Karnataka Bandh: ಕರ್ನಾಟಕ ಬಂದ್, ನೀವು ತಿಳಿದಿರಲೇಬೇಕಾದ ಮಾಹಿತಿ ಇಲ್ಲಿದೆ

|

Updated on: Mar 21, 2025 | 1:56 PM

ಕರ್ನಾಟಕ ಬಂದ್: ಮರಾಠಿ ಪುಂಡರ ಪುಂಡಾಟದ ವಿರುದ್ಧ ಕನ್ನಡ ಪರ ಸಂಘಟನೆಗಳು ರಣಕಹಳೆ ಮೊಳಗಿಸಿವೆ. ಮಾರ್ಚ್​ 22ರಂದು ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿವೆ. ಬಂದ್​ಗೆ ಕೆಲವರು ಕೈ ಜೋಡಿಸಿದ್ದರೆ, ಮತ್ತೆ ಕೆಲವರು ಬೆಂಬಲ ಇಲ್ಲ ಎಂದಿದ್ದಾರೆ. ಬಂದ್​ಗೆ ಯಾರ್ಯಾರ ಬೆಂಬಲವಿದೆ? ಯಾವ ಜಿಲ್ಲೆಗಳಲ್ಲಿ ಬಂದ್ ಪರಿಣಾಮ ತಟ್ಟಲಿದೆ? ಏನೇನಿರಲಿವೆ? ಏನೇನು ಇರುವುದಿಲ್ಲ? ಎಲ್ಲ ಮಾಹಿತಿ ಇಲ್ಲಿದೆ.

Karnataka Bandh: ಕರ್ನಾಟಕ ಬಂದ್, ನೀವು ತಿಳಿದಿರಲೇಬೇಕಾದ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಮಾರ್ಚ್ 21: ಬೆಳಗಾವಿ ಗಡಿಯಲ್ಲಿ (Belagavi Border) ಮರಾಠಿ ಪುಂಡರ ಹಾವಳಿ ವಿರೋಧಿಸಿ ಹಾಗೂ ರಾಜ್ಯದ ಹಿತಾಸಕ್ತಿ ಸಂಬಂಧಿತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು (Pro Kannada Organisations) ಮಾರ್ಚ್​ 22 ರಂದು ಕರ್ನಾಟಕ ಬಂದ್​ಗೆ (Karnataka Bandh) ಕರೆ ನೀಡಿವೆ. ಕೆಲವು ಜಿಲ್ಲೆಗಳಲ್ಲಿ ಬಂದ್ ಬಿಸಿ ಹೆಚ್ಚಿರಲಿದ್ದು, ಇನ್ನು ಕೆಲವು ಜಿಲ್ಲೆಗಳಲ್ಲಿ ಬಂದ್​ಗೆ ಬೆಂಬಲ ವ್ಯಕ್ತವಾಗಿಲ್ಲ. ಹಲವು ಸಂಘಟನೆಗಳು ಬಂದ್​ಗೆ ಬೆಂಬಲ ಘೋಷಿಸಿವೆ. ಶಾಲಾ ಕಾಲೇಜು ನಡೆಸುವ ಹಾಗೂ ಪರೀಕ್ಷೆಗಳನ್ನು ನಡೆಸುವುದಕ್ಕೆ ಸಂಬಂಧಿಸಿ ಸರ್ಕಾರದಿಂದ ಇನ್ನಷ್ಟೇ ಅಧಿಕೃತ ನಿರ್ಧಾರ ಪ್ರಕಟಗೊಳ್ಳಬೇಕಿದೆ. ಬಂದ್ ಬಗ್ಗೆ ನೀವು ತಿಳಿದಿರಲೇಬೇಕಾದ ಮಾಹಿತಿ ಇಲ್ಲಿದೆ.

ಬಂದ್​ಗೆ ಯಾರ್ಯಾರ ಬೆಂಬಲ?

  • ಓಲಾ
  • ಉಬರ್
  • ಏರ್​​ಪೋರ್ಟ್​ ಟ್ಯಾಕ್ಸಿ
  • ಆಟೋ ಚಾಲಕರ ಸಂಘಟನೆ
  • ಖಾಸಗಿ ಸಾರಿಗೆ ಒಕ್ಕೂಟ
  • ಎಪಿಎಂಸಿ ಸಂಘಟನೆ
  • ಕಾರ್ಮಿಕ ಪರಿಷತ್

ಏನೆಲ್ಲ ಬಂದ್ ಆಗಿರಲಿವೆ?

  • ಥಿಯೇಟರ್​ – ಬೆಳಗಿನ ಪ್ರದರ್ಶನ ಮಾತ್ರ ಬಂದ್
  • ಬೀದಿ ವ್ಯಾಪಾರ – ನೈತಿಕ ಬೆಂಬಲ, ಎಂದಿನಂತೆ ವ್ಯಾಪಾರ ನಡೆಯಲಿದೆ
  • ಖಾಸಗಿ ಸಾರಿಗೆ – ಶಾಲಾ ವಾಹನ ಬಿಟ್ಟು ಉಳಿದ ಸೇವೆ ಬಂದ್
  • ಚಿಕ್ಕಮಗಳೂರು – 50 ಸಂಘಟನೆಗಳ ಬೆಂಬಲ
  • ಹುಬ್ಬಳ್ಳಿ – ಹೋಟೆಲ್​ ಮಾಲೀಕರ ಬೆಂಬಲ ಇಲ್ಲ
  • ಹುಬ್ಬಳ್ಳಿ – ಉತ್ತರ ಕರ್ನಾಟಕ ಆಟೋ ಚಾಲಕರ ಸಂಘದ ಬೆಂಬಲವಿಲ್ಲ

ಯಾವ ಜಿಲ್ಲೆಗಳಲ್ಲಿ ಕರ್ನಾಟಕ ಬಂದ್​ಗೆ ಬೆಂಬಲ?

ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಬಂದ್​ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಚಿಕ್ಕಮಗಳೂರಲ್ಲಿ ಬಂದ್​ಗೆ ಬೆಂಬಲ ವ್ಯಕ್ತವಾಗಿದೆ. ಚಿತ್ರದುರ್ಗದಲ್ಲೂ ಕನ್ನಡ ಸಂಘಟನೆಗಳು ಬಂದ್​ಗೆ ಬೆಂಬಲ ಸೂಚಿಸಿವೆ.

ಯಾವ ಜಿಲ್ಲೆಗಳಲ್ಲಿ ಬೆಂಬಲ ಇಲ್ಲ?

  • ಕೋಲಾರ
  • ದಕ್ಷಿಣ ಕನ್ನಡ
  • ಹುಬ್ಬಳ್ಳಿ
  • ಕಲಬುರಗಿ
  • ಕೊಪ್ಪಳ

ಕರ್ನಾಟಕ ಬಂದ್: ಏನೇನಿರುತ್ತೆ, ಏನೇನಿರಲ್ಲ?

ಕರ್ನಾಟಕ ಬಂದ್ ವೇಳೆ ಆಸ್ಪತ್ರೆ, ವೈದ್ಯಕೀಯ ಸೇವೆ, ಮೆಡಿಕಲ್, ಹಾಲು, ಅಗತ್ಯ ವಸ್ತುಗಳು, ನಮ್ಮ ಮೆಟ್ರೋ ಸೇವೆ ಇರಲಿದೆ. ಓಲಾ ಹಾಗೂ ಉಬರ್, ಕೆಲ ಖಾಸಗಿ ವಾಹನಗಳು ಹಾಗೂ ಏರ್​​ಪೋರ್ಟ್ ಟ್ಯಾಕ್ಸಿ ಸಂಚಾರ ಇರುವುದಿಲ್ಲ.

ಇದನ್ನೂ ಓದಿ
ಕರ್ನಾಟಕ ಬಂದ್: ನಾಳೆ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ಸಂಚಾರ ಇರುತ್ತಾ?
ಮಾ 22ರಂದು ಶಾಲಾ-ಕಾಲೇಜು​ ರಜೆ ಬಗ್ಗೆ ಸ್ಪಷ್ಟನೆ ಕೊಟ್ಟ ಶಿಕ್ಷಣ ಸಚಿವ
ಕರ್ನಾಟಕ ಬಂದ್, ಈ ಅಗತ್ಯ ಕೆಲಸಗಳನ್ನು ಇಂದು, ನಾಳೆಯೊಳಗೆ ಮುಗಿಸಿ
ಕರ್ನಾಟಕ ಬಂದ್ ದಿನ ಏನೇನಿರುತ್ತೆ, ಏನೇನಿರಲ್ಲ? ಇಲ್ಲಿದೆ ವಿವರ

ಇದನ್ನೂ ಓದಿ: ಕರ್ನಾಟಕ ಬಂದ್​: ಮಾ 22ರಂದು ಶಾಲಾ-ಕಾಲೇಜು​ ರಜೆ ಬಗ್ಗೆ ಸ್ಪಷ್ಟನೆ ಕೊಟ್ಟ ಶಿಕ್ಷಣ ಸಚಿವ

ಶಾಲಾ ಕಾಲೇಜು, ಪರೀಕ್ಷೆಗಳ ಕಥೆ ಏನು?

ಅಧಿಕೃತ ವೇಳಾಪಟ್ಟಿ ಪ್ರಕಾರ, ಮಾರ್ಚ್​ 22ರ ಶನಿವಾರ ಎಸ್​ಎಸ್​ಎಲ್​ಸಿ ಪರೀಕ್ಷೆ ಇರವುದಿಲ್ಲ. ಹೀಗಾಗಿ ಹತ್ತನೇ ತರಗತಿ ಪರೀಕ್ಷೆ ಮೇಲೆ ಬಂದ್ ಯಾವುದೇ ಪರಿಣಾಮ ಬೀರುವುದಿಲ್ಲ. ಆದಾಗ್ಯೂ, 1 ರಿಂದ 9 ನೇ ತರಗತಿ ವರೆಗಿನ ಕೆಲವು ತರಗತಿಗಳ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಮುಂದೂಡಿಕೆ ಮಾಡಬೇಕೇ ಅಥವಾ ನಡೆಸುವುದೇ ಎಂಬ ಬಗ್ಗೆ ಸರ್ಕಾರ ಇಂದು ನಿರ್ಧಾರ ಪ್ರಕಟಿಸುವ ನಿರೀಕ್ಷೆ ಇದೆ.

ಇದನ್ನೂ ಓದಿ: ಕರ್ನಾಟಕ ಬಂದ್: ನಾಳೆ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ಸಂಚಾರ ಇರುತ್ತಾ? ಸಚಿವರು ಕೊಟ್ಟ ಮಾಹಿತಿ ಇಲ್ಲಿದೆ

ಕರ್ನಾಟಕ ಸಾರಿಗೆ ನೌಕರರ ಒಕ್ಕೂಟ, ಕೆಎಸ್​ಆರ್​​ಟಿಸಿ, ಬಿಎಂಟಿಸಿ ನೌಕರರ ಸಂಘದಿಂದ ಕೂಡ ಬಂದ್​ಗೆ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ಕೆಎಸ್​ಆರ್​​ಟಿಸಿ, ಬಿಎಂಟಿಸಿ ಬಸ್​ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:02 pm, Fri, 21 March 25