೆ ಎಂದೂ ಹೇಳಿದೆ.

ಹೇಗಿದೆ ಟರ್ಮಿನಲ್​? ಅತ್ಯಾಧುನಿಕ ವ್ಯವಸ್ಥೆಯುಳ್ಳ ಸರ್​.ಎಂ.ವಿಶ್ವೇಶ್ವರಯ್ಯ ಟರ್ಮಿನಲ್​, ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದ್ದು, ದೇಶಾದ್ಯಂತ ಇರುವ ವಿವಿಧ ರೈಲ್ವೆ ನಿಲ್ದಾಣಗಳಿಗೆ ಇಲ್ಲಿಂದ ರೈಲು ವ್ಯವಸ್ಥೆ ಇರಲಿದೆ. ಸುಮಾರು 4200 ಚದರ ಕಿಮೀ ವಿಸ್ತೀರ್ಣದಲ್ಲಿ, 314 ಕೋಟಿ ರೂ.ವೆಚ್ಚದಲ್ಲಿ ಟರ್ಮಿನಲ್​ ನಿರ್ಮಾಣ ಮಾಡಲಾಗಿದ್ದು, ದಿನಕ್ಕೆ 50 ರೈಲುಗಳು ಕಾರ್ಯಾಚರಣೆ ಮಾಡಲಿದ್ದು, 50,000 ಪ್ರಯಾಣಿಕರು ಸಂಚರಿಸಬಹುದಾಗಿದೆ. ಇಲ್ಲಿ, ಎಲ್ಲ 7 ಪ್ಲಾಟ್​ಫಾರಂಗಳನ್ನೂ ಸಂಪರ್ಕಿಸುವಂತೆ ಎರಡು ಸುರಂಗ ಹಾದಿಯನ್ನು ನಿರ್ಮಿಸಲಾಗಿದ್ದು, ಒಂದು ಓವರ್​ ಬ್ರಿಜ್​ ಸಹ ಇದೆ. ಮೂರು ಪಿಟ್​ಲೈನ್​ಗಳು ಹಾಗೂ ಎಂಟು ಸ್ಟೇಬಲಿಂಗ್​ ಲೈನ್​ಗಳಿವೆ. ಪ್ಲಾಟ್​ಫಾರಂ ಒಳಗೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸಲು ಲಿಫ್ಟ್, ಎಸ್ಕಲೇಟರ್​ ವ್ಯವಸ್ಥೆಗಳನ್ನೂ ಮಾಡಲಾಗಿದೆ. ವೇಟಿಂಗ್ ಹಾಲ್​ ಕೂಡ ವಿಶಾಲವಾಗಿದೆ.

ಇದರೊಂದಿಗೆ 900 ದ್ವಿಚಕ್ರವಾಹನಗಳು, 250 ಕಾರುಗಳು, 5 ಬಿಎಂಟಿಸಿ ಬಸ್​ ಮತ್ತು 50 ಆಟೋರಿಕ್ಷಾಗಳು, 20 ಕ್ಯಾಬ್​ಗಳನ್ನು ಪಾರ್ಕಿಂಗ್ ಮಾಡಲೂ ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟಾರೆ ಬೆಂಗಳೂರು ಏರ್​ಪೋರ್ಟ್ ಮಾದರಿಯಲ್ಲೇ ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಕಟ್ಟಲಾಗಿದೆ.

ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿ ಅತಿದೊಡ್ಡ, ಆಧುನಿಕ ಸೌಕರ್ಯವುಳ್ಳ ಕೇಂದ್ರೀಕೃತ ಎಸಿ ಕೇಂದ್ರೀಕೃತ ಎಸಿ ರೈಲ್ವೆ ಟರ್ಮಿನಲ್ ನಿರ್ಮಾಣಕ್ಕೆ 2015-16ರಲ್ಲೇ ಅನುಮೋದನೆ ಸಿಕ್ಕಿದೆ. 2018ರಿಂದಲೇ ಇದು ಕಾರ್ಯನಿರ್ವಹಿಸಬೇಕಿತ್ತು. ಆದರೆ ಹಲವು ಅಡೆತಡೆಗಳಿಂದಾಗಿ ಮತ್ತೆ ಎರಡು ವರ್ಷ ಮುಂದೂಡಲ್ಪಟ್ಟಿತು.

ಮಾರ್ಚ್​ 15ರೊಳಗೆ ಉದ್ಘಾಟನೆ ಫೆಬ್ರವರಿ ಅಂತ್ಯಕ್ಕೆ ಟರ್ಮಿನಲ್ ಉದ್ಘಾಟನೆಗೊಳ್ಳಲಿದೆ ಎಂದು ಹೇಳಲಾಗಿತ್ತು.  ಆದರೆ ಅದು ಇನ್ನೂ ಮುಂದೆ ಹೋಗುವ ಸಾಧ್ಯತೆ ಇದೆ. ದೇಶದ ಮೊದಲ ಕೇಂದ್ರೀಕೃತ ಎಸಿ ಟರ್ಮಿನಲ್ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಆಹ್ವಾನ ನೀಡಲಾಗಿದೆ. ಈ ಬಗ್ಗೆ ಮಾತನಾಡಿರುವ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ್​ ಕುಮಾರ್ ವರ್ಮಾ, ನಾವು ಪ್ರಧಾನಿ ಕಚೇರಿ ನೀಡುವ ದಿನಾಂಕಕ್ಕಾಗಿ ಕಾಯುತ್ತಿದ್ದೇವೆ. ಮಾರ್ಚ್​ 15ರೊಳಗೆ ಉದ್ಘಾಟನೆಗೊಳ್ಳುವ ಭರವಸೆ ಇದೆ. ಒಟ್ಟು ಏಳು ಪ್ಲಾಟ್​ಫಾರಂಗಳಲ್ಲಿ 5 ಸಂಪೂರ್ಣಗೊಂಡಿದ್ದು, ಇನ್ನೂ 2  ಪ್ಲಾಟ್​ಫಾರಂಗಳನ್ನು ಮುಂದಿನ 2-3 ತಿಂಗಳುಗಳಲ್ಲಿ ಪೂರ್ತಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:Bhaskar Rao ರೈಲ್ವೆ ADGP ಆಗಿ ಭಾಸ್ಕರ್ ರಾವ್ ವರ್ಗಾವಣೆ

Published On - 4:43 pm, Sat, 20 February 21

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?