ಸ್ನೇಹಿತರ ಜೊತೆ ತೆರಳಿದ್ದ ಕಾಲೇಜು ವಿದ್ಯಾರ್ಥಿ ಶವವಾಗಿ ಪತ್ತೆ; ಸೇತುವೆ ಮೇಲಿಂದ ತಳ್ಳಿ ಕೊಲೆ ಶಂಕೆ

|

Updated on: Jun 21, 2023 | 9:32 AM

ಭಾನುವಾರ ತನ್ನ ಸ್ನೇಹಿತರ ಜೊತೆ ತೆರಳಿದ್ದ ಪಿಯುಸಿ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿದ್ದಾನೆ. ಸ್ನೇಹಿತರೇ ಸೇತುವೆ ಮೇಲಿಂದ ತಳ್ಳಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು ಪ್ರಕರಣ ದಾಖಲಾಗಿದೆ.

ಸ್ನೇಹಿತರ ಜೊತೆ ತೆರಳಿದ್ದ ಕಾಲೇಜು ವಿದ್ಯಾರ್ಥಿ ಶವವಾಗಿ ಪತ್ತೆ; ಸೇತುವೆ ಮೇಲಿಂದ ತಳ್ಳಿ ಕೊಲೆ ಶಂಕೆ
ಶಿವಕುಮಾರ್
Follow us on

ಕಲಬುರಗಿ: ಸ್ನೇಹಿತರ(Friends) ಜೊತೆ ಹೋಗಿದ್ದ ಕಾಲೇಜು ವಿದ್ಯಾರ್ಥಿಯನ್ನು(College Students) ಸೇತುವೆ ಮೇಲಿಂದ ತಳ್ಳಿ ಕೊಲೆ(Murder) ಮಾಡಲಾಗಿರುವ ಭಯಾನಕ ಘಟನೆ ಜಿಲ್ಲೆಯ ಜೇವರ್ಗಿ ತಾಲೂಕಿನ ನಾಗರಾಣಿ ಬಳಿ ನಡೆದಿದೆ. ಕಲಬುರಗಿ ನಗರದ ಕಮಲನಗರ ನಿವಾಸಿ ಶಿವಕುಮಾರ್ (17) ಕೊಲೆಯಾದ ಕಾಲೇಜು ವಿದ್ಯಾರ್ಥಿ. ಈತ ಕೊಲೆಯಾಗುವುದಕ್ಕೂ ಮುನ್ನ ತನ್ನ ಸ್ನೇಹಿತರ ಜೊತೆ ತೆರಳಿದ್ದ ಹೀಗಾಗಿ ಸ್ನೇಹಿತರೇ ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಕಲಬುರಗಿ ನಗರದ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಮೃತ ಶಿವಕುಮಾರ್, ಜೂ.18ರ ಭಾನುವಾರ ಮನೆಯಿಂದ ಸ್ನೇಹಿತರ ಜೊತೆಗೆ ಹೊರಗೆ ಹೋಗಿದ್ದ. ಆದರೆ ಸ್ನೇಹಿತರು ತಮ್ಮ ತಮ್ಮ ಮನೆಗೆ ವಾಪಾಸ್ ಆದ್ರೂ ಶಿವಕುಮಾರ್ ಮಾತ್ರ ತನ್ನ ಮನೆಗೆ ಬಂದಿರಲಿಲ್ಲಾ. ಇದರಿಂದ ಗಾಬರಿಗೊಂಡ ಪೋಷಕರು ಶಿವಕುಮಾರ್​ಗಾಗಿ ಹುಡುಕಾಟ ನಡೆಸಿದ್ದಾರೆ. ನಿನ್ನೆ (ಜೂ.19) ಸಂಜೆ ನಾಗರಾಣಿ ಬಳಿಯಿರೋ ಭೀಮಾ ನದಿಯಲ್ಲಿ ಶಿವಕುಮಾರ್ ಶವ ಪತ್ತೆಯಾಗಿದೆ. ಶಿವಕುಮಾರ್​ನನ್ನು ಕರೆದುಕೊಂಡು ಹೋಗಿದ್ದ ಸ್ನೇಹಿತರೇ ಕೊಲೆ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಂತರವೇ ಸತ್ಯ ಬಯಲಾಗಲಿದೆ.

ಇದನ್ನೂ ಓದಿ: ಭೋವಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂ. ಅವ್ಯವಹಾರ: ಸಿಐಡಿಗೆ ಪತ್ರ ಬರೆದ ಮಾಜಿ ಶಾಸಕ

ಕ್ಷುಲ್ಲಕ ಕಾರಣಕ್ಕೆ ಚಾಕಿ ಇರಿತ

ಬೈಕನ್ನು ಸೈಡ್​ಗೆ ತಗೊ ಎಂದಿದಕ್ಕೆ ಚಾಕುವಿಂದ ಹಲ್ಲೆ ನಡೆಸಿರುವ ಘಟನೆ ಇದೇ ತಿಂಗಳ 18ನೇ‌ ತಾರೀಖಿನಂದು ರಾತ್ರಿ ಪದ್ಮನಾಭ ನಗರದ ರಾಘವೇಂದ್ರ ಕಾಲೋನಿಯಲ್ಲಿ ನಡೆದಿದೆ. ಘಟನೆ ಸಂಬಂಧ ಏಳು ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರದೀಪ್ ಎಂಬಾತ ಟಾಟಾ ಏಸ್ ನಲ್ಲಿ ಫ್ಲೆಕ್ಸ್ ತರಲು ಮುಂದಾಗಿದ್ದ ಈ ವೇಳೆ  ವಾಪಸ್ ತೆರಳಲು ಟಾಟಾ ಏಸ್ ನನ್ನು ತೆಗೆಯಲು ಹೋದಾಗ ಬೈಕ್ ಒಂದು ಅಡ್ಡ ನಿಂತಿತ್ತು. ಆಗ ಬೈಕ್ ಸೈಡಿಗೆ ತೆಗೆಯಿರಿ ನಾವು ಹೋಗಬೇಕು ಎಂದಿದ್ದ. ಅಷ್ಟಕ್ಕೆ ಗಲಾಟೆ ಶುರುವಾಗಿದೆ. ಆಗ ಪ್ರತಾಪ್ ಶೆಟ್ಟಿ ಎಂಬಾತ ಹಾಗು ಗ್ಯಾಂಗ್ ಹಲ್ಲೆ ನಡೆಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಜೊತೆಗೆ ಬೆದರಿಕೆ ಹಾಕಿದ್ದಾರೆ. ಪ್ರತಾಪ್ ಜೊತೆಗೆ 10 ಕ್ಕು ಹೆಚ್ಚು ಪುಡಿ ರೌಡಿಗಳಿಂದ ಹಲ್ಲೆ ನಡೆದಿದೆ. ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:11 am, Wed, 21 June 23