ತಮಿಳುನಾಡು ಶನೇಶ್ವರ ದೇವಸ್ಥಾನಕ್ಕೆ ಡಿಸಿಎಂ ಅಶ್ವತ್ಥ ನಾರಾಯಣ, ಚಾಲೆಂಜಿಗ್​ ಸ್ಟಾರ್ ದರ್ಶನ್​ ಭೇಟಿ

| Updated By: ರಾಜೇಶ್ ದುಗ್ಗುಮನೆ

Updated on: Jan 02, 2021 | 10:00 PM

ಕರ್ನಾಟಕದ ಉಪಮುಖ್ಯಮಂತ್ರಿ ಡಾ.ಸಿ.ಎನ್​.ಅಶ್ವತ್ಥನಾರಾಯಣ, ಚಾಲೆಂಜಿಗ್​ ಸ್ಟಾರ್​ ದರ್ಶನ್​ ತಮಿಳುನಾಡಿನ ತಿರುನಲ್ಲೂರ್​ ಶನೇಶ್ವರ ದೇಗುಲಕ್ಕೆ ಇಂದು ಭೇಟಿ ನೀಡಿ ಪೂಜೆ ಸಲ್ಲಿಸಿದರು.

ತಮಿಳುನಾಡು ಶನೇಶ್ವರ ದೇವಸ್ಥಾನಕ್ಕೆ ಡಿಸಿಎಂ ಅಶ್ವತ್ಥ ನಾರಾಯಣ, ಚಾಲೆಂಜಿಗ್​ ಸ್ಟಾರ್ ದರ್ಶನ್​ ಭೇಟಿ
ತಿರುನಲ್ಲೂರ್​ ಶನಿ ದೇಗುಲ
Follow us on

ಚೆನ್ನೈ: ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಡಾ.ಸಿ.ಎನ್​.ಅಶ್ವತ್ಥನಾರಾಯಣ ತಮಿಳುನಾಡಿನ ತಿರುನಲ್ಲೂರ್​ ಶನೇಶ್ವರ ದೇಗುಲಕ್ಕೆ ಇಂದು ಭೇಟಿ ನೀಡಿ ಪೂಜೆ ಸಲ್ಲಿಸಿದರು. ಶನಿ ದೇವರ ಆರಾಧನೆಗಾಗಿ ತೆರಳಿದ್ದ ಅಶ್ವತ್ಥನಾರಾಯಣ ಅವರನ್ನು ದೇಗುಲದ ಸಂಪ್ರದಾಯದಂತೆ ಬರಮಾಡಿಕೊಳ್ಳಲಾಯಿತು. ಅವರಿಗೆ ಕಾರೈಕಲ್​ ಜಿಲ್ಲೆಯ ಅಧಿಕಾರಿಗಳು ಸಾಥ್​ ನೀಡಿದರು.

ಚಾಲೆಂಜಿಗ್​ ಸ್ಟಾರ್​ ದರ್ಶನ್​ ಕೂಡ ಇಂದು ತಿರುನಲ್ಲೂರ್ ದೇಗುಲಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಶನಿ ದೇವರ ಪ್ರಸಿದ್ಧ ದೇಗುಲವಾಗಿರುವ ತಿರುನಲ್ಲೂರಿಗೆ ದೇಶದೆಲ್ಲೆಡೆಯಿಂದ ಭಕ್ತಾದಿಗಳು ಆಗಮಿಸುತ್ತಾರೆ. ಈ ಬಾರಿ ಆನ್ಲೈನ್​ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಿದವರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.

ಯಾರೂ ಇಲ್ಲದ ವೇಳೆ ಡಾ.ವಿಷ್ಣು ಪ್ರತಿಮೆ ಧ್ವಂಸಗೊಳಿಸಿದ್ದು ನಾಚಿಕೆಯ ಸಂಗತಿ -ದರ್ಶನ್​ ಆಕ್ರೋಶ