ಬಿಸಿಲನಾಡು ಕೊಪ್ಪಳದಲ್ಲಿ ಮಲೆನಾಡ ಅನುಭವ! ಪ್ರವಾಸಿಗರ ಕೈಬೀಸಿ ಕರೆಯುತ್ತಿದೆ ಕಪೀಲತೀರ್ಥ ಜಲಪಾತ
ರಾಜ್ಯದ ಬಿಸಿಲನಾಡು ಎಂದು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳನ್ನು ಕರೆಯಲಾಗುತ್ತದೆ. ವರ್ಷದ ಬಹುತೇಕ ತಿಂಗಳುಗಳ ಕಾಲ ಬಿಸಿಲು ಈ ಭಾಗದಲ್ಲಿ ಸಾಮಾನ್ಯ. ಆದರೆ ಮುಂಗಾರು ಮಳೆಯ ಸಮಯದಲ್ಲಿ ಇದೀಗ ಬಿಸಿಲನಾಡು ಕೊಪ್ಪಳ ಮಲೆನಾಡಿನ ಅನುಭೂತಿಯನ್ನು ನೀಡುತ್ತಿದೆ. ಜಲಪಾತಗಳನ್ನ ನೋಡಬೇಕು, ದುಮ್ಮಿಕ್ಕಿ ಹರಿಯೋ ನೀರಲ್ಲಿ ಮೋಜು ಮಸ್ತಿ ಮಾಡಬೇಕು ಅಂತ ಅನಿಸಿದ್ರೆ ಈ ಭಾಗದ ಜನ ಮಲೆನಾಡ ಭಾಗಕ್ಕೆ ಹೋಗಬೇಕು. ಆದರೆ ಇದೀಗ ಮಳೆಗಾಲದಲ್ಲಿ ಕೊಪ್ಪಳ ಜಿಲ್ಲೆಯ ಅದೊಂದು ಜಲಪಾತ ಎಲ್ಲರನ್ನು ಕೈಬೀಸಿ ಕರೆಯುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿರುವ ಜಲಪಾತವನ್ನು ನೋಡಲು ರಾಜ್ಯ ಮತ್ತು ನೆರೆಯ ರಾಜ್ಯಗಳಿಂದ ಪ್ರವಾಸಿಗರು ಬರುತ್ತಿದ್ದಾರೆ.
Most Read Stories