AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವಿಯ ಬೆನ್ನಿಗೆ ನಮಸ್ಕರಿಸಿ, ದೇವಸ್ಥಾನದ ಎದುರಿಗೆ ಚಪ್ಪಲಿ ಕಟ್ಟುವ ವಿಶಿಷ್ಟ ಆಚರಣೆ ಎಲ್ಲಿದೆ ಗೊತ್ತಾ? ಇದನ್ನು ಓದಿ

ಇಷ್ಟಾರ್ಥಗಳನ್ನು ಸಿದ್ದಿಸುವ ದೇವಿಗೆ ಹರಕೆ ರೂಪದಲ್ಲಿ, ದೇವಸ್ಥಾನದ ಎದುರಿಗೆ ಚಪ್ಪಲಿ ಕಟ್ಟುವ ವಿಶಿಷ್ಟ ಆಚರಣೆ.

ದೇವಿಯ ಬೆನ್ನಿಗೆ ನಮಸ್ಕರಿಸಿ, ದೇವಸ್ಥಾನದ ಎದುರಿಗೆ ಚಪ್ಪಲಿ ಕಟ್ಟುವ ವಿಶಿಷ್ಟ ಆಚರಣೆ ಎಲ್ಲಿದೆ ಗೊತ್ತಾ? ಇದನ್ನು ಓದಿ
ಕಲಬುರಗಿ ಲಕ್ಕಮ್ಮದೇವಿ ಜಾತ್ರೆ
TV9 Web
| Updated By: ವಿವೇಕ ಬಿರಾದಾರ|

Updated on:Nov 08, 2022 | 11:04 PM

Share

ದೇವರಿಗೆ ಜನರು ತಾವು ಅಂದುಕೊಂಡಿದ್ದು ಆದ್ರೆ ಹತ್ತಾರು ರೀತಿಯಲ್ಲಿ ಹರಕೆಗಳನ್ನು ತೀರಿಸೋದು ಸಂಪ್ರದಾಯ. ಅನೇಕರು ಕೇಶ ಮುಂಡನ ಮಾಡಿಸಿಕೊಂಡರೇ, ಇನ್ನು ಕೆಲವರು ಟೆಂಗಿನ ಕಾಯಿಗಳನ್ನು ಒಡೆಯುತ್ತಾರೆ. ದೀಡ ನಮಸ್ಕಾರ ಹಾಕುತ್ತಾರೆ. ಇಷ್ಟೇ ಅಲ್ಲದೇ ಚಿನ್ನಾಭರಣ, ಹಣ, ದಾಸೋಹ ಸೇರಿದಂತೆ ಜನರು ವಿಭಿನ್ನ ರೀತಿಯ ಹರಕೆಗಳನ್ನು ತೀರಿಸೋದನ್ನು ನೋಡಿದ್ದೀರಿ ಮತ್ತು ಕೇಳಿದ್ದೀರಿ. ಆದರೇ ಪಾದರಕ್ಷೆಗಳನ್ನು ಕಟ್ಟಿ ಹರಕೇ ತಿರಿಸೋ ವಿಶಿಷ್ಟ ಸಂಪ್ರದಾಯವೊಂದು ಕಲಬುರಗಿ ಜಿಲ್ಲೆಯಲ್ಲಿದೆ.

ಎಲ್ಲಡೆ ಜಾತ್ರೆಯ ಸಂಭ್ರಮ. ಇನ್ನೊಂದಡೆ ದೇವಿಯ ದರ್ಶನ ಪಡೆಯುವಲ್ಲಿ ನಿರತರಾಗಿರುವ ಅನೇಕ ಭಕ್ತರು. ಇದರ ಜೊತೆಗೆ ದೇವಿಯ ದೇವಸ್ಥಾನದ ಮುಂದೆ ಕಟ್ಟಲಾಗಿರುವ ತರೇಹವಾರಿ ಪಾದರಕ್ಷೆಗಳು. ಈ ರೀತಿಯಾಗಿ ದೇವಿಯ ದೇವಸ್ಥಾನದ ಮುಂದೆ ಹೊಸ ಪಾದರಕ್ಷೆಗಳನ್ನು ಕಟ್ಟುವ ಸಂಪ್ರದಾಯ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಗೋಳಾ ಬಿ ಗ್ರಾಮದಲ್ಲಿ ಆಚರಣೆಯಲ್ಲಿದೆ. ದೀಪಾವಳಿ ಹಬ್ಬವಾದ ನಂತರ ಬರುವ ಕಡೆ ಪಂಚಮಿಯಂದು ಮತ್ತು ಹುಣ್ಣಿಮೆಯ ದಿನ, ಗೋಳಾ ಬಿ ಗ್ರಾಮದಲ್ಲಿರುವ ಲಕ್ಕಮ್ಮದೇವಿಯ ಜಾತ್ರೆ ನಡೆಯುತ್ತೆ. ಈ ಜಾತ್ರೆಯ ವಿಶೇಷವೆಂದರೇ ದೇವಸ್ಥಾನದ ಮುಂದೆ ಪಾದರಕ್ಷೆಗಳನ್ನು ಕಟ್ಟಿ ಹರಕೆ ತೀರಿಸೋದು. ಹೌದು ದೇವಿಯ ದೇವಸ್ಥಾನದ ಮುಂದೆ ಭಕ್ತರು ಹೊಸ ಪಾದರಕ್ಷೆಗಳನ್ನು ಖರೀದಿಸಿ ತಂದು, ಇಲ್ಲಿ ಕಟ್ಟಿ ತಮ್ಮ ಹರಕೆಯನ್ನು ತೀರಿಸುತ್ತಾರೆ. ಇನ್ನು ಇಂತಹದೊಂದು ಸಂಪ್ರದಾಯ ಇಲ್ಲಿ ಅನೇಕ ವರ್ಷಗಳಿಂದ ಆಚರಣೆಯಲ್ಲಿದೆ. ಪ್ರತಿವರ್ಷ ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರು ತಮ್ಮ ಸಮಸ್ಯೆಗಳನ್ನು ದೇವಿಯ ಮುಂದೆ ಹೇಳಿಕೊಳ್ಳುತ್ತಾರಂತೆ. ತಮ್ಮ ಸಮಸ್ಯೆ ಪರಿಹಾರವಾದರೇ ಬರುವ ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನದ ಮುಂದೆ ಚಪ್ಪಲಿಗಳನ್ನು ಕಟ್ಟುತ್ತೇನೆ ಅಂತ ಹರಿಕೆ ಕಟ್ಟಿಕೊಳ್ಳುತ್ತಾರೆ. ಹೀಗೆ ಬೇಡಿಕೊಂಡವರು ತಮ್ಮ ಸಮಸ್ಯೆಗಳು ಪರಿಹಾರವಾದ ಮೇಲೆ ಜಾತ್ರೆಯ ಸಂದರ್ಭದಲ್ಲಿ ಪಾದರಕ್ಷೆಗಳನ್ನು ತಂದು ಕಟ್ಟಿ, ತಮ್ಮ ಹರಕೆಯನ್ನು ತೀರಿಸುತ್ತಾರೆ.

ಇನ್ನು ಚಪ್ಪಲಿಗಳನ್ನು ತಂದು ಕಟ್ಟಲು ಕಾರಣವು ಇದೆಯಂತೆ. ಅದು ಗೋಳಾ ಗ್ರಾಮದಲ್ಲಿರುವ ಲಕ್ಕಮ್ಮ ದೇವಿ ರಾತ್ರಿಯ ಸಂದರ್ಭದಲ್ಲಿ ದೇವಸ್ಥಾನವನ್ನು ಬಿಟ್ಟು ಹೊರಗೆ ಸಂಚರಿಸುತ್ತಾಳೆ. ಆಗ ಈ ಚಪ್ಪಲಿಗಳನ್ನು ಹಾಕಿಕೊಂಡು ಅಡ್ಡಾಡುತ್ತಾಳೆ ಅನ್ನೋ ನಂಬಿಕೆ ಇಲ್ಲಿನ ಜನರದ್ದು. ಜಾತ್ರೆಗು ಒಂದು ದಿನ ಮೊದಲು ಇಲ್ಲಿ ಯಾವೋದ ದಿವ್ಯ ಶಕ್ತಿ ಬಂದು ಚಪ್ಪಲಿಗಳನ್ನು ತಂದು ಕಟ್ಟಿಹೋಗುತ್ತೆ. ಆ ಚಪ್ಪಲಿಗಳು ಮುಂಜಾನೆ ಸವೆದಿರುತ್ತವೆ. ಇದರ ಅರ್ಥ ದೇವಿ ಅವುಗಳನ್ನು ಹಾಕಿಕೊಂಡು ಅಡ್ಡಾಡಿರುತ್ತಾಳಂತೆ ಜನರು ಭಕ್ತರು ನಂಬಿದ್ದಾರೆ. ಇದೆಲ್ಲಾ ದೇವಿಯ ಶಕ್ತಿಯಿಂದ ನಡೆಯುತ್ತೆ ಅನ್ನೋ ನಂಬಿಕೆ ಜನರದ್ದು. ಇದು ಒಂದಾದ್ರೆ ಇನ್ನೊಂದು ವಿಶೇಷ ಈ ದೇವಸ್ಥಾನದಲ್ಲಿ ಇದೆ. ಇಲ್ಲಿ ದೇವರ ಮುಖ ಕಾಣೋದಿಲ್ಲಾ. ಬದಲಾಗಿ ದೇವರ ಬೆನ್ನಿಗೆ ಎಲ್ಲರು ನಮಸ್ಕರಿಸುತ್ತಾರೆ. ಬೆನ್ನಿಗೆ ನಮಸ್ಕರಿಸಲು ಕಾರಣವೂ ಇದೆ. ಅದು ಆಳಂದ ತಾಲೂಕಿನ ದುತ್ತರಗಾಂವ್ ಗ್ರಾಮದಿಂದ ಬಂದ ಲಕ್ಕಮ್ಮದೇವಿ ಗೋಳಾ ಬಿ ಗ್ರಾಮಕ್ಕೆ ಬಂದು ಬೆನ್ನನ್ನು ಮೇಲೆ ಮಾಡಿ ಮಲಗಿದ್ದಾಳಂತೆ. ಹೀಗಾಗಿ ಇಲ್ಲಿ ದೇವಿಯ ಮುಖ ಕಾಣೋದಿಲ್ಲಾ. ಆದ್ದರಿಂದ ದೇವಸ್ಥಾನಕ್ಕೆ ಬರುವ ಭಕ್ತರು ದೇವಿಯ ಬೆನ್ನಿಗೆ ನಮಸ್ಕರಿಸುತ್ತಾರೆ. ದೇವಿಯ ಬೆನ್ನಿಗೆ ಇಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಇನ್ನು ಗೋಳಾ ಬಿ ಗ್ರಾಮದಲ್ಲಿ ನಡೆಯುವ ಲಕ್ಕಮ್ಮದೇವಿ ಜಾತ್ರೆಯಲ್ಲಿ ಪಾಲ್ಗೊಳ್ಳಲು ಕಲಬುರಗಿ ಜಿಲ್ಲೆಯಲ್ಲದೆ, ನೆರೆಯ ಮಹರಾಷ್ಟ್ರ ಮತ್ತು ತೆಲಂಗಾಣದಿಂದಲೂ ಕೂಡಾ ಸಾಕಷ್ಟು ಭಕ್ತರು ಬರುತ್ತಾರಂತೆ. ಪ್ರತಿವರ್ಷ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ.

ಪಾದರಕ್ಷೆ ಹರಕೆಯಿಂದಾಗಿ ಗೋಳಾ ಬಿ ಲಕ್ಕಮ್ಮದೇವಿ ಜಾತ್ರೆ ಸಾಕಷ್ಟು ಸುಪ್ರಿಸಿದ್ದಿಯನ್ನು ಪಡೆದಿದೆ. ಪಾದರಕ್ಷೆಗಳನ್ನು ಕಟ್ಟಿ ಹರಕೆ ತೀರಿಸೋದರಿಂದ ತಮ್ಮ ಸಮಸ್ಯೆಗಳು ಬಗೆಹರಿಯುತ್ತವೇ ಅನ್ನೋ ನಂಬಿಕೆ ಭಕ್ತರಲ್ಲಿ ಇರೋದರಿಂದಾಗಿ ಇಂದಿಗೂ ಪಾದರಕ್ಷೆಯ ಹರಕೆ ನಡೆದುಕೊಂಡು ಬಂದಿದೆ. ಕಾಲ ಬದಲಾದರೂ ಜನರ ನಂಬಿಕೆ ಮಾತ್ರ ಬದಲಾಗಿಲ್ಲಾ.

ವರದಿ-ಸಂಜಯ್​​ ಟಿವಿ9 ಕಲಬುರಗಿ

Published On - 11:04 pm, Tue, 8 November 22

ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​