AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಂಡದಂತ ಬಿಸಿಲು: ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಡವರ ಫ್ರಿಡ್ಜ್​ಗೆ ಫುಲ್ ಡಿಮ್ಯಾಂಡ್

ಕಲಬುರಗಿ: ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗ ಬಿಸಿಲುನಾಡು ಅಂತಲೇ ಪ್ರಸಿದ್ದವಾಗಿರೋ ಪ್ರದೇಶ. ಬೇಸಿಗೆಯ ಸಮಯದಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಕೆಂಡದಂತ ಬಿಸಿಲಿರುತ್ತದೆ. ಮೇ 15ರವರೆಗೆ ಕೆಲ ದಿನಗಳಿಂದ ಅಲ್ಲಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಬಿಸಿಲು ಕಡಿಮೆಯಿತ್ತು. ಆದ್ರೆ ಕಳೆದ 4-5 ದಿನಗಳಿಂದ ಖಡಕ್ ಬಿಸಿಲು ಪ್ರಾರಂಭವಾಗಿದೆ. ಕಲಬುರಗಿಯಲ್ಲಿ 44 ಡಿಗ್ರಿಯಿಂದ 45 ಡಿಗ್ರಿವರಗೆ ಬಿಸಿಲು ದಾಖಲಾಗುತ್ತಿದೆ. ಅದರಲ್ಲೂ ಮೇ ತಿಂಗಳ ಅಂತ್ಯ ಮತ್ತು ಜೂನ್ ತಿಂಗಳ ಮೊದಲವಾರದಲ್ಲಿ ಕೆಂಡದಂತ ಬಿಸಿಲು ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕದ ಬೀದರ್, ಯಾದಗಿರಿ, […]

ಕೆಂಡದಂತ ಬಿಸಿಲು: ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಡವರ ಫ್ರಿಡ್ಜ್​ಗೆ ಫುಲ್ ಡಿಮ್ಯಾಂಡ್
ಸಾಧು ಶ್ರೀನಾಥ್​
| Edited By: |

Updated on:May 25, 2020 | 1:49 PM

Share

ಕಲಬುರಗಿ: ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗ ಬಿಸಿಲುನಾಡು ಅಂತಲೇ ಪ್ರಸಿದ್ದವಾಗಿರೋ ಪ್ರದೇಶ. ಬೇಸಿಗೆಯ ಸಮಯದಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಕೆಂಡದಂತ ಬಿಸಿಲಿರುತ್ತದೆ. ಮೇ 15ರವರೆಗೆ ಕೆಲ ದಿನಗಳಿಂದ ಅಲ್ಲಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಬಿಸಿಲು ಕಡಿಮೆಯಿತ್ತು. ಆದ್ರೆ ಕಳೆದ 4-5 ದಿನಗಳಿಂದ ಖಡಕ್ ಬಿಸಿಲು ಪ್ರಾರಂಭವಾಗಿದೆ. ಕಲಬುರಗಿಯಲ್ಲಿ 44 ಡಿಗ್ರಿಯಿಂದ 45 ಡಿಗ್ರಿವರಗೆ ಬಿಸಿಲು ದಾಖಲಾಗುತ್ತಿದೆ.

ಅದರಲ್ಲೂ ಮೇ ತಿಂಗಳ ಅಂತ್ಯ ಮತ್ತು ಜೂನ್ ತಿಂಗಳ ಮೊದಲವಾರದಲ್ಲಿ ಕೆಂಡದಂತ ಬಿಸಿಲು ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕದ ಬೀದರ್, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಯಲ್ಲಿ ಇರುತ್ತದೆ. ಹೀಗಾಗಿ ರಣ ಬಿಸಿಲಿಗೆ ಬಿಸಿಲನಾಡಿನ ಜನರು ಹೈರಾಣಾಗುತ್ತಾರೆ. ಇಂತಹ ಬಿಸಿಲಿನ ನಡುವೆ ಇದೀಗ ಮತ್ತೆ ಬಡವರ ಫ್ರಿಡ್ಜ್​ಗೆ ಎನಿಸಿಕೊಂಡಿರೋ ಮಣ್ಣಿನ ಮಡಕೆಗಳಿಗೆ ಫುಲ್ ಡಿಮ್ಯಾಂಡ್ ಪ್ರಾರಂಭವಾಗಿದೆ.

ಬಡವರ ಫ್ರಿಡ್ಜ್ ಈ ಮಣ್ಣಿನ ಮಡಕೆ: ಹೌದು ಬಿರು ಬೇಸಿಗೆಯ ಕಾಲದಲ್ಲಿ ಮಣ್ಣಿನ ಮಡಕೆಗೆ ಬೇಡಿಕೆ ಹೆಚ್ಚಾಗಿರುತ್ತದೆ. ಅದರಂತೆ ಈ ಬಾರಿ ಕೂಡಾ ಜಿಲ್ಲೆಯಲ್ಲಿ ಮಣ್ಣಿನ ಮಡಕೆಗಳಿಗೆ ಫುಲ್ ಡಿಮ್ಯಾಂಡ್ ಪ್ರಾರಂಭವಾಗಿದೆ. ಮಣ್ಣಿನ ಮಡಕೆಯಲ್ಲಿ ನೀರು ಹಾಕಿಟ್ಟರೆ, ತಂಪಾಗಿರುತ್ತದೆ. ಇದು ನೈಸರ್ಗಿಕವಾಗಿ ನೀರನ್ನು ತಂಪಾಗಿಡುವದರಿಂದ ಫ್ರಿಡ್ಜ್​ಗಿಂತ ಆರೋಗ್ಯಕ್ಕೂ ಕೂಡಾ ಚೆನ್ನಾಗಿರುತ್ತದೆ. ಹೀಗಾಗಿ ಫ್ರಿಡ್ಜ್​ನಲ್ಲಿದ್ದ ಕೋಲ್ಡ್ ನೀರು ಕುಡಿಯುವುದರಿಂದ ದೇಹಕ್ಕೆ ಅನೇಕ ಅಪಾಯಗಳಾಗುವ ಸಾಧ್ಯತೆ ಇರುತ್ತದೆ.

ಆದ್ರೆ ಬಡವರ ಫ್ರಿಡ್ಜ್ ಮಡಕೆಯಲ್ಲಿನ ತಣ್ಣನೆಯ ನೀರನ್ನು ಸೇವಿಸುವುದರಿಂದ ಯಾವುದೇ ಸಮಸ್ಯೆ ಇರೋದಿಲ್ಲ. ಹೀಗಾಗಿ ಬಹುತೇಕರು ಫ್ರಿಡ್ಜ್​ನಲ್ಲಿ ನೀರನ್ನು ಇಟ್ಟು, ಕುಡಿಯುವ ಬದಲು ಮಣ್ಣಿನ ಮಡಕೆಗಳನ್ನು ಹೆಚ್ಚಾಗಿ ಬಳಸ್ತಾರೆ. ಮನೆಯಲ್ಲಿ ಫ್ರಿಡ್ಜ್​ ಇದ್ದವರು, ಇರದವರು ಕೂಡಾ ಬೇಸಿಗೆಯ ಸಂದರ್ಭದಲ್ಲಿ ಮಣ್ಣಿನ ಮಡಕೆಗಳನ್ನು ಖರೀದಿಸಿ, ಮನೆಗೆ ತಗೆದುಕೊಂಡು ಹೋಗ್ತಾರೆ. ಮಣ್ಣಿನ ಮಡಕೆಗಳಲ್ಲಿ ನೀರನ್ನು ತುಂಬಿಟ್ಟು, ಅದೇ ನೀರನ್ನು ಹೆಚ್ಚಾಗಿ ಬಳಸ್ತಾರೆ. ಈ ಮೊದಲು ಗ್ರಾಮೀಣ ಭಾಗದ ಜನರು ಹೆಚ್ಚಾಗಿ ಮಣ್ಣಿನ ಮಡಕೆಗಳನ್ನು ಬಳಸ್ತಾಯಿದ್ದರು. ಇದೀಗ ನಗದ ಜನರು ಕೂಡಾ ಬೇಸಿಗೆಯಲ್ಲಿ ಹೆಚ್ಚಾಗಿ ಮಣ್ಣಿನ ಮಡಕೆಗಳನ್ನು ಬಳಸುತ್ತಿದ್ದಾರೆ.

ಮಣ್ಣಿನಿಂದ ತಯಾರಿಸಿದ ವಸ್ತುಗಳಿಗೆ ಹೆಚ್ಚಿದ ಬೇಡಿಕೆ: ಈ ಹಿಂದೆ ಹೆಚ್ಚಾಗಿ ಮಡಕೆಗಳನ್ನು ಕುಂಬಾರರು ಹೆಚ್ಚಾಗಿ ಮಾಡ್ತಾಯಿದ್ದರು. ಇದೀಗ ಅಲ್ಲಿ ಕೂಡಾ ಅನೇಕ ಬದಲಾವಣೆಗಳಾಗಿದ್ದು, ಜನರ ಅಗತ್ಯಕ್ಕೆ ತಂಕ್ಕಂತೆ ಬಾಟಲ್ ರೀತಿಯ ಪ್ಲಾಸ್ಕ್ ಗಾತ್ರದಲ್ಲಿ ಪುಟ್ಟದಾದ ಮತ್ತು ಸುಲಭವಾಗಿ ಕಾರ್ ಸೇರಿದಂತೆ ಅನೇಕ ವಾಹನಗಳಲ್ಲಿ ಇಡಬಹುದಾದ ಪುಟ್ಟ ಮಡಿಕೆಗಳು, ಟ್ಯಾಪ್ ಇರುವ ಮಡಿಕೆಗಳನ್ನು ಕೂಡಾ ಕುಂಬಾರರು ಸಿದ್ಧ ಮಾಡುತ್ತಿದ್ದಾರೆ. ಜನರಿಗೆ ಸುಲಭವಾಗಿ ನೀರು ತೆಗೆದುಕೊಂಡು ಕುಡಿಯಲು ಬೇಕಾದಂತೆ, ಮಡಿಕೆ ತಯಾರಿಕೆಯಲ್ಲಿ ಕೂಡಾ ಅನೇಕ ಬದಲಾವಣೆಗಳಾಗಿವೆ. ಇನ್ನು ಬೇಸಿಗೆ ಸಂದರ್ಭದಲ್ಲಿ ಮಣ್ಣಿನ ಮಡಿಕೆಗಳಿಗೆ ಫುಲ್ ಡಿಮ್ಯಾಂಡ್ ಬರುತ್ತದೆ.

ಮಳೆಗಾಲದಲ್ಲಿ ಮತ್ತು ಚಳಿಗಾಲದಲ್ಲಿ ಮಡಿಕೆಗಳನ್ನು ಯಾರು ಖರೀದಿಸುವುದಿಲ್ಲ. ಆದ್ರೆ ಬೇಸಿಗೆ ಸಮಯದಲ್ಲಿ ಮಾತ್ರ ಹೆಚ್ಚಿನ ಜನರು ಮಡಿಕೆಗಳನ್ನು ಖರೀದಿಸುವುದರಿಂದ ಕುಂಬಾರರಿಗೆ ಹೆಚ್ಚಿನ ವ್ಯಾಪಾರ ಕೂಡಾ ಆಗ್ತಿದೆ. ಲಾಕ್​ಡೌನ್ ಸಂಕಷ್ಟದಲ್ಲಿ ಕೂಡಾ ಕುಂಬಾರರು ಮಣ್ಣಿನ ಮಡಿಕೆಗಳನ್ನು ಸಿದ್ಧಮಾಡಿ ಮಾರಾಟ ಮಾಡ್ತಿದ್ದಾರೆ.

ಕಲಬುರಗಿ ನಗರದ ಶರಣಬಸವೇಶ್ವರ ದೇವಸ್ಥಾನದ ಮುಂಬಾಗ ಸೇರಿದಂತೆ ಅನೇಕ ಕಡೆ ಮಣ್ಣಿನ ಮಡಕೆ ಸೇರಿದಂತೆ ಮಣ್ಣಿನಿಂದ ಮಾಡಿರುವ ಅನೇಕ ವಸ್ತುಗಳನ್ನು ಮಾರಾಟ ಮಾಡುವ ವ್ಯಾಪಾರಸ್ಥರು ಬೀಡು ಬಿಟ್ಟಿದ್ದಾರೆ. ಪ್ರತಿನಿತ್ಯ ಇದೀಗ ಮೂರರಿಂದ ನಾಲ್ಕು ಸಾವಿರ ರೂಪಾಯಿ ವ್ಯಾಪಾರವನ್ನು ಮಾಡ್ತಿದ್ದಾರೆ. ನಗರದ ಜನರು ಕೂಡಾ ಹೆಚ್ಚಾಗಿ ಮಣ್ಣಿನ ಪ್ಲಾಸ್ಕ್, ಮಡಕೆಗಳನ್ನು ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಹೀಗಾಗಿ ವ್ಯಾಪಾರ ಕೂಡಾ ಇದೀಗ ಚೆನ್ನಾಗಿ ಆಗುತ್ತಿದೆ ಅಂತ ಸಂತಸ ವ್ಯಕ್ತಪಡಿಸುತ್ತಿದ್ದಾರೆ ಕುಂಬಾರರು.

Published On - 1:47 pm, Mon, 25 May 20

ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ