AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಲಗೆಗೆ ಆದ ಗಾಯ ಮಾಯುತ್ತೆ ನಾಲಗೆಯಿಂದಾದ ಗಾಯ ಮಾಯಲಾರದು: ಡಾ ಸಿಎನ್ ಮಂಜುನಾಥ್

ನಾಲಗೆಗೆ ಆದ ಗಾಯ ಮಾಯುತ್ತೆ ನಾಲಗೆಯಿಂದಾದ ಗಾಯ ಮಾಯಲಾರದು: ಡಾ ಸಿಎನ್ ಮಂಜುನಾಥ್

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 30, 2024 | 5:36 PM

Share

ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಬಗ್ಗೆ ಡಾ ಮಂಜುನಾಥ್ ಅವರಲ್ಲಿರುವಷ್ಟು ಮಾಹಿತಿ ಪ್ರಾಯಶಃ ಕುಮಾರಸ್ವಾಮಿಯಲ್ಲೂ ಇರಲಿಕ್ಕಿಲ್ಲ. ಅವರು ಐಸಿಯುನಿಂದ ಎದ್ದು ಪ್ರಚಾರಕ್ಕೆ ಬಂದ ವಿಷಯದಿಂದ ಶುರುಮಾಡಿ ಭಾರತದ ಪ್ರಧಾನಿಯಾಗಿ ಅವರು ಮಾಡಿದ ಸಾಧನೆಗಳನ್ನು ಒಂದೇ ಉಸುರಿನಲ್ಲಿ ಮಂಜುನಾಥ್ ಹೇಳುತ್ತಾರೆ.

ರಾಮನಗರ: ಬೆಂಗಳೂರು ಗ್ರಾಮಾಂತರ ಸಂಸದ ಡಾ ಸಿಎನ್ ಮಂಜುನಾಥ್ ಈಗಲೂ ರಾಜಕಾರಣಿಯಂತೆ ಮಾತಾಡುವುದಿಲ್ಲ! ನಾಲಗೆಗೆ ಆದ ಗಾಯ ಮಾಯಬಹುದೇ ಹೊರತು ನಾಲಗೆಯಿಂದ ಆದ ಗಾಯ ಮಾಯಲಾರದು, ನಾಲಗೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು, ಆದನ್ನು ಹರಿಬಿಡುವುದರಿಂದ ಯಾರಿಗೂ ಪ್ರಯೋಜನವಿಲ್ಲ, ರಾಜಕಾರಣ ಆರೋಗ್ಯಕರವಾಗಿರಬೇಕಾದರೆ ಮಾತು ಮೃದುವಾಗಿರಬೇಕು ಮತ್ತು ಹಿತವಾಗಿರಬೇಕು ಎಂದು ಮಂಜುನಾಥ್ ಹೇಳುತ್ತಾರೆ. ಅವರು ಕಾಂಗ್ರೆಸ್ ನಾಯಕರನ್ನು ಉದ್ದೇಶಿಸಿ ಹೇಳಿದರೆನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಬೆಂಗಳೂರು: ಬಿಜೆಪಿ ಕಚೇರಿಗೆ ಇಂದು ಅನಿರೀಕ್ಷಿತ ಭೇಟಿ ನೀಡಿದಾಗಲೂ ಡಾ ಸಿಎನ್ ಮಂಜುನಾಥ್ ಟೈ ಧರಿಸಿದ್ದರು!