ರಾಜ್ಯದಲ್ಲಿ 12 ಹೊಸ ಪೊಲೀಸ್ ಠಾಣೆಗಳ ಸ್ಥಾಪನೆ; ನಿಮ್ಮ ಜಿಲ್ಲೆಗೆ ಸಿಕ್ಕಿದ್ದೇನು? ಇಲ್ಲಿದೆ ನೋಡಿ

ರಾಜ್ಯದ ಮುಖ್ಯಮಂತ್ರಿಗಳು ದಾಖಲೆಯ 17ನೇ ಬಜೆಟ್‌ನಲ್ಲಿ ಪೊಲೀಸ್ ಇಲಾಖೆಗೆ ಭಾರಿ ಅನುದಾನ ಘೋಷಿಸಿದ್ದಾರೆ. 12 ಹೊಸ ಪೊಲೀಸ್ ಠಾಣೆಗಳು, 8,000 ಹುದ್ದೆಗಳ ನೇಮಕಾತಿ, ಮತ್ತು ಸಿಬ್ಬಂದಿ ವಸತಿಗೃಹಗಳಿಗೆ 250 ಕೋಟಿ ರೂ. ಮೀಸಲಿಡಲಾಗಿದೆ. ಸಂವಹನ, ಫೋರೆನ್ಸಿಕ್ ಸಾಮರ್ಥ್ಯ ಹೆಚ್ಚಿಸಲು 75 ಕೋಟಿ, ಸೈಬರ್ ಅಪರಾಧ ತಡೆಗಟ್ಟಲು ವಿಶೇಷ ಅನುದಾನ ನೀಡಲಾಗಿದೆ. ಇದು ರಾಜ್ಯದ ನಾಗರಿಕರ ಸುರಕ್ಷತೆ ಮತ್ತು ಇಲಾಖೆಯ ಆಧುನೀಕರಣಕ್ಕೆ ಸಹಕಾರಿ.

ರಾಜ್ಯದಲ್ಲಿ 12 ಹೊಸ ಪೊಲೀಸ್ ಠಾಣೆಗಳ ಸ್ಥಾಪನೆ; ನಿಮ್ಮ ಜಿಲ್ಲೆಗೆ ಸಿಕ್ಕಿದ್ದೇನು? ಇಲ್ಲಿದೆ ನೋಡಿ
ಸಾಂದರ್ಭಿಕ ಚಿತ್ರ

Updated on: Mar 06, 2026 | 2:25 PM

ಬೆಂಗಳೂರು ಮಾ.6: ರಾಜ್ಯದ ಮುಖ್ಯಮಂತ್ರಿ ಅವರು ಇಂದು (ಮಾ.6) ದಾಖಲೆಯ 17ನೇ ಬಜೆಟ್​​​ ಅನ್ನು ಮಂಡಿಸಿದ್ದಾರೆ. ಹಲವು ಕ್ಷೇತ್ರಗಳಿಗೆ ಭರಪೂರ ಅನುದಾನವನ್ನು ನೀಡಿದ್ದು, ಇದೀಗ ಪೊಲೀಸ್​​​​ ಇಲಾಖೆಗೂ ಹೆಚ್ಚಿನ ಅನುದಾನು ನೀಡಿದ್ದಾರೆ. ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಕೈಗಾರಿಕಾ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು, ನಾಗರಿಕರ ಸುರಕ್ಷತೆಗಾಗಿ ರಾಜ್ಯ ಸರ್ಕಾರವು 12 ಹೊಸ ಪೊಲೀಸ್ ಠಾಣೆಗಳನ್ನು ಮಂಜೂರು ಮಾಡಿದೆ. ಇದರಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರಿ ಪೊಲೀಸ್ ಠಾಣೆಗಳು ಸೇರಿವೆ.

ಹೊಸ ಠಾಣೆಗಳಿಗೆ ಸುಸಜ್ಜಿತ ಕಟ್ಟಡ ಮತ್ತು ಆಧುನಿಕ ಉಪಕರಣಗಳನ್ನು ಒದಗಿಸಲು ಅನುದಾನ ಮೀಸಲಿಡಲಾಗಿದೆ. 12 ಪೊಲೀಸ್​​​ ಠಾಣೆಗಳಿಗೆ ಅಸ್ತು ಎಂದು ಹೇಳಿದ್ದಾರೆ. ಹೊಸ ಠಾಣೆಗಳ ಕಾರ್ಯಾಚರಣೆಗಾಗಿ ಅಗತ್ಯವಿರುವ ಪೊಲೀಸ್ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆಗೂ ಚಾಲನೆ ನೀಡಲಾಗುವುದು. ದೊಡ್ಡಬಳ್ಳಾಪುರ, ಹಿರಿಯೂರು ಮತ್ತು ಗುಂಡ್ಲುಪೇಟೆಯಂತಹ ಬೆಳೆಯುತ್ತಿರುವ ನಗರಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಸಂಚಾರಿ ಠಾಣೆಗಳಿಗೆ ಒತ್ತು ನೀಡಲಾಗಿದೆ.

ಜಿಲ್ಲೆ ಪೊಲೀಸ್ ಠಾಣೆಯ ಹೆಸರು ಮಾದರಿ
ದಕ್ಷಿಣ ಕನ್ನಡ ಮಾಣಿ ಪೊಲೀಸ್ ಠಾಣೆ ಕಾನೂನು & ಸುವ್ಯವಸ್ಥೆ
ದಕ್ಷಿಣ ಕನ್ನಡ ಸಜಿಪನಡು ಪೊಲೀಸ್ ಠಾಣೆ ಕಾನೂನು & ಸುವ್ಯವಸ್ಥೆ
ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ಸಂಚಾರಿ ಠಾಣೆ ಸಂಚಾರ (Traffic)
ಬೆಳಗಾವಿ ಯರಗಟ್ಟಿ ಪೊಲೀಸ್ ಠಾಣೆ ಕಾನೂನು & ಸುವ್ಯವಸ್ಥೆ
ಯಾದಗಿರಿ ಕಕ್ಕೇರಾ ಪೊಲೀಸ್ ಠಾಣೆ ಕಾನೂನು & ಸುವ್ಯವಸ್ಥೆ
ಚಿತ್ರದುರ್ಗ ಹಿರಿಯೂರು ಸಂಚಾರ ಪೊಲೀಸ್ ಠಾಣೆ ಸಂಚಾರ (Traffic)
ದಾವಣಗೆರೆ ಆನಗೋಡು ಪೊಲೀಸ್ ಠಾಣೆ ಕಾನೂನು & ಸುವ್ಯವಸ್ಥೆ
ಹಾವೇರಿ ತಿಳುವಳ್ಳಿ ಪೊಲೀಸ್ ಠಾಣೆ ಕಾನೂನು & ಸುವ್ಯವಸ್ಥೆ
ಮೈಸೂರು ಉದಯಗಿರಿ ದಕ್ಷಿಣ ಪೊಲೀಸ್ ಠಾಣೆ ಕಾನೂನು & ಸುವ್ಯವಸ್ಥೆ
ವಿಜಯಪುರ ಮುದ್ದೇಬಿಹಾಳ ಗ್ರಾಮಾಂತರ ಠಾಣೆ ಕಾನೂನು & ಸುವ್ಯವಸ್ಥೆ
ಕೋಲಾರ ನರಸಾಪುರ ಕೈಗಾರಿಕಾ ವಲಯ ಠಾಣೆ ಕೈಗಾರಿಕಾ ಸುರಕ್ಷತೆ
ಚಾಮರಾಜನಗರ ಗುಂಡ್ಲುಪೇಟೆ ಸಂಚಾರ ಠಾಣೆ ಸಂಚಾರ (Traffic)

ಇನ್ನು ಇದರ ಜತೆಗೆ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಶ್ರೇಣಿಯ ಒಟ್ಟು 8,000 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಈ ವರ್ಷ ಭರ್ತಿ ಮಾಡಲಾಗುವುದು. ನೇಮಕಾತಿ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ಮತ್ತು ಪಾರದರ್ಶಕವಾಗಿ ನಡೆಸಲು ‘ಖಾಯಂ ಪೊಲೀಸ್ ಮತ್ತು ಪೊಲೀಸ್ ಪೂರಕ ಸೇವೆಗಳ ನೇಮಕಾತಿ ಮಂಡಳಿ’ಯನ್ನು ಸ್ಥಾಪಿಸಲಾಗುವುದು. ಪೊಲೀಸ್ ಸಿಬ್ಬಂದಿಗಳಿಗೆ ವಸತಿ ಸೌಕರ್ಯ ಒದಗಿಸಲು 250 ಕೋಟಿ ರೂ. ವೆಚ್ಚದಲ್ಲಿ ಹೊಸ ವಸತಿಗೃಹಗಳ ನಿರ್ಮಾಣ. ಪೊಲೀಸ್ ಇಲಾಖೆಯ ಸಂವಹನ ಮತ್ತು ಫೋರೆನ್ಸಿಕ್ ಸಾಮರ್ಥ್ಯ ಹೆಚ್ಚಿಸಲು 75 ಕೋಟಿ ರೂ. ವೆಚ್ಚದಲ್ಲಿ ಹೊಸ ವಾಹನಗಳು ಮತ್ತು ಆಧುನಿಕ ಉಪಕರಣಗಳ ಖರೀದಿ ಮಾಡಲಾಗುವುದು. ಬೆಳಗಾವಿ ಸುವರ್ಣ ಸೌಧದ ಅಧಿವೇಶನ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುವ 1,000 ಸಿಬ್ಬಂದಿಗಳ ವಾಸ್ತವ್ಯಕ್ಕಾಗಿ 20 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಖಾಯಂ ಬ್ಯಾರಕ್‌ಗಳ ನಿರ್ಮಾಣ ಕೂಡ ಮಾಡಲಾಗುವುದು.

ಇದನ್ನೂ ಓದಿ: ಬಜೆಟ್​​​ನಲ್ಲಿ ಅಲ್ಪಸಂಖ್ಯಾತರಿಗೆ ಭರಪೂರ ಕೊಡುಗೆ ನೀಡಿದ ಸಿದ್ದರಾಮಯ್ಯ: ಮುಸ್ಲಿಂ ಮಹಿಳೆಯರಿಗೆ ಭರ್ಜರಿ ಗಿಫ್ಟ್

ಅಗ್ನಿಶಾಮಕ ದಳದ ಸಿಬ್ಬಂದಿಗಳ ಆಹಾರ ಭತ್ಯೆಯನ್ನು 150 ರೂ.ನಿಂದ 300 ರೂ.ಗೆ ದ್ವಿಗುಣಗೊಳಿಸಲಾಗಿದೆ. ಕಾರಾಗೃಹಗಳಲ್ಲಿ ಮೊಬೈಲ್ ಬಳಕೆ ಮತ್ತು ಮಾದಕ ದ್ರವ್ಯ ತಡೆಗಟ್ಟಲು 20 ಕೋಟಿ ರೂ. ವೆಚ್ಚದಲ್ಲಿ AI ಆಧಾರಿತ ತಪಾಸಣಾ ವ್ಯವಸ್ಥೆ ಮತ್ತು ಬಾಡಿ ವೋರ್ನ್ ಕ್ಯಾಮೆರಾಗಳ ಅಳವಡಿಕೆ. ಸೈಬರ್ ಅಪರಾಧಗಳನ್ನು ತಡೆಗಟ್ಟಲು ಹೊಸ ಸಾಫ್ಟ್‌ವೇರ್ ಮತ್ತು ತರಬೇತಿಗಾಗಿ ವಿಶೇಷ ಅನುದಾನ ಕೂಡ ನೀಡಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Published On - 2:24 pm, Fri, 6 March 26

Follow Us