AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

10 ವರ್ಷದ ಪ್ರೇಮದ ಫಲ! ಪೊಲೀಸರೂ ಇದ್ದರಪ್ಪಾ, ಗ್ರಾಮಸ್ಥರೂ ಸೇರಿದ್ದರು, ಆದ್ರೆ ಎರಡು ಕುಟುಂಬಗಳು ಬಡಿದಾಡಿಕೊಂಡವು, ಸಮಸ್ಯೆ ಏನು?

ಈ ಹಿಂದೆ ಅರ್ಜುನ್, ನಮ್ಮ ಕುಟುಂಬದ ಯುವತಿ ಓಡಿಸಿಕೊಂಡು ಹೋಗಿ ಮದುವೆಯಾಗಿದ್ದಾನೆ. ಇದೀಗ ಎರಡು ಮಕ್ಕಳು ಇದ್ದರೂ ಇನ್ನೊಂದು ಮದುವೆಯಾಗ್ತೇನೆ, ನಿಮ್ಮ ಕುಟುಂಬದ ಯುವತಿಯನ್ನೇ ಕೊಟ್ಟು ಮದುವೆ ಮಾಡಿ ಅಂತ ನಮಗೆ ತೊಂದರೆ ಕೊಡ್ತಿದ್ದಾನೆ - ಕುಟುಂಬವೊಂದರ ಆರೋಪ

10 ವರ್ಷದ ಪ್ರೇಮದ ಫಲ! ಪೊಲೀಸರೂ ಇದ್ದರಪ್ಪಾ, ಗ್ರಾಮಸ್ಥರೂ ಸೇರಿದ್ದರು, ಆದ್ರೆ ಎರಡು ಕುಟುಂಬಗಳು ಬಡಿದಾಡಿಕೊಂಡವು, ಸಮಸ್ಯೆ ಏನು?
10 ವರ್ಷದ ಪ್ರೇಮದ ಫಲ! ಎರಡು ಕುಟುಂಬಗಳು ದ್ವೇಷದಿಂದ ಬಡಿದಾಡಿಕೊಂಡವು
ಸಂಜಯ್ಯಾ ಚಿಕ್ಕಮಠ
| Updated By: ಸಾಧು ಶ್ರೀನಾಥ್​|

Updated on:Jul 31, 2023 | 12:16 PM

Share

ಅಲ್ಲಿ ಪೊಲೀಸರೂ ಇದ್ದರಪ್ಪಾ, ನೂರಾರು ಜನ ಕೂಡ ಸೇರಿದ್ದರು. ಆದ್ರೆ ಇಡೀ ಗ್ರಾಮ ಎರಡು ಕುಟುಂಬದ ನಡುವಿನ ದ್ವೇಷಕ್ಕೆ ರಣಾಂಗಣವಾಗಿತ್ತು. ಯುವಕರು, ಮಹಿಳೆಯರು, ವೃದ್ದರು ಪರಸ್ಪರ ಕಲ್ಲು ತೂರಾಟ, ಬಡಿಗೆಯಿಂದ ಬಡಿದಾಡಿಕೊಂಡಿದ್ದಾರೆ. ಕೆಲವರು ಕೆಳಗೆ ಬಿದ್ದರೂ ಬಿಡ್ತಿಲ್ಲಾ, ತಳ್ಳಾಟ ನೂಕಾಟ ನಡೆದ್ರು ಯಾರು ಜಗ್ಗುತ್ತಿಲ್ಲ. ಇವರ ಅವರು ಮೇಲೆ ಕಲ್ಲೆಸೆದ್ರೆ, ಅವರು ಇವರ ಮೇಲೆ ಎಸೆಯುತ್ತಾರೆ. ಬಡಿಗೆಗಳನ್ನು ಹಿಡಿದು ಬಡದಾಡುತ್ತಿದ್ದಾರೆ. ಸ್ಥಳದಲ್ಲೇ ಪೊಲೀಸರು ಇದ್ದರು ಕೂಡಾ ಪೊಲೀಸರ ಮಾತನ್ನು ಕೂಡಾ ಯಾರು ಕೇಳ್ತಿಲ್ಲಾ! ಇದರಿಂದ ಇಡೀ ಗ್ರಾಮ ರಣಾಂಗಣವಾಗಿತ್ತು. ಇಷ್ಟಕ್ಕೂ ಎರಡು ಕುಟುಂಬದ ನಡುವಿನ ಕಾದಾಟಕ್ಕೆ (Fight) ಕಾರಣವಾಗಿದ್ದು ಹತ್ತು ವರ್ಷದ ಹಿಂದಿನ ಪ್ರೇಮ ವಿವಾಹ. ಆಸ್ಪತ್ರೆಯಲ್ಲಿ ಕೆಲವರ ನರಳಾಟ, ಇನ್ನು ಕೆಲವರು ಸಾವು ಬದುಕಿನ ಹೋರಾಟ, ಹೌದು ಒಬ್ಬರಲ್ಲಾ, ಇಬ್ಬರಲ್ಲಾ ಹತ್ತಕ್ಕೂ ಹೆಚ್ಚು ಜನರು ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾರೆ. ಅನೇಕರು ಎದ್ದೇಳಲಿಕ್ಕೆ ಆಗದಷ್ಟು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರ ನರಳಾಟಕ್ಕೆ ಕಾರಣ, ಅದೊಂದು ಘಟನೆ. ಇಂತಹದೊಂದು ಕಲ್ಲು ತೂರಾಟ, ಬಡಿದಾಟ ನಡೆದಿದ್ದು ಕಲಬುರಗಿ (Kalburgi) ಜಿಲ್ಲೆಯ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದಲ್ಲಿ (Ingalagi Village).

ಹೌದು ಇಂಗಳಗಿ ಗ್ರಾಮದಲ್ಲಿ ಮೊನ್ನೆ ಮೊಹರಂ ಹಬ್ಬದ‌ ಸಂಭ್ರಮವಿತ್ತು. ಗ್ರಾಮದ ಜನರೆಲ್ಲಾ ಸೇರಿಕೊಂಡು ಹಬ್ಬ ಆಚರಿಸುತ್ತಿದ್ದರು. ಆದ್ರೆ ಸಂಜೆ ಐದು ಗಂಟೆ ಸಮಯದಲ್ಲಿ ದಿಢೀರನೆ ಎರಡು ಕುಟುಂಬದ ನಡುವೆ ಗಲಾಟೆ ಆರಂಭವಾಗಿತ್ತು. ಹೌದು ಗ್ರಾಮದ ಹೊನಗುಂಟಾ ಮತ್ತು ಗುಳೇದ ಕುಟುಂಬದವರ ಪರಸ್ಪರ ಕಲ್ಲು ತೂರಾಟ ಆರಂಭಿಸಿದ್ದಾರೆ. ಸ್ಥಳದಲ್ಲೇ ಪೊಲೀಸರು ಇದ್ದರು ಕೂಡಾ ಅವರ ಮಾತನ್ನು ಕೂಡಾ ಕೇಳದೆ ಎರಡು ಕುಟುಂಬದ ಸದಸ್ಯರು ಪರಸ್ಪರ ಕಾದಾಡಿದ್ದಾರೆ. ಘಟನೆಯಲ್ಲಿ ಎರಡು ಕುಟುಂಬದ ಹತ್ತಕ್ತೂ ಹೆಚ್ಚು ಜನ ಗಾಯಗೊಂಡಿದ್ದು, ಗಾಯಾಳುಗಳು ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆ, ಬಸವೇಶ್ವರ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಬಡಿದಾಡಿಕೊಂಡಿರೋ ಎರಡು ಕುಟುಂಬಗಳು ಕೂಡಾ ಒಂದೇ ಜಾತಿಗೆ ಸೇರಿದವರು. ಮೇಲಾಗಿ ಸಂಬಂಧಿಗಳು ಕೂಡಾ ಹೌದು.

ಇಂಗಳಗಿ ಗ್ರಾಮದಲ್ಲಿ ಹೊನಗುಂಟಾ ಮತ್ತು ಗುಳೇದ ಕುಟುಂಬದ ನಡುವಿನ ಜಗಳಕ್ಕೆ ಕಾರಣ ಪ್ರೇಮ ವಿವಾಹ. ಹೌದು 10 ವರ್ಷದ ಹಿಂದೆ ಹೊನಗುಂಟಾ ಕುಟುಂಬದ ಅರ್ಜುನ್ ಅನ್ನೋ ವ್ಯಕ್ತಿ, ಗುಳೇದ ಕುಟುಂಬದ ಓರ್ವ ಯುವತಿಯನ್ನು ಪ್ರೀತಿಸಿದ್ದ. ಇಬ್ಬರೂ ಮನೆ ಬಿಟ್ಟು ಓಡಿ ಹೋಗಿದ್ದರಂತೆ. ನಂತರ ಎರಡೂ ಕುಟುಂಬಗಳು ಒಂದಾಗಿ ಮದುವೆ ಕೂಡಾ ಮಾಡಿದ್ದರು. ದಂಪತಿ ಚೆನ್ನಾಗಿದ್ದಾರೆ. ಅವರಿಗೆ ಎರಡು ಮಕ್ಕಳು ಕೂಡಾ ಇವೆ.

ಆದ್ರೆ ತಮ್ಮ ಕುಟುಂಬದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ನಮ್ಮ ಇಡೀ ಕುಟುಂಬದ ವಿರುದ್ಧ ಗುಳೇದ ಕುಟುಂಬ ದ್ವೇಷ ಸಾಧಿಸುತ್ತಿದೆ. ಮೇಲಿಂದ ಮೇಲೆ ಜಗಳ ತಗೆದು ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಅಂತ ಹೊನಗುಂಟಾ ಕುಟುಂಬದವರು ಗುಳೇದ ಕುಟುಂಬದ ವಿರುದ್ಧ ಆರೋಪಿಸುತ್ತಿದ್ದಾರೆ. ಇನ್ನೊಂದಡೆ ಹೊನಗುಂಟಾ ಕುಟುಂಬವೇ ನಮ್ಮ ಕುಟುಂಬಕ್ಕೆ ತೊಂದರೆ ಕೊಡ್ತಿದೆ. ಈ ಹಿಂದೆ ಅರ್ಜುನ್, ನಮ್ಮ ಕುಟುಂಬದ ಯುವತಿ ಓಡಿಸಿಕೊಂಡು ಹೋಗಿ ಮದುವೆಯಾಗಿದ್ದಾನೆ. ಇದೀಗ ಎರಡು ಮಕ್ಕಳು ಇದ್ದರೂ ಇನ್ನೊಂದು ಮದುವೆಯಾಗ್ತೇನೆ, ನಿಮ್ಮ ಕುಟುಂಬದ ಯುವತಿಯನ್ನೇ ಕೊಟ್ಟು ಮದುವೆ ಮಾಡಿ ಅಂತ ನಮಗೆ ತೊಂದರೆ ಕೊಡ್ತಿದ್ದಾನೆ. ನಿನ್ನೆ ಕೂಡಾ ವಿನಾಕಾರಣ ಜಗಳ ತಗೆದು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಅಂತ ಗುಳೇದ ಕುಟುಂಬ ಆರೋಪಿಸುತ್ತಿದೆ.

ಇದನ್ನೂ ಓದಿ: ತನ್ನದೆ ಕಿಡ್ನಿ ಕೊಟ್ಟು ಮಗನಿಗೆ ಮರು ಜನ್ಮ ನೀಡಲು ಮುಂದಾಗಿರುವ ಮಹಾತಾಯಿ, ಆದರೂ ವಿಘ್ನಗಳು ಎದುರಾಗಿವೆ, ನೆರವು ಬೇಕಿದೆ

ಸದ್ಯ ಇಂಗಳಗಿ ಗ್ರಾಮದಲ್ಲಿ ಮೊಹರಂ ಹಬ್ಬದ ವೇಳೆ ನಡೆದ ಗಲಾಟೆಗೆ ಸಂಬಂಧಿಸಿಂದಂತೆ ಎರಡು ಕುಟುಂಬಗಳು ಪರಸ್ಪರ ದೂರು ದಾಖಲಿಸಿವೆ. ಎರಡು ಕುಟುಂಬದವರ ಮೇಲೆ ಹಲ್ಲೆಯಾಗಿದ್ದರಿಂದ, ಎರಡು ಕುಟುಂಬದ ದೂರು ಸ್ವೀಕರಿಸಿರೋ ಪೊಲೀಸರು ಎರಡು ಕುಟುಂಬದ ಎಂಟಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದಾರೆ. ಆದ್ರೆ ಹಳೆ ವೈಷಮ್ಯವನ್ನು ಮರೆಯದೇ, ಅದನ್ನು ಮನಸ್ಸಿನಲ್ಲಿಟ್ಟುಕೊಂಡು ದ್ವೇಷ ಸಾಧಿಸುತ್ತಿರುವದರಿಂದ ಎರಡು ಕುಟುಂಬದ ನಡುವೆ ಗಲಾಟೆಗಳು ಮೇಲಿಂದ ಮೇಲೆ ನಡೆಯುತ್ತಿರುವುದು ದುರ್ದೈವದ ಸಂಗತಿಯಾಗಿದೆ. ದ್ವೇಷ ಬಿಟ್ಟು ಪ್ರೀತಿಯಿಂದ ಬಾಳುವುದನ್ನು ಎರಡೂ ಕಡೆಯವರು ಕಲಿಯಬೇಕಿದೆ.

ಕಲಬುರಗಿ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:11 pm, Mon, 31 July 23

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!