AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Medical negligence| ಹೆರಿಗೆಗೆ ಅಂತಾ ಆಸ್ಪತ್ರೆಗೆ ಹೋಗಿದ್ಲು, ವೈದ್ಯರು ಕೊಟ್ಟ ಇಂಜೆಂಕ್ಷನ್​​ನಿಂದ ಪ್ರಜ್ಞೆ ತಪ್ಪಿದ್ಲು.. 4 ವರ್ಷದಿಂದ ಕೋಮಾದಲ್ಲಿರುವ ಪತ್ನಿಗೆ ಪತಿಯೇ ಸರ್ವಸ್ವ

ಪೋಷಕರ ವಿರೋಧದ ನಡುವೆಯೂ ಇಲ್ಲೊಂದು ಜೋಡಿ ಪ್ರೀತಿಸಿ ಮದುವೆಯಾಗಿತ್ತು. ಸಹಜವಾಗೇ ಆರಂಭವಾದ ಅವರ ಪ್ರೀತಿ ಇತರರ ಕಣ್ಣು ಕುಕ್ಕುವಂತ್ತಿತ್ತು. ಆದ್ರೆ ಅದ್ಯಾರ ವಕ್ರ ದೃಷ್ಟಿ ಬಿತ್ತೋ ಗೊತ್ತಿಲ್ಲ, ಇದಕ್ಕಿದ್ದಂತೆ ದಂಪತಿ ಬಾಳಲ್ಲಿ ಅಲ್ಲೋಲ ಕಲ್ಲೋಲವೇ ಎದುರಾಗಿತ್ತು. ಕಳೆದ 4 ವಷಗಳಿಂದಲೂ ಪತ್ನಿ ಕೋಮಾ ಸ್ಥಿತಿಯಲ್ಲಿದ್ದರೆ, ಆಕೆಯನ್ನ ಅಂಗೈಯಲ್ಲಿ ಇಟ್ಟು ಸಾಕುತ್ತಿದ್ದಾನೆ ರಿಯಲ್ ಹೀರೋ ಆ ಪತಿ.

Medical negligence| ಹೆರಿಗೆಗೆ ಅಂತಾ ಆಸ್ಪತ್ರೆಗೆ ಹೋಗಿದ್ಲು, ವೈದ್ಯರು ಕೊಟ್ಟ ಇಂಜೆಂಕ್ಷನ್​​ನಿಂದ ಪ್ರಜ್ಞೆ ತಪ್ಪಿದ್ಲು.. 4 ವರ್ಷದಿಂದ ಕೋಮಾದಲ್ಲಿರುವ ಪತ್ನಿಗೆ ಪತಿಯೇ ಸರ್ವಸ್ವ
ಕೋಮಾದಲ್ಲಿರುವ ಪತ್ನಿಯ ಹಾರೈಕೆ ಮಾಡುತ್ತಿರುವ ರಘು
ಆಯೇಷಾ ಬಾನು
|

Updated on:Feb 14, 2021 | 2:49 PM

Share

ಕೋಲಾರ: ಜಿಲ್ಲೆಯ ಮಾಲೂರು ತಾಲೂಕು ದೊಡ್ಡಕಡತೂರು ಗ್ರಾಮದ ರಘು ಮತ್ತು ದಿವ್ಯಾ ಎಂಬ ದಂಪತಿ 8 ವರ್ಷದ ಹಿಂದೆ ಹೆತ್ತವರ ವಿರೋಧದ ನಡುವೆಯೂ ಮದುವೆಯಾಗಿದ್ರು. ನೂರಾರು ಕನಸು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ರು. ಪತ್ನಿಗಾಗಿ ಪತಿ ರಘು ಎಲ್ಲವನ್ನೂ ತ್ಯಾಗ ಮಾಡಿದ್ದ. ಪತ್ನಿಯನ್ನ ಅಂದುಕೊಂಡಂತೆ ಓದಿಸಿದ್ದ ಕೂಡ. ಆದ್ರೆ ಆಸ್ಪತ್ರೆ ಸಿಬ್ಬಂದಿ ಮಾಡಿದ್ದ ಎಡವಟ್ಟಿನಿಂದ ರಘು ಪತ್ನಿ ದಿವ್ಯಾ ಸುಮಾರು 4 ವರ್ಷದಿಂದಲೂ ಕೋಮಾದಲ್ಲಿ ನರಳುವಂತಾಗಿದೆ.

2013 ಮೇ 24 ರಂದು ಧರ್ಮಸ್ಥಳದಲ್ಲಿ ಮದುವೆಯಾಗಿದ್ದ ದಿವ್ಯಾ ಮತ್ತು ರಘು ಬೆಂಗಳೂರಿನ ವರ್ತೂರಿನಲ್ಲಿ ಸಂಸಾರ ನಡೆಸುತ್ತಿದ್ದರು. ನಂತರ ದಿವ್ಯಾಳ ಆಸೆಯಂತೆ ಚೆನ್ನಾಗಿ ಓದಿಸಬೇಕೆಂದು ರಘು ಕಾಲೇಜಿಗೆ ಕಳಿಸಿದ್ರು. ಬಿಎಸ್ಸಿ ಮುಗಿಸಲು ಬೆಂಬಲವಾಗಿ ನಿಂತಿದ್ರು. ಈ ವೇಳೆ ಗರ್ಭಿಣಿಯಾದ ದಿವ್ಯಾಳ ಸಂಸಾರದಲ್ಲಿ ಮತ್ತಷ್ಟು ಸಂತಸ ಹೆಚ್ಚಾಗಿತ್ತು, 2017 ರ ಮಾರ್ಚ್​ 31 ರಂದು ದಿವ್ಯಾ ಹೆರಿಗೆಗೆ ಅಂತಾ ಮಾಲೂರಿನ ಸೇಂಟ್​ ಮೇರಿಸ್​ ಆಸ್ಪತ್ರೆಗೆ ದಾಖಲಾಗಿದ್ರಂತೆ. ಆದರೆ ಈ ವೇಳೆ ಆಸ್ಪತ್ರೆ ಸಿಬ್ಬಂದಿ ಮಾಡಿದ ಎಡವಟ್ಟು ದೊಡ್ಡ ಗಂಡಾಂತರ ಸೃಷ್ಟಿಸಿದೆ. ಅರವಳಿಕೆಯನ್ನ ನೀಡುವಾಗ ಮಾಡಿದ ಎಡವಟ್ಟಿನಿಂದ ಅಂದು ಕೋಮಾ ಸ್ಥಿತಿ ತಲುಪಿದ ದಿವ್ಯಾಗೆ ಇಂದಿಗೂ ಪ್ರಜ್ಞೆ ಬಂದಿಲ್ಲ.

Kolar Medical negligence Leaves woman in coma Lead

ರಘು ಮತ್ತು ದಿವ್ಯಾ

4 ವರ್ಷಗಳ ಹಿಂದೆ ಕೋಮಾ ಸ್ಥಿತಿಗೆ ತಲುಪಿದ ದಿವ್ಯಾಳಿಗಾಗಿ ರಘು ಹಾಗೂ ದಿವ್ಯಾಳ ಪೊಷಕರು ಮಾಡದ ಕೆಲಸವಿಲ್ಲ, ಬೇಡದ ದೇವರಿಲ್ಲ, ಸುತ್ತದ ಆಸ್ಪತ್ರೆಗಳಿಲ್ಲ ಆದರೂ ಪ್ರಯೋಜನವಾಗಿಲ್ಲ. ಹೀಗಿದ್ದರೂ ಪತ್ನಿ ದಿವ್ಯಾಳನ್ನು ಮಗುವಂತೆ ನೋಡಿಕೊಳ್ಳುತ್ತಿರುವ ರಘು ಕಾರ್ಯಕ್ಕೆ ಅಕ್ಕಪಕ್ಕದವರು ಕಂಬನಿ ಮಿಡಿಯುತ್ತಾರೆ.

ಒಟ್ನಲ್ಲಿ ಯಾರೋ ಮಾಡಿದ ತಪ್ಪಿಗೆ ದಂಪತಿ ದಿನವೂ ನರಳುವಂತಾಗಿದೆ. ಒಂದು ಕಡೆ ಪ್ರಜ್ಞೆ ಇಲ್ಲದೆ ನಿತ್ಯವೂ ಒದ್ದಾಡುತ್ತಿರುವ ಪತ್ನಿ. ಮತ್ತೊಂದ್ಕಡೆ ಪತ್ನಿಗೆ ಎದುರಾದ ಸ್ಥಿತಿ ಕಂಡು ಕೊರಗುತ್ತಿರುವ ಪತಿ. ಆದಷ್ಟು ಬೇಗ ದಿವ್ಯಾ ಗುಣಮುಖರಾಗಲಿ, ಮತ್ತೆ ಹಿಂದಿನಂತೆ ಓಡಾಡಲಿ ಎಂಬುದೇ ಎಲ್ಲರ ಆಶಯ.

Kolar Medical negligence Leaves woman in coma Lead

ಕೋಮಾದಲ್ಲಿರುವ ಪತ್ನಿಯ ಹಾರೈಕೆ ಮಾಡುತ್ತಿರುವ ರಘು

ಇದನ್ನೂ ಓದಿ: ಎಲ್ಲರಿಗೂ ಮಾದರಿ ಈ ದಂಪತಿ; ಮದುವೆಯ ದಿನವೇ ಇವರು ಮಾಡಿದ್ದೇನು ಗೊತ್ತಾ?

Published On - 2:47 pm, Sun, 14 February 21

Follow Us
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!