Bengaluru Kambala 2023, Day 1 Highlights: ತುಳು ಭಾಷೆ ರಾಜ್ಯದ ಹೆಚ್ಚುವರಿ ಭಾಷೆಯನ್ನಾಗಿ ಮಾಡಲು ಪ್ರಯತ್ನ ಮಾಡಲಾಗುವುದು: ಸಿದ್ದರಾಮಯ್ಯ
ಬೆಂಗಳೂರು ಕಂಬಳ 2023, ಮೊದಲ ದಿನ ಲೈವ್ ಅಪ್ಡೇಟ್ಸ್: ಬೆಂಗಳೂರಿನಲ್ಲಿ ಕಂಬಳ ಕಲರವ ಜೋರಾಗಿದೆ. ಇದೇ ಮೊದಲ ಬಾರಿಗೆ ಅರಮನೆ ಮೈದಾನದಲ್ಲಿ ಕರಾವಳಿ ಕ್ರೀಡೆ ಕಂಬಳ ನಡೆಯಲಿದ್ದು ಲಕ್ಷಾಂತರ ಮಂದಿ ಭಾಗಿಯಾಗಲಿದ್ದಾರೆ. ಇದರೊಂದಿಗೆ ರಾಜ್ಯ ರಾಜಕೀಯ, ಹವಾಮಾನ, ಅಪರಾಧ ಸೇರಿದಂತೆ ಅನೇಕ ವಿಚಾರಗಳ ಕ್ಷಣ ಕ್ಷಣದ ಮಾಹಿತಿ ಟವಿ9 ಡಿಜಿಟಲ್ನಲ್ಲಿ...

Bangalore Kudi Kambala 2023 Live Updates: ರಾಜಧಾನಿಯಲ್ಲಿ ಕಂಬಳ ಕಲರವ ಶುರುವಾಗಿದೆ. ಬೆಂಗಳೂರು ನಗರದಲ್ಲಿ ಇದೇ ಮೊದಲ ಬಾರಿಗೆ ಕಂಬಳ ನಡೆಯುತ್ತಿದೆ. ಅರಮನೆ ಅಂಗಳದಲ್ಲಿ ಕಂಬಳದ ಕರೆ ನಿರ್ಮಾಣವಾಗಿದೆ. ಈಗಾಗಲೇ 200 ಜೋಡಿ ಕೋಣಗಳು ರಾಜಧಾನಿಗೆ ಲಗ್ಗೆ ಇಟ್ಟಿವೆ. ಇಂದಿನಿಂದ ಕಂಬಳ ಶುರು (Bengaluru Kambala). ಮತ್ತೊಂದೆಡೆ ಇಂದು ಬೆಂಗಳೂರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಆಗಮಿಸುತ್ತಿದ್ದಾರೆ. ಬೆಳಗ್ಗೆ 9.15ಕ್ಕೆ HAL ಏರ್ಪೋರ್ಟ್ಗೆ ಬಂದಿಳಿಯಲಿದ್ದು HAL ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ತೆಲಂಗಾಣಕ್ಕೆ ತೆರಳಲಿದ್ದಾರೆ. ಇವುಗಳ ಜೊತೆಗೆ ರಾಜ್ಯದ ಇತರೆ ಪ್ರಮುಖ ಸುದ್ದಿಗಳ ಮಾಹಿತಿಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ.
LIVE NEWS & UPDATES
-
Bengaluru Kambala 2023 Live Updates: ಕಂಬಳ ಸಮಿತಿಯಿಂದ ಸಮುದಾಯ ಭವನದ ಬೇಡಿಕೆ
ಬೆಂಗಳೂರು ಕಂಬಳ ಸಮಿತಿಯು ಸಮುದಾಯ ಭವನದ ಬೇಡಿಕೆ ಇಟ್ಟಿದೆ. ಇದರ ಪ್ರಯತ್ನವನ್ನು ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಕೋರ್ಟ್ನಲ್ಲಿ ಕಂಬಳಕ್ಕೆ ತಡೆ ಬಂದಾಗ ನಾನೇ ಸುಗ್ರಿವಾಜ್ಞೆ ಹೊರಡಿಸಿದ್ದೆ. ಜಲ್ಲಿಕಟ್ಟು ರೀತಿ ಇದು ಕೆಟ್ಟದ್ದು ಅಲ್ಲ. ಇದು ಸಾಮಾನ್ಯ ಜನರ ಕ್ರೀಡೆ ಎಂದು ಉಳಿಸುವ ಕೆಲಸ ಮಾಡಿದೆ. ಇಬ್ಬರು ಮಂಗಳೂರು ಉಡುಪಿಯವರು ಸಿಕ್ಕರೆ ತುಳುವಿನಲ್ಲೇ ಮಾತು ಶುರು ಮಾಡುತ್ತಾರೆ. ಮಾತೃಭಾಷೆ ಬಗ್ಗೆ ಅವರಿಗೆ ಅಷ್ಟೊಂದು ಅಭಿಮಾನ ಇದೆ. ಇಂಗ್ಲೀಷ್ ಹಿಂದಿ ಬಂದರೂ ಬೇರೆ ಭಾಷೆ ಮಾತನಾಡಲ್ಲ ಎಂದರು.
-
Bengaluru Kambala 2023 Live Updates: ಇಷ್ಟೊಂದು ಜನ ಕಂಬಳ ನೋಡಲು ಬರ್ತಾರೆ ಎಂದು ನಿರೀಕ್ಷೆ ಇರಲಿಲ್ಲ: ಸಿದ್ದರಾಮಯ್ಯ
ಬೆಂಗಳೂರು ಕಂಬಳ ಸಭಾ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಸಿ.ಎಂ ಸಿದ್ದರಾಮಯ್ಯ, ಇದು ಭಾಷಣ ಮಾಡುವ ವೇದಿಕೆಯಲ್ಲ. ನೀವು ಯಾರು ಸಹ ಭಾಷಣ ಕೇಳಲು ಬಂದಿಲ್ಲ. ಕಂಬಳ ಕ್ರೀಡೆಯನ್ನು ಅತ್ಯಂತ ಸಂತೋಷದಿಂದ ಉದ್ಘಾಟನೆ ಮಾಡಿದ್ದೇನೆ. ಎರಡು ಜೋಡು ಕರೆಯಲ್ಲಿ ಕಂಬಳ ನಡೆಯುತ್ತಿದೆ. ಕಂಬಳ ಕರಾವಳಿ ಜಿಲ್ಲೆಗಳ ಜಾನಪದ ಕಲೆ. ಇದನ್ನು ಬೆಂಗಳೂರು ನಗರಕ್ಕೆ ಪರಿಚಯಿಸುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಇಷ್ಟೊಂದು ಜನ ಕಂಬಳ ನೋಡಲು ಬರ್ತಾರೆ ಎಂದು ನಿರೀಕ್ಷೆ ಇರಲಿಲ್ಲ. ಕರಾವಳಿ ಪ್ರದೇಶದ ಜಾನಪದ ಕಲೆ ಬೆಂಗಳೂರಿನಲ್ಲಿ ಯಾಕೆ ಎಂದು ಪ್ರಶ್ನಿಸಿದ್ದೆ. ಲಕ್ಷಾಂತರ ಜನ ಕರಾವಳಿಯವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ರಾಜ್ಯದ ಮೂಲೆ ಮೂಲೆಯ ಜನ ಈ ಕ್ರೀಡೆಗೆ ಪ್ರೋತ್ಸಾಹಿಸುವ ಅವಕಾಶ ಕಲ್ಪಿಸುವುದಾಗಿ ಹೇಳಿದ್ದರು. ಇಲ್ಲಿ ಬಂದು ನೋಡಿದಾಗ ಆಶ್ಚರ್ಯ ಆಯ್ತು. ಎರಡು ಬಾರಿ ಕರಾವಳಿಯಲ್ಲಿ ಕಂಬಳ ಉದ್ಘಾಟನೆ ಮಾಡಿದ್ದೆ. ಇದು ಬಹಳ ಪುರಾತನ ಕಾಲದಿಂದ ಬಂದಿರುವ ಜನರ ಕಲೆ. ಈ ಕಲೆ ಕರಾವಳಿ ಭಾಗದಲ್ಲಿ ಬಹಳ ಪ್ರಸಿದ್ದವಾಗಿದೆ. ಕೋಣ ಸಾಕೋದು ಬಹಳ ಕಷ್ಟದ ಕೆಲಸ. ಒಂದು ಕೋಣ ಸಾಕಲು ವಾರ್ಷಿಕವಾಗಿ 15 ಲಕ್ಷ ಬೇಕು. ಇದು ಶ್ರೀಮಂತರ ಕ್ರೀಡೆ ಆಗುತ್ತೆ ಅಲ್ವಾ ಎಂದು ಪ್ರಶ್ನೆ ಮಾಡಿದರು. ಶ್ರೀಮಂತರು ಕೋಣ ಸಾಕಬಹುದು ಬಡವರು ಪಾಪ ಹೇಗೆ ಸಾಕುತ್ತಾರೆ. ಹಿಂದೆ ಕಂಬಳ ಗದ್ದೆಗಳಲ್ಲಿ ಕಂಬಳ ನಡೆಯುತಿತ್ತು. ಹದ ಮಾಡಿದ ಮಣ್ಣಿನ ನೀರಿನಲ್ಲಿ ಕೋಣ ಒಡಿಸುತ್ತಿದ್ದರು. ಕ್ರೀಡಾಪಟು ಆಗಿದ್ದರೆ ಮಾತ್ರ ಕೋಣಗಳ ಜೊತೆ ಓಡಲು ಸಾಧ್ಯ. ಬೆಂಗಳೂರಿನಲ್ಲಿ ಪ್ರತಿವರ್ಷ ಕಂಬಳ ಮುಂದುವರಿಸುವ ಕೆಲಸ ಮಾಡಿ. ನವೆಂಬರ್ ಡಿಸೆಂಬರ್ ತಿಂಗಳಲ್ಲಿ ಮಾಡಿ. ಬೆಂಗಳೂರಿನ ಜನರಿಗೂ ಇದು ಮನೋರಂಜನೆಯ ಕ್ರೀಡೆ ಆಗುತ್ತದೆ.
-
-
Bengaluru Kambala 2023 Live Updates: ತುಳು ಭಾಷೆ ರಾಜ್ಯದ ಹೆಚ್ಚುವರಿ ಭಾಷೆಯನ್ನಾಗಿ ಮಾಡಲು ಪ್ರಯತ್ನ: ಸಿಎಂ
ತುಳು ಭಾಷಣೆಯನ್ನು ರಾಜ್ಯದ ಹೆಚ್ಚುವರಿ ಭಾಷೆಯಾಗಿ ಸೇರ್ಪಡೆಗೊಳಿಸುವಂತೆ ಸ್ಪೀಕರ್ ಯುಟಿ ಖಾದರ್ ಅವರು ಮಾಡಿದ ಮನವಿಯನ್ನು ಭಾಷಣದ ವೇಳೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ತುಳುವನ್ನು ರಾಜ್ಯದ ಹೆಚ್ಚುವರಿ ಭಾಷೆಯನ್ನಾಗಿ ಮಾಡಲು ಪ್ರಯತ್ನ ಮಾಡಲಾಗುವುದು ಎಂದರು.
-
Bengaluru Kambala 2023 Live Updates: ಕಾಂತಾರ ಸಿನಿಮಾದಲ್ಲಿ ಕಾಣಿಸಿಕೊಂಡ ಕೋಣಗಳು ಬೆಂಗಳೂರು ಕಂಬಳಕ್ಕೆ ಎಂಟ್ರಿ
ಕಾಂತಾರ ಸಿನಿಮಾದಲ್ಲಿ ನಟ ರಿಷಬ್ ಶೆಟ್ಟಿ ಓಡಿಸಿದ್ದ ಅಪ್ಪು – ಕಿಟ್ಟ ಕೋಣಗಳು ಬೆಂಗಳೂರು ಕಂಬಳಕ್ಕೆ ಎಂಟ್ರಿ ಕೊಟ್ಟಿವೆ. ಅಪ್ಪು – ಕಿಟ್ಟ ಕೋಣಗಳು ಟ್ರಯಲ್ನಲ್ಲಿ ಭಾಗಿಯಾಗಿವೆ.
-
Bengaluru Kambala 2023 Live Updates: ಕಂಬಳ ಮತ್ತು ಯಕ್ಷಗಾನ ದಕ್ಷಿಣಕನ್ನಡ ಜಿಲ್ಲೆಯ ಎರಡು ಕಣ್ಣುಗಳು: ಯುಟಿ ಖಾದರ್
ಬೆಂಗಳೂರು ಕಂಬಳದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್, ಕಂಬಳ ಮತ್ತು ಯಕ್ಷಗಾನ ದಕ್ಷಿಣಕನ್ನಡ ಜಿಲ್ಲೆಯ ಎರಡು ಕಣ್ಣುಗಳು. ಇಲ್ಲಿಗೆ ಬಂದಾಗ ಮಂಗಳೂರಿನಲ್ಲಿದ್ದೇನಾ ಬೆಂಗಳೂರಿನಲ್ಲಿದ್ದೇನಾ ಎಂಬ ಸಂಶಯ ಬಂತು ಎಂದು ತುಳು ಭಾಷೆಯಲ್ಲಿಯೇ ಹೇಳಿದರು. ಅಲ್ಲದೆ, ತುಳು ಭಾಷೆಯನ್ನು ರಾಜ್ಯದ ಹೆಚ್ಚುವರಿ ಭಾಷೆಯಾಗಿ ಸೇರ್ಪಡೆ ಮಾಡಬೇಕು ಎಂದು ವೇದಿಕೆ ಮೇಲೆ ಸಿ.ಎಂ ಸಿದ್ದರಾಮಯ್ಯಗೆ ಮನವರಿಕೆ ಮಾಡಿದರು. ಕಂಬಳ ಆಯೋಜನೆಯಲ್ಲಿ ಸಂಘಟಕರ ಶ್ರಮ ದೊಡ್ಡದು. ಇದು ಪರಸ್ಪರ ಎಲ್ಲರನ್ನು ಒಟ್ಟುಗೂಡಿಸಿದೆ. ಪ್ರತಿವರ್ಷ ಬೆಂಗಳೂರು ಕಂಬಳ ನಡೆಯುವಂತಾಗಲಿ ಎಂದರು.
-
-
Bengaluru Kambala 2023 Live Updates: ಸಭಾ ಕಾರ್ಯಕ್ರಮ ಉದ್ಘಾಟಿಸಿದ ಸಿದ್ದರಾಮಯ್ಯ
ಬೆಂಗಳೂರು ಕಂಬಳದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.
-
Bengaluru Kambala 2023 Live Updates: ಬೆಂಗಳೂರು ಕಂಬಳಕ್ಕೆ ಆಗಮಿಸಿದ ಯುಟಿ ಖಾದರ್
ಬೆಂಗಳೂರು ಕಂಬಳಕ್ಕೆ ಸ್ಪೀಕರ್ ಯು.ಟಿ ಖಾದರ್ ಆಗಮಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಆರಂಭವಾಗುವ ಸಭಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಖಾದರ್ ಆಗಮಿಸಿದ್ದಾರೆ.
-
Bengaluru Kambala 2023 Live Updates: ವೇದಿಕೆ ಮೇಲಿನಿಂದಲೇ ಕಂಬಳ ವೀಕ್ಷಿಸುತ್ತಿರುವ ಸಿದ್ದರಾಮಯ್ಯ
ಬೆಂಗಳೂರು ಕಂಬಳಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭಾ ಕಾರ್ಯಕ್ರಮದ ವೇದಿಕೆ ಮೇಲಿನಿಂದಲೇ ಕಂಬಳ ವೀಕ್ಷಿಸುತ್ತಿದ್ದಾರೆ. ಅಲ್ಲದೆ, ಕೋಣಗಳ ಓಟದ ಬಗ್ಗೆ ಶಾಸಕ ಅಶೋಕ್ ರೈ ಅವರಿಂದ ಮಾಹಿತಿ ಪಡೆಯುತ್ತಿದ್ದಾರೆ.
-
Bengaluru Kambala 2023 Live Updates: ಕಂಬಳ ಕಾರ್ಯಕ್ರಮಕ್ಕೆ ಆಗಮಿಸಿದ ಸಿ.ಎಂ ಸಿದ್ದರಾಮಯ್ಯ
ಬೆಂಗಳೂರು ಐತಿಹಾಸಿಕ ಕಂಬಳ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಸಭಾ ಕಾರ್ಯಕ್ರಮ ಆರಂಭಗೊಳ್ಳಲಿದೆ. ಕಾರ್ಯಕ್ರಮಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಬ್ಯಾಂಡ್ ವಾದ್ಯದ ಮೂಲಕ ಅದ್ದೂರಿ ಸ್ವಾಗತ ಕೋರಲಾಯಿತು.
-
Bengaluru Kambala 2023 Live Updates: ಬೆಂಗಳೂರು ಕಂಬಳದಲ್ಲಿ ಹುಲಿಕುಣಿತ
ಹುಲಿ ವೇಷಧಾರಿಗಳ ಕುಣಿತ ಕರಾವಳಿ ಭಾಗದಲ್ಲಿ ಕಾಣಸಿಗುತ್ತದೆ. ಈ ಹುಲಿವೇಷ ಕುಣಿತ ಬೆಂಗಳೂರು ಕಂಬಳದಲ್ಲೂ ನೀಡಬಹುದಾಗಿದೆ. ಹುಲಿಕುಣಿತ ನೋಡಲು ಜನರು ಮುಗಿಬೀಳುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಹಾಡಿಗೆ ಹುಲಿಕುಣಿತ ಮಾಡಲಾಗಿದೆ. ಒಟ್ಟು 15 ಜನ ಹುಲಿ ವೇಷ ಹಾಕಿದ್ದಾರೆ.
-
Bengaluru Kambala 2023 Live Updates: ಬೆಂಗಳೂರಿನಲ್ಲಿ ಕಂಬಳ ಆಯೋಜಕರಿಗೆ ಶಾಕ್ ಕೊಟ್ಟ ಬಿಬಿಎಂಪಿ
ಅರಮನೆ ಮೈದಾನದ ಮುಂದೆ ಬ್ಯಾನರ್, ಫ್ಲೆಕ್ಸ್ ಹಾಕಿದ್ದಕ್ಕೆ ಬೆಂಗಳೂರಿನಲ್ಲಿ ಕಂಬಳ ಆಯೋಜಕರಿಗೆ ಬಿಬಿಎಂಪಿ ದಂಡ ವಿಧಿಸಿದೆ. ಅರಮನೆ ಮೈದಾನದ ಮುಂದೆ ಫ್ಲೆಕ್ಸ್, ಬ್ಯಾನರ್ ಹಾಕಿದ್ದ ಬಗ್ಗೆ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಹೀಗಾಗಿ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಮೈದಾನದ ಮುಂದೆ ಶುಭಕೋರುವ ಫ್ಲೆಕ್ಸ್, ಬ್ಯಾನರ್ಗಳನ್ನು ತೆರವು ಮಾಡಿದ್ದಾರೆ.
-
Bengaluru Kambala 2023 Live Updates: ಬೆಂಗಳೂರು ಕಂಬಳದಲ್ಲಿ ಅಂಕದ ಕೋಳಿಗೆ ಡಿಮಾಂಡಪ್ಪೋ ಡಿಮಾಂಡ್
ಅರಮನೆ ಮೈದಾನದಲ್ಲಿ ಲಕ್ಕಿ ಡ್ರಾ ಮೂಲಕ ಅಂಕದ ಕೋಳಿಗಳನ್ನ ಗ್ರಾಹಕರು ಖರೀದಿಸುತ್ತಿದ್ದಾರೆ. ಅಂಕದ ಕೋಳಿಗಳನ್ನ ಮಾರಾಟ ಮಾಡಲೆಂದೇ ವ್ಯಾಪಾರಸ್ಥರು ಒಟ್ಟು 40 ಅಂಕದ ಕೋಳಿಗಳನ್ನ ತಂದಿದ್ದು, ಲಕ್ಕಿ ಡ್ರಾದಲ್ಲಿ ಗೆದ್ದವರಿಗೆ ಉಚಿತವಾಗಿ ನೀಡಲಾಗುತ್ತಿದೆ. ಈ ಅಂಕದ ಕೋಳಿಗಳಿಗೆ 3 ರಿಂದ 5 ಸಾವಿರ ರೂಪಾಯಿ ಇರುತ್ತದೆ. ಆದರೆ ಇಲ್ಲಿ 130 ರೂಪಾಯಿಗೆ ಒಂದು ಕೂಪನ್ ಖರೀದಿಸಬೇಕು ಹಾಗೂ ಅದೃಷ್ಟ ಯಾರಿಗೆ ಇರುತ್ತೋ ಅವರಿಗೆ ಅಂಕದ ಕೋಳಿ ಸಿಗಲಿದೆ.
-
Bengaluru Kambala 2023 Live Updates: ಕಂಬಳದಲ್ಲಿ ಅಂಕದ ಕೋಳಿಗಳಿಗೆ ಡಿಮಾಂಡ್
ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ಕೋಣಗಳ ಕಂಬಳ ಕ್ರೀಡೆ ನಡೆಯುತ್ತಿದೆ. ಇನ್ನೋಂದೆಡೆ, ಮೈದಾನದಲ್ಲಿ ಅಂಕದ ಕೋಳಿಗಳ ಮಾರಾಟವೂ ನಡೆಯುತ್ತಿದೆ. ಲಕ್ಕಿ ಡ್ರಾ ಮೂಲಕ ಅಂಕದ ಕೋಳಿಗಳನ್ನ ಮಾರಾಟ ಮಾಡಲಾಗುತ್ತಿದೆ. ಒಟ್ಟು 40 ಅಂಕದ ಕೋಳಿಗಳನ್ನ ತಂದಿದ್ದು, ಲಕ್ಕಿ ಡ್ರಾ ದಲ್ಲಿ ಗೆದ್ದವರಿಗೆ ಅಂಕದ ಕೋಳಿ ಉಚಿತವಾಗಿ ನೀಡಲಾಗುತ್ತದೆ. ಈ ಅಂಕದ ಕೋಳಿಗಳಿಗೆ 3 ರಿಂದ 5 ಸಾವಿರ ಹಣ ಇರುತ್ತದೆ. ಆದರೆ ಇಲ್ಲಿ ಲಕ್ಕಿ ಡ್ರಾದಲ್ಲಿ ಕೇವಲ 130 ಕ್ಕೆ ಖರೀದಿ ಮಾಡಬಹುದು.
-
Bengaluru Kambala 2023 Live Updates: ಕಂಬಳಕ್ಕೆ ಮಳೆ ಅಡ್ಡಿ
ಕಂಬಳದ ವೇಳೆ ಮಳೆಯಾರನ ಸಿಂಚನವಾಗಿದೆ. ಅರಮನೆ ಮೈದಾನದ ಸುತ್ತ – ಮುತ್ತ ಮಳೆರಾಯನ ಆರ್ಭಟಗೊಂಡಿದೆ. ಮಳೆಯ ನಡುವೆ ಜನರು ಕಂಬಳದ ಟ್ರಯಲ್ ನೋಡುತ್ತಿದ್ದಾರೆ. ಬೆಂಗಳೂರು ಮೊದಲ ಕಂಬಳವನ್ನ ವೀಕ್ಷಿಸಲು ಜನರು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದಾರೆ.
-
Bengaluru Kambala 2023 Live Updates: ಊಟದ ಹಾಲ್ಗೆ ನುಗ್ಗಿದ ಸಾರ್ವಜನಿಕರು
ಬೆಂಗಳೂರು ಕಂಬಳದಲ್ಲಿ ಕೋಣಗಳ ಪರಿಚಾರಕರಿಗೆ, ಪೊಲೀಸ್ ಸಿಬ್ಬಂದಿ, ಸ್ವಯಂಸೇವಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಈ ನಡುವೆ ಊಟದ ಹಾಲ್ಗೆ ಕೋಣಗಳ ಪರಿಚಾರಕರ ಜೊತೆ ಸಾರ್ವಜನಿಕರು ನುಗ್ಗಿದ್ದು, ನೂಕು ನುಗ್ಗಲು ಉಂಟಾಗಿದೆ. ಜನರನ್ನು ನಿಯಂತ್ರಿಸಲು ಸ್ವಯಂ ಸೇವಕರು ಹರಸಾಹಸ ಪಡುತ್ತಿದ್ದಾರೆ. ಅಲ್ಲದೆ, ಸಿಬ್ಬಂದಿ ಹಾಗೂ ಕಂಬಳ ವೀಕ್ಷಣೆಗೆ ಆಗಮಿಸಿದ್ದ ಸಾರ್ವಜನಿಕರ ನೆಡುವೆ ವಾಗ್ವಾದ ಉಂಟಾಗಿದೆ. ಟಿಕೆಟ್ ಇದ್ದವರಿಗರ ಮಾತ್ರ ಊಟದ ವ್ಯವಸ್ಥೆ ಮಾಡಲಾಗಿತ್ತು.
-
Bengaluru Kambala 2023, Day 1 Live Updates: ಬೆಂಗಳೂರು ಕಂಬಳದಲ್ಲಿ ಕರಾವಳಿ ಶೈಲಿಯ ಉಟೋಪಚಾರ
ಬೆಂಗಳೂರು ಕಂಬಳದಲ್ಲಿ ಕರಾವಳಿ ಶೈಲಿಯ ಉಟದ ವ್ಯವಸ್ಥೆ ಮಾಡಲಾಗಿದೆ. ಕೋಣಗಳ ಜೊತೆ ಬಂದಿರುವ ಪರಿಚಾರಕರಿಗೆ, ಸ್ವಯಂ ಸೇವಕರು, ಪೊಲೀಸ್ ಸಿಬ್ಬಂದಿಗೆ ಅರಮನೆ ಮೈದಾನದ ಅನ್ನಬ್ರಹ್ಮ ಹಾಲ್ನಲ್ಲಿ ಊಟ ವಿತರಣೆ ಮಾಡಲಾಗುತ್ತಿದೆ. ಕುಚ್ಚಲಕ್ಕಿ ಅನ್ನ, ವೈಟ್ ರೈಸ್, ಚಿಕನ್ ಕಬಾಬ್, ಚಿಕನ್ ಸುಕ್ಕ, ಕಡ್ಲೆ ಬೇಳೆ ಪಾಯಸ ವಿತರಣೆ ಮಾಡಲಾಗುತ್ತಿದೆ. ಮನೆಯಲ್ಲಿಯೇ ಊಟ ಮಾಡಿದ ಅನುಭವವಾಗುತ್ತಿದೆ. ಬೆಂಗಳೂರಿನಲ್ಲಿ ಕರಾವಳಿಯ ಶೈಲಿಯ ಊಟದ ವ್ಯವಸ್ಥೆ ಮಾಡಿರೋದು ಖುಷಿಯಾಗಿದೆ ಎಂದು ಟಿ.ವಿ 9 ಜೊತೆ ಕಂಬಳ ಕೋಣಗಳ ಪರಿಚಾರಕರು ಖುಷಿ ಹಂಚಿಕೊಂಡಿದ್ದಾರೆ.
-
Bengaluru Kambala 2023 Live: ಕಂಬಳದ ಟ್ರ್ಯಾಕ್ ನಿರ್ಮಾಣ ಆಗಿದ್ದೇಗೆ?
ಕಂಬಳದ ಕೆರೆಗೆ ತಳಿರು ತೋರಣ ಕಟ್ಟಿ ಶೃಂಗಾರ ಮಾಡಲಾಗಿದೆ. ರಾಜ, ಮಹರಾಜ ಹೆಸರಿನಲ್ಲಿ ಕಂಬಳದ ಕೆರೆ ರೆಡಿ ಮಾಡಲಾಗಿದೆ. ಸರಪಾಡಿ ಅಪ್ಪಣ್ಣ ನೇತ್ರತ್ವದಲ್ಲಿ ಕಂಬಳದ ಟ್ರ್ಯಾಕ್ ನಿರ್ಮಾಣ ಮಾಡಲಾಗಿದೆ. 25 ದಿನದಲ್ಲಿ ಕಂಬಳದ ಟ್ರ್ಯಾಕ್ ನಿರ್ಮಾಣ ಮಾಡಲಾಗಿದೆ. ಸುಮಾರು 25 ಜನ ಕಾರ್ಮಿಕರು ಸರಪಾಡಿ ಅಪ್ಪಣ್ಣಗೆ ಸಾಥ್ ನೀಡಿದ್ದಾರೆ. ಟಿವಿ 9 ಜೊತೆ ಕಂಬಳ ಟ್ರ್ಯಾಕ್ ನಿರ್ಮಾಣದ ಅನುಭವವನ್ನು ಅಪ್ಪಣ್ಣ ಹಂಚಿಕೊಂಡಿದ್ದಾರೆ. ಪ್ರಾರಂಭದಲ್ಲಿ ಬಂದಾಗ ಕಟ್ಟಡ ಕೆಡವಿದ ತ್ಯಾಜಗಳ ರಾಶಿಯಿತ್ತು. ಬಳಿಕ ನೆಲ ಹದಗೊಳಿಸಿ ಟ್ರ್ಯಾಕ್ ನಿರ್ಮಿಸಿದೆವು. ಯಾವುದೇ ವ್ಯತ್ಯಾಸ ಆಗದಂತೆ ನೋಡಿಕೊಂಡಿದ್ದೇವೆ. ಕೋಣಗಳು ಓಡಿದ ಬಳಿಕ ಸಾಧಕ ಭಾದಕ ಗೊತ್ತಾಗುತ್ತೆ ಎಂದರು.
-
Bengaluru Kambala 2023 Live: ಕಂಬಳಕ್ಕೆ ಬಂದವರಿಗಾಗಿ ವಿಶೇಷ ವಸ್ತು ಪ್ರದರ್ಶನ
ಕಂಬಳಕ್ಕೆ ಸಾವಿರಾರು ಜನರು ಆಗಮಿಸುತ್ತಿದ್ದಾರೆ. ಕಂಬಳಕ್ಕೆ ಬಂದವರಿಗಾಗಿ ವಿಶೇಷ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಮಂಗಳೂರಿನಲ್ಲಿ ಬಳಸುವ ವಸ್ತುಗಳು, ಪೂಜಾ ಸಮಾಗ್ರಿಗಳು , ದೈವಾರಾಧನ ಮುಖವಾಡಗಳು, ಪಾತ್ರೆ, ಹುಲಿಕುಣಿತದ ವೇಷ ಭೂಷಣಗಳ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ.
-
Bengaluru Kambala 2023 Live: ಬೆಂಗಳೂರು ಕಂಬಳದ ನೇರಪ್ರಸಾರ, ಇಲ್ಲಿದೆ
ಬೆಂಗಳೂರು ಕಂಬಳದ ನೇರಪ್ರಸಾರ
-
Bengaluru Kambala 2023 Live: ಕಂಬಳ ನೋಡಿ ಜನ ಫುಲ್ ಖುಷ್
ಬೆಂಗಳೂರು ಕಂಬಳಕ್ಕೆ ಜನಸಾಗರವೇ ಹರಿದು ಬರುತ್ತಿದೆ. ಬೆಂಗಳೂರು ಮಾತ್ರವಲ್ಲದೆ, ಕರಾವಳಿ ಭಾಗದ ಸಾಕಷ್ಟು ಮಂದಿ ಕಂಬಳಾಭಿಮಾನಿಗಳು ಭಾಗಿಯಾಗಿದ್ದಾರೆ. ಅಭಿಮಾನಿಗಳು ಕಂಬಳ ಆಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರ್ಕಾರ ಕಂಬಳಕ್ಕೆ ಇನ್ನಷ್ಟು ಪ್ರೋತ್ಸಾಹಿಸುವಂತೆ ಒತ್ತಾಯಿಸಿದ್ದಾರೆ. ಕಂಬಳದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
-
Bengaluru Kambala 2023 Live: ಬೆಂಗಳೂರು ಕಂಬಳ ನಮ್ಮ ಕಂಬಳ ಅಲ್ಲ, ಇದು ನಿಮ್ಮ ಕಂಬಳ -ಪ್ರಕಾಶ್ ರೈ
ಬೆಂಗಳೂರಿನಲ್ಲಿ ಕಂಬಳ ಮಾಡುವುದು ನಮ್ಮ ಕನಸು ಇಂದು ನನಸಾಗ್ತಿದೆ. ಬೆಂಗಳೂರು ಕಂಬಳ ನಮ್ಮ ಕಂಬಳ ಅಲ್ಲ, ಇದು ನಿಮ್ಮ ಕಂಬಳ ಎಂದು ಬೆಂಗಳೂರಿನಲ್ಲಿ ಕಂಬಳ ಸಮಿತಿಯ ಗೌರವಾಧ್ಯಕ್ಷ ಪ್ರಕಾಶ್ ರೈ ಹೇಳಿದರು. ಕೋಣಗಳನ್ನ ಬೆಂಗಳೂರಿಗೆ ತರುವಾಗ ಹೆಚ್ಚಿನ ಜನರು ಸಹಕರಿಸಿದ್ದಾರೆ. ಕಾಂತಾರ ಸಿನಿಮಾ ಮೂಲಕ ಕಂಬಳ ದೇಶದೆಲ್ಲೆಡೆ ಪರಿಚಯವಾಗಿದೆ. ಇನ್ಮುಂದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕಂಬಳವನ್ನ ಗುರುತಿಸುತ್ತೇವೆ. ವಿವಿಧ ಎಲ್ಲಾ ಕ್ರೀಡೆಗಳಂತೆ ಕಂಬಳ ಕೂಡಾ ಬೆಳೆಯುತ್ತೆ ಎಂದರು.
-
Bengaluru Kambala 2023 Live: ಬೆಂಗಳೂರು ಕಂಬಳ ಕೆರೆಯ ಬಗ್ಗೆ ಓಟಗಾರರ ಮೆಚ್ಚುಗೆ
ಬೆಂಗಳೂರು ಕಂಬಳ ಕೆರೆಯ ಬಗ್ಗೆ ಕಂಬಳ ಓಟಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಂಬಳ ಟ್ರ್ಯಾಕ್ ನಲ್ಲಿ ಓಡಿದ ಅನುಭವವನ್ನು ಟಿ.ವಿ 9 ಜೊತೆ ಹಂಚಿಕೊಂಡಿದ್ದಾರೆ. ಕಂಬಳ ಗದ್ದೆ ಬಹಳ ಮೆದುವಾಗಿದೆ. ಓಡುವುದಕ್ಕೆ ಯಾವುದೇ ತೊಂದ್ರೆ ಇಲ್ಲ. ಕೋಣಗಳು ಸಹ ಒಳ್ಳೆ ರೆಸ್ಪಾನ್ಸ್ ಮಾಡ್ತಿದೆ. ಅದ್ಬುತವಾಗಿ ಕಂಬಳ ಕೆರೆ ನಿರ್ಮಾಣ ಮಾಡಿದ್ದಾರೆ. ಕರಾವಳಿಯ ಕಂಬಳ ಕೆರೆಗೂ ಬೆಂಗಳೂರಿನ ಕಂಬಳ ಕೆರೆಗೂ ಯಾವುದೇ ವ್ಯತ್ಯಾಸವಿಲ್ಲ. ಬಹಳ ಖುಷಿಯಿಂದ ಕಂಬಳದಲ್ಲಿ ಭಾಗಿಯಾಗಿದ್ದೇವೆ ಎಂದು ಓಟಗಾರರೊಬ್ಬರು ತಿಳಿಸಿದ್ದಾರೆ.
-
Bengaluru Kambala 2023 Live: ಸಂಪ್ರದಾಯದಂತೆ ಕಂಬಳ ಕೆರೆಗೆ ಇಳಿದ ಕೋಣಗಳು
ಸಂಪ್ರದಾಯದಂತೆ ಕಂಬಳ ಕೆರೆಗೆ ಕೋಣಗಳು ಇಳಿದಿವೆ. ಕಂಬಳ ಸಮಿತಿಯಿಂದ ಕೋಣದ ಮಾಲೀಕರಿಗೆ ಗೌರವಿಸಲಾಗಿದೆ. ಸಂಪ್ರದಾಯದಂತೆ ಶಾಲು ಹೊದಿಸಿ ಎಳನೀರು, ತಾಂಬೂಲ ನೀಡಿ ಗೌರವಿಸಲಾಯಿತು. ಕೋಣದ ಮಾಲೀಕರು ಪರಿಚಾರಕರು ಕೈ ಮುಗಿದು ಕಂಬಳ ಕೆರೆಗೆ ಇಳಿದರು.
-
Bengaluru Kambala 2023: ಕಂಬಳದ ಪುನೀತ್ ರಾಜ್ ಕುಮಾರ್ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ
ಕಂಬಳದ ಪುನೀತ್ ರಾಜ್ ಕುಮಾರ್ ವೇದಿಕೆ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನವರು ಚಾಲನೆ ನೀಡಿದರು.
-
Bengaluru Kambala 2023: ಕಂಬಳ ಕೆರೆಗೆ ಧಾರ್ಮಿಕ ವಿಧಿವಿಧಾನ ಪೂಜೆ
ಐತಿಹಾಸಿಕ ಬೆಂಗಳೂರು ಕಂಬಳಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ರಾಜ ಮಹರಾಜ ಹೆಸರಿನ ಕಂಬಳ ಕೆರೆಗೆ ಅರ್ಚಕರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ದೈವ, ದೇವರ ಪ್ರಸಾದ ಕಂಬಳ ಕರೆಯ ನೀರಿಗೆ ಅರ್ಪಣೆ ಮಾಡಿದರು. ಯಾವುದೇ ಅಡ್ಡಿ ಆತಂಕ ಎದುರಾಗದಂತೆ ಪ್ರಾರ್ಥನೆ ಮಾಡಿದರು. ದೀಪ ಬೆಳಗಿಸಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಕಂಬಳಕ್ಕೆ ಚಾಲನೆ ನೀಡಿದರು. ಗಂಗಾರತಿ ಮಾಡುವ ಮೂಲಕ ಕಂಬಳ ಕರೆಗೆ ಪೂಜೆ ಮಾಡಲಾಯಿತು.
-
Bengaluru Kambala 2023: ಬೆಂಗಳೂರು ಕಂಬಳದ ಜೋಡು ಕರೆ ಉದ್ಘಾಟಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
ದೀಪ ಬೆಳಗುವ ಮೂಲಕ ಬೆಂಗಳೂರು ಕಂಬಳದ ಜೋಡು ಕರೆಯನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಉದ್ಘಾಟಿಸಿದರು. ಮಾಜಿ ಸಿಎಂ ಯಡಿಯೂರಪ್ಪ, ಶಾಸಕ ಎಸ್.ಆರ್.ವಿಶ್ವನಾಥ್, ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ, ಉಮೇಶ್ ಶೆಟ್ಟಿ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
-
Karnataka Breaking News Live: ಕ್ಯಾಪ್ಟನ್ ಪ್ರಾಂಜಲ್ ಗೆ ಸಿಎಂ, ರಾಜ್ಯಪಾಲರು ಗಣ್ಯರಿಂದ ಗೌರವ ನಮನ
ಕ್ಯಾಪ್ಟನ್ ಪ್ರಾಂಜಲ್ ಪಾರ್ಥಿವ ಶರೀರಕ್ಕೆ ಸಿಎಂ, ರಾಜ್ಯಪಾಲರು ಗಣ್ಯರಿಂದ ಗೌರವ ನಮನ
-
Karnataka Breaking News Live: ವೀರ ಯೋಧ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಕರ್ನಾಟಕದ ಹೆಮ್ಮೆ -ಆರ್.ಅಶೋಕ್
ವೀರ ಯೋಧ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಕರ್ನಾಟಕದ ಹೆಮ್ಮೆ ಎಂದು ಅಂತಿಮ ದರ್ಶನ ಬಳಿಕ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು. ದೇಶಕ್ಕಾಗಿ ಧೈರ್ಯ, ಶೌರ್ಯದಿಂದ ಎಂ.ವಿ.ಪ್ರಾಂಜಲ್ ಹೋರಾಡಿದ್ದಾರೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಪುಣ್ಯ ಪುತ್ರ. ವೀರಯೋಧ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಂತಿಮ ದರ್ಶನ ಬಳಿಕ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
-
Karnataka Breaking News Live: ಸಿದ್ಧಗಂಗಾ ಮಠದಲ್ಲಿ ವಿ.ಸೋಮಣ್ಣ ಅಸಮಾಧಾನ
2023ರ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಚಿವ ವಿ ಸೋಮಣ್ಣ ವರುಣ ಮತ್ತು ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಎರಡೂ ಕ್ಷೇತ್ರದಲ್ಲಿ ಸೋಲನ್ನು ಕಂಡರು. ಇದರಿಂದ ಬೇಸರಗೊಂಡ ವಿ ಸೋಮಣ್ಣ ಇಂದು ತುಮಕೂರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದರು. ಈ ವೇಳೆ ತಾವು ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾರಣವೇನು ಎಂಬುವುದರ ಹಿಂದಿನ ರಹಸ್ಯ ಹೇಳಿದರು.
ವಿಧಾನಸಭಾ ಚುನಾವಣೆ: ಅಮಿತ್ ಶಾ ನಮ್ಮ ಮನೆಯಲ್ಲಿ ಕುಳಿತುಕೊಂಡು ಜೀವ ತೆಗೆದರು, ಸೋಮಣ್ಣ ಹೇಳಿಕೆಯ ಹಿಂದಿನ ಗುಟ್ಟೇನು?
-
Karnataka Breaking News Live: ಬೆಂಗಳೂರು ಕಂಬಳ ಕೋಣ ಓಟದ ಟ್ರ್ಯಾಕ್ ಹೇಗಿದೆ ನೋಡಿ
ಬೆಂಗಳೂರು ಕಂಬಳ ಕೋಣ ಓಟದ ಟ್ರ್ಯಾಕ್ ಹೇಗಿದೆ ನೋಡಿ
-
Karnataka Breaking News Live: ಹುತಾತ್ಮ ಯೋಧ ಪ್ರಾಂಜಲ್ ಅಂತಿಮ ದರ್ಶನ ಪಡೆದ ಆರ್.ಅಶೋಕ್
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ನಂದನವನ ಲೇಔಟ್ನ ನಿವಾಸದಲ್ಲಿ ಆರ್.ಅಶೋಕ್ ಅವರು ಹುತಾತ್ಮ ಯೋಧ ಪ್ರಾಂಜಲ್ ಅಂತಿಮ ದರ್ಶನ ಪಡೆದರು.
-
Karnataka Breaking News Live: ವಿಧಾನಸಭಾ ಚುನಾವಣೆಯಲ್ಲಿ 2 ಕಡೆ ಸ್ಪರ್ಧಿಸಿದ್ದಕ್ಕೆ ಸೋಮಣ್ಣ ಬೇಸರ
ತುಮಕೂರು ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಬಳಿ ವಿ.ಸೋಮಣ್ಣ ಬೇಸರ ವ್ಯಕ್ತಪಡಿಸಿದ್ದಾರೆ. ‘ಇಲ್ಲಿ ಬಿಟ್ಟು ಅಲ್ಲಿ ಸ್ಪರ್ಧೆ ಮಾಡಿದ್ದೇ ನನ್ನ ಮಹಾ ಅಪರಾಧ’ ‘ಅಮಿತ್ ಶಾ ನಮ್ಮ ಮನೆಯಲ್ಲಿ ಕುಳಿತುಕೊಂಡು ಜೀವ ತೆಗೆದರು’ 2 ಗಂಟೆ ಮನೆಯಲ್ಲಿ ಕುಳಿತುಕೊಂಡಿದ್ರು, ಆಗಲ್ಲ ಅಂತಾ ಹೇಳಿದ್ದೆ. ಪ್ರಧಾನಿ ದೆಹಲಿಗೆ ಕರೆಸಿ ನೀನು ಸ್ಪರ್ಧೆ ಮಾಡು ಅಂದ್ರು, ಎಂದು ಸಿದ್ದಲಿಂಗ ಸ್ವಾಮೀಜಿ ಎದುರು ವಿ.ಸೋಮಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.
-
Karnataka Breaking News Live: ಬೆಂಗಳೂರಿಗೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದಿಳಿದಿದ್ದಾರೆ. ಹೆಚ್ಎಎಲ್ ಏರ್ಪೋರ್ಟ್ಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಡಿಜಿ&ಐಜಿಪಿ ಅಲೋಕ್ ಮೋಹನ್, ಬೆಂಗಳೂರು ನಗರ ಡಿಸಿ ದಯಾನಂದ್, ಕಮಿಷನರ್ ದಯಾನಂದ್ ಸ್ವಾಗತಿಸಿದರು. HAL ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮೋದಿ ಭಾಗಿಯಾಗಲಿದ್ದಾರೆ.
-
Karnataka Breaking News Live: ಸಾಲಬಾಧೆಯಿಂದ ಬೇಸತ್ತು ಜಮೀನಿನಲ್ಲೇ ರೈತ ನೇಣಿಗೆ ಶರಣು
ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಮಾರಲದಿನ್ನಿ ತಾಂಡಾದಲ್ಲಿ ಸಾಲಬಾಧೆಯಿಂದ ಬೇಸತ್ತು ಜಮೀನಿನಲ್ಲೇ ರೈತ ನೇಣಿಗೆ ಶರಣಾದ ಘಟನೆ ನಡೆದಿದೆ. ತನ್ನ ಜಮೀನಿನಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಚೆಂದಪ್ಪ(60) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬರಗಾಲದಿಂದ 3 ಎಕರೆಯಲ್ಲಿ ಬೆಳೆದಿದ್ದ ತೊಗರಿ ಬೆಳೆ ನಾಶವಾಗಿತ್ತು. ರೈತ ಚೆಂದಪ್ಪ ಬ್ಯಾಂಕ್, ಖಾಸಗಿಯವರಿಂದ 6 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು.
-
Karnataka Breaking News Live: ಸಿದ್ಧಗಂಗಾ ಮಠಕ್ಕೆ ಆಗಮಿಸಿದ ಮಾಜಿ ಸಚಿವ ವಿ.ಸೋಮಣ್ಣ
ತುಮಕೂರಿನ ಕ್ಯಾತ್ಸಂದ್ರ ಬಳಿಯಿರುವ ಸಿದ್ಧಗಂಗಾ ಮಠಕ್ಕೆ ಮಾಜಿ ಸಚಿವ ವಿ.ಸೋಮಣ್ಣ ಆಗಮಿಸಿದ್ದು ಡಾ.ಶಿವಕುಮಾರಶ್ರೀಗಳ ಗದ್ದುಗೆ ದರ್ಶನ ಪಡೆದರು. ನಗರ ಶಾಸಕ ಜ್ಯೋತಿ ಗಣೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದಾರೆ. ಪತ್ನಿ ಶೈಲಜಾ ಜೊತೆ ಮಠಕ್ಕೆ ಆಗಮಿಸಿರುವ ವಿ.ಸೋಮಣ್ಣ.
-
Karnataka Breaking News Live: ಕೆಲವೇ ಹೊತ್ತಿನಲ್ಲಿ ಬೆಂಗಳೂರಿಗೆ ಆಗಮಿಸುವ ಪ್ರಧಾನಿ ಮೋದಿ
ಕೆಲವೇ ಹೊತ್ತಿನಲ್ಲಿ ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಲಿದ್ದಾರೆ. HAL ಏರ್ಪೋರ್ಟ್ಗೆ ಪ್ರಧಾನಮಂತ್ರಿ ಆಗಮಿಸಲಿದ್ದು HAL ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮೋದಿ ಭೇಟಿ ಹಿನ್ನೆಲೆ ವೈಟ್ಫೀಲ್ಡ್ ಡಿಸಿಪಿ ನೇತೃತ್ವದಲ್ಲಿ HAL ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. 4 ಎಸಿಪಿ, 8 ಪಿಐ ಸೇರಿ 500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.
-
Karnataka Breaking News Live: ಆರ್.ಡಿ.ಪಾಟೀಲ್ನನ್ನು ಮತ್ತೆ 8 ದಿನ ಕಸ್ಟಡಿಗೆ ಪಡೆದ ಸಿಐಡಿ ಪೊಲೀಸರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ FDA ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ ಸಂಬಂಧ ಸಿಐಡಿ ಪೊಲೀಸರು ಆರ್.ಡಿ.ಪಾಟೀಲ್ನನ್ನು ಮತ್ತೆ 8 ದಿನ ಕಸ್ಟಡಿಗೆ ಪಡೆದಿದ್ದಾರೆ. KEA ಪರೀಕ್ಷೆ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್ನ ಹೆಚ್ಚಿನ ವಿಚಾರಣೆಗೆ ವಶಕ್ಕೆ ನೀಡುವಂತೆ ಸಿಐಡಿ ಅಧಿಕಾರಿಗಳು ಮನವಿ ಸಲ್ಲಿಸಿದ್ದರು. ಕಲಬುರಗಿ JMFC ಕೋರ್ಟ್ ಮನವಿ ಪುರಸ್ಕರಿಸಿ CID ವಶಕ್ಕೆ ನೀಡಿದೆ.
-
Karnataka Breaking News Live: ವೀರ ಯೋಧ ಪ್ರಾಂಜಲ್ ಅಂತಿಮ ದರ್ಶನಕ್ಕೆ ಜನ ಸಾಗರ
ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ವೀರ ಯೋಧ ಕ್ಯಾಪ್ಟನ್ ಪ್ರಾಂಜಲ್ ಅಂತಿಮ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನ ಬರುತ್ತಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿ ಬಳಿಯ ನಂದನವನ ಲೇಔಟ್ನ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರು, ಮಕ್ಕಳು ಸೇರಿ ನೂರಾರು ಜನರು ಅಂತಿಮ ದರ್ಶನ ಪಡೆಯುತ್ತಿದ್ದಾರೆ.
-
Karnataka Breaking News Live: ರೇಸ್ಗೆ ರೆಡಿಯಾಗುತ್ತಿವೆ ಕಂಬಳ ಕೋಣಗಳು
ಇಂದಿನಿಂದ ಬೆಂಗಳೂರಲ್ಲಿ ಕಂಬಳ ಶುರು. ಕಂಬಳದ ಕೋಣಗಳಿಗೆ ವಾಕಿಂಗ್, ಸ್ನಾನ, ಮಸಾಜ್
-
Karnataka Breaking News Live: ಇಂದು, ನಾಳೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಐತಿಹಾಸಿಕ ಕಂಬಳ
ಇಂದು, ನಾಳೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಐತಿಹಾಸಿಕ ಕಂಬಳ ನಡೆಯಲಿದೆ. ‘ಬೆಂಗಳೂರು ಕಂಬಳ ನಮ್ಮ ಕಂಬಳ’ ಎಂಬ ಹೆಸರಿನಲ್ಲಿ ಕಂಬಳ ನಡೆಯುತ್ತಿದ್ದು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಇಂದು ಬೆಳಗ್ಗೆ 10.30ಕ್ಕೆ ಐತಿಹಾಸಿಕ ಕಂಬಳದ ಜೋಡು ಕರೆ ಉದ್ಘಾಟನೆ ಮಾಡಲಿದ್ದಾರೆ. ಸಿಎಂ ಸಿದ್ದರಾಮಯ್ಯ ಸಂಜೆ 6 ಗಂಟೆಗೆ ಕಂಬಳ ಉದ್ಘಾಟನೆ ಮಾಡಲಿದ್ದಾರೆ. ಅರಮನೆ ಮೈದಾನದ ಗೇಟ್ ನಂ.1, 2, 3, 4ರಲ್ಲಿ ಸಾರ್ವಜನಿಕರಿಗೆ ಪ್ರವೇಶ ಇರಲಿದೆ. ಕಂಬಳ ವೀಕ್ಷಿಸಲು ಬರುವ ವಿವಿಐಪಿಗಳಿಗೆ ಪ್ರತ್ಯೇಕವಾಗಿ ಪ್ರವೇಶಕ್ಕೆ ವ್ಯವಸ್ಥೆ ಮಾಡಲಾಗಿದೆ.
-
Karnataka Breaking News Live: ಬೀದಿನಾಯಿಗಳ ದಾಳಿಯಿಂದ ಐವರಿಗೆ ಗಂಭೀರ ಗಾಯ
ಕಲಬುರಗಿ ಜಿಲ್ಲೆ ಚಿತ್ತಾಪುರದ ತಳಗೇರಿ ಬಡಾವಣೆಯಲ್ಲಿ ಬೀದಿನಾಯಿಗಳ ದಾಳಿಯಿಂದ ಐವರಿಗೆ ಗಂಭೀರ ಗಾಯಗಳಾಗಿವೆ. ಬೀದಿನಾಯಿಗಳಿಂದ ಏಕಾಏಕಿ ಸಾರ್ವಜನಿಕರ ಮೇಲೆ ದಾಳಿ ನಡೆದಿದ್ದು ಮಹಿಳೆಯರು, ವೃದ್ಧರು, ಮಕ್ಕಳು ಸೇರಿದಂತೆ ಐವರಿಗೆ ಗಾಯಗಳಾಗಿವೆ. ಗಾಯಾಳುಗಳಿಗೆ ಕಲಬುರಗಿ ಜಿಲ್ಲೆ ಚಿತ್ತಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
-
Karnataka Breaking News Live: ಇಂದು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಮಾಜಿ ಸಚಿವ ಸೋಮಣ್ಣ ಭೇಟಿ
ಇಂದು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಮಾಜಿ ಸಚಿವ ಸೋಮಣ್ಣ ಭೇಟಿ ನೀಡಲಿದ್ದಾರೆ. ಡಿಸೆಂಬರ್ 6ರಂದು ಗುರುಭವನ ಲೋಕಾರ್ಪಣೆ ಸಮಾರಂಭ ಹಿನ್ನೆಲೆ ಕಾರ್ಯಕ್ರಮದ ಸಿದ್ಧತೆ ಪರಿಶೀಲನೆಗೆ ವಿ.ಸೋಮಣ್ಣ ಆಗಮಿಸುತ್ತಿದ್ದಾರೆ. ಬೆಳಗ್ಗೆ 8.30ಕ್ಕೆ ಸಿದ್ಧಗಂಗಾ ಮಠಕ್ಕೆ ಮಾಜಿ ಸಚಿವ ವಿ.ಸೋಮಣ್ಣ ಭೇಟಿ ನೀಡಲಿದ್ದಾರೆ. ಸಿದ್ದಲಿಂಗ ಶ್ರೀಗಳ ಅಶೀರ್ವಾದ ಪಡೆದು ಬಳಿಕ ಕಾರ್ಯಕ್ರಮದ ಸಿದ್ಧತೆ ಪರಿಶೀಲನೆ ಮಾಡಲಿದ್ದಾರೆ.
-
Karnataka Breaking News Live: ವಿಪಕ್ಷ ನಾಯಕ ಆರ್.ಅಶೋಕ್ ಚಿತ್ರದುರ್ಗ, ತುಮಕೂರು ಜಿಲ್ಲಾ ಪ್ರವಾಸ
ವಿಪಕ್ಷ ನಾಯಕ ಆರ್.ಅಶೋಕ್ ಚಿತ್ರದುರ್ಗ, ತುಮಕೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಇಂದು ಮಧ್ಯಾಹ್ನ 2.30ಕ್ಕೆ ಚಿತ್ರದುರ್ಗದ ಮಾದಾರ ಚನ್ನಯ್ಯ ಮಠಕ್ಕೆ ಭೇಟಿ ನೀಡಲಿದ್ದಾರೆ ಬಳಿಕ ಮಧ್ಯಾಹ್ನ 3.30ಕ್ಕೆ ಸಿರಿಗೆರೆ ಮಠಕ್ಕೆ ಭೇಟಿ ನೀಡಿ ಸಂಜೆ 5.30ಕ್ಕೆ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ.
Published On - Nov 25,2023 7:55 AM