AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪನ ಸಮಾಧಿ ಬಳಿ ಕೇಕ್ ಕಟ್; ಸಮಾಧಿಗೆ ಕೇಕ್ ಅರ್ಪಿಸಿ, ಜನ್ಮ ದಿನ ಆಚರಿಸಿಕೊಂಡ ಬಾಲಕಿ, ಮನ ಮಿಡಿಯುವ ವಿಡಿಯೋ ವೈರಲ್

ಕೊಪ್ಪಳ‌ ಜಿಲ್ಲೆ ಕುಷ್ಟಗಿ ಪಟ್ಟಣದಲ್ಲಿ ಪುಟ್ಟ ಬಾಲಕಿ ತನ್ನ ಎಂಟನೇ ವರ್ಷದ ಹುಟ್ಟು ಹಬ್ಬವನ್ನ ತಂದೆಯ ಸಮಾಧಿ ಬಳಿ ಆಚರಣೆ ಮಾಡಿಕೊಂಡಿದ್ದಾಳೆ. ಈ ಘಟನೆ ಮನಕಲಕುವಂತಿತ್ತು. ಪುಟ್ಟ ಬಾಲಕಿ ಸ್ಪಂದನ ಸಮಾಧಿ ಬಳಿ ಕೇಕ್ ಕಟ್‌ ಮಾಡೋ ವಿಡಿಯೋ ಸದ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಪ್ಪನ ಸಮಾಧಿ ಬಳಿ ಕೇಕ್ ಕಟ್; ಸಮಾಧಿಗೆ ಕೇಕ್ ಅರ್ಪಿಸಿ, ಜನ್ಮ ದಿನ ಆಚರಿಸಿಕೊಂಡ ಬಾಲಕಿ, ಮನ ಮಿಡಿಯುವ ವಿಡಿಯೋ ವೈರಲ್
ಅಪ್ಪನ ಸಮಾಧಿ ಬಳಿ ಕೇಕ್ ಕಟ್​ ಮಾಡಿ, ಸಮಾಧಿಗೆ ಕೇಕ್ ಅರ್ಪಿಸಿದ ಮಗಳು
TV9 Web
| Edited By: |

Updated on:Sep 02, 2021 | 10:32 AM

Share

ಕೊಪ್ಪಳ: ಹೆಣ್ಣು ಮಕ್ಕಳಿಗೆ ತಂದೆನೇ ಎಲ್ಲಾ ಆಗಿರುತ್ತಾರೆ. ಅವರ ಫಸ್ಟ್ ಹೀರೋ, ಬೆಸ್ಟ್ ಫ್ರೆಂಡ್ ಎಲ್ಲವೂ ತಂದೆನೇ. ಆದ್ರೆ ಅಂತಹ ಅಪ್ಪನನ್ನು ಕಳೆದುಕೊಂಡ ಮಗಳು ನಿಜಕ್ಕೂ ಅವರ ನೆನಪಲ್ಲೇ ಬೆಳೆಯುತ್ತಿರುತ್ತಾರೆ. ಅವರ ಕಷ್ಟ, ಸುಖ ಎಲ್ಲವನ್ನೂ ಮರೆಯಾದ ಅಪ್ಪನ ಬಳಿ ಹೇಳಿಕೊಳ್ಳಲು ಅವರ ಸಮಾಧಿ ಬಳಿ ಬಂದು ಮಾತನಾಡುವುದು. ಯಾರು ಇಲ್ಲದ ಸ್ಥಳಗಳಲ್ಲಿ ಅಪ್ಪ ನನ್ನ ಜೊತೆ ಇದ್ದಾರೆ ಎಂದು ಮಾತನಾಡುವುದನ್ನು ಮಾಡುತ್ತಿರುತ್ತಾರೆ. ಈಗ ಅದೇ ರೀತಿ ತಂದೆಯನ್ನು ಕಳೆದುಕೊಂಡ ಪುಟ್ಟ ಮಗಳು ತಂದೆಯ ಸಮಾಧಿ ಬಳಿ ಕೇಕ್ ಕಟ್ ಮಾಡಿ ಹುಟ್ಟು ಹಬ್ಬ ಆಚರಣೆ ಮಾಡಿದ ಘಟನೆ ಕೊಪ್ಪಳದಲ್ಲಿ ನಡೆದಿದ್ದು ಮನ ಮಿಡಿಯುವಂತಿದೆ.

ಕೊಪ್ಪಳ‌ ಜಿಲ್ಲೆ ಕುಷ್ಟಗಿ ಪಟ್ಟಣದಲ್ಲಿ ಪುಟ್ಟ ಬಾಲಕಿ ತನ್ನ ಎಂಟನೇ ವರ್ಷದ ಹುಟ್ಟು ಹಬ್ಬವನ್ನ ತಂದೆಯ ಸಮಾಧಿ ಬಳಿ ಆಚರಣೆ ಮಾಡಿಕೊಂಡಿದ್ದಾಳೆ. ಈ ಘಟನೆ ಮನಕಲಕುವಂತಿತ್ತು. ಪುಟ್ಟ ಬಾಲಕಿ ಸ್ಪಂದನ ಸಮಾಧಿ ಬಳಿ ಕೇಕ್ ಕಟ್‌ ಮಾಡೋ ವಿಡಿಯೋ ಸದ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸ್ಪಂದನ ತಂದೆ ಮಹೇಶ್ ಕೊನಸಾಗರ ಕಳೆದ ಮೇ ತಿಂಗಳಲ್ಲಿ ಮಹಾಮಾರಿ ಕೊರೊನಾದಿಂದ ಮೃತಪಟ್ಟಿದ್ರು. ತಂದೆಯ ನೆನಪಲ್ಲಿ ಸ್ಪಂದನ ತನ್ನ ಹುಟ್ಟು ಹಬ್ಬವನ್ನು ತಂದೆಯ ಸಮಾಧಿ ಬಳಿ ಆಚರಿಸಿಕೊಂಡಿದ್ದಾರೆ. ತಂದೆಯ ಸಮಾಧಿ ಬಳಿ ಕೇಕ್ ಕತ್ತರಿಸಿ ನೀವು ಇಲ್ಲ ಎನ್ನುವ ಭಾವನೆಯೇ ಇಲ್ಲ. ನೀವು ನಮ್ಮ ಜೊತೆಗಿದ್ದೀರಿ ಎನ್ನುವಂತೆ ತನ್ನ ಎಂಟನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಹಾಗೂ ತಂದೆಯ ಸಮಾಧಿಗೆ ಕೇಕ್ ಅರ್ಪಿಸಿದ್ದಾರೆ.

ಇದನ್ನೂ ಓದಿ: Sudeep Birthday: ಕಿಚ್ಚ ಸುದೀಪ್​ಗೆ ಮುದ್ದು ಮಗಳ ವಿಶ್​; ಅಪ್ಪನ 10 ಗುಣಗಳನ್ನು ಕೊಂಡಾಡಿದ ಸಾನ್ವಿ

Published On - 10:10 am, Thu, 2 September 21

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?