Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಸಭಾ ಟಿಕೆಟ್​ ಮಿಸ್​ ಆದ್ರೂ ಮೋದಿಯನ್ನ ಹಾಡಿ ಹೊಗಳಿದ ಸಂಸದ ಕರಡಿ ಸಂಗಣ್ಣ

ಲೋಕಸಭಾ ಚುನಾವಣೆಯಲ್ಲಿ (Lok Sabha Election) ಕೊಪ್ಪಳದ ಹಾಲಿ ಬಿಜೆಪಿ ಸಂಸದ ಕರಡಿ ಸಂಗಣ್ಣಗೆ (Karadi Sanganna) ಟಿಕೆಟ್ ಮಿಸ್ ಆಗಿದೆ. ಇದರ ಬೆನ್ನಲ್ಲೇ ಕೊಪ್ಪಳ ತಾಲೂಕಿನ ಗಿಣಿಗೇರಾದ ರೇಲ್ವೆ ಮೇಲ್ಸೇತುವೆ ಉದ್ಘಾಟನೆ ಬಳಿಕ ಮಾತನಾಡಿದ ಸಂಸದ ಕರಡಿ ಸಂಗಣ್ಣ ‘ಪ್ರಧಾನಿ ನರೇಂದ್ರ ಮೋದಿಯವರನ್ನ ಹಾಡಿ ಹೊಗಳಿದ್ದಾರೆ.

ಲೋಕಸಭಾ ಟಿಕೆಟ್​ ಮಿಸ್​ ಆದ್ರೂ ಮೋದಿಯನ್ನ ಹಾಡಿ ಹೊಗಳಿದ ಸಂಸದ ಕರಡಿ ಸಂಗಣ್ಣ
ಕೊಪ್ಪಳ ಹಾಲಿ ಸಂಸದ ಕರಡಿ ಸಂಗಣ್ಣ
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 16, 2024 | 6:28 PM

ಕೊಪ್ಪಳ, ಮಾ.16: ಲೋಕಸಭಾ ಚುನಾವಣೆಯಲ್ಲಿ (Lok Sabha Election) ಗೆದ್ದು ಮತ್ತೊಮ್ಮೆ ಅಧಿಕಾರ ಹಿಡಿಯಬೇಕೆಂಬ ಉದ್ದೇಶದಿಂದ ಬಿಜೆಪಿ (BJP) ಅಳೆದು ತೂಗಿ ಟಿಕೆಟ್ ಘೋಷಣೆ ಮಾಡಿದೆ. ಅದರಂತೆ ಬಿಎಸ್ ಯಡಿಯೂರಪ್ಪನವರ ಕಟ್ಟಾ ಬೆಂಬಲಿಗರಾಗಿದ್ದ ಕೊಪ್ಪಳದ ಹಾಲಿ ಬಿಜೆಪಿ ಸಂಸದ ಕರಡಿ ಸಂಗಣ್ಣಗೆ (Karadi Sanganna) ಟಿಕೆಟ್ ಮಿಸ್ ಆಗಿದೆ. ಇದರ ಬೆನ್ನಲ್ಲೇ ಕೊಪ್ಪಳ ತಾಲೂಕಿನ ಗಿಣಿಗೇರಾದ ರೇಲ್ವೆ ಮೇಲ್ಸೇತುವೆ ಉದ್ಘಾಟನೆ ಬಳಿಕ ಮಾತನಾಡಿದ ಸಂಸದ ಕರಡಿ ಸಂಗಣ್ಣ ‘ಪ್ರಧಾನಿ ನರೇಂದ್ರ ಮೋದಿಯವರನ್ನ ಹಾಡಿ ಹೊಗಳಿದ್ದಾರೆ.

ಮೋದಿಯವರನ್ನ ಹಾಡಿ ಹೊಗಳಿದ ಸಂಸದ

ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರದ ಜನ್ರಿಗೆ ನಾನು ಋಣಿಯಾಗಿದ್ದೇನೆ. ಭಾರತವನ್ನು ಈ ಹಿಂದೆ‌ ಹಾವಾಡಿಗರ ದೇಶ ಎಂದು ಬೇರೆ ದೇಶದವರು ಕರೆಯುತ್ತಿದ್ದರು. ಭಾರತವನ್ನು ಇಂದು ಜಗತ್ತು ತಿರುಗಿ ನೋಡುವಂತೆ ಮೋದಿ ಮಾಡಿದ್ದಾರೆ. 80 ಏರ್ಪೋರ್ಟ್ ಇದ್ದವು, ಇದೀಗ 120 ಏರ್ಪೋರ್ಟ್​ಗಳು ಆಗಿವೆ. ಇಲ್ಲಿನ ಏರ್ಪೋರ್ಟ್ ಅಭಿವೃದ್ಧಿಗಳ ಬಗ್ಗೆ ಅಮೆರಿಕಾದಲ್ಲಿ ಚರ್ಚೆ ಆಗುತ್ತಿದೆ. ಇಷ್ಟೊಂದು ಅಭಿವೃದ್ಧಿಗೆ ಮೋದಿ ಅವರೇ ಕಾರಣ ಎಂದಿದ್ದಾರೆ. ಇನ್ನು ನನ್ನ ಅವಧಿಯಲ್ಲಿ ಅತೀ ಹೆಚ್ಚು ತಾಲೂಕುಗಳಲ್ಲಿ ರೇಲ್ವೆ ಲೈನ್​ಗಳು ಆಗಿವೆ. ಮೋದಿಯವರು ಸರ್ವಾಜನಾಂಗಕ್ಕೂ ಅಭಿವೃದ್ಧಿ ಯೋಜನೆ ನೀಡುತ್ತಿದ್ದಾರೆ ಎಂದರು.

ಇದನ್ನೂ ಓದಿ:ಬಿಜೆಪಿ ಕಚೇರಿ ಮೇಲೆ ಸಂಗಣ್ಣ ಕರಡಿ ಬೆಂಬಲಿಗರ ದಾಳಿ, ಬೂಟು ತಗೊಂಡು ಹೊಡಿತೀನಿ ಎಂದ ಎಂಎಲ್​ಸಿ

ಟಿಕೆಟ್​ ಕೈತಪ್ಪಿದ್ದಕ್ಕೆ ಆಪ್ತರ ಮುಂದೆ ನೋವು ತೋಡಿಕೊಂಡಿದ್ದ ಕರಡಿ ಸಂಗಣ್ಣ

ಟಿಕೆಟ್​ ಕೈ ತಪ್ಪುತ್ತಿದ್ದಂತೆ ಬೇಸರ ಹೊರಹಾಕಿದ್ದ ಕರಡಿ ಸಂಗಣ್ಣ, ತಮ್ಮ ಆಪ್ತರ ಮುಂದೆ ನೋವು ತೋಡಿಕೊಂಡಿದ್ದರು. ಕಳೆದ 10 ವರ್ಷದಲ್ಲಿ ಚೆನ್ನಾಗಿ ಕೆಲಸವನ್ನ ಮಾಡಿದ್ದೇನೆ. ಕ್ಷೇತ್ರದಲ್ಲಿ ಜನ, ಕಾರ್ಯಕರ್ತರ ಜೊತೆ ಸಂಪರ್ಕ ಇತ್ತು. ನನಗೇ ಟಿಕೆಟ್ ಎನ್ನುತ್ತಿದ್ದರು. ಆದರೆ, ದಿಢೀರನೇ ನನಗೆ ಟಿಕೆಟ್ ನೀಡುವುದಿಲ್ಲ ಎಂದರು. ಜನರ ಸಂಪರ್ಕ ಇಲ್ಲದಿರುವವರಿಗೆ ಟಿಕೆಟ್ ನೀಡಿದ್ದಾರೆ. ಯಾವ ಮಾನದಂಡ ಅನುಸರಿಸಿದ್ದಾರೆ ಎಂದು ಕರಡಿ ಸಂಗಣ್ಣ ಆಕ್ರೋಶ ಹೊರ ಹಾಕಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ