AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತನಿಗೆ ಹುಟ್ಟಿದ್ರೆ ಈ ರೀತಿ ಮಸೂದೆ ತರುತ್ತಿರಲಿಲ್ಲ: ಕೋಡಿಹಳ್ಳಿ ಚಂದ್ರಶೇಖರ್ ತೀಕ್ಷ್ಣ ನುಡಿ

ಬೆಂಗಳೂರು: ಪ್ರಧಾನಿ ಮೋದಿಯವರು ನಾನು ರೈತ, ರೈತನ ಮಗ ಅಂತಾ ಹೇಳ್ತಾರೆ.  ರೈತರ ಪರ ಅಂತಾರೆ. ಆದ್ರೆ  ಕೊರೋನಾ ಸಂದರ್ಭದಲ್ಲಿ ಈ ತಿದ್ದುಪಡಿ ಬೇಕಿತ್ತಾ? ಇದು ರೈತರಿಗೆ ವಿರುದ್ದವಾದ ಕೆಲಸ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಕಿಡಿಕಾರಿದ್ದಾರೆ. ರೈತನಿಗೆ ಹುಟ್ಟಿದ್ರೆ ಈ ರೀತಿ ಮಸೂದೆಯನ್ನಾ ಜಾರಿಗೆ ತರುತ್ತಿರಲಿಲ್ಲ. ಅಡ್ಡ ಹುಟ್ಟಿದವರು ಮಾತ್ರ ಈ ರೀತಿ ಕೆಲಸ ಮಾಡೋದು ಎಂದೂ ಸರ್ಕಾರದ ವಿರುದ್ದ ಕೋಡಿಹಳ್ಳಿ ಚಂದ್ರಶೇಖರ್ ತೀಕ್ಷ್ಣ ನುಡಿಗಳನ್ನಾಡಿದ್ದಾರೆ. ಇಂದು ರಾಜಧಾನಿ ಬೆಂಗಳೂರಿನಲ್ಲಿ  ಭೂ […]

ರೈತನಿಗೆ ಹುಟ್ಟಿದ್ರೆ ಈ ರೀತಿ ಮಸೂದೆ ತರುತ್ತಿರಲಿಲ್ಲ:  ಕೋಡಿಹಳ್ಳಿ ಚಂದ್ರಶೇಖರ್ ತೀಕ್ಷ್ಣ ನುಡಿ
ಕೋಡಿಹಳ್ಳಿ ಚಂದ್ರಶೇಖರ್ (ಸಂಗ್ರಹ ಚಿತ್ರ)
ಸಾಧು ಶ್ರೀನಾಥ್​
|

Updated on: Sep 21, 2020 | 11:59 AM

Share

ಬೆಂಗಳೂರು: ಪ್ರಧಾನಿ ಮೋದಿಯವರು ನಾನು ರೈತ, ರೈತನ ಮಗ ಅಂತಾ ಹೇಳ್ತಾರೆ.  ರೈತರ ಪರ ಅಂತಾರೆ. ಆದ್ರೆ  ಕೊರೋನಾ ಸಂದರ್ಭದಲ್ಲಿ ಈ ತಿದ್ದುಪಡಿ ಬೇಕಿತ್ತಾ? ಇದು ರೈತರಿಗೆ ವಿರುದ್ದವಾದ ಕೆಲಸ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಕಿಡಿಕಾರಿದ್ದಾರೆ.

ರೈತನಿಗೆ ಹುಟ್ಟಿದ್ರೆ ಈ ರೀತಿ ಮಸೂದೆಯನ್ನಾ ಜಾರಿಗೆ ತರುತ್ತಿರಲಿಲ್ಲ. ಅಡ್ಡ ಹುಟ್ಟಿದವರು ಮಾತ್ರ ಈ ರೀತಿ ಕೆಲಸ ಮಾಡೋದು ಎಂದೂ ಸರ್ಕಾರದ ವಿರುದ್ದ ಕೋಡಿಹಳ್ಳಿ ಚಂದ್ರಶೇಖರ್ ತೀಕ್ಷ್ಣ ನುಡಿಗಳನ್ನಾಡಿದ್ದಾರೆ.

ಇಂದು ರಾಜಧಾನಿ ಬೆಂಗಳೂರಿನಲ್ಲಿ  ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನಾ ಱಲಿ ನಡೆದಿದೆ. ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಿಂದ ಫ್ರೀಡಂಪಾರ್ಕ್​ವರೆಗೆ ರೈತರ ಱಲಿ ನಡೆದಿದೆ.

ಕೋಡಿಹಳ್ಳಿ ನೇತೃತ್ವದಲ್ಲಿನ  ಹೋರಾಟ ಅಂದಿದಕ್ಕೆ ವಿರೋಧ ಈ ಮಧ್ಯೆ, ಇದು ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ಎಂದಿದಕ್ಕೆ ಕೆಲವು ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ. ಮೈಕ್ ನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ಎಂದು ಕೆಲವು ರೈತರು ಘೋಷಿಸುತ್ತಿದ್ದಂತೆ ರೈತ ಸಂಘಟನೆಗಳ ನಡುವೆ ಬಿರುಕು ಮೂಡಿದೆ.  ಇದು ರೈತರ ಐಕ್ಯತೆ ಹೋರಾಟ. ಇದು ಒಬ್ಬರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲ ಎಂದು ರೈತರು ಗುಡುಗಿದ್ದಾರೆ.