AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನರಿಗೆ ಕೋಟಿ‌ ಕೋಟಿ ರೂ. ಪಂಗನಾಮ: ಕಾಂಗ್ರೆಸ್ ಶಾಸಕ​ ಅಜಯ್ ಸಿಂಗ್ ಮಾಜಿ ಪಿಎ ಅರೆಸ್ಟ್

ಕಲಬುರಗಿ ಜಿಲ್ಲೆಯ ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಅವರ ಮಾಜಿ ಆಪ್ತ ಸಹಾಯಕ ಎಂದು ಹೇಳಿಕೊಂಡು ಸುಮಾರು ಜನರಿಗೆ ವಂಚಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾಂಟ್ರ್ಯಾಕ್ಟರ್​ಗಳಿಗೆ‌ ಕೆಲಸ ಕೊಡಿಸ್ತಿನಿ, ನೌಕರಿ ಕೊಡಿಸುವದ್ದಾಗಿ ಹೇಳಿ ಕಲಬುರಗಿ, ಬೀದರ್ ಜಿಲ್ಲೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಜನರಿಂದ 1.50 ಕೋಟಿಗೂ ಅಧಿಕ ಹಣ ವಸೂಲಿ ಮಾಡಿ ಪರಾರಿಯಾಗಿದ್ದ.

ಜನರಿಗೆ ಕೋಟಿ‌ ಕೋಟಿ ರೂ. ಪಂಗನಾಮ: ಕಾಂಗ್ರೆಸ್ ಶಾಸಕ​ ಅಜಯ್ ಸಿಂಗ್ ಮಾಜಿ ಪಿಎ ಅರೆಸ್ಟ್
ಜನರಿಗೆ ಕೋಟಿ‌ ಕೋಟಿ ರೂ. ಪಂಗನಾಮ: ಕಾಂಗ್ರೆಸ್ ಶಾಸಕ​ ಅಜಯ್ ಸಿಂಗ್ ಮಾಜಿ ಪಿಎ ಅರೆಸ್ಟ್
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ಗಂಗಾಧರ​ ಬ. ಸಾಬೋಜಿ|

Updated on: May 23, 2024 | 7:55 PM

Share

ಕಲಬುರಗಿ, ಮೇ 23: ನೀವು ಏನಾದರೂ ಶಾಸಕರ ಪಿಎಗೆ (PA) ಹೇಳಿದರೆ ನಮ್ಮ ಕೆಲಸ ಆಗುತ್ತೆ, ಕಾಮಾಗಾರಿ ಬಿಲ್ ಗ್ಯಾರಂಟಿಯಾಗುತ್ತೆ, ಸರ್ಕಾರಿ ನೌಕರಿ ಸಿಗುತ್ತೆ ಅಂತಾ ನಂಬಿದ್ದರೆ ನೀವು ಈ ಸ್ಟೋರಿಯನ್ನ ಒಂದು ಸಲ‌ ಓದಲೇಬೇಕು. ಯಾಕಂದ್ರೆ ಶಾಸಕರ ಮಾಜಿ ಆಪ್ತ ಸಹಾಯಕ ಕಂಡ‌ ಕಂಡವರಿಗೆ ಮಕ್ಮಲ್ ಟೋಪಿ (Fraud) ಹಾಕಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಯಾರು ಆ ಪಿಎ ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ. ಮುಂದೆ ಓದಿ.

ಪರಶುರಾಮ ಪಾಟೀಲ್ ಎಂಬ ವ್ಯಕ್ಯಿ ಕಲಬುರಗಿ ಜಿಲ್ಲೆಯ ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಅವರ ಮಾಜಿ ಆಪ್ತ ಸಹಾಯಕ. ಕಳೆದ ಹಲವು ವರ್ಷಗಳಿಂದ ಶಾಸಕರ ಬಳಿ ಪಿಎ ಆಗಿ ಕೆಲಸ ಮಾಡ್ತಿದ್ದ. ಒಂದು ವರ್ಷದ ಹಿಂದೆ ಅವರ ಆಪ್ತ ಸಹಾಯಕನಾಗಿ ಕೆಲಸ‌ ಮಾಡುತ್ತಿದ್ದವನ್ನ ಖುದ್ದು ಶಾಸಕರ ಆತನನ್ನ ಕೆಲಸದಿಂದ ತೆಗೆದುಹಾಕಿದ್ದರು. ಇದೀಗ ಅದೇ ಕಿರಾತಕನ ಅಸಲಿ ಬಣ್ಣ ಬಯಲಾಗಿದೆ. ಶಾಸಕರಿಗೆ ಹೇಳಿ ಕಾಂಟ್ರ್ಯಾಕ್ಟರ್​ಗಳಿಗೆ‌ ಕೆಲಸ ಕೊಡಿಸ್ತಿನಿ, ಸರ್ಕಾರಿ ಕಾಮಗಾರಿ‌ ಕೊಡಿಸ್ತಿನಿ ಹಾಗೂ ಕೆಕೆಆರ್​ಡಿಬಿ‌ ಮಂಡಳಿಯಲ್ಲಿ ನೌಕರಿ ಕೊಡಿಸುವದ್ದಾಗಿ ಹೇಳಿ ಕಲಬುರಗಿ, ಬೀದರ್ ಜಿಲ್ಲೆಯ ಸುಮಾರು 40ಕ್ಕೂ ಹೆಚ್ಚು ಜನರಿಂದ 1.50 ಕೋಟಿಗೂ ಅಧಿಕ ಹಣ ವಸೂಲಿ ಮಾಡಿ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ರೈತರಿಗೆ ಬರೆ ಎಳೆದ ಬ್ಯಾಂಕ್‌ಗಳು, ಬರ ಪರಿಹಾರ ಹಣ ಸಾಲಕ್ಕೆ ಜಮಾ: ಜಿಲ್ಲಾಧಿಕಾರಿ ಆದೇಶಕ್ಕೂ ಡೋಂಟ್​​ ಕೇರ್​​

ಇನ್ನು ಪರಶುರಾಮಗೆ ಹಣ ನೀಡಿದ ಬೀದರ್ ಮೂಲದ ಕಿರಣ ಮೇ 13 ರಂದು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಳಿಕ ಜೇವರ್ಗಿ ಪೊಲೀಸರು ಇದೀಗ ವಂಚಕ ಪರಶುರಾಮನನ್ನು ಬಂಧಿಸಿದ್ದಾರೆ.

ಪರಶುರಾಮ ಜನರಿಗೆ ವಂಚಿಸುವ ಬಗ್ಗೆ‌ ಒಂದು ವರ್ಷದ ಹಿಂದೆಯೇ ಮಾಹಿತಿ ಪಡೆದಿದ್ದ ಶಾಸಕ ಅಜಯ್ ಸಿಂಗ್ ಆತನನ್ನು‌ ಕೆಲಸದಿಂದ ತೆಗೆದು ಹಾಕಿ ಜನರಿಗೆ ವಂಚನೆಗೆ ಒಳಗಾಗದಂತೆ ತಿಳಿಸಿದ್ದರು. ಇನ್ನು ಅವರ ಬಳಿಯಿಂದ ತೆಗೆದು ಹಾಕುವಷ್ಟರಲ್ಲಿ ಈ ಪರಶುರಾಮ ಹಲವರಿಗೆ ಮಕ್ಮಲ್ ಟೋಪಿ ಹಾಕಿದ್ದ. ಇನ್ನು ಈ ವಿಷಯ ತಿಳಿಯುತ್ತಿದ್ದಂತೆ ವಂಚೆನೆಗೆ ಒಳಗಾದವರು ಹಣ ಕೇಳಲು ಆರಂಭಿಸಿದ್ದಾರೆ.

ಇದನ್ನೂ ಓದಿ: ನಿದ್ದೆಗೆ ಜಾರಿದ್ದ ಕಾನ್​ಸ್ಟೇಬಲ್​ ಕಿಸೆಯಿಂದ ಕೀ ತೆಗೆದುಕೊಂಡು ಪೊಲೀಸ್​ ಬಸ್​ ಕಳವಿಗೆ ಯತ್ನಸಿದ ಸೋನು

ಆಗ ಮೊಬೈಲ್ ಸ್ವೀಚ್ ಆಫ್ ಮಾಡಿ ಕಲಬುರಗಿಯಿಂದ‌‌ ಕಾಲ್ಕಿತ್ ಆಸಾಮಿ ಯಾರಿಗೂ ಗುರುತು ಸಿಗಬಾರದು ಅಂತಾ ಸಂಪೂರ್ಣ ತಲೆ ಕೂದಲು ಬೋಳಿಸಿಕೊಂಡು ಬೆಂಗಳೂರಿನ‌ ಲಾಡ್ಜ್ ಗಳಲ್ಲಿ ನೆಲೆಸಿದ್ದ. ಇದರ‌ ಖಚಿತ ಮಾಹಿತಿ ಪಡೆದ ಜೇವರ್ಗಿ ಪೊಲೀಸರು ಬುಧುವಾರ ರಾತ್ರಿ ಬಂಧಿಸಿದ್ದಾರೆ.‌ ಇನ್ನು ಪರಶುರಾಮ ಬಂಧನದ ಸುದ್ದಿ ತಿಳಿದು ಅವನಿಂದ‌ ಮೋಸ ಹೋದ ಇತರರು ಸಹ ಠಾಣೆಗೆ ಬಂದು ದೂರು‌ ಕೊಡುತ್ತಿದ್ದಾರೆ.

ಎಲ್ಲಿವರೆಗೆ‌ ಮೋಸ ಹೋಗುವ ಜನರು ಇರ್ತಾರೆ ಅಲ್ಲಿವರೆಗೆ ಮಕ್ಮಲ್ ಟೋಪಿ ಹಾಕುವವರು ಇರ್ತಾರೆ‌ ಅನ್ನುವದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದೆ. ಹೀಗಾಗಿ ಶಾಸಕ ಸಚಿವರ ಪಿಎ‌ ನಂಬಿ ಹಣ ನೀಡಿ‌ ಕೈ ಸುಟ್ಟುಕೊಳ್ಳುವ ಮುನ್ನ ಜನ‌ ಎಚ್ಚರದಿಂದ ಇರಬೇಕಾಗಿದೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!