ಹಿಂದೂಗಳ ಜನಸಂಖ್ಯೆ ಹೆಚ್ಚಾಗಿರುವವರೆಗೆ ಮಾತ್ರ ಸಂವಿಧಾನ ಉಳಿಯಲಿದೆ: ಸಿ ಟಿ ರವಿ

| Updated By: guruganesh bhat

Updated on: Aug 31, 2021 | 6:16 PM

ನಮ್ಮ ಮೂಲ ನಂಬಿಕೆಯಲ್ಲಿಯೇ ಸಮಭಾವ ಇದೆ. ಸಮಭಾವ ಹೊಂದಿರುವ ಜನರು ಬಹುಸಂಖ್ಯಾತರಾಗಿದ್ದಾಗ ಸಮಾನತೆ ಸೃಷ್ಟಿಯಾಗುತ್ತದೆ. ಇಲ್ಲದಿದ್ದರೆ ಅಫ್ಘಾನಿಸ್ತಾದ ಪರಿಸ್ಥಿತಿ ನಮಗೂ ಬರುತ್ತದೆ ಎಂದು ಅವರು ಹೇಳಿದ್ದಾರೆ.

ಹಿಂದೂಗಳ ಜನಸಂಖ್ಯೆ ಹೆಚ್ಚಾಗಿರುವವರೆಗೆ ಮಾತ್ರ ಸಂವಿಧಾನ ಉಳಿಯಲಿದೆ: ಸಿ ಟಿ ರವಿ
ಸಿ.ಟಿ. ರವಿ
Follow us on

ಕಲಬುರಗಿ: ಹಿಂದೂಗಳು ಹೆಚ್ಚಾಗಿರುವವರೆಗೆ ಮಾತ್ರ ಸಂವಿಧಾನ ಉಳಿಯುತ್ತದೆ. ಹಿಂದೂಗಳು ಅಲ್ಪಸಂಖ್ಯಾತರಾದ್ರೆ ಗಾಂಧಾರ ಕಾಲದ ಸ್ಥಿತಿ ಬರುತ್ತದೆ. ಸಂವಿಧಾನ ಉಳಿಸಬೇಕೆನ್ನುವವರು ಈ ಸತ್ಯ ಮರೆಯಬಾರದು ಎಂದು ಕಲಬುರಗಿ ನಗರದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ನಮ್ಮ ಮೂಲ ನಂಬಿಕೆಯಲ್ಲಿಯೇ ಸಮಭಾವ ಇದೆ. ಸಮಭಾವ ಹೊಂದಿರುವ ಜನರು ಬಹುಸಂಖ್ಯಾತರಾಗಿದ್ದಾಗ ಸಮಾನತೆ ಸೃಷ್ಟಿಯಾಗುತ್ತದೆ. ಇಲ್ಲದಿದ್ದರೆ ಅಫ್ಘಾನಿಸ್ತಾದ ಪರಿಸ್ಥಿತಿ ನಮಗೂ ಬರುತ್ತದೆ. ಡಿಕೆ ಸಹೋದರರಿಂದ ಬುದ್ಧನ ಮೂರ್ತಿಗಳು ಹಾಳಾಗುತ್ತದೆ. ಓಲೈಕೆ ರಾಜಕಾರಣದಿಂದ ಇನ್ನಷ್ಟು ಪಾಕಿಸ್ತಾನ ಸೃಷ್ಟಿಯಾಗುತ್ತದೆ. ದೇಶ ಮೊದಲು ಅನ್ನೋ ತತ್ವದ ಮೇಲೆ ರಾಜಕಾರಣ ಮಾಡಿ. ಆದರೆ ಕಾಂಗ್ರೆಸ್ ಪಕ್ಷ ದೇಶ ಮೊದಲು ಅನ್ನೋ ತತ್ವ ಮರೆತಿದೆ. ದೇಶ ಭಕ್ತ‌ ಸಂಘಟನೆ ಜತೆ ತಾಲಿಬಾನಿಗಳನ್ನು ಹೋಲಿಸುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಸಿದ್ದರಾಮಯ್ಯ ವಿಶ್ರಾಂತಿಗೆ ಹೋದಾಗ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಚುನಾವಣೆ ಗೆಲ್ಲಬಾರದು ಎಂಬ ಸಂದೇಶವನ್ನು ರವಾನಿಸುತ್ತಾರೆ. ಕೆಲವೊಮ್ಮೆ ನೇರವಾಗಿ, ಕೆಲವೊಮ್ಮೆ ಹಿಂಬಾಲಕರಿಂದ ಸಂದೇಶ ನೀಡುತ್ತಾರೆ. ಸಿದ್ದರಾಮಯ್ಯರ ಅಪೇಕ್ಷೆಯನ್ನು ಜನರು ಈಡೇರಿಸಲಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ವ್ಯಂಗ್ಯ ಮಾಡಿದರು.

ಇದನ್ನೂ ಓದಿ: 

ವೈಚಾರಿಕ ಚರ್ಚೆಗೆ ಇವತ್ತಿಗೂ ನಾನು ಸಿದ್ಧನಿದ್ದೇನೆ: ಸಿ ಟಿ ರವಿ ಹೇಳಿಕೆ

ನಾನು ಸಿಎಂ ಆಗಬೇಕು ಎಂದು ಗಡ್ಡ ಬಿಟ್ಟಿಲ್ಲ: ಸಿ ಟಿ ರವಿ ಸ್ಪಷ್ಟನೆ

(BJP Leader CT Ravi says Indian constitution will only last as long as the population of Hindus is high)

Published On - 6:11 pm, Tue, 31 August 21