AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಳಕಾಲ್ಮೂರು ಬಸ್-ಕ್ರೂಸರ್ ಭೀಕರ ಅಪಘಾತದಲ್ಲಿ ಸಾವಿನ ಸಂಖ್ಯೆ 8ಕ್ಕೆ ಏರಿಕೆ

ಸಾರಿಗೆ ಬಸ್(ಕೆಎಸ್​ಆರ್​ಟಿಸಿ) ಮತ್ತು ಕ್ರೂಸರ್ ವಾಹನಕ್ಕೆ ಡಿಕ್ಕಿಯಾಗಿ, ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅಪಘಾತದ ರಭಸಕ್ಕೆ ಭೀಕರ ಗಾಯಗೊಂಡ 17 ಮಂದಿಯನ್ನು ದಾವಣೆಗೆರೆಯ ಎಸ್.ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು(ಡಿ.28) ಮೂವರು ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ.

ಮೊಳಕಾಲ್ಮೂರು ಬಸ್-ಕ್ರೂಸರ್ ಭೀಕರ ಅಪಘಾತದಲ್ಲಿ ಸಾವಿನ ಸಂಖ್ಯೆ 8ಕ್ಕೆ ಏರಿಕೆ
ಬಸ್ ಮತ್ತು ಕ್ರೂಸರ್ ವಾಹನದ ನಡುವಿನ ಅಪಘಾತದಿಂದ ಮೃತರಾದ ದುರ್ದೈವಿಗಳು
shruti hegde
| Edited By: |

Updated on: Dec 28, 2020 | 10:00 AM

Share

ಚಿತ್ರದುರ್ಗ: ನಿನ್ನೆ ಬೆಳಗ್ಗೆ(ಡಿ. 27) ಮೊಳಕಾಲ್ಮೂರು ತಾಲೂಕಿನ ಬಿ.ಜಿ. ಕೆರೆ ಬಳಿ ಸಾರಿಗೆ ಬಸ್​ ಮತ್ತು ಕ್ರೂಸರ್ ವಾಹನಕ್ಕೆ ಡಿಕ್ಕಿಯಾಗಿ ಅಪಘಾತ  ಸಂಭವಿಸಿತ್ತು. ಸ್ಥಳದ್ದೇ ಐವರು ಸಾವನ್ನಪ್ಪಿದ್ದರು. ಇದೀಗ, ಭೀಕರ ಅಪಘಾತದ ಪರಿಣಾಮ ಸಾವಿನ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.

ಸಾರಿಗೆ ಬಸ್(ಕೆಎಸ್​ಆರ್​ಟಿಸಿ) ಮತ್ತು ಕ್ರೂಸರ್ ವಾಹನಕ್ಕೆ ಡಿಕ್ಕಿಯಾಗಿ, ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅಪಘಾತದ ರಭಸಕ್ಕೆ ಭೀಕರ ಗಾಯಗೊಂಡ 17 ಮಂದಿಯನ್ನು ದಾವಣೆಗೆರೆಯ ಎಸ್.ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು (ಡಿ. 28) ಮೂವರು ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ.

ಮೃತ ದುರ್ದೈವಿ ದೇವದುರ್ಗ ತಾಲೂಕಿನ ಗಲಗ್ ಗ್ರಾಮದ ನಾಗಮ್ಮ(42) ಜ್ಯೋತಿ ಬಸವ(20) ಹಾಗೂ ಸೋಮನಮರಡಿಯ ಬುಡ್ಡಪ್ಪ(40) ಎಂದು ಗುರುತಿಸಲಾಗಿದೆ. ಇನ್ನುಳಿದವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

KSRTC ಬಸ್, ಕ್ರೂಸರ್ ಮುಖಾಮುಖಿ.. ಐವರ ದುರ್ಮರಣ