AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kushalnagar News: ಬಾಡಿದ ಸುವಿಶಾಲ ತಾವರೆ ಕೆರೆ: ಹೂಳೆತ್ತಲು ಮುಂದಾದ ಸ್ಥಳೀಯಾಡಳಿತ

3.8 ಎಕರೆ ವಿಸ್ತಾರದ ಈ ಕೆರೆ ಈಗ ಅರ್ಧಕ್ಕರ್ದ ಮರೆಯಾಗಿದೆ! ಭೂಗಳ್ಳರು ಮಣ್ಣು ಹಾಕಿ ಲೇ ಔಟ್​ಗಳನ್ನ ಮಾಡಿದ್ದಾರೆ. ಇನ್ನು ಹೀಗೆಯೇ ಬಿಟ್ಟರೆ ಇರುವ ಕೆರೆಯನ್ನೂ ಸಹ ನುಂಗಿಬಿಡುವ ಆತಂಕವಿತ್ತು. ಹಾಗಾಗಿ ಇಲ್ಲಿನ ಸ್ಥಳೀಯರು ಜಿಲ್ಲಾಡಳದ ಮೇಲೆ ನಿರಂತರ ಒತ್ತಡ ಹಾಕಿ ಕೆರೆಗೆ ಕಾಯಕಲ್ಪ ಮಾಡಿಸಲು ತೀರ್ಮಾನಿಸಿದ್ದಾರೆ.

Kushalnagar News: ಬಾಡಿದ ಸುವಿಶಾಲ ತಾವರೆ ಕೆರೆ: ಹೂಳೆತ್ತಲು ಮುಂದಾದ ಸ್ಥಳೀಯಾಡಳಿತ
ಬಾಡಿದ ಸುವಿಶಾಲ ತಾವರೆ ಕೆರೆ
Gopal AS
| Updated By: ಸಾಧು ಶ್ರೀನಾಥ್​|

Updated on: May 21, 2024 | 9:41 AM

Share

ಸಾಮಾನ್ಯವಾಗಿ ಕೆರೆಗಳು ಆಯಾ ಊರಿನ ಜೀವನಾಡಿಯಾಗಿರುತ್ತವೆ. ಆದ್ದರಿಂದಲೇ ಪುರಾತನ ಕಾಲದಿಂದಲೂ ಕೆರೆಗಳನ್ನ ಉಳಿಸಿ ಬೆಳೆಸುತ್ತಿದ್ದರು. ಆದ್ರೆ ಆಧುನಿಕ ಜಗತ್ತಿನಲ್ಲಿ ಮನುಷ್ಯನ ದುರಾಸೆಯಿಂದ ಕೆರೆಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಕೊಡಗಿನ (Kodagu) ಕುಶಾಲನಗರದ ಏಕೈಕ ಬೃಹತ್ ಕೆರೆ ಕೂಡ ಅವಸಾನದ ಅಂಚಿನಲ್ಲಿದೆ. ಆದ್ರೆ ಇದೀಗ ಸ್ಥಳೀಯಾಡಳಿತ ಈ ಕೆರೆಯನ್ನ ಅಭಿವೃದ್ಧಿ ಪಡಿಸಲು ಮುಂದಾಗಿದೆ. ನೋಡಲು ವಿಶಾಲವಾದ ಸಮೃದ್ಧ ಕೆರೆ.. ಬರಗಾಲದಲ್ಲಿಯೂ ಈ ಕೆರೆ ಒಡಲಿನಲ್ಲಿ ನೀರು ಸಂಗ್ರಹಿಸಿಟ್ಟುಕೊಂಡಿತ್ತು. ಇದು ಕೊಡಗು ಜಿಲ್ಲೆ ಕುಶಾಲನಗರ (Kushalnagar) ಪಟ್ಟಣದ ಏಕೈಕ ಬೃಹತ್ ಕೆರೆ ತಾವರೆ ಕೆರೆ (Tavarekere desiltation).

ಒಂದು ಕಾಲದಲ್ಲಿ ಇದು ತನ್ನ ಹೆಸರಿಗೆ ತಕ್ಕಂತೆ ಒಡಲು ತುಂಬಾ ಬರೇ ತಾವರೆ ಹೂಗಳನ್ನೇ ಹೊಂದಿತ್ತು. ಸುಮಾರು 3.8 ಎಕರೆ ವಿಸ್ತಾರವಿರೋ ಈ ಕೆರೆ ಇಡೀ ನಾಡಿಗೆ ಜೀವನಾಡಿಯಾಗಿತ್ತು. ಕುಡಿಯಲು ಮಾತ್ರವಲ್ಲದೆ ಕೃಷಿ ಹಾಗೂ ಜನ-ಜಾನುವಾರುಗಳು ಕೂಡ ಈ ಕೆರೆಯ ನೀರನ್ನೇ ಬಳಸುತ್ತಿದ್ದವು. ಆದ್ರೆ ಯಾವಾಗ ಅಭಿವೃದ್ಧಿ ಎಂಬ ಪೆಂಡಭೂತ ಇಲ್ಲಿಗೆ ವಕ್ಕರಿಸಿತೋ ಈ ಕೆರೆಯು ಅವಸಾನದ ಅಂಚಿಗೆ ಬಂದು ತಲುಪಿದೆ.

3.8 ಎಕರೆ ವಿಸ್ತಾರದ ಈ ಕೆರೆ ಈಗ ಅರ್ಧಕ್ಕರ್ದ ಮರೆಯಾಗಿದೆ! ಭೂಗಳ್ಳರು ಮಣ್ಣು ಹಾಕಿ ಲೇ ಔಟ್​ಗಳನ್ನ ಮಾಡಿದ್ದಾರೆ. ಇನ್ನು ಹೀಗೆಯೇ ಬಿಟ್ಟರೆ ಇರುವ ಕೆರೆಯನ್ನೂ ಸಹ ನುಂಗಿಬಿಡುವ ಆತಂಕವಿತ್ತು. ಹಾಗಾಗಿ ಇಲ್ಲಿನ ಸ್ಥಳೀಯರು ಜಿಲ್ಲಾಡಳದ ಮೇಲೆ ನಿರಂತರ ಒತ್ತಡ ಹಾಕಿ ಕೆರೆಗೆ ಕಾಯಕಲ್ಪ ಮಾಡಿಸಲು ತೀರ್ಮಾನಿಸಿದ್ದಾರೆ. ಸ್ಥಳೀಯ ಪಟ್ಟಣ ಪಂಚಾಯಿತಿ ಹಾಗೂ ಜಿಲ್ಲಾಡಳಿತವು ಕೆರೆಯ ಹೂಳೆತ್ತಲು ಕಾರ್ಯ ಯೋಜನೆ ರೂಪಿಸಿದೆ.

Also Read: 70 ವರ್ಷಗಳಲ್ಲಿ ಮೊದಲ ಬಾರಿಗೆ ಬತ್ತಿ ಹೋಗಿದ್ದ ಕಾವೇರಿ ನದಿ ಮತ್ತೆ ಗತವೈಭವಕ್ಕೆ ಮರಳುತ್ತಿದೆ! ಇಲ್ಲಿದೆ ಚಿತ್ರಣ

ಇನ್ನು ಈ ಕೆರೆಯ ಬರೇ ಹೂಳೆತ್ತಿದರೆ ಸಾಲದು ಇದರ ಗತವೈಭವ ಮರಳಬೇಕಾದ್ರೆ ಕೆರೆಯ ಒತ್ತುವರಿಯನ್ನೂ ತೆರವು ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಸುತ್ತಮುತ್ತಲಿನ ಪ್ರದೇಶಗಳ ಕೊಳಚೆ ನೀರು ಕೂಡ ನೇರವಾಗಿ ಕೆರೆ ಒಡಲು ಸೇರುತ್ತಿದೆ. ಹಾಗಾಗಿ ಜಲಚರಗಳೂ ಇಲ್ಲಿಲ್ಲ. ಈ ಸಮಸ್ಯೆಗಳ ಸಮ್ಮುಖದಲ್ಲಿ ಕೆರೆಯ ಹೂಳೆತ್ತುವುದರ ಜೊತೆಗೆ ಕೊಳಚೆ ನೀರು ಸೇರದಂತೆ ತಡೆಯುವುದು, ಒತ್ತುವರಿದಾರರನ್ನು ತೆರವುಗೊಳಿಸುವುದು ಮಾಡುವ ಅಗತ್ಯ ಇದೆ. ಒಟ್ಟಾರೆ ತಡವಾಗಿಯಾದ್ರೂ ತಾವರೆಕೆರೆಯಲ್ಲಿ ಹೂಳೆತ್ತಿ ಸ್ವಚ್ಛಗೊಳಿಸಲು ಸ್ಥಳೀಯಾಡಳಿತ ಮುಂದಾಗಿರುವುದು ಪ್ರಶಂಸನೀಯ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ