ನೀತಿ ಆಯೋಗದ ಮುಖ್ಯಸ್ಥ ಪರಮೇಶ್ವರನ್ ರನ್ನು ಸನ್ಮಾನಿಸಿದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಸಂದರ್ಭವೇನು?

ಕರ್ನಾಟಕ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಇಂದು ಸಂಜೆ ಬೆಂಗಳೂರಿನಲ್ಲಿ ರಾಯಚೂರು ಮತ್ತು ಯಾದಗಿರಿಯ ಮಹತ್ವಾಕಾಂಕ್ಷೆಯ ಜಿಲ್ಲೆಗಳಿಗೆ ಭೇಟಿ ನೀಡಿದ್ದ ನೀತಿ ಆಯೋಗದ ಪರಮೇಶ್ವರನ್ ಅವರನ್ನು ಸನ್ಮಾನಿಸಿದರು.

ನೀತಿ ಆಯೋಗದ ಮುಖ್ಯಸ್ಥ ಪರಮೇಶ್ವರನ್ ರನ್ನು  ಸನ್ಮಾನಿಸಿದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಸಂದರ್ಭವೇನು?
ನೀತಿ ಆಯೋಗದ ಮುಖ್ಯಸ್ಥ ಪರಮೇಶ್ವರನ್ ರನ್ನು ಸನ್ಮಾನಿಸಿದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಸಂದರ್ಭವೇನು?
Edited By:

Updated on: Jul 16, 2022 | 7:16 PM

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ (Vandita Sharma) ಅವರು ಇಂದು ಸಂಜೆ ಬೆಂಗಳೂರಿನಲ್ಲಿ ರಾಯಚೂರು ಮತ್ತು ಯಾದಗಿರಿಯ ಮಹತ್ವಾಕಾಂಕ್ಷೆಯ ಜಿಲ್ಲೆಗಳಿಗೆ ಭೇಟಿ ನೀಡಿದ್ದ ನೀತಿ (NITI) ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ್ವರನ್ ಐಯ್ಯರ್ (Parameswaran Iyer) ಅವರನ್ನು ಸನ್ಮಾನಿಸಿದರು.

ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ್ವರನ್ ಐಯ್ಯರ್ ಈ ಸಂದರ್ಭದಲ್ಲಿ ಎರಡು ಪುಸ್ತಗಳನ್ನು ಬಿಡುಗಡೆ ಮಾಡಿದರು. ಆಂಗ್ಲ ಆವೃತ್ತಿಯಲ್ಲಿ GLOBAL TO LOCAL BE VOCAL, Leave No one behind ಮತ್ತು ಕನ್ನಡದಲ್ಲಿ ಜಾಗತೀಕತೆಯಿಂದ ಸ್ಥಳೀಯತೆಯ ಕಡೆಗೆ ಹೆಜ್ಜೆ ಯಾರನ್ನೂ ಹಿಂದಕ್ಕೆ ಬಿಡದಿರೋಣ ಕೃತಿಯನ್ನು ಬಿಡುಗಡೆ ಮಾಡಿದರು. ಬೆಂಗಳೂರಿನಲ್ಲಿ ಯೋಜನಾ ಇಲಾಖೆ ಈ ಪುಸ್ತಕಗಳನ್ನು ಹೊರತಂದಿದೆ.

ಬೆಂಗಳೂರಿನಲ್ಲಿ ಯೋಜನಾ ಇಲಾಖೆ ಈ ಪುಸ್ತಕಗಳನ್ನು ಹೊರತಂದಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತ ಐಎಸ್ಎನ್ ಪ್ರಸಾದ್, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಮತ್ತು ಯೋಜನಾ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.