Sign In

By signing in or creating an account, you agree with Associated Broadcasting Company's Terms & Conditions and Privacy Policy.

Millennials: ಹರೆಯದ ಮನಸ್ಸುಗಳ ಪಿಸುಮಾತುಗಳಿಗೆ ಕನ್ನಡಿ ಹಿಡಿದ ಮೊಬೈಲ್ ಟವರ್​ಗಳು: ನಿಮ್ಮ ಮಕ್ಕಳ ಸರ್ಚ್​ ಹಿಸ್ಟರಿ ಗಮನಿಸಿದ್ದೀರಾ?

ಮೊಬೈಲ್​ನಲ್ಲಿ ಮುಳುಗಿರುವ ಹರೆಯದ ಹುಡುಗ-ಹುಡುಗಿಯರ ಮನಃಸ್ಥಿಗೆ ಮೊಬೈಲ್ ಟವರ್​ಗಳಿಂದ ಪೊಲೀಸ್ ಅಧಿಕಾರಿಯೊಬ್ಬರು ಪರಿಶೀಲಿಸಿದ ದತ್ತಾಂಶ ಕನ್ನಡಿ ಹಿಡಿದಿದೆ.

Millennials: ಹರೆಯದ ಮನಸ್ಸುಗಳ ಪಿಸುಮಾತುಗಳಿಗೆ ಕನ್ನಡಿ ಹಿಡಿದ ಮೊಬೈಲ್ ಟವರ್​ಗಳು: ನಿಮ್ಮ ಮಕ್ಕಳ ಸರ್ಚ್​ ಹಿಸ್ಟರಿ ಗಮನಿಸಿದ್ದೀರಾ?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Dec 28, 2021 | 9:15 PM

ಕೋಲಾರ: ಮೊಬೈಲ್​ನಲ್ಲಿ ಮುಳುಗಿರುವ ಹರೆಯದ ಹುಡುಗ-ಹುಡುಗಿಯರ ಮನಃಸ್ಥಿಗೆ ಮೊಬೈಲ್ ಟವರ್​ಗಳಿಂದ ಪೊಲೀಸ್ ಅಧಿಕಾರಿಯೊಬ್ಬರು ಪರಿಶೀಲಿಸಿದ ದತ್ತಾಂಶ ಕನ್ನಡಿ ಹಿಡಿದಿದೆ. ಶಂಕಿತ ಕೊಲೆ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ತನಿಖೆಗೆಂದು ಜಿಲ್ಲೆಯ ಕೆಲ ಮೊಬೈಲ್ ಟವರ್​ಗಳಿಂದ ನಡೆದಿರುವ ಸಂಭಾಷಣೆ ಮತ್ತು ರವಾನೆಯಾಗಿರುವ ಎಸ್​ಎಂಎಸ್​ಗಳ ದೊಡ್ಡಮಟ್ಟದ ದತ್ತಾಂಶವನ್ನು ವಿಶ್ಲೇಷಿಸಿದರು. ಈ ವೇಳೆ ಕೆಲ ಮೆಸೇಜ್​ಗಳನ್ನು ಕಂಡು ಪೊಲೀಸ್ ಅಧಿಕಾರಿಯೇ ಒಂದು ಕ್ಷಣ ತಬ್ಬಿಬ್ಬಾದರಂತೆ. ಪ್ರಕರಣ ಮತ್ತು ಮೊಬೈಲ್​ ಟವರ್​ಗಳ ಗೌಪ್ಯತೆ ಕಾಪಾಡಬೇಕು ಎನ್ನುವ ಕಾರಣಕ್ಕೆ ಯಾವುದೇ ಹಳ್ಳಿ ಹಾಗೂ ತನಿಖಾಧಿಕಾರಿಯ ಹೆಸರನ್ನು ಈ ವರದಿಯಲ್ಲಿ ಉಲ್ಲೇಖಿಸಿಲ್ಲ. ಟಿವಿ9 ಕನ್ನಡ ಡಿಜಿಟಲ್ ಪ್ರತಿನಿಧಿ ಈ ಮೆಸೇಜುಗಳನ್ನಾಗಲೀ, ಮೊಬೈಲ್ ಸಂಖ್ಯೆಗಳನ್ನಾಗಲೀ ನೋಡಿಲ್ಲ. ತನಿಖಾಧಿಕಾರಿಯೊಂದಿಗೆ ಅನೌಪಚಾರಿಕ ಸಂಭಾಷಣೆಯಲ್ಲಿ ತಿಳಿದ ವಿಷಯವನ್ನು ಪೋಷಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರಕಟಿಸಲಾಗಿದೆ.

ಹದಿಹರೆಯದ ವಯಸ್ಸಿನಲ್ಲಿ ಯುವಕ-ಯುವತಿಯರಲ್ಲಿ ಆಕರ್ಷಣೆಗಳು ಪ್ರೀತಿ-ಪ್ರೇಮದ ಹೆಸರಿನಲ್ಲಿ ಹುಚ್ಚು ಕುದುರೆಯಂತೆ ಕುಣಿಸುತ್ತಿದೆ. ಅದರಲ್ಲೂ ಸ್ಮಾರ್ಟ್​ಪೋನ್ ಯುಗ ಬಂದು, ಆನ್​ಲೈನ್​ ಕ್ಲಾಸ್ ಕಾಲ ಶುರುವಾದ ಮೇಲಂತು​ ಯಾವುದಕ್ಕೂ ಯಾವುದೇ ವಯಸ್ಸಿಲ್ಲ. ಎಲ್ಲರೂ ಎಲ್ಲವನ್ನೂ ನಿರಾತಂಕವಾಗಿ ನೋಡುವ ಸ್ಥಿತಿ ಬಂದಿದೆ. ಇಂಥ ಸ್ಥಿತಿಯಲ್ಲಿ ಮಕ್ಕಳಿಗೆ ಬುದ್ಧಿ ಹೇಳೋರು ಯಾರು..? ಮಕ್ಕಳು ಇಷ್ಟಪಟ್ಟು ನೋಡುವ ಸಿನಿಮಾ, ಸೋಷಿಯಲ್​ ಮೀಡಿಯಾ, ಟಿವಿ, ಸೀರಿಯಲ್ಲೂ ಎಲ್ಲಿ ನೋಡಿದ್ರು, ಯಾವ ನಾಟಕದಲ್ಲಿ ನೋಡಿದ್ರೆ ಪ್ರೀತಿ ಪ್ರೇಮದ ಸನ್ನಿವೇಶಗಳೇ ಗಮನ ಸೆಳೆಯುತ್ತಿರುವಾಗ ಮಕ್ಕಳಿಗೂ ಕುತೂಹಲ ಕೆರಳದೆ ಇರಲು ಸಾಧ್ಯವಿಲ್ಲ ಎನ್ನುವಂತಾಗಿದೆ. ಇತ್ತೀಚೆಗೆ ಪೊಲೀಸ್ ಅಧಿಕಾರಿಯೊಬ್ಬರು ಪ್ರಕರಣವೊಂದರ ತನಿಖೆ ವೇಳೆಯಲ್ಲಿ ಕೆಲವು ಮೊಬೈಲ್​ ಮೆಸೇಜ್​ಗಳು ಹಾಗೂ ಕಾಲ್​ಡೀಟೇಲ್ಸ್​ ಗಳನ್ನು ಪತ್ತೆ ಹೆಚ್ಚುವ ವೇಳೆ ಕೆಲವೊಂದು ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿದೆ.

ತನಿಖೆ ವೇಳೆ ಪೊಲೀಸ್​ ಅಧಿಕಾರಿಗೆ ಶಾಕ್​ ಕೊಟ್ಟ ವಿಷಯ ಅದೊಂದು ಸಾಕಷ್ಟು ನಿಗೂಡವಾಗಿ ಅಧಿಕಾರಿಗಳನ್ನು ತಿಂಗಳಾನುಗಟ್ಟಲೆ ಕಾಡಿದ್ದ ಪ್ರಕರಣ ಈ ಪ್ರಕರಣದ ತನಿಖೆ ವೇಳೆ ಪೊಲೀಸರು ಗ್ರಾಮೀಣ ಬಾಗದ ಹಾಗೂ ಕೆಲವು ನಗರ ಭಾಗದ ಟವರ್​ಗಳಿಂದ ಕಾಲ್​ ಡೀಟೇಲ್ಸ್ ಹಾಗೂ ಮೆಸೇಜ್​ ಡೀಟೇಲ್ಸ್​ಗಳನ್ನು ಸಂಗ್ರಹ ಮಾಡಿ ಒಂದೊಂದಾಗಿ ಪರಿಶೀಲನೆ ನಡೆಸುತ್ತಿದ್ದರು ಈ ವೇಳೆಯಲ್ಲಿ ಕೆಲವು ಯುವಕ ಯುವತಿಯರು ಕಳಿಸಿದ್ದ ಕೆಲವೊಂದು ಮೆಸೇಜ್​ಗಳು ಆಶ್ಚರ್ಯ ಹಾಗೂ ಗಾಬರಿ ಹುಟ್ಟಿಸುವಂತಿದ್ದವು ಎನ್ನಲಾಗಿದೆ. ಯಾಕಂದ್ರೆ ಇನ್ನೂ ಪ್ರಾಯಕ್ಕೆ ಬಾರದ ಮಕ್ಕಳು ತಮ್ಮ ಮೊಬೈಲ್​ನಲ್ಲಿ ಅಶ್ಲೀಲ ಪದಗಳನ್ನು ಬಳಕೆ ಮಾಡಿಕೊಂಡು ಕೆಲವು ಮೆಸೇಜ್​ಗಳನ್ನು ಮಾಡಿರುವುದು, ಮತ್ತೆ ಕೆಲವು ಯುವತಿಯರು ಇಬ್ಬರು ಮೂರು ಜನ ಹುಡುಗರಿಗೆ ಬೇರೆ ಬೇರೆ ರೀತಿಯಲ್ಲಿ ಪ್ರೀತಿ ಪ್ರೇಮದ ಹೆಸರಲ್ಲಿ ಚಿನ್ನ, ರನ್ನ, ಬಂಗಾರ, ಹನಿ, ಎಂದೆಲ್ಲಾ ಮೆಸೇಜ್​ಗಳನ್ನು ಕಳಿಸಿರುವುದು, ಅದೇ ರೀತಿ ಹುಡುಗರೂ ಕೂಡಾ ಇಬ್ಬರು ಮೂರು ಜನ ಹುಡುಗಿಯರಿಗೆ ಅಮ್ಮು, ಬಂಗಾರಿ, ಎಂದೆಲ್ಲಾ ಮೆಸೇಜ್​ಗಳನ್ನು ಕಳಿಸಿರುವುದು​ ಗೊತ್ತಾಗಿದೆ. ಇನ್ನೂ ವಯಸ್ಸಿಗೆ ಬರುವ ಮುನ್ನವೇ ಪ್ರೀತಿ ಪ್ರೇಮದ ಆಕರ್ಶಣೆಗೆ ಬಿದ್ದಿರುವ ಯುವಕ ಯುವತಿಯರು ಹೀಗೆ ಸ್ಮಾರ್ಟ್​ಪೋನ್​ ಯುಗದಲ್ಲಿ ನೈತಿಕತೆ ಮರೆತು ಕ್ಷಣಿಕ ಸುಖಕ್ಕೆ ತಮ್ಮ ಬದುಕನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರಾ ಅನ್ನೋ ಅತಂಕ ಶುರುವಾಗಿದೆ.

ಗ್ರಾಮೀಣ ಭಾಗದಲ್ಲೂ ಇಂಥದ್ದೇ ವರ್ತನೆ ಮೊದಲೆಲ್ಲಾ ನಗರ ಪ್ರದೇಶದ ಯುವಕ-ಯುವತಿಯರು ಮಾತ್ರ ಹೀಗೆ ಪ್ರೀತಿ ಪ್ರೇಮದ ಆಕರ್ಷಣೆಗೆ ಬಿದ್ದು ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶ, ನಗರ ಪ್ರದೇಶ ಯಾವುದಕ್ಕೂ ವ್ಯತ್ಯಾಸವಿಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ. ಈ ಸಂಗತಿಯು ತನಿಖಾಧಿಕಾರಿಗಳು ಗ್ರಾಮೀಣ ಭಾಗದ ಯುವಕ-ಯುವತಿಯರು ಕಳಿಸಿರುವ ಮೆಸೇಜ್​ಗಳನ್ನು ನೋಡಿದಾಗ ತಿಳಿದು ಬಂದಿದೆ.

ಆನ್​ಲೈನ್​ ತರಗತಿಗಳಿಂದ ಹೆಚ್ಚಾದ ಮೊಬೈಲ್​ ಹುಚ್ಚಾಟ ಕೊರೊನಾ ಕಾಲದಲ್ಲಿ ಅಂದರೆ ಕಳೆದ ಎರಡು ವರ್ಷಗಳಿಂದ ಮಕ್ಕಳ ಕೈಗೆ ಸರಾಗವಾಗಿ ಮೊಬೈಲ್​ ಸಿಕ್ಕಿದ್ದೇ ನೋಡಿ, ಅದರಲ್ಲಿ ಮಕ್ಕಳು ಶಿಕ್ಷಕರು ಹೇಳಿಕೊಟ್ಟು ಕಲಿತ ಪಾಠಕ್ಕಿಂತ, ಗೂಗಲ್​ನಲ್ಲಿ ಇಲ್ಲಸಲ್ಲದನ್ನು ಹುಡುಕಿದ್ದೇ ಹೆಚ್ಚು. ಮಕ್ಕಳಿಗೆ ಮೊಬೈಲ್​ ಕೊಡಿಸಿ ಇಂಟರ್ನೆಟ್​ ಹಾಕಿಸಿ, ಮನೆಯಲ್ಲಿ ಪ್ರತ್ಯೇಕವಾಗಿ ಇರಲು ದಾರಿಮಾಡಿಕೊಟ್ಟ ಈ ಆನ್​ಲೈನ್​ ತರಗತಿಗಳಿಂದ ಮಕ್ಕಳು ನಿಜಕ್ಕೂ ಪಾಠವನ್ನೇ ಕಲಿತಿದ್ದಾರಾ? ಈ ಮೊಬೈಲ್​ಗಳು ಪಾಠವನ್ನೇ ಹೇಳಿಕೊಟ್ಟಿದ್ಯಾ ಇಲ್ಲಾ ಬೇರೆ ಏನನ್ನಾದರೂ ಹೇಳಿಕೊಟ್ಟಿದ್ಯಾ ಅನ್ನೋದನ್ನ ಅವರ ಮೊಬೈಲ್​ ನಲ್ಲಿನ ಡಿಲೀಟ್ ಆಗಿರುವ ಮೆಸೇಜ್​ಗಳು, ಗೂಗಲ್​, ಯೂಟ್ಯೂಬ್​ನಲ್ಲಿನ ಸರ್ಚ್​ ಹಿಸ್ಟರಿಯನ್ನು ನೋಡಿದಾಗಲೇ ಗೊತ್ತಾಗುವುದು. ಮನೆಗಳಲ್ಲಿ ಎಲ್ಲ ಪೋಷಕರು ತಮ್ಮ ಮಕ್ಕಳನ್ನು ಅನುಮಾನದಿಂದ ನೋಡಬೇಕು ಎಂದಲ್ಲ. ಆದರೆ ಮಕ್ಕಳ ‘ಡಿಜಿಟಲ್ ಹೆಲ್ತ್’​ ಜವಾಬ್ದಾರಿಯನ್ನೂ ಪೋಷಕರು ನಿರ್ವಹಿಸಬೇಕಾಗಿದೆ.

ವಯಸ್ಸಿಗೆ ಬಂದ ಮಕ್ಕಳೊಂದಿಗೆ ತಂದೆ ತಾಯಿಗಳು ಸ್ನೇಹಿತರಂತೆ ಇರಬೇಕು ಎಂದು ಆಗಾಗ ಕೆಲವು ಹಿರಿಯರು ಸಲಹೆಗಳನ್ನು ನೀಡುತ್ತಿರುತ್ತಾರೆ. ಇವತ್ತಿನ ಪರಿಸ್ಥಿತಿಯಲ್ಲಿ ಆ ರೀತಿ ಇರದೆ ಇದ್ದರೆ ತೀರಾ ಕಷ್ಟವಾಗುತ್ತದೆ. ಮಕ್ಕಳೊಂದಿಗೆ ಸ್ನೇಹಿತರಂತೆ ಇರದೆ ಹೋದರೆ, ಅತಿಯಾಗಿ ನಿರ್ಬಂಧಿಸಿದರೆ ವಯಸ್ಸಿಗೆ ಬರುವ ಮುನ್ನವೇ ಮಕ್ಕಳು ಕೈತಪ್ಪಿ ಹೋಗುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ. ಕೇವಲ ಒಂದು ಸ್ಮಾರ್ಟ್​ ಪೋನ್​ ಮಕ್ಕಳಿಗೆ ಒಳ್ಳೆಯದು-ಕೆಟ್ಟದ್ದು ಎಲ್ಲವನ್ನೂ ತೋರಿಸಿಬಿಡುತ್ತದೆ. ಇಂಥ ಪರಿಸ್ಥಿತಿಯಲ್ಲಿ ಮಕ್ಕಳು ಒಳ್ಳೆಯದನ್ನೇ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಮನಸ್ಥಿತಿಗೆ ಬರುವಂತೆ ಮಾಡಬೇಕಾಗಿರುವುದು ನಿಜಕ್ಕೂ ಪೊಷಕರ ಎದುರಿಗೆ ಇರುವ ಸವಾಲು.

ವರದಿ: ರಾಜೇಂದ್ರ ಸಿಂಹ

ಇದನ್ನೂ ಓದಿ: ನಮ್ಮನ್ನು ನಾವು ಪ್ರೀತಿಸಿಕೊಳ್ಳದಿದ್ದರೆ, ಆತ್ಮವಿಶ್ವಾಸ ಕಮ್ಮಿಯಾಗಿ ಒಂಟಿತನ ಕಾಡಲಾರಂಭಿಸುತ್ತದೆ ಇದನ್ನೂ ಓದಿ: ಹಾಕಿದ ನಿಯಮ ಮುರಿಯುವುದು ಹೋಗಲಿ ಅತ್ತಿತ್ತ ದೂಡಾಡುವ ಪ್ರಯತ್ನ ಮಾಡದಿದ್ದರೆ ಅದೆಂಥಾ ಹರೆಯ?

Published On - 9:15 pm, Tue, 28 December 21

ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ