AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಲೂರು ಯುವಕ ತನ್ನ ಹೊಸ ಮೊಬೈಲಿನಿಂದ ಅಚಾನಕ್ಕಾಗಿ ಯುವತಿಗೆ ಮೆಸೇಜ್ ಮಾಡಿದ್ದೇ ಅವನ ಸಾವಿಗೆ ಕಾರಣವಾಯ್ತಾ?

Kolar: ಬಡ ಕುಟುಂಬದಲ್ಲಿ ಹುಟ್ಟಿ ಕೂಲಿ ಕೆಲಸ ಮಾಡಿಕೊಂಡು ತಂದೆ ತಾಯಿಯನ್ನು ನೋಡಿಕೊಳ್ಳುತ್ತಿದ್ದ ಯುವಕ ತಾನು ತೆಗೆದು ಕೊಂಡ ಅದೊಂದು ಆಂಡ್ರಾಯ್ಡ್​ ಫೋನ್​ ಹಾಗೂ ಆ ಫೋನ್​ ನಿಂದ ಅಚಾನಕ್ಕಾಗಿ ಯುವತಿಗೆ ಹೋದ ಮೆಸೇಜ್​ ಅವನ ಸಾವಿಗೆ ಕಾರಣವಾಯ್ತಾ? ಪೊಲೀಸರ ತನಿಖೆಯೇ ಉತ್ತರ ಹೇಳಬೇಕಿದೆ.

ಮಾಲೂರು ಯುವಕ ತನ್ನ ಹೊಸ ಮೊಬೈಲಿನಿಂದ ಅಚಾನಕ್ಕಾಗಿ ಯುವತಿಗೆ ಮೆಸೇಜ್ ಮಾಡಿದ್ದೇ ಅವನ ಸಾವಿಗೆ ಕಾರಣವಾಯ್ತಾ?
ಯುವತಿಗೆ ಮೆಸೇಜ್ ಮಾಡಿದ್ದೇ ಅವನ ಸಾವಿಗೆ ಕಾರಣವಾಯ್ತಾ?
TV9 Web
| Edited By: |

Updated on: Apr 03, 2023 | 3:46 PM

Share

ಅವನು ಚಿಕನ್​ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ, ಮೂರು ದಿನಗಳ ಹಿಂದೆ ಇದ್ದಕ್ಕಿದ್ದಂತೆ ನಿಗೂಢವಾಗಿ ನಾಪತ್ತೆಯಾಗಿ ಹೋಗಿದ್ದ. ಅವನಿಗಾಗಿ ಅವನ ಹೆತ್ತವರು ಎಲ್ಲೆಡೆ ಹುಡುಕಾಡಿದ್ದರು. ಆದರೆ ಅವನ ಸುಳಿವೇ ಸಿಕ್ಕಿರಲಿಲ್ಲ. ಆದರೆ ಇವತ್ತು ಕಾಣೆಯಾಗಿದ್ದ ಯುವಕ (Youth) ಶವವಾಗಿ ಅದೇ ಊರಿನ ಕೆರೆಯಲ್ಲಿ ಪತ್ತೆಯಾಗಿದ್ದಾನೆ. ಜೊತೆಗೆ ಮೃತನ ಕೊಲೆಯಾಗಿರುವ (Murder) ಶಂಕೆ ದಟ್ಟವಾಗಿದೆ. ಮಗನನ್ನು ಕಳೆದುಕೊಂಡು ಹೆತ್ತವರ ಕಣ್ಣೀರು, ಇನ್ನೊಂದೆಡೆ ಕೆರೆಯಲ್ಲಿ ತೇಲುತ್ತಿರುವ ಶವವನ್ನು ಮೇಲೆತ್ತುತ್ತಿರುವ ಸ್ಥಳೀಯರು ಹಾಗೂ ಪೊಲೀಸರು, ಇದೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರ (Kolar) ಜಿಲ್ಲೆ ಮಾಲೂರು (Malur) ತಾಲ್ಲೂಕು ಕೊಂಡಶೆಟ್ಟಿಹಳ್ಳಿ ಗ್ರಾಮದಲ್ಲಿ. ಹೌದು ಕೊಂಡಶೆಟ್ಟಿ ಹಳ್ಳಿ ಗ್ರಾಮದ ಅಯ್ಯೂಬ್​ ಖಾನ್​ ಎಂಬ ಯುವಕ ಕಳೆದ ಗುರುವಾರ ಅಂದರೆ ಮಾರ್ಚ್ 30 ರಂದು ಮಧ್ಯಾಹ್ನ ಇದ್ದಕ್ಕಿದಂತೆ ನಾಪತ್ತೆಯಾಗಿ ಹೋಗಿದ್ದ. ಮೊಬೈಲ್​ ಕೂಡಾ ಸ್ವಿಚ್​ ಆಫ್​ ಆಗಿ ಹೋಗಿತ್ತು. ಅಯ್ಯೂಬ್​ ಖಾನ್​ ಮನೆಗೆ ಬಾರದ್ದನ್ನು ಕಂಡ ಹೆತ್ತವರು ಎಲ್ಲೆಡೆ ಹುಡುಕಾಡಿದ್ದರು. ಆದರೆ ಎಲ್ಲೂ ಅವನ ಸುಳಿವು ಸಿಗಲಿಲ್ಲ. ಈ ವೇಳೆ ಬೇರೆ ದಾರಿ ಕಾಣದೆ ಹೋದಾಗ ಹೆತ್ತವರು ಅಯ್ಯೂಬ್​ ಖಾನ್​ ನಾಪತ್ತೆಯಾಗಿರುವ ಕುರಿತು ಮಾಸ್ತಿ ಪೊಲೀಸರಿಗೆ ದೂರು ನೀಡಿದರು.

ಹೀಗಿರುವಾಗಲೇ ಭಾನುವಾರ ಬೆಳಗ್ಗೆ ಕಾಣೆಯಾಗಿದ್ದ ಅಯ್ಯೂಬ್​ ಖಾನ್​ ಗ್ರಾಮದ ಹೊರಗಿನ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಮೃತ ಅಯ್ಯೂಬ್​ ಖಾನ್​ ಶವದ ಮೇಲೆ ಗಾಯಗಳಾಗಿವೆ. ಜೊತೆಗೆ ಕುತ್ತಿಗೆಯನ್ನು ಕಬ್ಬಿಣದ ಚೈನ್ ನಿಂದ​ ಬಿಗಿದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೆ ಶವ ಪತ್ತೆಯಾಗಿರುವ ಕೆರೆಯ ಬಳಿ ಬಿಯರ್ ಬಾಟಲಿಗಳು, ಕುತ್ತಿಗೆ ಬಿಗಿದು ಸಾಯಿಸಿರುವ ಚೈನ್​ ಪತ್ತೆಯಾಗಿದೆ. ಸದ್ಯ ಮೃತ ಅಯ್ಯೂಬ್​ ಖಾನ್​ ಸಂಬಂಧಿಕರು ಹೇಳುವಂತೆ ಇದು ಸಹಜ ಸಾವಲ್ಲ. ಇದು ಉದ್ದೇಶಪೂರ್ವಕವಾಗಿ ಮಾಡಿರುವ ಕೊಲೆ ಎಂದು ಹೇಳುತ್ತಿದ್ದಾರೆ.

ಅಷ್ಟಕ್ಕೂ ಅಯ್ಯೂಬ್​ ಖಾನ್​ ಕೊಲೆಯಾಗಿ ಹೋಗಿದ್ದಾನೆ ಎಂದು ಹೇಳೋದಕ್ಕೆ ಕಾರಣವೂ ಇದೆ. ಕೊಂಡಶೆಟ್ಟಿಹಳ್ಳಿ ಗ್ರಾಮದ ಸರ್ವರ್​ ಖಾಸ್ ಹಾಗೂ ಗುಲ್ನಾಜ್ ಅವರ ಏಕೈಕ ಪುತ್ರ ಅಯ್ಯೂಬ್​ ಖಾನ್​ ಸುಮಾರು 26 ವರ್ಷದ ಯುವಕ. ಗ್ರಾಮದಲ್ಲೇ ಚಿಕನ್​ ಅಂಗಡಿಯಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದ. ಐದನೇ ತರಗತಿ ಓದಿದ್ದ ಅಯ್ಯೂಬ್​ ಖಾನ್​ ಇತ್ತೀಚೆಗೆ ಆಂಡ್ರಾಯ್ಡ್​ ಪೋನ್ ತೆಗೆದುಕೊಂಡಿದ್ದ. ಆ ಪೋನ್​ ನಿಂದ ಕಳೆದ ಎರಡು ತಿಂಗಳ ಹಿಂದೆ ಪನಮನಹಳ್ಳಿ ಗ್ರಾಮದ ಯುವತಿಯೊಬ್ಬಳಿಗೆ ಮೆಸೇಜ್​ ಹೋಗಿತ್ತಂತೆ. ಆ ವಿಚಾರವಾಗಿ ಅವರ ಕಡೆಯವರು ಬಂದು ಗಲಾಟೆ ಮಾಡಿ ಹೋಗಿದ್ದಾರೆ.

ಈ ವಿಚಾರವಾಗಿಯೇ ರಾಜಿ ಪಂಚಾಯ್ತಿ ಕೂಡಾ ಆಗಿದ್ದು ಆ ಮೆಸೇಜ್​ ಮಾಡಿದ್ದು ನಾನಲ್ಲ, ನನಗೆ ಮೆಸೇಜ್​ ಮಾಡಲು ಬರೋದಿಲ್ಲ. ನನ್ನ ಮೊಬೈಲ್​ ನಿಂದ ಬೇರೆ ಯಾರೋ ಮೆಸೇಜ್​ ಮಾಡಿದ್ದಾರೆ. ನನಗೇನೂ ಗೊತ್ತಿಲ್ಲ ಎಂದು ಅಯ್ಯೂಬ್​ ಖಾನ್​ ಹೇಳಿದ್ದನಂತೆ. ಆದರೂ ಅವರು ನಿನ್ನ ಎತ್ತಿಬಿಡ್ತೀನಿ ನಿನ್ನ ಮಾತ್ರ ಬಿಡೋದಿಲ್ಲ ಎಂದು ಜೀವ ಬೆದರಿಕೆ ಹಾಕಿ ಹೋಗಿದ್ದರಂತೆ. ಅಲ್ಲದೆ ಅಯ್ಯೂಬ್​ ಖಾನ್​ ತಂದೆ ಹೇಳುವಂತೆ ಮಾಲೂರಿನ ಗಂಗರಾಜು, ಸಿಕಂದರ್, ಆದಿಲ್​ ಎಂಬುವರು ಮನೆ ಬಳಿ ಬಂದು ಗಲಾಟೆ ಮಾಡಿ ಹೋಗಿದ್ದಾರೆ.

ಅಲ್ಲದೆ ಅಯ್ಯೂಬ್​ ಖಾನ್​ ಅವನನ್ನು ಕೊಲೆ ಮಾಡೋದಕ್ಕೆ ಸುಪಾರಿ ತೆಗೆದುಕೊಂಡು ಬಂದಿದ್ದರು. ಅವನು ನಾಪತ್ತೆಯಾಗುವ ದಿನದಂದು ಕೂಡಾ ಯಾರೋ ಇಬ್ಬರು ಹುಡುಗರು ಬಂದು ಅಯ್ಯೂಬ್​ ಖಾನ್​ನನ್ನು ಕರೆದುಕೊಂಡು ಹೋಗಿದ್ದಾರೆ. ಅವರೇ ಕೊಲೆ ಮಾಡಿದ್ದಾರೆ ಅನ್ನೋ ಆರೋಪ ಮಾಡುತ್ತಿದ್ದು, ಪೊಲೀಸರಿಗೆ ಹೆಸರು ಸಹಿತ ದೂರು ಕೂಡಾ ನೀಡಲಾಗಿದ್ದು ತನಿಖೆ ಮಾಡುವಂತೆ ಮನವಿ ಮಾಡಿದ್ದಾರೆ.

ಒಟ್ಟಾರೆ ಬಡ ಕುಟುಂಬದಲ್ಲಿ ಹುಟ್ಟಿ ಕೂಲಿ ಕೆಲಸ ಮಾಡಿಕೊಂಡು ತಂದೆ ತಾಯಿಯನ್ನು ನೋಡಿಕೊಳ್ಳುತ್ತಿದ್ದ ಯುವಕ ತಾನು ತೆಗೆದು ಕೊಂಡ ಅದೊಂದು ಆಂಡ್ರಾಯ್ಡ್​ ಫೋನ್​ ಹಾಗೂ ಆ ಫೋನ್​ ನಿಂದ ಅಚಾರನಕ್ಕಾಗಿ ಹೋದ ಮೆಸೇಜ್​ ಅವನ ಸಾವಿಗೆ ಕಾರಣವಾಯ್ತಾ? ಅಥವಾ ಇದರ ಹಿಂದೆ ಬೇರೆ ಏನಾದರೂ ರಹಸ್ಯ ಅಡಗಿದ್ಯಾ ಅನ್ನೋ ಹಲವು ಅನುಮಾನಗಳಿಗೆ ಪೊಲೀಸರ ತನಿಖೆಯೇ ಉತ್ತರ ಹೇಳಬೇಕಿದೆ.

ವರದಿ: ರಾಜೇಂದ್ರ ಸಿಂಹ, ಟಿವಿ9, ಕೋಲಾರ 

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್