AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಮುಗಿಯಿತಾ? ಎಲ್ಲೆಲ್ಲಿ ಬಸ್​ ಸಂಚಾರ ಪ್ರಾರಂಭವಾಗಿದೆ? ಇಲ್ಲಿದೆ ಮಾಹಿತಿ

ಸಾರಿಗೆ ನೌಕರರ ಮುಷ್ಕರದಿಂದಾಗಿ ಬಸ್​ಗಳು ಸಂಚರಿಸುತ್ತಿರಲಿಲ್ಲ. ಸತತವಾಗಿ ನಾಲ್ಕನೇ ದಿನ ಕಾಲಿಟ್ಟ ಮುಷ್ಕರದಲ್ಲಿ ಕೆಲವು ಕಡೆ ಬಸ್​ ಸಂಚಾರ ಆರಂಭಗೊಂಡಿದೆ. ಇನ್ನು ಕೆಲವೆಡೆ ಬಸ್​ಗಳ ಸಂಚಾರವಿಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಬಸ್​ ಸಂಚಾರ ಆರಂಭಗೊಂಡಿದ್ದರಿಂದ ಪ್ರಯಾಣಿಕರ ಮುಖದಲ್ಲಿ ಅಲ್ಪ ಖುಷಿ ಕಾಣುತ್ತಿದೆ.

ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಮುಗಿಯಿತಾ? ಎಲ್ಲೆಲ್ಲಿ ಬಸ್​ ಸಂಚಾರ ಪ್ರಾರಂಭವಾಗಿದೆ? ಇಲ್ಲಿದೆ ಮಾಹಿತಿ
ಮತ್ತೆ ಆರಂಭವಾದ ಬಸ್​ ಸಂಚಾರ
shruti hegde
| Updated By: ಸಾಧು ಶ್ರೀನಾಥ್​|

Updated on: Dec 14, 2020 | 10:29 AM

Share

ಬೆಂಗಳೂರು: ಸಾರಿಗೆ ನೌಕರರು ಮುಷ್ಕರದಲ್ಲಿ ತೊಡಗಿರುವ ಹಿನ್ನೆಲೆ ಕೆಎಸ್​ಆರ್​ಟಿಸಿ ಮತ್ತು ಬಿಎಂಟಿಸಿ ಬಸ್​ಗಳು ಸಂಚಾರ ನಡೆಸುತ್ತಿರಲಿಲ್ಲ. ಕಳೆದ 3 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಬಸ್ ಮುಷ್ಕರ ವಾಪಸ್ ಪಡೆದಿದ್ದಾರೆ ಎಂಬುದು  ಗೊಂದಲದ ಗೂಡಾಗಿದೆ. ಈ ಹಿನ್ನೆಲೆಯಲ್ಲಿ ಕೆಲ ಕಡೆ ಬಸ್​ ಸಂಚಾರ ಪ್ರಾರಂಭಗೊಂಡಿದೆ. ಇನ್ನು ಕೆಲವೆಡೆ ಬಸ್ ಸಂಚಾರಗೊಳ್ಳುವ ಯಾವುದೇ ನಿರೀಕ್ಷೆಗಳು ಕಾಣಿಸುತ್ತಿಲ್ಲ. ಹಾಗಾದ್ರೆ ಎಲ್ಲೆಲ್ಲಿ ಬಸ್​ ಸಂಚಾರ ಆರಂಭಗೊಂಡಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಬೆಂಗಳೂರು:  ಬೆಂಗಳೂರಿನಲ್ಲಿ ಬೆಳಗ್ಗೆ 9 ಗಂಟೆವರೆಗೆ 69 ಬಿಎಂಟಿಸಿ ಬಸ್​ಗಳ ಸಂಚಾರಗೊಂಡಿದೆ. ನಿಧಾನಗತಿಯಲ್ಲಿ ಒಂದೊಂದೆ ಬಸ್​ಗಳು ಸಂಚಾರ ಕೈಗೊಳ್ಳುವ ಸಾಧ್ಯತೆಗಳಿವೆ.

ಬಾಗಲಕೋಟೆ: ಬಾಗಲಕೋಟೆ ಕೆಎಸ್​ಆರ್​ಟಿಸಿ ಬಸ್​ನ ಕೆಲವು ನೌಕರರು ಪ್ರತಿಭಟನೆ ನಡೆಸುತ್ತಿದ್ದರೆ, ಇನ್ನುಕೆಲವರು ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದಾರೆ.  ಪೊಲೀಸ್ ಬಿಗಿ ಭದ್ರತೆಯಲ್ಲಿ ಬಸ್ ಸಂಚಾರಗೊಂಡಿದೆ. ‘ನಮಗೆ ಯಾವುದೇ ಅಧಿಕಾರಿಗಳು ಒತ್ತಡ ಹಾಕಿಲ್ಲ ಬೆದರಿಕೆ ನೀಡಿಲ್ಲ. 3 ದಿನಗಳ ಕಾಲ ನಾವು ಮುಷ್ಕರಕ್ಕೆ ಬೆಂಬಲ ನೀಡಿದ್ದೇವೆ. ಈಗ ಸಾರ್ವಜನಿಕರಿಗೆ ತೊಂದರೆ ಆಗಬಾರದೆಂದು ಕರ್ತವ್ಯಕ್ಕೆ ಹಾಜರಾಗಿದ್ದೇವೆ ಎಂದು ಬಾಗಲಕೋಟೆ ಬಸ್ ನೌಕರರು ಹೇಳಿದ್ದಾರೆ. ಬಾಗಲಕೋಟೆಯಿಂದ ಜಮಖಂಡಿಗೆ ಬಸ್ ಸಂಚರಿಸಿದೆ.

ಹುಬ್ಬಳ್ಳಿ: ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣದಿಂದ ಒಟ್ಟು  12 ಬಸ್​ಗಳ ಸಂಚಾರ ಆರಂಭಗೊಂಡಿದೆ. ಮೂರು ದಿನಗಳಿಂದ ಕೆಎಸ್​ಆರ್​ಟಿಸಿ​ಗೆ ಕೋಟಿ ಕೋಟಿ ನಷ್ಟವಾಗಿದೆ. ವಾಯವ್ಯ ವಿಭಾಗಕ್ಕೆ 12 ಕೋಟಿ ರೂ. ನಷ್ಟವಾಗಿದೆ. ಇಂದು ನಾವು ಬಸ್​ ಸಂಚಾರ ಪ್ರಾರಂಭಿಸುತ್ತೇವೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ಹೇಳಿದ್ದಾರೆ.

ಧಾರವಾಡ: ಧಾರವಾಡದಲ್ಲಿ ಕೆಲಸಕ್ಕೆ ಹೋಗಲು ಪ್ರಯಾಣಿಕರ ಪರದಾಟ ನಡೆಸುತ್ತಿದ್ದಾರೆ. 3 ದಿನಗಳಾದರೂ ಬಸ್​ ನೌಕರರ ಮುಷ್ಕರ ಮುಗಿದಿಲ್ಲ. ಚಾಲಕರು ಖಾಸಗಿ ವಾಹನಗಳಲ್ಲಿ ಸಂಚರಿಸಬೇಕೆಂದರೆ ಮೂರ್ನಾಲ್ಕು ಪಟ್ಟು ಹೆಚ್ಚಿನ ಹಣ ಕೇಳುತ್ತಿದ್ದಾರೆ. ಹಣ ಕೊಡಲಾಗದೇ ಪ್ರಯಾಣಿಕರು ಪರದಾಟ ನಡೆಸುತ್ತಿದ್ದಾರೆ.

ಹಾಸನ: ಹಾಸನದಲ್ಲಿ ಬಸ್ ಸಂಚಾರ ಆರಂಭಗೊಂಡಿದೆ. ಹಾಸನದಿಂದ ಬೆಂಗಳೂರಿಗೆ ಹೋಗುವ ಬಸ್​ ಹೊರಟಿದೆ. ಬಸ್​ ಬಂದ್ ಇಲ್ಲಿಗೇ ನಿಲ್ಲುವ ಹಂತದಲ್ಲಿದೆ. ನಾಲ್ಕನೆ ದಿನವಾದ ಇಂದು ಎಂದಿನಂತೆ ಬಸ್ ಸಂಚಾರ ಆರಂಭವಾಗೋ ನಿರೀಕ್ಷೆಯಿದೆ. ಹಾಸನ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್​ಗಳು ಕಂಡುಬರುತ್ತಿವೆ. ಬಸ್​ ನಿಲ್ದಾಣದಲ್ಲಿ ಪ್ರಯಾಣಿಕ ದಂಡೇ ನಿಂತಿದೆ.

ದಾವಣಗೆರೆ: ನಾಲ್ಕನೇ ದಿನವೂ ದಾವಣಗೆರೆಯಲ್ಲಿ ಸಾರಿಗೆ ನೌಕರರ ಮುಷ್ಕರ ಮುಂದುವರೆದಿದೆ. ಬೆಳಿಗ್ಗೆ ನಿರಂತರವಾಗಿ ಬಸ್​ ಸಂಚಾರ ಆರಂಭಗೊಂಡಿತ್ತು. ನಂತರ ಸಮಯ ಕಳೆದಂತೆ ಬಸ್​ಗಳ ಓಡಾಟ ಕುಂಠಿತಗೊಂಡಿದೆ. ಪ್ರಯಾಣಿಕರ ಪರದಾಟ ಮುಗಿಲು ಮುಟ್ಟಿದೆ. ಬಸ್​ಗಳ ಸಂಚಾರ ಆರಂಭಗೊಳ್ಳುತ್ತದೆ ಎಂಬ ನಿರೀಕ್ಷೆಯೊಂದಿಗೆ ಪ್ರಯಾಣಿಕರು ಬಸ್​ ನಿಲ್ದಾಣಗಳಲ್ಲಿ ಕಾಯುತ್ತಾ ನಿಂತಿದ್ದಾರೆ. ಬಸ್​ ಬರುವಿಕೆಯ ಯಾವುದೇ ಸೂಚನೆಗಳು ಸಿಗದಂತಾಗಿದೆ.

ಯಾದಗಿರಿ: ಯಾದಗಿರಿಯಲ್ಲಿ 4ನೇ ದಿನಕ್ಕೆ ಕಾಲಿಟ್ಟ ಸಾರಿಗೆ ಸಿಬ್ಬಂದಿ ಮುಷ್ಕರ. ಕೊರೆಯುವ ಚಳಿಯಲ್ಲಿ ಪುಟಾಣಿ ಮಕ್ಕಳೊಂದಿಗೆ ಬೆಳಿಗ್ಗೆ 5 ಗಂಟೆಗೆ ಮುಂಬೈನಿಂದ ರೈಲಿನಲ್ಲಿ ಆಗಮಿಸಿದ್ದ ಪ್ರಯಾಣಿಕರಿಗೆ ಬಸ್​ಗಳು ಸಿಗದಂತಾಗಿದೆ.

ಚಿಕ್ಕಬಳ್ಳಾಪುರ:  ಪೊಲೀಸ್ ಭದ್ರತೆಯೊಂದಿಗೆ ಚಿಕ್ಕಬಳ್ಳಾಪುರ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಿಂದ ಶಿಡ್ಲಘಟ್ಟ ಕಡೆಗೆ ಬಸ್ ಸಂಚಾರ ಪ್ರಾರಂಭಗೊಂಡಿದೆ. ಬಸ್ ನಲ್ಲಿ ಕೆಎಸ್​ಆರ್​ಟಿಸಿ ಅಧಿಕಾರಿಗಳು, ಪೊಲೀಸರು ಮತ್ತು ಪ್ರಯಾಣಿಕರು ಪ್ರಯಾಣ ಆರಂಭಿಸಿದ್ದಾರೆ.

ರಾಜ್ಯದ ಕೆಲವೆಡೆ ಎಂದಿನಂತೆ ಆರಂಭವಾದ ಸಾರಿಗೆ ಸಂಚಾರ.. ಬೆಂಗಳೂರು ಟು ಮೈಸೂರಿಗೂ ನಾನ್‌ಸ್ಟಾಪ್ ಬಸ್ ಸೌಲಭ್ಯ

ಮೆಜೆಸ್ಟಿಕ್‌ ನಿಲ್ದಾಣಕ್ಕೆ 8 ಬಿಎಂಟಿಸಿ ಬಸ್​ಗಳ ಆಗಮನ.. ಶಿವಾಜಿನಗರದಲ್ಲೂ ಬಸ್ ಸಂಚಾರ

ಹೇಗಿದೆ ನೋಡಿ ತುಕಾಲಿ ಸಂತೋಷ್ ಹೆಣ್ಣಿನ ಅವತಾರ
ಹೇಗಿದೆ ನೋಡಿ ತುಕಾಲಿ ಸಂತೋಷ್ ಹೆಣ್ಣಿನ ಅವತಾರ
ಗುಜರಾತ್​​ನಲ್ಲಿ ಸೇತುವೆ ಕುಸಿತ, ನದಿಗೆ ಬಿದ್ದ ವಾಹನಗಳು, 9 ಮಂದಿ ಸಾವು
ಗುಜರಾತ್​​ನಲ್ಲಿ ಸೇತುವೆ ಕುಸಿತ, ನದಿಗೆ ಬಿದ್ದ ವಾಹನಗಳು, 9 ಮಂದಿ ಸಾವು
ಗಂಭೀರ ನಡಿಗೆ, ಧೈರ್ಯಶಾಲಿ ಅನೆಗಳನ್ನು ಅಯ್ಕೆ ಮಾಡಲಾಗುತ್ತದೆ: ಅರಣ್ಯಾಧಿಕಾರಿ
ಗಂಭೀರ ನಡಿಗೆ, ಧೈರ್ಯಶಾಲಿ ಅನೆಗಳನ್ನು ಅಯ್ಕೆ ಮಾಡಲಾಗುತ್ತದೆ: ಅರಣ್ಯಾಧಿಕಾರಿ
ನಮೀಬಿಯಾದ ಸಾಂಪ್ರದಾಯಿಕ ಡ್ರಮ್ ನುಡಿಸಿದ ಪ್ರಧಾನಿ ಮೋದಿ
ನಮೀಬಿಯಾದ ಸಾಂಪ್ರದಾಯಿಕ ಡ್ರಮ್ ನುಡಿಸಿದ ಪ್ರಧಾನಿ ಮೋದಿ
ಬ್ರೆಜಿಲ್​​ನಲ್ಲಿ ಮೋದಿ: ಶಿವತಾಂಡವ ಸ್ತೋತ್ರ, ಭರತನಾಟ್ಯ, ಸಾಂಬಾ ರೆಗಿ ಗೀತೆ
ಬ್ರೆಜಿಲ್​​ನಲ್ಲಿ ಮೋದಿ: ಶಿವತಾಂಡವ ಸ್ತೋತ್ರ, ಭರತನಾಟ್ಯ, ಸಾಂಬಾ ರೆಗಿ ಗೀತೆ
ಕೋಳಿ ಸಾರಿನ  ಋಣ; ತರುಣ್ ಜೊತೆ ಸಿನಿಮಾ ಮಾಡ್ತಾರೆ ಶಿವಣ್ಣ
ಕೋಳಿ ಸಾರಿನ  ಋಣ; ತರುಣ್ ಜೊತೆ ಸಿನಿಮಾ ಮಾಡ್ತಾರೆ ಶಿವಣ್ಣ
ಮಂಡ್ಯ ರೈತರ ಆಕ್ರೋಶಕ್ಕೆ ಮಣಿದು ತಡರಾತ್ರಿ ನೀರು ಬಿಡುಗಡೆ ಮಾಡಿದ ಸರ್ಕಾರ
ಮಂಡ್ಯ ರೈತರ ಆಕ್ರೋಶಕ್ಕೆ ಮಣಿದು ತಡರಾತ್ರಿ ನೀರು ಬಿಡುಗಡೆ ಮಾಡಿದ ಸರ್ಕಾರ
ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಹೃದಯ ತಪಾಸಣೆಗೆ ಮುಗಿಬಿದ್ದ ಜನಸಾಗರ
ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಹೃದಯ ತಪಾಸಣೆಗೆ ಮುಗಿಬಿದ್ದ ಜನಸಾಗರ
ಎಂಎಲ್​ಎ ಗೆಸ್ಟ್​ಹೌಸ್​ ಕ್ಯಾಂಟೀನ್ ನಿರ್ವಾಹಕರನ್ನು ಥಳಿಸಿದ ಶಿವಸೇನಾ ಶಾಸಕ
ಎಂಎಲ್​ಎ ಗೆಸ್ಟ್​ಹೌಸ್​ ಕ್ಯಾಂಟೀನ್ ನಿರ್ವಾಹಕರನ್ನು ಥಳಿಸಿದ ಶಿವಸೇನಾ ಶಾಸಕ
ಮತದಾರರ ಪಟ್ಟಿ ಪರಿಷ್ಕರಣೆ ವಿರೋಧಿಸಿ ಆರ್​ಜೆಡಿಯಿಂದ ರೈಲು ತಡೆ
ಮತದಾರರ ಪಟ್ಟಿ ಪರಿಷ್ಕರಣೆ ವಿರೋಧಿಸಿ ಆರ್​ಜೆಡಿಯಿಂದ ರೈಲು ತಡೆ