AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಿ ಬಸ್​ ನೌಕರರಿಗೆ ಸಂಕಷ್ಟ.. ಗಳಿಕೆ ರಜೆ ಖಾಲಿಯಾದ್ರೆ ನೌಕರರ ಸಂಬಳಕ್ಕೆ ಕತ್ತರಿ?

BMTC ಹಾಗೂ KSRTC ನಿಗಮಗಳು ದಿವಾಳಿಯಂಚಿಗೆ ಬಂದು ನಿಂತಿವೆ. ಈ ಹಿಂದೆ ಪ್ರತಿನಿತ್ಯ 6500 ಬಸ್ ಸಂಚಾರ ಮಾಡ್ತಿದ್ದ BMTC, ಸದ್ಯ 4 ಸಾವಿರಕ್ಕೆ ಇಳಿದಿದೆ. ಇನ್ನು 45 ಲಕ್ಷ ಇದ್ದ ಪ್ರಯಾಣಿಕರ ಸಂಖ್ಯೆ ಸದ್ಯ 20ರಿಂದ 25ಲಕ್ಷಕ್ಕೆ ಇಳಿದಿದೆ.

ಸರ್ಕಾರಿ ಬಸ್​ ನೌಕರರಿಗೆ ಸಂಕಷ್ಟ.. ಗಳಿಕೆ ರಜೆ ಖಾಲಿಯಾದ್ರೆ ನೌಕರರ ಸಂಬಳಕ್ಕೆ ಕತ್ತರಿ?
ಪೃಥ್ವಿಶಂಕರ
| Edited By: ಸಾಧು ಶ್ರೀನಾಥ್​|

Updated on:Jan 09, 2021 | 9:45 AM

Share

ಒಂದು ಕಾಲದಲ್ಲಿ BMTC, KSRTC ಡ್ರೈವರ್ ಇಲ್ಲಾ ಕಂಡಕ್ಟರ್ ಆದ್ರೆ ಸಾಕು ಲೈಫ್ ಸೆಟೆಲ್ ಆಗುತ್ತೆ ಅನ್ನೋ ಭಾವನೆ ಜನ್ರಲ್ಲಿತ್ತು. ಯಾಕಂದ್ರೆ ಮಳೆ ಬರ್ಲಿ ಬಿಸಿಲೇ ಇರಲಿ ಇವರ ಸಂಬಳಕ್ಕೆ ಕೊರತೆ ಮಾತ್ರ ಇರ್ತಿರ್ಲಿಲ್ಲ. ಆದ್ರೆ ಕೊರೊನಾ ಎಲ್ಲವನ್ನೂ ಬದಲಾಯಿಸಿದ್ದು, ಸಂಬಳಕ್ಕೆ ಕತ್ತರಿ ಬೀಳುವ ಆತಂಕ ಎದುರಾಗಿದೆ.

ಗಳಿಕೆ ರಜೆ ಖಾಲಿಯಾದ್ರೆ ಸಂಬಳಕ್ಕೆ ಕತ್ತರಿ..! BMTC ಹಾಗೂ KSRTC ನಿಗಮಗಳು ದಿವಾಳಿಯಂಚಿಗೆ ಬಂದು ನಿಂತಿವೆ. ಈ ಹಿಂದೆ ಪ್ರತಿನಿತ್ಯ 6,500 ಬಸ್ ಸಂಚಾರ ಮಾಡ್ತಿದ್ದ BMTC, ಸದ್ಯ 4 ಸಾವಿರಕ್ಕೆ ಇಳಿದಿದೆ. ಇನ್ನು 45 ಲಕ್ಷ ಇದ್ದ ಪ್ರಯಾಣಿಕರ ಸಂಖ್ಯೆ ಸದ್ಯ 20ರಿಂದ 25 ಲಕ್ಷಕ್ಕೆ ಇಳಿದಿದೆ. ಹೀಗಾಗಿ 36 ಸಾವಿರ BMTC ನೌಕರರು ಈಗ ಹಲವು ರೀತಿಯ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ದಿನದಲ್ಲಿ 7 ರಿಂದ 8 ಸಾವಿರ ನೌಕರರಿಗೆ ಡ್ಯೂಟಿಯೇ ಸಿಗ್ತಿಲ್ಲ.

ಇಷ್ಟು ದಿನ ಡ್ಯೂಟಿ ಸಿಕ್ಕಿಲ್ಲ ಅಂದ್ರೆ, ನೌಕರರು ತಮ್ಮ ಸೇವಾವಧಿಯಲ್ಲಿ ಗಳಿಸಿದ ರಜೆಯನ್ನ ಕಟ್ ಮಾಡಿ ಸಂಬಳ ನೀಡಲಾಗ್ತಿತ್ತು. ಆದ್ರೆ ಈಗ ಈ ರೀತಿ ನೌಕರರ ಸಂಬಳಕ್ಕಾಗಿ ರಜೆ ಕಟ್ ಮಾಡಿ ಮಾಡಿ ಎಲ್ಲಾ ಗಳಿಕೆ ರಜೆ ಖಾಲಿಯಾಗಿದೆ. ಹೀಗಾಗಿ ಮುಂಬರೋ ದಿನಗಳಲ್ಲಿ ನೌಕರ ಸಂಬಳವೇ ಕಟ್ ಆಗೋ ಭೀತಿಯಲ್ಲಿದ್ದಾರೆ. ಇನ್ನು ಸಾರಿಗೆ ನೌಕರರ ಮುಷ್ಕರದ ಬಳಿಕ ನಿಗಮದಲ್ಲಿ ನೌಕರರನ್ನ ಟಾರ್ಗೆಟ್ ಮಾಡಲಾಗ್ತಿದೆ ಅನ್ನೋ ಆರೋಪವೂ ಕೇಳಿಬರ್ತಿದೆ.

500ರಿಂದ 600 KSRTC ಎಸಿ ಬಸ್‌ಗಳು ನಿಂತಲ್ಲೇ ನಿಲ್ಲುತ್ತಿವೆ. KSRTC ಕಥೆಯೂ ಹೀಗೆ ಇದೆ. ಕೆಎಸ್ಆರ್‌ಟಿಸಿಯಲ್ಲಿ ಕೆಂಪು ಬಸ್‌ಗಳ ಸಂಚಾರ ಚೇತರಿಸಿಕೊಂಡಿದ್ರೂ, ಎಸಿ ಬಸ್‌ಗಳ ಸಂಚಾರ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿಲ್ಲ. ಸುಮಾರು 500ರಿಂದ 600 KSRTC ಎಸಿ ಬಸ್‌ಗಳು ನಿಂತಲ್ಲೇ ನಿಲ್ಲುತ್ತಿವೆ. ನೌಕರರಿಗೂ ಕೆಲಸ ಇಲ್ಲದಂತಾಗಿದೆ. ಸದ್ಯ ರಾಜ್ಯ ಸರ್ಕಾರ ಸಂಬಳ ನೀಡೋಕೆ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ ಅನ್ನೋ ಉತ್ತರ ನೀಡ್ತಿದೆ. ಹೀಗಾಗಿ ಮುಂಬರೋ ದಿನಗಳಲ್ಲಿ KSRTC ಮತ್ತು BMTCಯಲ್ಲಿ ನೋ ಡ್ಯೂಟಿ ನೋ ಪೇ ಅನ್ನೋ ರೂಲ್ಸ್ ಬರೋ ಆತಂಕದಲ್ಲಿ ಸಾರಿಗೆ ನೌಕರರಿದ್ದಾರೆ.

ಒಟ್ಟಿನಲ್ಲಿ ಒಂದು ವರ್ಷದ ಹಿಂದೆ ಸೌರಿಗೆ ನೌಕರರು ಅಂದ್ರೆ ಲೈಫ್ ಸೆಟಲ್ ಅನ್ನೋ ಸ್ಥಿತಿ ಇತ್ತು. ಆದ್ರೆ ಈಗ ಕೊರೊನಾ ವೈರಸ್ ಹೊಡೆತಕ್ಕೆ ಸಿಲುಕಿ ಸಾರಿಗೆ ನಿಗಮಗಳು ನಲುಗಿ ಹೋಗಿವೆ. ಸಾರಿಗೆ ನಿಗಮ ದಿನ ಕಳೆದಂತೆ ಕುಸಿಯುತ್ತಾ ಹೋಗುತ್ತಿರುವುದು ಸಿಬ್ಬಂದಿಯಲ್ಲಿ ಭಯ ಹುಟ್ಟಿಸಿದೆ.

Published On - 9:35 am, Sat, 9 January 21

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ