AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

2 ತೊಲೆ ಬಂಗಾರದ ಸರ ನುಂಗಿದ ಸಾಕುನಾಯಿ; ಯಾವಾಗ ಹೊರಬರುತ್ತೆ ಎಂದು ನಾಯಿಯ ಹಿಂದೆ ಅಲೆಯುವಂತಾಗಿದೆ ಪರಿಸ್ಥಿತಿ

ಪಶುವೈದ್ಯರ ಹತ್ತಿರ ನಾಯಿ ತಪಾಸಣೆ ನಡೆಸಿದ ನಂತರವೇ ಸಾಕುನಾಯಿ ಚೈನ್ ನುಂಗಿರುವುದು ಖಚಿತಗೊಂಡಿದೆ. ಆದರೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸುವುದು ಬೇಡ ಎಂದು ಅಭಿಪ್ರಾಯಪಟ್ಟಿದ್ದಾರೆ.

2 ತೊಲೆ ಬಂಗಾರದ ಸರ ನುಂಗಿದ ಸಾಕುನಾಯಿ; ಯಾವಾಗ ಹೊರಬರುತ್ತೆ ಎಂದು ನಾಯಿಯ ಹಿಂದೆ ಅಲೆಯುವಂತಾಗಿದೆ ಪರಿಸ್ಥಿತಿ
ಚಿನ್ನದ ಸರ ನುಂಗಿದ ಸಾಕುನಾಯಿ
TV9 Web
| Edited By: |

Updated on: Jun 12, 2021 | 7:34 AM

Share

ಕೊಪ್ಪಳ: ರಾತ್ರಿ ಮಲಗುವ ಮುನ್ನ ಬಿಚ್ಚಿಟ್ಟ ಬಂಗಾರದ ಸರವನ್ನು ಮನೆಯ ಸಾಕುನಾಯಿ ನುಂಗಿದ ವಿಚಿತ್ರ ಘಟನೆಯೊಂದು ಕೊಪ್ಪಳದ ಜಿಲ್ಲೆ ಕಾರಟಗಿಯಲ್ಲಿ ನಡೆದಿದೆ. ಕಾರಟಗಿ ನಿವಾಸಿ ದಿಲೀಪ್ ಎನ್ನುವವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಅವರ ಸಾಕುನಾಯಿಯೇ ಸುಮಾರು 80 ಸಾವಿರ ಬೆಲೆಬಾಳುವ ಬಂಗಾರದ ಚೈನ್​ನ್ನು ನುಂಗಿಹಾಕಿತ್ತು.

ರಾತ್ರಿ ಮಲಗುವಾಗ ಕಾರಟಗಿ ನಿವಾಸಿ ದಿಲೀಪ್ ಅವರು ಬಂಗಾರದ ಚೈನ್​ ಅನ್ನು ತೆಗೆದು ಮಲಗಿದ್ದರು. ಆದರೆ ರಾತ್ರಿ ಅವರ ಸಾಕುನಾಯಿ ಆ ಬಂಗಾರದ ಚೈನ್​ನ್ನು ನುಂಗಿಬಿಟ್ಟಿದೆ. ಮಾರನೇ ದಿನ ಬಂಗಾರದ ಚೈನ್ ನಾಪತ್ತೆಯಾದದ್ದು ಬೆಳಕಿಗೆ ಬಂದ ತಕ್ಷಣವೇ ದಿಲೀಪ್ ಅವರಿಗೆ ಅನುಮಾನ ಬಂದಿತ್ತು. ಆದರೆ ಚೈನ್ ಕಳುವಾಗಿರಲು ಸಾಧ್ಯವಿರಲಿಲ್ಲ.  ರಾತ್ರಿ ಹತ್ತಿರವೇ ಇದ್ದ ನಾಯಿ ನುಂಗಿರುವ ಅನುಮಾನ ಬಂದು ಅವರು ಪಶು ವೈದ್ಯರ ಬಳಿ ಪರೀಕ್ಷೆ ನಡೆಸಿದ್ದಾರೆ.

ಪಶುವೈದ್ಯರ ಹತ್ತಿರ ನಾಯಿ ತಪಾಸಣೆ ನಡೆಸಿದ ನಂತರವೇ ಸಾಕುನಾಯಿ ಚೈನ್ ನುಂಗಿರುವುದು ಖಚಿತಗೊಂಡಿದೆ. ಆದರೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸುವುದು ಬೇಡ ಎಂದು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಸಾಕುನಾಯಿಯ ಬಹಿರ್ದೆಸೆ ಮೂಲಕ ಬಂಗಾರದ ಚೈನ್ ಹೊರಬರಲು ಅವರು ಕಾದಿದ್ದಾರೆ. ಸದ್ಯ ಬಂಗಾರ ತುಂಡು ತುಂಡಾಗಿ ಅರ್ಧ ತೊಲೆಯಷ್ಟು ಬಂಗಾರ ಮಾತ್ರ ಹೊರಬಂದಿದೆ. ಇನ್ನೂ ಒಂದೂವರೆ ತೊಲೆಯಷ್ಟು ಬಂಗಾರ ಸಾಕುನಾಯಿಯ ಹೊಟ್ಟೆಯಲ್ಲಿದ್ದು, ನಾಯಿ ಬಹಿರ್ದೆಸೆಗೆ ಹೋಗುವುದನ್ನೇ ಕಾಯುವಂತಾಗಿದೆ.

ಇದನ್ನೂ ಓದಿ: ಸ್ವಚ್ಛತಾ ಕಾಮಗಾರಿ ಪರಿಶೀಲನೆಗೆ ಉಟ್ಟ ಸೀರೆಯಲ್ಲೇ ಮ್ಯಾನ್​ಹೋಲ್​ಗೆ ಇಳಿದ ಪಾಲಿಕೆ ಅಧಿಕಾರಿ: ವಿಡಿಯೋ ವೈರಲ್

Fact Check: ನೀತಾ ಅಂಬಾನಿಗೆ ನಮಸ್ಕಾರ ಮಾಡುತ್ತಿರುವ ನರೇಂದ್ರ ಮೋದಿ, ಸಾಮಾಜಿಕ ಮಾಧ್ಯಮಗಳಲ್ಲಿ;ಫೇಕ್ ಫೋಟೊ; ವೈರಲ್ (Gold Chain swallowed by pet dog in Koppal)

Follow Us
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ