ಯಡಿಯೂರಪ್ಪ ಆಪ್ತ ಉಮೇಶ್ ‘ಕಾರು’ಬಾರು ಸೀದಾ ನೀರಾವರಿ ನಿಗಮ ಗೋಲ್​ ಮಾಲ್​ಗೆ ಲಿಂಕ್ ಆಗಿದೆ: ಐಟಿ ಮೂಲಗಳು

TV9 Digital Desk

| Edited By: ಸಾಧು ಶ್ರೀನಾಥ್​

Updated on:Oct 07, 2021 | 1:50 PM

Karnataka Neeravari Nigam Limited kick back: ಮುನಿರಾಬಾದನ ತುಂಗಭದ್ರಾ ನೀರಾವರಿ ವಲಯ ಕಚೇರಿಗೆ ಸೇರಿದ ಕಾರು ಇದಾಗಿದೆ. ಬೆಂಗಳೂರಿನಲ್ಲಿ ಪತ್ತೆಯಾದ ಕಾರು ಇಇ ಉಪಯೋಗಿಸುತ್ತಿದ್ದರು ಎನ್ನಲಾಗಿದೆ. ಕೊಪ್ಪಳದ ಕಾರು ಬೆಂಗಳೂರಿಗೆ ಹೇಗೆ ಹೋಯಿತು ಎನ್ನುವ ಅನುಮಾನ ಇದೀಗ ಗಾಢವಾಗತೊಡಗಿದೆ.

ಯಡಿಯೂರಪ್ಪ ಆಪ್ತ ಉಮೇಶ್ ‘ಕಾರು’ಬಾರು ಸೀದಾ ನೀರಾವರಿ ನಿಗಮ ಗೋಲ್​ ಮಾಲ್​ಗೆ ಲಿಂಕ್ ಆಗಿದೆ: ಐಟಿ ಮೂಲಗಳು
ಯಡಿಯೂರಪ್ಪ ಆಪ್ತ ಉಮೇಶ್ ಕಾರುಬಾರು ಸೀದಾ ಕರ್ನಾಟಕ ನೀರಾವರಿ ನಿಗಮ ಗೋಲ್​ ಮಾಲ್​ಗೆ ಲಿಂಕ್ ಆಗಿದೆ: ಐಟಿ ಮೂಲಗಳು


ಕರ್ನಾಟಕ-ಗೋವಾ ವಿಭಾಗದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದು ಬೆಂಗಳೂರಿನಲ್ಲಿ ಭರ್ಜರಿ ಬೇಟೆಯಾಡಿದ್ದಾರೆ. ರಾಜಕೀಯ ಮಹತ್ವ ಪಡೆದುಕೊಂಡಿರುವ ಪ್ರಕರಣದಲ್ಲಿ ತೀವ್ರ ವಿವಾದಕ್ಕೆ ತುತ್ತಾಗಿದ್ದ ಕರ್ನಾಟಕ ನೀರಾವರಿ ನಿಗಮದಲ್ಲಿ ಸುಮಾರು 20 ಸಾವಿರ ಕೋಟಿ ಯೋಜನೆ ಅನುಷ್ಠಾನ ಲೆಕ್ಕದಲ್ಲಿ ಭಾರೀ ಗೋಲ್​ ಮಾಲ್​ ನಡೆದಿತ್ತು ಎನ್ನಲಾಗಿತ್ತು. ಇದೀಗ ಐಟಿ ಇಲಾಖೆ ಅಧಿಕಾರಿಗಳು ಇದರ ಮೂಲಕ್ಕೆ ಕೈಹಾಕಿದ್ದಾರೆ.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕ ನೀರಾವರಿ ನಿಗಮದಲ್ಲಿ 20 ಸಾವಿರ ಕೋಟಿ ಯೋಜನೆ ಅನುಷ್ಠಾನಕ್ಕೆ ತರಲಾಗಿತ್ತು. ಯೋಜನೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಕಿಕ್ ಬ್ಯಾಕ್ ವ್ಯವಹಾರ ನಡೆದಿದೆ ಅನ್ನೋ ಆರೋಪವನ್ನ ಪ್ರಮುಖವಾಗಿ ಬಿಜೆಪಿ ಎಂಎಲ್​ಸಿ ಹೆಚ್​ ವಿಶ್ವನಾಥ್​ ಸೇರಿದಂತೆ ವಿ ಪಕ್ಷಗಳು ಮಾಡಿದ್ವು. ಏತು ನೀರಾವರಿ ಹಾಗೂ ನಾಲೆಯ ಆಧುನೀಕರಣ ಯೋಜನೆ ಇದಾಗಿತ್ತು.

ಇಂದು ನಡೆದಿರುವ ಆದಾಯ ತೆರಿಗೆ ದಾಳಿ ಬೆನ್ನು ಹತ್ತಿದಾಗ ಅದು ಕೊಪ್ಪಳಕ್ಕೆ ತಳುಕು ಹಾಕಿಕೊಂಡಿರುವುದು ಪತ್ತೆಯಾಗಿದೆ. ಬಿಎಸ್ ವೈ ಆಪ್ತ ಉಮೇಶ್ ಮನೆ ಮೇಲೆ ಐಟಿ ದಾಳಿ ವೇಳೆ ಕೊಪ್ಪಳದ ನಂಟು ಪತ್ತೆಯಾಗಿದೆ. ಉಮೇಶ್ ಮನೆಯ ಬಳಿ ಪತ್ತೆಯಾಯಿತು ಕೊಪ್ಪಳದ ಪಾಸಿಂಗ್ ಹೊಂದಿರುವ ಇನ್ನೋವಾ ಕ್ರಿಸ್ಟಾ ಕಾರ್ ಪತ್ತೆಯಾಗಿದೆ. KA 37 G 0523 ನಂಬರ್ ನ ಈ ಕಾರು ಕೊಪ್ಪಳ ಆರ್ ಟಿ ಓ ಕಚೇರಿಯಲ್ಲಿ ರಿಜಿಸ್ಟರ್ ಆಗಿದೆ.

ಕುತೂಹಲಕಾರಿ ಸಂಗತಿಯೆಂದರೆ ಮುನಿರಾಬಾದನ ತುಂಗಭದ್ರಾ ನೀರಾವರಿ ವಲಯ ಕಚೇರಿಗೆ ಸೇರಿದ ಕಾರು ಇದಾಗಿದೆ. ಬೆಂಗಳೂರಿನಲ್ಲಿ ಪತ್ತೆಯಾದ ಕಾರು ಇಇ ಉಪಯೋಗಿಸುತ್ತಿದ್ದರು ಎನ್ನಲಾಗಿದೆ. ಕೊಪ್ಪಳದ ಕಾರು ಬೆಂಗಳೂರಿಗೆ ಹೇಗೆ ಹೋಯಿತು ಎನ್ನುವ ಅನುಮಾನ ಇದೀಗ ಗಾಢವಾಗತೊಡಗಿದೆ.

BSY ಆಪ್ತ ಸಹಾಯಕ ಉಮೇಶ್ ಮನೆ ಮೇಲೆ ಐಟಿ ದಾಳಿ ನಡೆದಾಗ ಉಮೇಶ್ ಜಲಸಂಪನ್ಮೂಲ ಇಲಾಖೆಯ ಕಾರು ಬಳಸುತ್ತಿರುವುದು ದೃಢಪಟ್ಟಿದೆ. ನೀರಾವರಿ ಇಲಾಖೆ ಕಾರ್ಯದರ್ಶಿಯಾಗಿದ್ದಾಗ ಲಕ್ಷ್ಮಣರಾವ್ ಪೇಶ್ವೆ ಎಂಬುವವರು ಉಮೇಶ್‌ಗೆ ಸರ್ಕಾರಿ ಕಾರು ನೀಡಿದ್ದರು. ಪೇಶ್ವೆ ಪ್ರಸ್ತುತ ಕೃಷ್ಣಾ ಜಲಭಾಗ್ಯ ನಿಗಮದ ಎಂಡಿ ಆಗಿದ್ದಾರೆ. ಅಗಸ್ಟ್ 1ರಂದು ಕೃಷ್ಣಾ ಜಲಭಾಗ್ಯ ನಿಗಮದ ಎಂಡಿ ಆಗಿ ನೇಮಕಗೊಂಡಿದ್ದಾರೆ.

ಇದನ್ನೂ ಓದಿ:
IT raid: ಬಿ.ಎಸ್. ಯಡಿಯೂರಪ್ಪ ಆಪ್ತನ ಮನೆ ಮೇಲೆ ಐಟಿ ದಾಳಿ; ಬಿಎಂಟಿಸಿ ಕಂಡಕ್ಟರ್ ಆಗಿದ್ದ ಆಪ್ತ ಉಮೇಶ್ ಹಿನ್ನೆಲೆ ಏನು?

ಇದನ್ನೂ ಓದಿ:
IT raid: ಬಿ.ಎಸ್. ಯಡಿಯೂರಪ್ಪ ಆಪ್ತನ ಮನೆ ಮೇಲೆ ಐಟಿ ದಾಳಿ; ಬಿಎಂಟಿಸಿ ಕಂಡಕ್ಟರ್ ಆಗಿದ್ದ ಆಪ್ತ ಉಮೇಶ್ ಹಿನ್ನೆಲೆ ಏನು?

 

IT Raid : BSY PA ಉಮೇಶ್ ಮನೆ ಮೇಲೆ ಐಟಿ ದಾಳಿ, ಸರ್ಕಾರಿ ಕಾರು ಬಳಸುತ್ತಿದ್ದ | Tv9kannada

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada