AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹನುಮ ಜನ್ಮ ಭೂಮಿಯಲ್ಲಿ ಭಾವೈಕ್ಯತೆಯ ಮೆರಗು; ಕೇಸರಿ ಬಟ್ಟೆ ತೊಟ್ಟು ಹನುಮ ಮಾಲೆ ಧರಿಸಿ ವ್ರತ ಆಚರಿಸಿದ ಮುಸ್ಲಿಂ ವ್ಯಕ್ತಿ ಅಸ್ಲಂ

ಹಿರೇಬೊಮ್ಮನಾಳದಲ್ಲಿಯ ಅಸ್ಲಂ ವಾಲಿಕಾರ ಎಂಬುವವರು ಹನುಮ ಮಾಲೆ ಧರಿಸಿದ್ದಾರೆ. ಅಸ್ಲಂ ಚಳ್ಳಾರಿಯ ವಲಯದ ವಾಲಿಕಾರರಾಗಿ ಕೆಲಸ ಮಾಡುತ್ತಿದ್ದಾರೆ. ಅಸ್ಲಂ ವಾಲಕಾರ ವಿಕಲಚೇತನರಾಗಿದ್ದು. ತಮ್ಮ ಸ್ನೇಹಿತರೊಂದಿಗೆ ಹನುಮ ಮಾಲೆ ಧರಿಸಿದ್ದಾರೆ.

ಹನುಮ ಜನ್ಮ ಭೂಮಿಯಲ್ಲಿ ಭಾವೈಕ್ಯತೆಯ ಮೆರಗು; ಕೇಸರಿ ಬಟ್ಟೆ ತೊಟ್ಟು ಹನುಮ ಮಾಲೆ ಧರಿಸಿ ವ್ರತ ಆಚರಿಸಿದ ಮುಸ್ಲಿಂ ವ್ಯಕ್ತಿ ಅಸ್ಲಂ
ಮುಸ್ಲಿಂ ಭಕ್ತ ಅಸ್ಲಂ
TV9 Web
| Edited By: |

Updated on:Apr 16, 2022 | 8:40 AM

Share

ಕೊಪ್ಪಳ: ಆತ ಹುಟ್ಟಿದ್ದು ಮುಸ್ಲಿಂ ಆಗಿ. ಆದರೆ ಆತನಿಗೆ ರಾಮಭಂಟನ ಬಗ್ಗೆ ಆಪಾರ ಭಕ್ತಿ. ಎಲ್ಲಾ ಧರ್ಮದ ಸಾರವು ಒಂದೇ. ದೇವರ ನಾಮಸ್ಮರಣೆಗೆ ಧರ್ಮಲೇಪನ ಬೇಡ ಎಂದು ಮುಸ್ಲಿಂ ವ್ಯಕ್ತಿಯೊಬ್ಬ ಹನುಮ ಮಾಲೆ ಧಾರಣೆ ಮಾಡಿದ್ದಾರೆ. 11 ದಿನ ಹನುಮ ಮಾಲೆ ಧರಿಸಿ ಹನುಮನ ಪೂಜೆ ಮಾಡಿದ್ದಾರೆ. ರಾಜ್ಯದಲ್ಲಿ ದೇವಸ್ಥಾನದಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ. ಹಿಜಾಬ್, ಹಲಾಲ್ ಕಟ್, ಜಟ್ಕಾ ಕಟ್ ಹೀಗೆ ಹಲವಾರು ವಿವಾದಗಳೆದ್ದಿವೆ. ಇಂಥ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ಹಿರೇಬೊಮ್ಮನಾಳದಲ್ಲಿ ಮುಸ್ಲಿಂ ಯುವಕನೊಬ್ಬ ಹನುಮ ಮಾಲೆ ಧರಿಸಿದ್ದಾರೆ.

ಹಿರೇಬೊಮ್ಮನಾಳದಲ್ಲಿಯ ಅಸ್ಲಂ ವಾಲಿಕಾರ ಎಂಬುವವರು ಹನುಮ ಮಾಲೆ ಧರಿಸಿದ್ದಾರೆ. ಅಸ್ಲಂ ಚಳ್ಳಾರಿಯ ವಲಯದ ವಾಲಿಕಾರರಾಗಿ ಕೆಲಸ ಮಾಡುತ್ತಿದ್ದಾರೆ. ಅಸ್ಲಂ ವಾಲಕಾರ ವಿಕಲಚೇತನರಾಗಿದ್ದು. ತಮ್ಮ ಗ್ರಾಮದಲ್ಲಿ ಆತನ ಸ್ನೇಹಿತರು ಹನುಮ ಮಾಲೆ ಧರಿಸಿದ್ದಾರೆ. ಅವರೊಂದಿಗೆ ತಾನು ಹನುಮ ಮಾಲೆ ಧರಿಸಿದ್ದಾರೆ. ಹಿರೇಬೊಮ್ಮನಾಳದಲ್ಲಿ ಕಳೆದ ಐದು ವರ್ಷದಿಂದ ಯುವಕರು ಹನುಮ ಮಾಲೆ ಧರಿಸುತ್ತಿದ್ದಾರೆ. ಇದೇ ಸಮಯದಲ್ಲಿ ಈ ವರ್ಷ ಅಸ್ಲಂ ವಾಲಿಕಾರ ಹನುಮ ಮಾಲೆಧಾರಿಯಾಗಿದ್ದಾರೆ. ಹಿಂದೂಗಳಂತೆ ಹನುಮ ಮಾಲೆ ಧಾರಣೆ ಮಾಡಿದ ಅವರು ಕೇಸರಿ ಉಡುಪು, ಹನುಮನ ಮೂರ್ತಿ, ಗಂಧ ಸೇರಿದಂತೆ ಅಸ್ಲಂ ನಿತ್ಯ ಭಕ್ತಿಯಿಂದ ಹನುಮನ ಪೂಜೆ ಮಾಡುತ್ತಿದ್ದಾರೆ.

ಹನುಮನ ಜನ್ಮ ಸ್ಥಳವಾಗಿರುವ ಅಂಜನಾದ್ರಿಯಲ್ಲಿ ಶನಿವಾರ ಹನುಮ‌ ಜಯಂತಿ ಆಚರಣೆ ಇದೆ. ಈ ಸಂದರ್ಭದಲ್ಲಿ ಆಂಜನೇಯನಿಗಾಗಿ ಮಾಲೆ ಧರಿಸಿ ವ್ರತ ಆಚರಣೆ ಮಾಡುತ್ತಾರೆ. ಹನುಮ ಜಯಂತಿ ಹಿನ್ನೆಲೆಯಲ್ಲಿ ಕೆಲವರು 48 ದಿನ, ಕೆಲವರು 30 ದಿನ, 11 ದಿನ 5 ದಿನಗಳವರೆಗೂ ಹನುಮ ಮಾಲೆ ಧರಿಸಿ ವ್ರತ ಆಚರಿಸುತ್ತಾರೆ. ಇದರಂತೆ ಜಾತಿ, ಧರ್ಮಾತೀತವಾಗಿ ಹನುಮನ ಜಪ ಮಾಡುತ್ತಾರೆ. ಇದಕ್ಕೆ ಸಾಕ್ಷಿಯೆಂಬಂತೆ ಹಿರೇಬೊಮ್ಮನಾಳದ ಅಸ್ಲಂ ವಾಲಿಕಾರ ಭಕ್ತಿಯಿಂದ ಹನುಮ ಮಾಲೆ ಧರಿಸಿದ್ದಾರೆ. ತಾವು ಹನುಮ ಮಾಲೆ ಧರಿಸಿದಾಗ ಕುಟುಂಬದವರು ಸಹಕರಿಸಿದ್ದಾರೆ. ಎಲ್ಲರೂ ಒಂದೇ ಧರ್ಮ ಯಾವುದೇ ಆಗಿರಲಿ ಎಲ್ಲರ ಆರಾಧನೆ ಮುಖ್ಯ ಎಂದರು. ಅಸ್ಲಂ ಮುಸ್ಲಿಂ ಆಗಿದ್ದರೂ ಯಾವುದೇ ಬೇಧವಿಲ್ಲದೆ ಎಲ್ಲರೊಂದಿಗೆ ಸೇರಿ ಹನುಮನ ಪೂಜೆ ಮಾಡುತ್ತಿದ್ದಾರೆ. ಸೂಫಿ ಶರಣರ ನಾಡಾಗಿರುವ ಕೊಪ್ಪಳ ಜಿಲ್ಲೆಯಲ್ಲಿ ಭಾವೈಕ್ಯತೆಗೆ ಇಂಥ ಘಟನೆಗಳು ಸಾಕ್ಷಿಯಾಗಿವೆ.

muslim hanuman devotee

ಅಸ್ಲಂ

muslim hanuman devotee

ಅಸ್ಲಂ

muslim hanuman devotee

ಅಸ್ಲಂ

ಇದನ್ನೂ ಓದಿ: ಮೊಬೈಲ್​​ನಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಹಾಕಿದ ಮುಸ್ಲಿಂ ಹುಡುಗರು ಅರೆಸ್ಟ್​; ಅವರಿಗೇನೂ ಗೊತ್ತಿಲ್ಲ ಬಿಟ್ಬಿಡಿ ಎಂದ ತಾಯಿ

ಈಶ್ವರಪ್ಪ ವಿರುದ್ಧ ಹೋರಾಟಕ್ಕೆ ಇಳಿದ ಕಾಂಗ್ರೆಸ್; 9 ತಂಡ ರಚಿಸಿ ರಾಜ್ಯಾದ್ಯಂತ ಹೋರಾಟ, ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ತಟ್ಟಲಿದೆ ಬಿಸಿ

Published On - 8:39 am, Sat, 16 April 22

Follow Us
ಮುಂಬೈ ವಿಮಾನ ನಿಲ್ದಾಣದೊಳಗೆ ಭಾರಿ ಬೆಂಕಿ ಅವಘಡ
ಮುಂಬೈ ವಿಮಾನ ನಿಲ್ದಾಣದೊಳಗೆ ಭಾರಿ ಬೆಂಕಿ ಅವಘಡ
600ಕ್ಕೆ 597 ಅಂಕ ಗಳಿಸಿದ ವಿದ್ಯಾರ್ಥಿನಿಯರು: ಪೋಷಕರ ಭಾವುಕ ಮಾತು
600ಕ್ಕೆ 597 ಅಂಕ ಗಳಿಸಿದ ವಿದ್ಯಾರ್ಥಿನಿಯರು: ಪೋಷಕರ ಭಾವುಕ ಮಾತು
ಎಲ್​ಪಿಜಿ ಕೊರತೆ: ಆಟೋ ಚಾಲಕರಿಗೆ ದಿನಸಿ ಕಿಟ್ ನೀಡಿದ ನಟ ವಿನೋದ್ ರಾಜ್
ಎಲ್​ಪಿಜಿ ಕೊರತೆ: ಆಟೋ ಚಾಲಕರಿಗೆ ದಿನಸಿ ಕಿಟ್ ನೀಡಿದ ನಟ ವಿನೋದ್ ರಾಜ್
ಧಾರ್ಮಿಕ ಆಚರಣೆಗಾಗಿ ನರ್ಮದಾ ನದಿಗೆ 11 ಸಾವಿರ ಲೀಟರ್ ಹಾಲು ಸುರಿದ ಭಕ್ತರು!
ಧಾರ್ಮಿಕ ಆಚರಣೆಗಾಗಿ ನರ್ಮದಾ ನದಿಗೆ 11 ಸಾವಿರ ಲೀಟರ್ ಹಾಲು ಸುರಿದ ಭಕ್ತರು!
ಬೆಂಗಳೂರು ಓಟ: 10 ಕಿಮೀ ರಸ್ತೆ ದುರಸ್ತಿಗೆ ತೇಜಸ್ವಿ ಸೂರ್ಯ ಆಗ್ರಹ
ಬೆಂಗಳೂರು ಓಟ: 10 ಕಿಮೀ ರಸ್ತೆ ದುರಸ್ತಿಗೆ ತೇಜಸ್ವಿ ಸೂರ್ಯ ಆಗ್ರಹ
ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿಲ್ಲ; ವಿಜಯ್ ಹೇಳಿಕೆಗೆ ಡಿಕೆಶಿ ತಿರುಗೇಟು
ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿಲ್ಲ; ವಿಜಯ್ ಹೇಳಿಕೆಗೆ ಡಿಕೆಶಿ ತಿರುಗೇಟು
ಪಿಯುಸಿ ಫಲಿತಾಂಶ 2026: ಸಚಿವ ಮಧುಬಂಗಾರಪ್ಪ ಸುದ್ದಿಗೋಷ್ಠಿ ನೇರಪ್ರಸಾರ
ಪಿಯುಸಿ ಫಲಿತಾಂಶ 2026: ಸಚಿವ ಮಧುಬಂಗಾರಪ್ಪ ಸುದ್ದಿಗೋಷ್ಠಿ ನೇರಪ್ರಸಾರ
ಯಾರು‌ ಮತದಾನ ಮಾಡಿಲ್ಲ ಹೋಗಿ ಓಟ್ ಮಾಡಿ: ಮಸೀದಿಯಿಂದ ಸಂದೇಶ
ಯಾರು‌ ಮತದಾನ ಮಾಡಿಲ್ಲ ಹೋಗಿ ಓಟ್ ಮಾಡಿ: ಮಸೀದಿಯಿಂದ ಸಂದೇಶ
ರಸ್ತೆಯಲ್ಲಿ ಹೊಡೆದಾಕ್ತಾರೆ: ರೌಡಿಶೀಟರ್​ನಲ್ಲಿರೋ ಅಪ್ಪ ಮಗನಿಗೆ ತರಾಟೆ
ರಸ್ತೆಯಲ್ಲಿ ಹೊಡೆದಾಕ್ತಾರೆ: ರೌಡಿಶೀಟರ್​ನಲ್ಲಿರೋ ಅಪ್ಪ ಮಗನಿಗೆ ತರಾಟೆ
ದ್ವಿತೀಯ ಪಿಯು ರಿಸಲ್ಟ್: ಕಾಮರ್ಸ್​​ನಲ್ಲಿ ಮಂಗಳೂರಿನ ದಿಶಾ ಟಾಪರ್​​
ದ್ವಿತೀಯ ಪಿಯು ರಿಸಲ್ಟ್: ಕಾಮರ್ಸ್​​ನಲ್ಲಿ ಮಂಗಳೂರಿನ ದಿಶಾ ಟಾಪರ್​​