AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ.. ರಾಜ್ಯದಲ್ಲಿ ಯಾವ ವಯಸ್ಸಿನ ಜನರು ಸೋಂಕಿಗೆ ಹೆಚ್ಚು ಬಲಿಯಾಗಿದ್ದಾರೆ..?

ಬಹಳಷ್ಟು ವೃದ್ಧರು ಸೋಂಕಿಗೆ ಒಳಗಾಗಿದ್ದರು, ಇದಕ್ಕೆ ಬಲಿಯಾಗಿದವರ ಸಂಖ್ಯೆ ತೀರಾ ಕಡಿಮೆಯಿದೆ. ರಾಜ್ಯದ ಒಟ್ಟು 11.738 ಮೃತಪಟ್ಟವರ ಸಂಖ್ಯೆಯಲ್ಲಿ 90 ರಿಂದ 99 ವರ್ಷ ವಯಸ್ಸಿನ ವೃದ್ಧರು ಕೇವಲ 148 ಹಾಗೂ 100ಕ್ಕಿಂತ ಹೆಚ್ಚು ವಯಸ್ಸಿನ ವೃದ್ಧರು ಕೇವಲ 3 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ಕೊರೊನಾ.. ರಾಜ್ಯದಲ್ಲಿ ಯಾವ ವಯಸ್ಸಿನ ಜನರು ಸೋಂಕಿಗೆ ಹೆಚ್ಚು ಬಲಿಯಾಗಿದ್ದಾರೆ..?
ಪ್ರಾತಿನಿಧಿಕ ಚಿತ್ರ
sandhya thejappa
| Edited By: |

Updated on: Nov 28, 2020 | 3:55 PM

Share

ಬೆಂಗಳೂರು: ಕೊರೊನಾ ಎಂಬ ರಕ್ಕಸ ಸೋಂಕು ನಿರ್ದಿಷ್ಟ ಜನರಿಗೆ ಸೀಮಿತವಾಗಿಲ್ಲ. ಇದು ಯಾರಿಗಾದರೂ, ಹೇಗಾದರೂ ಬರಬಹುದು.  ಸಮಾಧಾನಕರ ಸಂಗತಿಯೆಂದ್ರೆ ಭಾರತದಲ್ಲಿ ಈ ಕೊರೊನಾ ಕ್ರಿಮಿಗೆ ಬಲಿಯಾದವರ ತುಂಬಾ ಕಡಿಮೆಯೇ ಅನ್ನಬಹುದು. ರಾಜ್ಯದ ಒಟ್ಟು 11.738 ಮೃತಪಟ್ಟವರ ಸಂಖ್ಯೆಯಲ್ಲಿ 90 ರಿಂದ 99 ವರ್ಷ ವಯಸ್ಸಿನ ವೃದ್ಧರು ಕೇವಲ 148. ಇನ್ನು 100ಕ್ಕಿಂತ ಹೆಚ್ಚು ವಯಸ್ಸಿನ ವೃದ್ಧರು ಕೇವಲ 3 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಕರ್ನಾಟಕ ರಾಜ್ಯ ಕೊರೊನಾ ಸಕ್ರಿಯ ಪ್ರಕರಣಗಳ ವಿಶ್ಲೇಷಣಾ ವರದಿಯಿಂದ ಸ್ಪಷ್ಟವಾಗಿದೆ. (Covid-19 positive cases analysis of Karnataka state)

ರಾಜ್ಯದ ಉತ್ತರ ಕರ್ನಾಟಕ ಹಾಗು ಹೈದರಾಬಾದ್ ಕರ್ನಾಟಕದ ಕಡೆಗಳಲ್ಲಿ ಆಸ್ಪತ್ರೆ, ವೈದ್ಯರ ಕೊರತೆಯಿದ್ದು, ಕೊರೊನಾ ಸೋಂಕಿತ ಸಂಖ್ಯೆಯು ಕಡಿಮೆಯಿದೆ ಎಂದು ವರದಿಯಿಂದ ತಿಳಿದಿದೆ.

ಕೊರೊನಾಗೆ ಬಲಿಯಾದ ವಿವಿಧ ವಯಸ್ಸಿನವರು:

9 ವರ್ಷದ ಒಳಗಿನ 26 ಮಕ್ಕಳು, 10ರಿಂದ 19 ವಯಸ್ಸಿನ 41, 20ರಿಂದ 29 ವಯಸ್ಸಿನ 217, 30ರಿಂದ 39 ವಯಸ್ಸಿನ 563, 40ರಿಂದ 49 ವಯಸ್ಸಿನ 1394, 50ರಿಂದ 59 ವಯಸ್ಸಿನ 2709, 60ರಿಂದ 69 ವಯಸ್ಸಿನ 3,540, 70ರಿಂದ 79 ವಯಸ್ಸಿನ 2,487, 80ರಿಂದ 89 ವಯಸ್ಸಿನ 1,007 ಜನರು ಮಹಾಮಾರಿ ಸೋಂಕಿಗೆ ಬಲಿಯಾಗಿದ್ದಾರೆ.

ಕೊರೊನಾ ಸೋಂಕಿನಲ್ಲಿ ಲಿಂಗ ಬೇಧ!

ರಾಜ್ಯದಲ್ಲಿ ಒಟ್ಟು 8,81,086ರಷ್ಟು ಸಕ್ರಿಯ ಪ್ರಕರಣಗಳಲ್ಲಿ 5,42,371ರಷ್ಟು ಪುರುಷರು, 3,22,061ರಷ್ಟು ಮಹಿಳೆಯರು ಸೋಂಕಿಗೆ ಒಳಗಾಗಿದ್ದಾರೆ. ಈಗಾಗಲೇ 5,22,289ರಷ್ಟು ಪುರುಷರು ಹಾಗೂ 3,22,061ರಷ್ಟು ಮಹಿಳೆಯರು ಗುಣಮುಖರಾಗಿದ್ದಾರೆ. 8,418ರಷ್ಟು ಪುರುಷರು ಸೋಂಕಿಗೆ ಬಲಿಯಾಗಿದ್ದರೆ, 3,320ರಷ್ಟು ಮಹಿಳೆಯರು ಮೃತಪಟ್ಟಿದ್ದಾರೆ. ಕೊರೊನಾ ಪ್ರಕರಣಗಳಲ್ಲಿ ಗಮನಿಸಿದಾಗ ಮಹಿಳೆಯರಿಗಿಂತ ಹೆಚ್ಚು ಪುರುಷರು ಸೋಂಕಿಗೆ ಒಳಪಟ್ಟಿದ್ದಾರೆ ಎಂದು ಅಂಕಿ ಅಂಶಗಳ ಮೂಲಕ ತಿಳಿದಿದೆ.

ಇದನ್ನೂ ಓದಿ..

ದೇಶದಲ್ಲಿ ಕಡಿಮೆಯಾಗದ ಕೊರೊನಾ ಅಟ್ಟಹಾಸ.. ವಿವಿಧ ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ಎಷ್ಟಿದೆ..?

ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್