AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2 ತೊಲೆ ಬಂಗಾರದ ಸರ ನುಂಗಿದ ಸಾಕುನಾಯಿ; ಯಾವಾಗ ಹೊರಬರುತ್ತೆ ಎಂದು ನಾಯಿಯ ಹಿಂದೆ ಅಲೆಯುವಂತಾಗಿದೆ ಪರಿಸ್ಥಿತಿ

ಪಶುವೈದ್ಯರ ಹತ್ತಿರ ನಾಯಿ ತಪಾಸಣೆ ನಡೆಸಿದ ನಂತರವೇ ಸಾಕುನಾಯಿ ಚೈನ್ ನುಂಗಿರುವುದು ಖಚಿತಗೊಂಡಿದೆ. ಆದರೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸುವುದು ಬೇಡ ಎಂದು ಅಭಿಪ್ರಾಯಪಟ್ಟಿದ್ದಾರೆ.

2 ತೊಲೆ ಬಂಗಾರದ ಸರ ನುಂಗಿದ ಸಾಕುನಾಯಿ; ಯಾವಾಗ ಹೊರಬರುತ್ತೆ ಎಂದು ನಾಯಿಯ ಹಿಂದೆ ಅಲೆಯುವಂತಾಗಿದೆ ಪರಿಸ್ಥಿತಿ
ಚಿನ್ನದ ಸರ ನುಂಗಿದ ಸಾಕುನಾಯಿ
Follow us
TV9 Web
| Updated By: Skanda

Updated on: Jun 12, 2021 | 7:34 AM

ಕೊಪ್ಪಳ: ರಾತ್ರಿ ಮಲಗುವ ಮುನ್ನ ಬಿಚ್ಚಿಟ್ಟ ಬಂಗಾರದ ಸರವನ್ನು ಮನೆಯ ಸಾಕುನಾಯಿ ನುಂಗಿದ ವಿಚಿತ್ರ ಘಟನೆಯೊಂದು ಕೊಪ್ಪಳದ ಜಿಲ್ಲೆ ಕಾರಟಗಿಯಲ್ಲಿ ನಡೆದಿದೆ. ಕಾರಟಗಿ ನಿವಾಸಿ ದಿಲೀಪ್ ಎನ್ನುವವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಅವರ ಸಾಕುನಾಯಿಯೇ ಸುಮಾರು 80 ಸಾವಿರ ಬೆಲೆಬಾಳುವ ಬಂಗಾರದ ಚೈನ್​ನ್ನು ನುಂಗಿಹಾಕಿತ್ತು.

ರಾತ್ರಿ ಮಲಗುವಾಗ ಕಾರಟಗಿ ನಿವಾಸಿ ದಿಲೀಪ್ ಅವರು ಬಂಗಾರದ ಚೈನ್​ ಅನ್ನು ತೆಗೆದು ಮಲಗಿದ್ದರು. ಆದರೆ ರಾತ್ರಿ ಅವರ ಸಾಕುನಾಯಿ ಆ ಬಂಗಾರದ ಚೈನ್​ನ್ನು ನುಂಗಿಬಿಟ್ಟಿದೆ. ಮಾರನೇ ದಿನ ಬಂಗಾರದ ಚೈನ್ ನಾಪತ್ತೆಯಾದದ್ದು ಬೆಳಕಿಗೆ ಬಂದ ತಕ್ಷಣವೇ ದಿಲೀಪ್ ಅವರಿಗೆ ಅನುಮಾನ ಬಂದಿತ್ತು. ಆದರೆ ಚೈನ್ ಕಳುವಾಗಿರಲು ಸಾಧ್ಯವಿರಲಿಲ್ಲ.  ರಾತ್ರಿ ಹತ್ತಿರವೇ ಇದ್ದ ನಾಯಿ ನುಂಗಿರುವ ಅನುಮಾನ ಬಂದು ಅವರು ಪಶು ವೈದ್ಯರ ಬಳಿ ಪರೀಕ್ಷೆ ನಡೆಸಿದ್ದಾರೆ.

ಪಶುವೈದ್ಯರ ಹತ್ತಿರ ನಾಯಿ ತಪಾಸಣೆ ನಡೆಸಿದ ನಂತರವೇ ಸಾಕುನಾಯಿ ಚೈನ್ ನುಂಗಿರುವುದು ಖಚಿತಗೊಂಡಿದೆ. ಆದರೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸುವುದು ಬೇಡ ಎಂದು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಸಾಕುನಾಯಿಯ ಬಹಿರ್ದೆಸೆ ಮೂಲಕ ಬಂಗಾರದ ಚೈನ್ ಹೊರಬರಲು ಅವರು ಕಾದಿದ್ದಾರೆ. ಸದ್ಯ ಬಂಗಾರ ತುಂಡು ತುಂಡಾಗಿ ಅರ್ಧ ತೊಲೆಯಷ್ಟು ಬಂಗಾರ ಮಾತ್ರ ಹೊರಬಂದಿದೆ. ಇನ್ನೂ ಒಂದೂವರೆ ತೊಲೆಯಷ್ಟು ಬಂಗಾರ ಸಾಕುನಾಯಿಯ ಹೊಟ್ಟೆಯಲ್ಲಿದ್ದು, ನಾಯಿ ಬಹಿರ್ದೆಸೆಗೆ ಹೋಗುವುದನ್ನೇ ಕಾಯುವಂತಾಗಿದೆ.

ಇದನ್ನೂ ಓದಿ: ಸ್ವಚ್ಛತಾ ಕಾಮಗಾರಿ ಪರಿಶೀಲನೆಗೆ ಉಟ್ಟ ಸೀರೆಯಲ್ಲೇ ಮ್ಯಾನ್​ಹೋಲ್​ಗೆ ಇಳಿದ ಪಾಲಿಕೆ ಅಧಿಕಾರಿ: ವಿಡಿಯೋ ವೈರಲ್

Fact Check: ನೀತಾ ಅಂಬಾನಿಗೆ ನಮಸ್ಕಾರ ಮಾಡುತ್ತಿರುವ ನರೇಂದ್ರ ಮೋದಿ, ಸಾಮಾಜಿಕ ಮಾಧ್ಯಮಗಳಲ್ಲಿ;ಫೇಕ್ ಫೋಟೊ; ವೈರಲ್ (Gold Chain swallowed by pet dog in Koppal)

ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ
ಆಂಧ್ರ ಡಿಸಿಎಂ ಪವನ್ ಕಲ್ಯಾಣ್​​ಗೆ ಚಾಕೋಲೇಟ್ ಕೊಟ್ಟ ಪ್ರಧಾನಿ ಮೋದಿ
ಆಂಧ್ರ ಡಿಸಿಎಂ ಪವನ್ ಕಲ್ಯಾಣ್​​ಗೆ ಚಾಕೋಲೇಟ್ ಕೊಟ್ಟ ಪ್ರಧಾನಿ ಮೋದಿ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ