AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೇರಳ ಪೊಲೀಸರಿಂದ ಕೇಸ್‌ ದಾಖಲು

ತಿರುವನಂತಪುರಂ: ಮಲಪ್ಪುರಂ ಜಿಲ್ಲೆ ಕುಟ್ಟಿಪುರಂನಲ್ಲಿ ಘಟನೆ ಸಂಬಂಧ ಟ್ವೀಟ್ ಮಾಡಿದ್ದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೇರಳ ಪೊಲೀಸರಿಂದ ಕೇಸ್‌ ದಾಖಲಾಗಿದೆ. ಶೋಭಾ ಮಾಡಿದ್ದ ಟ್ವೀಟ್‌ ವಿಚಾರವಾಗಿ ಮೊಕದ್ದಮೆ ದಾಖಲು ಮಾಡಿದ್ದಾರೆ. ಸಿಎಎ ಬೆಂಬಲ ನೀಡಿದ್ದ ಮಲಪ್ಪುರಂನ ಹಿಂದೂ ಕುಟುಂಬಗಳಿಗೆ ಕೇರಳ ಸರ್ಕಾರ ನೀರು ಪೂರೈಕೆಗೆ ನಿರಾಕರಿಸಿದೆ. ಕೇರಳ ಮತ್ತೊಂದು ಕಾಶ್ಮೀರ ಆಗುವತ್ತಾ ಹೆಜ್ಜೆ ಇಡುತ್ತಿದೆ ಎಂದು ಜನವರಿ 22ರಂದು ಶೋಭಾ ಕರಂದ್ಲಾಜೆ ಟ್ವೀಟ್‌ ಮಾಡಿದ್ದರು. ಈ ವಿಚಾರವಾಗಿ ಸಂಸದೆ ವಿರುದ್ಧ ದೂರು ದಾಖಲಾಗಿದೆ. ಸುಪ್ರೀಂಕೋರ್ಟ್‌ನ […]

ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೇರಳ ಪೊಲೀಸರಿಂದ ಕೇಸ್‌ ದಾಖಲು
ಸಾಧು ಶ್ರೀನಾಥ್​
|

Updated on: Jan 24, 2020 | 9:19 AM

Share

ತಿರುವನಂತಪುರಂ: ಮಲಪ್ಪುರಂ ಜಿಲ್ಲೆ ಕುಟ್ಟಿಪುರಂನಲ್ಲಿ ಘಟನೆ ಸಂಬಂಧ ಟ್ವೀಟ್ ಮಾಡಿದ್ದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೇರಳ ಪೊಲೀಸರಿಂದ ಕೇಸ್‌ ದಾಖಲಾಗಿದೆ. ಶೋಭಾ ಮಾಡಿದ್ದ ಟ್ವೀಟ್‌ ವಿಚಾರವಾಗಿ ಮೊಕದ್ದಮೆ ದಾಖಲು ಮಾಡಿದ್ದಾರೆ.

ಸಿಎಎ ಬೆಂಬಲ ನೀಡಿದ್ದ ಮಲಪ್ಪುರಂನ ಹಿಂದೂ ಕುಟುಂಬಗಳಿಗೆ ಕೇರಳ ಸರ್ಕಾರ ನೀರು ಪೂರೈಕೆಗೆ ನಿರಾಕರಿಸಿದೆ. ಕೇರಳ ಮತ್ತೊಂದು ಕಾಶ್ಮೀರ ಆಗುವತ್ತಾ ಹೆಜ್ಜೆ ಇಡುತ್ತಿದೆ ಎಂದು ಜನವರಿ 22ರಂದು ಶೋಭಾ ಕರಂದ್ಲಾಜೆ ಟ್ವೀಟ್‌ ಮಾಡಿದ್ದರು. ಈ ವಿಚಾರವಾಗಿ ಸಂಸದೆ ವಿರುದ್ಧ ದೂರು ದಾಖಲಾಗಿದೆ.

ಸುಪ್ರೀಂಕೋರ್ಟ್‌ನ ವಕೀಲ, ಮಲಪ್ಪುರಂ ನಿವಾಸಿ ಸುಭಾಷ್ ಚಂದ್ರನ್ ನೀಡಿದ್ದ ದೂರು ಆಧರಿಸಿ, ಧರ್ಮ ಆಧಾರಿತವಾಗಿ 2 ಗುಂಪುಗಳ ಮಧ್ಯೆ ದ್ವೇಷಕ್ಕೆ ಪ್ರಚೋದನೆ ನೀಡಿರುವ ಆರೋಪದಡಿ ಕುಟ್ಟಿಪುರಂ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲು ಮಾಡಲಾಗಿದೆ.