AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಮಾರಣ್ಣನ ಕೆಣಕಿದರೆ ಸಹಿಸೋದಿಲ್ಲ, ಮಂಡ್ಯ ಬಗ್ಗೆ ಮಾತನಾಡಿದರೆ ಹುಷಾರ್: ರಾಕ್​ಲೈನ್​ಗೆ ಅನ್ನದಾನಿ ಎಚ್ಚರಿಕೆ

ನಾನು ಚೆಡ್ಡಿ ಹಾಕುತ್ತಿದ್ದ ವಯಸ್ಸಿನಿಂದಲೂ ಅಂಬರೀಶಣ್ಣನ ಪಿಚ್ಚರ್ ನೋಡುತ್ತಿದ್ದೇನೆ. ಅಂಬರೀಶ್ ಅಣ್ಣ ನಮ್ಮಜ್ಜಿ ಊರಿನವರು ಎನ್ನುವ ಅಭಿಮಾನ ನನಗೆ ಇದೆ. ಅಂಬರೀಶ್ ಅಣ್ಣನ ಅಭಿಮಾನವನ್ನು ಯಾರಾದರೂ ಹೇಳಿಕೊಡಬೇಕಾ ನಮಗೆ: ಅನ್ನದಾನಿ

ಕುಮಾರಣ್ಣನ ಕೆಣಕಿದರೆ ಸಹಿಸೋದಿಲ್ಲ, ಮಂಡ್ಯ ಬಗ್ಗೆ ಮಾತನಾಡಿದರೆ ಹುಷಾರ್: ರಾಕ್​ಲೈನ್​ಗೆ ಅನ್ನದಾನಿ ಎಚ್ಚರಿಕೆ
ಸುಮಲತಾ, ರಾಕ್​ಲೈನ್​ ವೆಂಕಟೇಶ್, ಅನ್ನದಾನಿ
TV9 Web
| Edited By: |

Updated on:Jul 10, 2021 | 10:08 AM

Share

ಮಂಡ್ಯ: ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ನಡುವಿನ ಜಗಳದಲ್ಲಿ ಹೆಚ್​ಡಿಕೆ ವಿರುದ್ಧ ಮಾತನಾಡಿರುವ ಚಿತ್ರ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ಗೆ ಜೆಡಿಎಸ್ ಶಾಸಕ ಅನ್ನದಾನಿ ಎಚ್ಚರಿಕೆ ನೀಡಿದ್ದಾರೆ. ಮಂಡ್ಯ ಜಿಲ್ಲೆ ಬಗ್ಗೆ ನಿಮಗೆ ಏನು ಗೊತ್ತಿದೆ? ನೀವು ಯಾಕೆ ಮಾತನಾಡುತ್ತೀರಿ? ಮತ್ತೆ ಮಂಡ್ಯ ಹಾಗೂ ಹೆಚ್​.ಡಿ.ಕುಮಾರಸ್ವಾಮಿ ಬಗ್ಗೆ ಮಾತನಾಡಿದರೆ ಹುಷಾರ್ ಎಂದು ಅನ್ನದಾನಿ ಕಿಡಿಕಾರಿದ್ದಾರೆ. ಮಂಡ್ಯ ಜಿಲ್ಲೆಗೆ ಸಂಬಂಧಪಡದವರು ಈ ವಿಚಾರದಲ್ಲಿ ಮಾತನಾಡುವುದು ತಪ್ಪು ಎಂದಿರುವ ಅವರು ರಾಕ್​ಲೈನ್ ವೆಂಕಟೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸುಮಲತಾ ಮೇಡಂ ಗೆದ್ದ ಮೇಲೆ ಮಂಡ್ಯಕ್ಕೆ ಬಂದಿರುವವರು. ಜನ ಮತ ಹಾಕಿದ್ದಾರೆ, ಸಂತೋಷ. ಅದಕ್ಕೆ ತಕ್ಕನಾಗಿ ಚೆನ್ನಾಗಿ ಕೆಲಸ ಮಾಡಿ, ಜನ ಇಟ್ಟಿರುವ ಅಭಿಮಾನವನ್ನು ಉಳಿಸಿಕೊಳ್ಳಬೇಕು. ಆದರೆ, ಕುಮಾರಣ್ಣನ ಕೆಣಕುವ ಕೆಲಸ ಮಾಡಬೇಡಿ ಎಂದು ಅನ್ನದಾನಿ ಹೇಳಿದ್ದಾರೆ. ರಾಕ್​ಲೈನ್​ ವೆಂಕಟೇಶ್ ಅವರಿಗೆ ಮಂಡ್ಯ ಜಿಲ್ಲೆ ಬಗ್ಗೆ ಏನು ಗೊತ್ತಿದೆ? ಅವರು ಮಂಡ್ಯ ಬಗ್ಗೆ ನಾಲಗೆ ಬಿಗಿ ಹಿಡಿದುಕೊಂಡು ಮಾತಾಡಲಿ ಎಂದಿದ್ದಾರೆ.

ನಾನು ಚೆಡ್ಡಿ ಹಾಕುತ್ತಿದ್ದ ವಯಸ್ಸಿನಿಂದಲೂ ಅಂಬರೀಶಣ್ಣನ ಪಿಚ್ಚರ್ ನೋಡುತ್ತಿದ್ದೇನೆ. ಅಂಬರೀಶ್ ಅಣ್ಣ ನಮ್ಮಜ್ಜಿ ಊರಿನವರು ಎನ್ನುವ ಅಭಿಮಾನ ನನಗೆ ಇದೆ. ಅಂಬರೀಶ್ ಅಣ್ಣನ ಅಭಿಮಾನವನ್ನು ಯಾರಾದರೂ ಹೇಳಿಕೊಡಬೇಕಾ ನಮಗೆ. ಎರಡನೇ ತಲೆಮಾರಿಗೆ ನಮ್ಮ ಅಭಿಷೇಕ್ ಬರುತ್ತಿದ್ದಾರೆ. ಅವರು ಬಂದರೆ ಸಂತೋಷ ನಮಗೆ. ನಾವು ಅವರು ಬರೋದನ್ನು ಬೇಡ ಅನ್ನೋದಿಲ್ಲ. ಈ ಜಿಲ್ಲೆಯ ಮಗ ಆತ. ಜತೆಗೆ, ಅಂಬರೀಶ್ ಅಣ್ಣನ ಮಗ ಎಂದು ಅಭಿಮಾನ ನಮಗೂ ಇದೆ. ಹಾಗಂತ ಕುಮಾರಣ್ಣನ ಕೆಣಕುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ರವೀಂದ್ರ ಶ್ರೀಕಂಠಯ್ಯ ಒಬ್ಬರು ಸುಸಂಸ್ಕೃತರು. ಅವರ ತಂದೆ ಕಾಲದಿಂದ‌ ರಾಜಕೀಯ ನೋಡಿದ ವ್ಯಕ್ತಿ ಅವರು. ರವೀಂದ್ರ ಶ್ರೀಕಂಠಯ್ಯ ಅವರ ತಂದೆ ಮಹಾರಾಜರ ಜೊತೆ ಸಂಪರ್ಕ ಇಟ್ಟುಕೊಂಡಿದ್ದರು. ರವೀಂದ್ರ ಶ್ರೀಕಂಠಯ್ಯ ಅಸಂಬದ್ಧವಾಗಿ ಮಾತನಾಡುತ್ತಾರೆ ಎನ್ನುವುದನ್ನು ನಾನು ಒಪ್ಪಲ್ಲ. ಅವರು ಮಾತನಾಡೋದು ಸರಿ ಇದೆ. ಕನ್ನಂಬಾಡಿ ಕಟ್ಟೆ ಅವರ ಕ್ಷೇತ್ರ ವ್ಯಾಪ್ತಿಯಲ್ಲಿ‌ ಇದೆ. ಅದರ ಬಗ್ಗೆ ಯಾರಾದರೂ ಮಾತನಾಡಿದಾಗ ಅವರು ವಾಪಾಸ್ಸು ಮಾತನಾಡಲೇಬೇಕು. ನಮ್ಮ ಇಬ್ಬರು ಶಾಸಕರು ಬಿಇ ಮಾಡಿದ್ದಾರೆ. ಇಂಜಿನಿಯರಿಂಗ್ ಮಾಡಿದ ಎಂಎಲ್‌ಎಗಳೇ ಮಾತನಾಡುತ್ತಿಲ್ಲ. ನೀವು ಯಾಕೆ ಕನ್ನಂಬಾಡಿ ಕಟ್ಟೆಯನ್ನು ಎಳೆದುಕೊಂಡು ಬರುತ್ತೀರಾ ಎಂದು ಪ್ರಶ್ನಿಸಿದ್ದಾರೆ.

ಅಂಬರೀಶ್ ಅಣ್ಣನಿಗೂ ರವೀಂದ್ರ ಶ್ರೀಕಂಠಯ್ಯ ಅವರಿಗೂ ಏನು ವಿರಸ ಇತ್ತೆಂದು ನನಗೆ ಗೊತ್ತಿಲ್ಲ. ನಮ್ಮ ಶಾಕರಿಗೆ ಸಣ್ಣಪುಟ್ಟ ವ್ಯತ್ಯಾಸಗಳು ಆದಾಗ ಅವರನ್ನು ಕಾಪಾಡುವುದು, ಅವರ ಜೊತೆಯಲ್ಲಿ ನಿಲ್ಲುವುದು ನಮ್ಮ ಕರ್ತವ್ಯ. ಹೀಗಾಗಿ ನಾನು ಅವರ ಪರವಾಗಿ ನಿಲ್ಲುತ್ತೇನೆ ಎಂದಿರುವ ಅನ್ನದಾನಿ ಸುಮಲತಾ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲಿ ಸುಮಲತಾ ಸೋಲಿಸಲು ಹೆಚ್​ಡಿ ಕುಮಾರಸ್ವಾಮಿ ಶಪಥ.. ಇದಕ್ಕೆ ಸುಮಲತಾ ಕೌಂಟರ್ ಪ್ಲಾನ್ ಏನು? 

ರಾಕ್​ಲೈನ್ ವೆಂಕಟೇಶ್​ ನಿವಾಸಕ್ಕೆ ಮುತ್ತಿಗೆ ಹಾಕಿದ ಹೆಚ್​.ಡಿ.ಕುಮಾರಸ್ವಾಮಿ ಅಭಿಮಾನಿಗಳು: ಬ್ಯಾರಿಕೇಡ್ ತಳ್ಳಿ ಒಳನುಗ್ಗಲು ಯತ್ನ

Published On - 10:06 am, Sat, 10 July 21

Follow Us
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು