Karnataka Budget 2021 ಮಾರ್ಚ್​ 4ರಿಂದ ಬಜೆಟ್​ ಅಧಿವೇಶನ ಆರಂಭ; ಮಾರ್ಚ್​​ 8ರಂದು ಕರ್ನಾಟಕ ಬಜೆಟ್​ ಮಂಡನೆ

|

Updated on: Feb 18, 2021 | 10:54 PM

ಕರ್ನಾಟಕ ಬಜೆಟ್​ 2021: ಮಾರ್ಚ್​​ 8ರಂದು ರಾಜ್ಯ ಬಜೆಟ್​ ಮಂಡನೆ ಆಗಲಿದೆ. ಮಾರ್ಚ್​ 4ರಿಂದ ಬಜೆಟ್​ ಅಧಿವೇಶನ ಆರಂಭವಾಗಲಿದೆ. ಸಂಪುಟ ಸಭೆಯಲ್ಲಿ ಬಜೆಟ್ ಮಂಡನೆ​ ದಿನಾಂಕ ನಿಗದಿ ಮಾಡಲಾಯಿತು ಎಂದು ಸಂಪುಟ ಸಭೆ ಬಳಿಕ ಸಚಿವ ಬಸವರಾಜ​ ಬೊಮ್ಮಾಯಿ ಹೇಳಿದ್ದಾರೆ.

Karnataka Budget 2021 ಮಾರ್ಚ್​ 4ರಿಂದ ಬಜೆಟ್​ ಅಧಿವೇಶನ ಆರಂಭ; ಮಾರ್ಚ್​​ 8ರಂದು ಕರ್ನಾಟಕ ಬಜೆಟ್​ ಮಂಡನೆ
ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ಮಾರ್ಚ್​​ 8ರಂದು ರಾಜ್ಯ ಬಜೆಟ್​ ಮಂಡನೆ ಆಗಲಿದೆ. ಮಾರ್ಚ್​ 4ರಿಂದ ಬಜೆಟ್​ ಅಧಿವೇಶನ ಆರಂಭವಾಗಲಿದೆ. ಸಂಪುಟ ಸಭೆಯಲ್ಲಿ ಬಜೆಟ್ ಮಂಡನೆ​ ದಿನಾಂಕ ನಿಗದಿ ಮಾಡಲಾಯಿತು ಎಂದು ಸಂಪುಟ ಸಭೆ ಬಳಿಕ ಸಚಿವ ಬಸವರಾಜ​ ಬೊಮ್ಮಾಯಿ ಹೇಳಿದ್ದಾರೆ. Karnataka Budget 2021

ಚಾಮರಾಜನಗರದಲ್ಲಿ ಕೃಷಿ ಕಾಲೇಜು ಆರಂಭಕ್ಕೆ ಅನುದಾನ
ಇನ್ನು, ಇದೇ ವೇಳೆ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಬಗ್ಗೆ ಮಾತನಾಡಿದ ಸಚಿವ ಚಾಮರಾಜನಗರದಲ್ಲಿ ಕೃಷಿ ಕಾಲೇಜು ಆರಂಭಕ್ಕೆ ಅನುದಾನ ನೀಡಲಾಗಿದೆ. ಕೃಷಿ ಕಾಲೇಜು ಆರಂಭಿಸಲು 35.92 ಕೋಟಿ ಅನುದಾನ ನೀಡಲಾಗಿದೆ ಎಂದು ಸಂಪುಟ ಸಭೆ ಬಳಿಕ ಬಸವರಾಜ ಬೊಮ್ಮಾಯಿ ಹೇಳಿದರು.

ಕೈಗಾರಿಕಾ ಅಭಿವೃದ್ಧಿಗೆ ಭೂಮಿ ನೀಡುವವರಿಗೆ ಪರಿಹಾರ
ಕೈಗಾರಿಕಾ ಅಭಿವೃದ್ಧಿಗೆ ಭೂಮಿ ನೀಡುವವರಿಗೆ ಪರಿಹಾರ ನೀಡಲಾಗುವುದು. ಪರಿಹಾರವಾಗಿ ಶೇ.45ರಷ್ಟು ಭೂಮಿ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಈ ಹಿಂದೆ ಶೇ.40ರಷ್ಟು ಭೂಮಿ ಪರಿಹಾರವಾಗಿ ನೀಡುತ್ತಿದ್ದರು ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

‘ಮೀಸಲಾತಿ ಕುರಿತು.. ಮುಂದಿನ ಸಂಪುಟ ಸಭೆಯಲ್ಲಿ ಸಿಎಂ ಚರ್ಚೆ ಮಾಡುತ್ತಾರೆ’
ಮೀಸಲಾತಿ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಆಗಿದೆ ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಈಗಿನ ಸ್ಥಿತಿಗತಿ, ಬೇರೆ ಸಮುದಾಯದವರು ಸಲ್ಲಿಸಿದ ಬೇಡಿಕೆ ಮತ್ತು ಮನವಿ ಕುರಿತು ಇಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ. ಈ ಕುರಿತು ಎಲ್ಲಾ ಸಚಿವರ ಸಲಹೆಗಳನ್ನೂ ಸಿಎಂ ಯಡಿಯೂರಪ್ಪ ಆಲಿಸಿದ್ದಾರೆ. ಈ ಸಂಬಂಧ ಕಾನೂನು ತಜ್ಞರು, ಆಯೋಗದ ವರದಿಗಳು ಹಾಗೂ ಕೋರ್ಟ್​​ ತೀರ್ಪು ಇತ್ಯಾದಿ ಬಗ್ಗೆ ತಜ್ಞರ ಜೊತೆಗೆ ಚರ್ಚಿಸಿ ಮುಂದಿನ ಸಂಪುಟ ಸಭೆಯಲ್ಲಿ ಸಿಎಂ ಚರ್ಚೆ ಮಾಡುತ್ತಾರೆ ಎಂದು ಸಂಪುಟ ಸಭೆ ಬಳಿಕ ಬಸವರಾಜ ಬೊಮ್ಮಾಯಿ ಹೇಳಿದರು.

ಕುರುಬ ಸಮುದಾಯಕ್ಕೆ ST ಮೀಸಲಾತಿಗೆ ಹೋರಾಟದ ಬಗ್ಗೆ ಸಚಿವ ಶ್ರೀರಾಮುಲು ಪರಿಷತ್​ನಲ್ಲಿ ಉತ್ತರಿಸಿದ್ದಾರೆ. ಕುರುಬ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ಆಗ್ತಿದೆ. 5-6 ಜಿಲ್ಲೆಗಳಲ್ಲಿ ಕುಲಶಾಸ್ತ್ರೀಯ ಅಧ್ಯಯನ ನಡೆಯುತ್ತಿದೆ. ವರದಿ ಬಂದ ಬಳಿಕ ಕ್ರಮ ಎಂದು ರಾಮುಲು ಹೇಳಿದ್ದಾರೆ ಎಂದು ಸಭೆ ಬಳಿಕ ಬಸವರಾಜ ಬೊಮ್ಮಾಯಿ ಹೇಳಿದರು.

Published On - 8:04 pm, Thu, 18 February 21