ಪ್ರಿಯಾಂಕ್ ಖರ್ಗೆಯಿಂದಾಗಿ ಬಿಜೆಪಿ ಹೆಚ್ಚಿನ ಮತಗಳಿಂದ ಗೆಲ್ಲುತ್ತದೆ: ಮಾಜಿ ಶಾಸಕ ರಾಜುಗೌಡ

ಕಲಬುರಗಿಯಲ್ಲಿ ಬಿಜೆಪಿ ಮಾಜಿ ಶಾಸಕ ರಾಜುಗೌಡ ಅವರು ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು. ಖರ್ಗೆ ಯಾವ ಖಾತೆ ಸಚಿವ ಗೊತ್ತಿಲ್ಲ. ನನ್ನ ಎದುರು ಯಾರೂ ಇಲ್ಲ ಅನ್ನೋದು ತಲೆಯಲ್ಲಿ ತುಂಬಿದೆ. ಎಲ್ಲದರಲ್ಲೂ ಅಡ್ಡಡ್ಡ ಬರೋದು ಅವರಿಗೆ ರೂಢಿಯಾಗಿದೆ ಎಂದರು. ಅಲ್ಲದೆ, ನನ್ನ ಹೆಣ ಕೂಡ ಬಿಜೆಪಿಗೆ ಹೋಗಲ್ಲ ಎಂಬ ಹೇಳಿಕೆಗೆ ತಿರುಗೇಟು ಕೊಟ್ಟ ರಾಜುಗೌಡ, ಬಿಜೆಪಿ ರಾಮಭಕ್ತರ ಪಕ್ಷ, ಪ್ರಿಯಾಂಕ್​ ಖರ್ಗೆ ಬಿಜೆಪಿಗೆ ಬರುವುದು ಬೇಡ ಎಂದರು.

ಪ್ರಿಯಾಂಕ್ ಖರ್ಗೆಯಿಂದಾಗಿ ಬಿಜೆಪಿ ಹೆಚ್ಚಿನ ಮತಗಳಿಂದ ಗೆಲ್ಲುತ್ತದೆ: ಮಾಜಿ ಶಾಸಕ ರಾಜುಗೌಡ
ಪ್ರಿಯಾಂಕ್ ಖರ್ಗೆ ಮತ್ತು ರಾಜು ಗೌಡ
Edited By: Rakesh Nayak Manchi

Updated on: Feb 24, 2024 | 6:55 PM

ಕಲಬುರಗಿ, ಫೆ.24: ಕಲಬುರಗಿಯಲ್ಲಿ ಬಿಜೆಪಿ ಮಾಜಿ ಶಾಸಕ ರಾಜುಗೌಡ (Rajugowda) ಅವರು ಪ್ರಿಯಾಂಕ್ ಖರ್ಗೆ (Priyank Kharge) ವಿರುದ್ಧ ವಾಗ್ದಾಳಿ ನಡೆಸಿದರು. ಖರ್ಗೆ ಯಾವ ಖಾತೆ ಸಚಿವ ಗೊತ್ತಿಲ್ಲ. ನನ್ನ ಎದುರು ಯಾರೂ ಇಲ್ಲ ಅನ್ನೋದು ತಲೆಯಲ್ಲಿ ತುಂಬಿದೆ. ಎಲ್ಲದರಲ್ಲೂ ಅಡ್ಡಡ್ಡ ಬರೋದು ಅವರಿಗೆ ರೂಢಿಯಾಗಿದೆ ಎಂದರು.

ಪದೇಪದೆ ಹಿಂದೂಗಳ ಬಗ್ಗೆ ಪ್ರಿಯಾಂಕ್ ಖರ್ಗೆ ಮಾತಾಡುತ್ತಾರೆ. ಇವರಿಗೆ ಏನು ಗೋಲ್ಡ್ ಮೆಡಲ್ ಕೊಡುತ್ತಾರಾ ಎಂದು ಆಕ್ರೋಶ ಹೊರಹಾಕಿದ ರಾಜುಗೌಡ, ಬಿಜೆಪಿ, ಆರ್​ಎಸ್​​ಎಸ್​​ಗೆ ನನ್ನ ಹೆಣನೂ ಹೋಗುವುದಿಲ್ಲವೆಂದು ಹೇಳಿದ್ದಾರೆ. ಬಿಜೆಪಿಯಲ್ಲಿ ನಾನೊಬ್ಬನೇ ಉಳಿದರೂ ನಿನ್ನ ಬಿಜೆಪಿಗೆ ಸೇರಿಸಿಕೊಳ್ಳಲ್ಲ. ಬಿಜೆಪಿ ರಾಮಭಕ್ತರ ಪಕ್ಷ, ಪ್ರಿಯಾಂಕ್​ ಬಿಜೆಪಿಗೆ ಬರುವುದು ಬೇಡ. ಈ ಬಾರಿ ಪ್ರಿಯಾಂಕ್ ಅವ​ರಿಂದಲೇ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಮತಗಳಿಂದ ಬಿಜೆಪಿ ಗೆಲ್ಲುತ್ತದೆ ಎಂದರು.

ಇದನ್ನೂ ಓದಿ: Karnataka Budget Session:  ಸಾಕ್ಷ್ಯ ನೀಡಲು ತನಿಖಾ ಆಯೋಗದ ಮುಂದೆ ಬಸನಗೌಡ ಪಾಟೀಲ್ ಹಾಜರಾಗಿಲ್ಲ: ಪ್ರಿಯಾಂಕ್ ಖರ್ಗೆ, ಸಚಿವ

ಇತ್ತೀಚೆಗೆ, ವಿಧಾನಸಭೆ ಅಧಿವೇಶನದಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಕಾಂಗ್ರೆಸ್ ನಾಯಕರನ್ನು ಕಾಲೆಳೆಯುವ ಪ್ರಯತ್ನ ಮಾಡಿದ್ದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು “ಈ ದೇಶದಲ್ಲಿ ಕಟ್ಟರ್ ಕಾಂಗ್ರೆಸಿಗರೇ ಬಿಜೆಪಿ ಬರುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಅವರ ಹೆಸರು ಕೂಡ ಕೇಳಿಬರುತ್ತಿದೆ ಎಂದಿದ್ದರು. ಇದಕ್ಕೆ ಕೂಡಲೇ ಪ್ರತಿಕ್ರಿಯಿಸಿದ್ದ ಪ್ರಿಯಾಂಕ್ ಖರ್ಗೆ, ನನ್ನ ಹೆಣನೂ ಬಿಜೆಪಿಗೆ ಹೋಗಲ್ಲ. ನಮ್ಮ ಕುಟುಂಬದ ರಕ್ತದಲ್ಲೇ ಬಿಜೆಪಿ, ಆರ್​ಎಸ್​ಎಸ್​ ಇಲ್ಲ ಎಂದಿದ್ದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Dattatraya Patil

ಮೂಲತಃ ಕಲಬುರಗಿ ಜಿಲ್ಲೆಯವರಾದ ದತ್ತಾತ್ರೇಯ ಪಾಟೀಲ್ ಸಧ್ಯ ಟಿರ್ವಿ ಕನ್ನಡ ವಾಹಿನಿಯ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಟಿರ್ವಿ ಸಂಸ್ಥೆಯಲ್ಲಿ ಕೆಲಸ‌ ಮಾಡುತ್ತಿದ್ದು ಜ,2015 ರಿಂದ 22 ರವೆಗೆ ಹುಬ್ಬಳ್ಳಿಯ ವರದಿಗಾರಾಗಿ, ಕಳೆದೊಂದು ವರ್ಷ ಕೊಪ್ಪಳ ಸಧ್ಯ ಮೂರು ತಿಂಗಳಿಮದ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಸಮಯದಲ್ಲಿ ವೈದ್ಯರ ಕಳ್ಳಾಟದ ಮಾಡಿದ ರಹಸ್ಯ ಕಾರ್ಯಚರಣೆ.ಆಪರೇಷನ್ ಕಮಲದ ಕುರಿತು ಸ್ಪೋಟಕ ಬಿಎಸ್ ವೈ ವಿಡಿಯೋ ದ ಎಕ್ಸಕ್ಲೂಸಿವ್ ವರದಿಯ ಜೊತೆಗೆ ರಾಜಕೀಯ ವರದಿಗಾರಿಕೆಯಲ್ಲಿಯೂ ಆಸಕ್ತಿ ಹೊಂದಿದ್ದು, ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು,ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳ ಪ್ರವಾಸ,ಮತ್ತು ಟ್ರೆಕ್ಕಿಂಗ್ ಹವ್ಯಾಸ ರೂಢಿಸಿಕೊಂಡಿದ್ದಾರೆ.

Read More
Follow Us