AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದ 25 ಜಿಲ್ಲೆಗಳಲ್ಲೂ ಪಿಎಂ ಮಿತ್ರ ಮೆಗಾ ಟೆಕ್ಸ್​ಟೈಲ್ ಪಾರ್ಕ್​​ ಸ್ಥಾಪನೆ: ಸಿಎಂ ಬೊಮ್ಮಾಯಿ ಭರವಸೆ

ಟೆಕ್ಸ್​ಟೈಲ್ ಪಾರ್ಕ್​ನಿಂದ‌ ಲಕ್ಷಾಂತರ ಜನರ ಬದುಕು ಬದಲಾಗುತ್ತೆ. ವಿಶ್ವದ ಅನೇಕ ದೇಶಗಳು ಉದ್ಯೋಗವನ್ನು ಸೃಷ್ಟಿಸಲು ಆಗದೆ ಮುಳುಗುತ್ತಿವೆ. ರಾಜ್ಯದಲ್ಲಿ ಮೊದಲ ಬಾರಿಗೆ ಉದ್ಯೋಗ ನೀತಿ ಜಾರಿಗೊಳಿಸಿದ್ದೇವೆ. ಈ ಪಾರ್ಕ್​​ನಲ್ಲಿ ಕೆಲಸ ಪಡೆದವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಹೇಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ರಾಜ್ಯದ 25 ಜಿಲ್ಲೆಗಳಲ್ಲೂ ಪಿಎಂ ಮಿತ್ರ ಮೆಗಾ ಟೆಕ್ಸ್​ಟೈಲ್ ಪಾರ್ಕ್​​ ಸ್ಥಾಪನೆ: ಸಿಎಂ ಬೊಮ್ಮಾಯಿ ಭರವಸೆ
ವಿವೇಕ ಬಿರಾದಾರ
|

Updated on:Mar 28, 2023 | 2:22 PM

Share

ಕಲಬುರಗಿ: ಮುಂದಿನ ದಿನಗಳಲ್ಲಿ ಪಿಎಂ ಮಿತ್ರ ಮೆಗಾ ಟೆಕ್ಸ್​ಟೈಲ್ ಪಾರ್ಕ್​​ನ್ನು (PM Mitra Mega Textile Park) ರಾಯಚೂರು (Raichur), ವಿಜಯಪುರ (Vijayapura) ಜಿಲ್ಲೆಗಳಲ್ಲೂ ಆರಂಭಿಸುತ್ತೇವೆ. ನಂತರದ ದಿನಗಳಲ್ಲಿ ರಾಜ್ಯದ 25 ಜಿಲ್ಲೆಗಳಲ್ಲಿ ಟೆಕ್ಸ್​​ಟೈಲ್ ಪಾರ್ಕ್ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿಯವರು (CM Basavaraj Bommai) ಘೋಷಿಸಿದ್ದಾರೆ. ಹಿಂದಿನ ಸರ್ಕಾರದ ಧೋರಣೆಯಿಂದ ಅನೇಕ ಕಡೆ ಜವಳಿ ಮಿಲ್ ಬಂದಾಗಿವೆ ಎಂದು ದೂರಿದರು.

ಕಲಬುರಗಿ ಪಿಡಿಎ ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಪಿಎಂ ಮಿತ್ರ ಮೆಗಾ ಟೆಕ್ಸ್​ಟೈಲ್ ಪಾರ್ಕ್​​ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕಲ್ಯಾಣ ಕರ್ನಾಟಕ ಭಾಗದ ಜನರು ಕೆಲಸಕ್ಕಾಗಿ ವಲಸೆ ಹೋಗುತ್ತಾರೆ. ಇದನ್ನು ತಡೆಯುವುದೇ ಈ ಪಾರ್ಕ್​​ನ ಉದ್ದೇಶವಾಗಿದೆ. ಪಿಎಂ ಮಿತ್ರ ಪಾರ್ಕ್ ಮೂಲಕ ಕಾಯಕ ನೀಡುವ ಕೆಲಸವಾಗಿದೆ. ಛಿದ್ರವಾಗುವ ಬದುಕಿಗೆ ಭದ್ರತೆ ನೀಡುವ ಕೆಲಸ ಮಾಡುತ್ತಿದ್ದೇವೆ. ಕೈಗಾರಿಕೆಗಳು ಹೆಚ್ಚಿನ ಉದ್ಯೋಗ ನೀಡುವ ಅವಶ್ಯಕತೆ ಇದೆ. ಆರ್ಥಿಕ ಬೆಳವಣಿಗೆ ಜೊತೆಗೆ ಕೆಲಸ ಕೊಡುವ ಕಾರ್ಯವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಇದನ್ನೂ ಓದಿ: ರಾಜ್ಯದ ನೂತನ 9 ವಿಶ್ವವಿದ್ಯಾಲಯಗಳನ್ನು ವರ್ಚ್ಯುವಲ್ ಮೂಲಕ ಉದ್ಘಾಟಿಸಿದ ಸಿಎಂ ಬೊಮ್ಮಾಯಿ

ಟೆಕ್ಸ್​ಟೈಲ್ ಪಾರ್ಕ್​ನಿಂದ‌ ಲಕ್ಷಾಂತರ ಜನರ ಬದುಕು ಬದಲಾಗುತ್ತೆ. ವಿಶ್ವದ ಅನೇಕ ದೇಶಗಳು ಉದ್ಯೋಗವನ್ನು ಸೃಷ್ಟಿಸಲು ಆಗದೆ ಮುಳುಗುತ್ತಿವೆ. ರಾಜ್ಯದಲ್ಲಿ ಮೊದಲ ಬಾರಿಗೆ ಉದ್ಯೋಗ ನೀತಿ ಜಾರಿಗೊಳಿಸಿದ್ದೇವೆ. ಈ ಪಾರ್ಕ್​​ನಲ್ಲಿ ಕೆಲಸ ಪಡೆದವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಹೇಳಬೇಕು ಎಂದರು.

ಕಲಬುರಗಿ ಜಿಲ್ಲೆಯವರು ಕೂಡಾ ಕೈಗಾರಿಕೋದ್ಯಮಿಗಳಾಗಬೇಕು

ಇಡೀ ದೇಶದಲ್ಲಿ 7 ಕಡೆ ಟೆಕ್ಸ್​ಟೈಲ್ ಪಾರ್ಕ್ ಮಂಜೂರಾಗಿವೆ. ಅದರಲ್ಲಿ ಕಲಬುರಗಿ ಜಿಲ್ಲೆಯಲ್ಲೂ ಕೂಡ ಒಂದು ಆರಂಭವಾಗುತ್ತಿದೆ. ನಿರುದ್ಯೋಗಿ ಯುವಕರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ. ಕಲಬುರಗಿ ಜಿಲ್ಲೆಯವರು ಕೂಡಾ ಕೈಗಾರಿಕೋದ್ಯಮಿಗಳಾಗಬೇಕು ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು.

ಕರ್ನಾಟಕದಲ್ಲಿ ಟೆಕ್ಸಟೈಲ್ ಪಾರ್ಕ್ ನಿರ್ಮಾಣ ಐತಿಹಾಸಿಕ

ಕರ್ನಾಟಕದಲ್ಲಿ ಟೆಕ್ಸಟೈಲ್ ಪಾರ್ಕ್ ನಿರ್ಮಾಣ ಐತಿಹಾಸಿಕವಾಗಿದೆ. ಚುನಾವಣೆ ದೃಷ್ಟಿಯಿಂದ ಈ ಪಾರ್ಕ್​ಗೆ ಚಾಲನೆ ನೀಡಿಲ್ಲ. ಬದಲಾಗಿ ‌ಜನರಿಗೆ ಉದ್ಯೋಗ ಕೊಡಬೇಕು, ರೈತರಿಗೆ ನೆರವಾಗಬೇಕು ಅನ್ನೋ ಉದ್ದೇಶದಿಂದ ಆರಂಭ ಮಾಡಲಾಗುತ್ತಿದೆ. ಈ ಪಾರ್ಕ್​ಗೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಬೇಡಿಕೆ ಇತ್ತು. ಆದರೆ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಕಲಬುರಗಿ ಜಿಲ್ಲೆಯಲ್ಲಿ ಆರಂಭಿಸಲಾಗುತ್ತಿದೆ ಜವಳಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:22 pm, Tue, 28 March 23