AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿವ ಶ್ರೀರಾಮುಲುರಿಂದ ಜೀರ್ಣೋದ್ಧಾರ ಕಾರ್ಯ; ಮಹಾಲಕ್ಷ್ಮಿ ದೇವಾಲಯ, ಪಂಪಾ ಸರೋವರ ಧ್ವಂಸ ಆರೋಪ

ಇದೇ ಜಾಗದಲ್ಲಿ ರಾಮ, ಶಬರಿಯನ್ನು ಹುಡಕುತ್ತಾ ಬಂದಾಗ ಆಂಜನೇಯನ ಭೇಟಿಯಾಗಿರುವ ಕುರುಹುಗಳಿವೆ. ಆದರ ಈಗ ಶಬರಿ ಕಾಯ್ದ ಶ್ರದ್ದಾ ಕೇಂದ್ರ, ಶಬರಿ ಗುಹೆಗಳನ್ನು ಬುಲ್ಡೋಜರ್ ಮೂಲಕ ಕೆಡವಲಾಗುತ್ತಿದೆ. ಹೀಗಾಗಿ ಪಂಪಾ ಸರೋವರ ಜೀರ್ಣೋದ್ಧಾರ ಇದೀಗ ವಿವಾದಕ್ಕೆ ಕಾರಣವಾಗಿದೆ.

ಸಚಿವ ಶ್ರೀರಾಮುಲುರಿಂದ ಜೀರ್ಣೋದ್ಧಾರ ಕಾರ್ಯ; ಮಹಾಲಕ್ಷ್ಮಿ ದೇವಾಲಯ, ಪಂಪಾ ಸರೋವರ ಧ್ವಂಸ ಆರೋಪ
ಐತಿಹಾಸಿಕ ಕುರುಹುಗಳಿಗೆ ಧಕ್ಕೆ ಮಾಡಲಾಗುತ್ತಿದೆ ಎಂಬ ಆರೋಪ
TV9 Web
| Edited By: |

Updated on: Nov 27, 2021 | 3:54 PM

Share

ಕೊಪ್ಪಳ: ಜಿಲ್ಲೆಯ ಕಿಷ್ಕಿಂದೆ ಪ್ರದೇಶ ಅಂದರೆ ಗಂಗಾವತಿ ತಾಲೂಕಿನ ಆನೆಗೊಂದಿ ಸಮೀಪ ಇರುವ ಪಂಪಾ ಸರೋವರ. ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಪಂಪಾ ಸರೋವರ ಬಳಿ, ಸಾರಿಗೆ ಸಚಿವರಾದ ಶ್ರೀರಾಮುಲು ಜೀರ್ಣೋದ್ಧಾರಕ್ಕೆ ಮುಂದಾಗಿದ್ದಾರೆ. ಆದರೆ ಜೀರ್ಣೋದ್ಧಾರದ ಹೆಸರಲ್ಲಿ ಅಲ್ಲಿ ಐತಿಹಾಸಿಕ ಕುರುಹುಗಳನ್ನು ಕೆಡವಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಏಕೆಂದರೆ ಪಂಪಾ ಸರೋವರದ ಬಳಿ ಇದೀಗ ಜೀರ್ಣೋದ್ಧಾರ ಕೆಲಸ ಜೋರಾಗಿ ನಡೆಯುತ್ತಿದೆ. ಇದರ ಹೆಸರಲ್ಲಿ ಅಲ್ಲಿನ ಐತಿಹಾಸಿಕ ಕುರುಹುಗಳಿಗೆ ಧಕ್ಕೆ ಮಾಡಲಾಗುತ್ತಿದೆ ಎಂಬ ಆರೋಪ ಇದೆ.

ಇದೇ ಜಾಗದಲ್ಲಿ ರಾಮ, ಶಬರಿಯನ್ನು ಹುಡಕುತ್ತಾ ಬಂದಾಗ ಆಂಜನೇಯನ ಭೇಟಿಯಾಗಿರುವ ಕುರುಹುಗಳಿವೆ. ಆದರ ಈಗ ಶಬರಿ ಕಾಯ್ದ ಶ್ರದ್ದಾ ಕೇಂದ್ರ, ಶಬರಿ ಗುಹೆಗಳನ್ನು ಬುಲ್ಡೋಜರ್ ಮೂಲಕ ಕೆಡವಲಾಗುತ್ತಿದೆ. ಹೀಗಾಗಿ ಪಂಪಾ ಸರೋವರ ಜೀರ್ಣೋದ್ಧಾರ ಇದೀಗ ವಿವಾದಕ್ಕೆ ಕಾರಣವಾಗಿದೆ. ಕಳೆದ ಎರಡು ತಿಂಗಳಲ್ಲಿ ಸಾರಿಗೆ ಸಚಿವ ಶ್ರೀರಾಮಲು ಸುಮಾರು ಹತ್ತು ಸಾರಿ ಪಂಪಾ ಸರೋವರಕ್ಕೆ ಭೇಟಿ ನೀಡಿದ್ದಾರೆ‌. ಶ್ರೀರಾಮಲು ಸ್ವಂತ ಖರ್ಚಿನಲ್ಲಿ ಪಂಪಾ ಸರೋವರ ಜೀರ್ಣೋದ್ಧಾರಕ್ಕೆ ಮುಂದಾಗಿದ್ದಾರೆ. ಆದರೆ ಜೀರ್ಣೋದ್ಧಾರ ಹೆಸರಲ್ಲಿ ರಾಮಾಯಣ ಕಾಲದ ಕುರುಹು ನಾಶ ಆಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಂಪಾ ಸರೋವರ ಜಾಗದಲ್ಲಿ ಜೀರ್ಣೋದ್ಧಾರಕ್ಕೆ ಪುರಾತತ್ವ ಇಲಾಖೆ ಅನುಮತಿ ನೀಡಿದೆ. ಇಲಾಖೆ ಅನುಮತಿ ನಿಡಿರುವುದು ಹಲವಾರು ಅನುಮಾನಕ್ಕೆ ಕಾರಣವಾಗಿದೆ. ಇಲ್ಲಿ ಒಂದು ಶೌಚಾಲಯ ಕಟ್ಟಬೇಕಂದರು ಹಂಪಿ ಪ್ರಾಧಿಕಾರದ ಅನುಮತಿ ಬೇಕು. ಪಂಪಾ ಸರೋವರ ತನ್ನದೆ ಆದ ಇತಿಹಾಸ ಹೊಂದಿದೆ. ಹೀಗಾಗಿ ಹಂಪಿ ಅಭಿವೃದ್ಧಿ ಪ್ರಾದಿಕಾರ ಇಲ್ಲಿ ಜೀರ್ಣೋದ್ಧಾರಕ್ಕೆ ಅನುಮತಿ ಕೊಡದೆ ಇದ್ದರೂ ಕೆಲಸ ಆರಂಭವಾಗಿರೋದು ರಾಜಕೀಯ ಪ್ರಭಾವ ಎನ್ನಲಾಗುತ್ತಿದೆ.

ರಾಮಾಯಾಣ ಕಾಲದ ಅನೇಕ ಕುರುಹುಗಳು ಇಂದಿಗೂ ಇಲ್ಲಿ ನಾವು ಕಾಣಬಹುದು. ಇದೇ ಕಿಷ್ಕಿಂದೆ ಪ್ರದೇಶದಲ್ಲಿ ಆಂಜನೇಯ ಜನಿಸಿದ ಎನ್ನುವ ಪ್ರತೀತಿ ಇದೆ. ಸದ್ಯ ಪಂಪಾ ಸರೋವರದಲ್ಲಿ ಕೆಲಸ ನಡೆಯುತ್ತಿರುವುದು ನೋಡಿದರೆ, ರಾಮ ಆಂಜನೇಯ ಭೇಟಿಯಾದ ಕುರುಹು ಶಿಘ್ರವೇ ನೆಲಸಮವಾಗೋದರಲ್ಲಿ ಅಚ್ಚರಿ ಇಲ್ಲ. ಇನ್ನು ಇದರ ಹಿಂದೆ ರಾಜಕೀಯ ಇದೆ ಎನ್ನುವ ಅನುಮಾನಗಳು ದಟ್ಟವಾಗಿದೆ. ಏಕೆಂದರೆ ಮುಂದಿನ ವಿಧಾನಸಭೆ ಚುನಾವಣೆಗೆ ಬಳ್ಳಾರಿ ಪ್ರಮುಖ ರಾಜಕಾರಣಿಯೊಬ್ಬರು‌ ಗಂಗಾವತಿ ಇಂದ ಸ್ಪರ್ಧೆ ಮಾಡಲು ಬಯಸಿದ್ದಾರೆ. ಹೀಗಾಗಿ ರಾಮುಲು ಸ್ವಂತ ಹಣದಿಂದ ಜೀರ್ಣೋದ್ಧಾರ ಮಾಡ್ತೀದಾರೆ ಎನ್ನಲಾಗಿದೆ. ಸ್ವಂತ ಹಣದಲ್ಲಿ ಜೀರ್ಣೋದ್ಧಾರ ಮಾಡೋದು ಸರಿ ಆದರೆ ಜೀರ್ಣೋದ್ಧಾರ ಹೆಸರಲ್ಲಿ ಐತಿಹಾಸಿಕ ಕುರುಹು ನೆಲಸಮ‌ ಮಾಡುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ವರದಿ: ಶಿವಕುಮಾರ್ ಪತ್ತಾರ್

ಇದನ್ನೂ ಓದಿ:

ಮಂಗಳೂರಿನಲ್ಲಿ ನಾಗ ದೇವರ ಮೂರ್ತಿಗಳ ಧ್ವಂಸ ಪ್ರಕರಣ; ಎಂಟು ಆರೋಪಿಗಳು ಅರೆಸ್ಟ್

Gandhi Statue: ಮೆಲ್ಬೋರ್ನ್​ನಲ್ಲಿ ಭಾರತದಿಂದ ಉಡುಗೊರೆಯಾಗಿ ನೀಡಲಾಗಿದ್ದ ಗಾಂಧಿ ಪ್ರತಿಮೆ ಧ್ವಂಸ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್