ಕರ್ನಾಟಕ ಬಂದ್: ನಾಳೆ ಸರ್ಕಾರೀ ಬಸ್ ರಸ್ತೆಗಿಳಿಯುತ್ತವೆಯೇ? ಸ್ಪಷ್ಟನೆ ನೀಡದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕ ಬಂದ್: ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಹಿನ್ನೆಲೆಯಲ್ಲಿ ನಾಳೆ ಬಂದ್ಗೆ ಕರೆ ನೀಡಲಾಗಿದೆ. ಎಸ್ಎಸ್ಎಲ್ಸಿ ಮತ್ತು ಬೇರೆ ಪರೀಕ್ಷೆಗಳು ನಡೆಯುತ್ತಿರುವುದರಿಂದ ಬಂದ್ನಲ್ಲಿ ಭಾಗಿಯಾಗುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಹೇಳಿದೆ. ಇನ್ನೂ ಹಲವಾರು ಕನ್ನಡ ಸಂಘಟನೆಗಳು ಬಂದ್ನಿಂದ ಹಿಂದೆ ಸರಿದಿವೆ. ಅದೆಲ್ಲ ಸರಿ, ಅದರೆ ಸಾರಿಗೆ ಸಚಿವ ತಮ್ಮ ನಿಲುವನ್ನು ಸ್ಪಷ್ಟಪಡಿಸಿ ಜನರ ಆತಂಕ ದೂರಮಾಡಬೇಕಿತ್ತು.
ಬೆಂಗಳೂರು, 21 ಮಾರ್ಚ್: ರಾಜ್ಯದ ಕನ್ನಡ ಪರ ಸಂಘಟನೆಗಳು ನಾಳೆ ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಎಲ್ಲ ಸಂಘಟನೆಗಳು ಬಂದ್ ನಲ್ಲಿ ಭಾಗಿಯಾಗುತ್ತಿಲ್ಲ. ಅದರೆ ಬಂದ್ ಹಿನ್ನೆಲೆಯಲ್ಲಿ ಕೆಎಸ್ಅರ್ಟಿಸಿ ಮತ್ತು ಬಿಎಂಟಿಸಿ ಬಸ್ಗಳ ರಸ್ತೆಗಿಳಿಯಲಿವೆಯೇ ಅನ್ನೋದು ಜನರ ಮನದಲ್ಲಿರುವ ದೊಡ್ಡ ಆತಂಕ. ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಬಸ್ ಗಳ ಓಡಾಟದ ಬಗ್ಗೆ ಸ್ಪಷ್ಟವಾದ ಹೇಳಿಕೆ ನೀಡಿಲ್ಲ. ಕೆಎಸ್ಆರ್ಟಿಸಿ ಯೂನಿಯನ್ಗಳು ಒಗ್ಗೂಡಿ ಬಂದ್ಗೆ ಬೆಂಬಲ ನೀಡಿದರೆ ಬಸ್ ಓಡಲ್ಲ, ಬೆಂಬಲಿಸದಿದ್ದರೆ ಓಡುತ್ತವೆ ಎಂದು ಸಚಿವರ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತಾಡುತ್ತಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Karnataka Bandh: ಕರ್ನಾಟಕ ಬಂದ್ ದಿನ ಏನೇನಿರುತ್ತೆ, ಏನೇನಿರಲ್ಲ? ಇಲ್ಲಿದೆ ವಿವರ