ಖಾಸಗಿ ಬಸ್​ಗಳ ಪ್ರಾಬಲ್ಯ: ಕರಾವಳಿ ಭಾಗಕ್ಕೆ ತಟ್ಟದ ಸಾರಿಗೆ ನೌಕರರ ಬಂದ್ ಬಿಸಿ

ಖಾಸಗಿ ಬಸ್​ಗಳೇ ಹೆಚ್ಚಿನ ಸಂಖ್ಯೆಯಲ್ಲಿ ಓಡಾಟ ನಡೆಸುವ ಕರಾವಳಿ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸರ್ಕಾರಿ ಬಸ್ ನೌಕರರ ಮುಷ್ಕರ ದೊಡ್ಡ ತೊಂದರೆಯನ್ನು ಉಂಟುಮಾಡಿಲ್ಲ. ಸರ್ಕಾರಿ ನಗರ ಸಾರಿಗೆ ಬಸ್​ಗಳೂ ಓಡಾಟ ನಡೆಸುತ್ತಿದ್ದು ಜನಜೀವನ ಸುಗಮವಾಗಿದೆ.

ಖಾಸಗಿ ಬಸ್​ಗಳ ಪ್ರಾಬಲ್ಯ: ಕರಾವಳಿ ಭಾಗಕ್ಕೆ ತಟ್ಟದ ಸಾರಿಗೆ ನೌಕರರ ಬಂದ್ ಬಿಸಿ
ಉಡುಪಿ ಖಾಸಗಿ ಬಸ್ ನಿಲ್ದಾಣ
Follow us
| Updated By: ganapathi bhat

Updated on:Apr 07, 2022 | 10:47 AM

ದಕ್ಷಿಣ ಕನ್ನಡ: ಖಾಸಗಿ ಬಸ್​ಗಳು ಪ್ರಾಬಲ್ಯ ಹೊಂದಿರುವ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾರಿಗೆ ನೌಕರರ ಮುಷ್ಕರದ ಬಿಸಿ ತಟ್ಟಿಲ್ಲ. ಜಿಲ್ಲೆಯೊಳಗೆ ಸಂಚರಿಸುವ ಖಾಸಗಿ ಬಸ್​ಗಳು ಎಂದಿನಂತೆ ಸಂಚಾರ ನಡೆಸುತ್ತಿದ್ದು ಪ್ರಯಾಣಿಕರು ಯಾವುದೇ ಸಮಸ್ಯೆ ಅನುಭವಿಸಿಲ್ಲ. ದಿನನಿತ್ಯದ ಕೆಲಸಗಳಿಗೆ ತೊಡಕುಂಟಾಗಿಲ್ಲ. ಜಿಲ್ಲೆಯ ಜನರ ಜೀವನ ಎಂದಿನಂತೆ ಸಾಗುತ್ತಿದೆ.

ಉಡುಪಿಯಲ್ಲಿ ಖಾಸಗಿ ಬಸ್​ಗಳು ಕಾರ್ಯನಿರ್ವಹಿಸುತ್ತಿರುವುದು.

ಖಾಸಗಿ ಸಿಟಿ ಬಸ್ ಸರ್ವೀಸ್, ಎಕ್ಸ್​ಪ್ರೆಸ್ ಬಸ್ ಸರ್ವೀಸ್​ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಕರಾವಳಿಯ ಜನರೂ ಖಾಸಗಿ ಬಸ್​ಗಳನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ದಿನನಿತ್ಯದ ಕೆಲಸಗಳಿಗೆ, ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರ, ನೆರೆಯ ಊರುಗಳಿಗೆ ಖಾಸಗಿ ಬಸ್​ಗಳೇ ಹೆಚ್ಚಿನ ಸಂಖ್ಯೆಯಲ್ಲಿ ಓಡಾಟ ನಡೆಸುತ್ತವೆ. ಈ ಕಾರಣದಿಂದ ಕರಾವಳಿ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸರ್ಕಾರಿ ಬಸ್ ನೌಕರರ ಮುಷ್ಕರ ದೊಡ್ಡ ವ್ಯತ್ಯಾಸವನ್ನು ಉಂಟುಮಾಡಿಲ್ಲ. ಜನಜೀವನ ಸುಗಮವಾಗಿದೆ.

ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಸರ್ಕಾರಿ ನಗರ ಸಂಚಾರಿ ಬಸ್​ಗಳು ಕಾರ್ಯನಿರ್ವಹಿಸಿವೆ.

ರಾಜ್ಯದ ವಿವಿಧ ಭಾಗಗಳಿಗೆ ಸಂಚರಿಸುವ ಸರ್ಕಾರಿ ಬಸ್​ಗಳ ಓಡಾಟದಲ್ಲಿ ವ್ಯತ್ಯಯವಾಗಿದ್ದರೂ ಸರ್ಕಾರಿ ನಗರ ಸಾರಿಗೆ ಬಸ್​ಗಳು ಓಡಾಟ ನಡೆಸುತ್ತಿವೆ. ಉಡುಪಿಯಿಂದ ಆಗುಂಬೆ, ಶಿವಮೊಗ್ಗ, ಕುಂದಾಪುರ, ಭಟ್ಕಳ, ಕೊಟ್ಟಿಗೆಹಾರದ ಕಡೆಗೆ ಹೋಗುವ ಬಸ್​ಗಳು ವ್ಯವಹರಿಸುತ್ತಿವೆ. ಮಂಗಳೂರಿನಲ್ಲೂ ಇದೇ ಪರಿಸ್ಥಿತಿ ಇದ್ದು ನಗರ ಸಾರಿಗೆಗಳು ಓಡಾಟ ನಡೆಸುತ್ತಿವೆ. ಸುಳ್ಯ, ಪುತ್ತೂರು, ಬಂಟ್ವಾಳ ಮುಂತಾದ ಕಡೆಗೆ ಸರ್ಕಾರಿ ಬಸ್ ಸಂಚಾರ ನಡೆಯುತ್ತಿದೆ. ಹಾಗಾಗಿ ಸ್ಥಳೀಯರಿಗೆ ಯಾವುದೇ ಸಮಸ್ಯೆ ಎದುರಾಗಿಲ್ಲ.

ಆದರೆ, ಉಡುಪಿ, ದಕ್ಷಿಣ ಕನ್ನಡದಿಂದ ಹೊರ ಜಿಲ್ಲೆಗಳಿಗೆ ಪ್ರಯಾಣಿಸುವ ಬಸ್​ಗಳಲ್ಲಿ ವ್ಯತ್ಯಯ ಉಂಟಾಗಿದ್ದು, ಪರವೂರಿನ ಪ್ರಯಾಣಿಕರು ಪರದಾಡುವ ಸ್ಥಿತಿ ಎದುರಾಗಿದೆ. ಮೈಸೂರು, ಬೆಂಗಳೂರು, ಹಾಸನದ ಕಡೆಗೆ ಹೋಗುವ ಕೆಲ ಬಸ್​ಗಳು ತಮ್ಮ ಸಂಚಾರ ಆರಂಭಿಸಿವೆಯಾದರೂ ಮುಷ್ಕರ ನಡೆಸಲು ಒತ್ತಡ ಎದುರಾದರೆ ಸಂಚಾರವನ್ನು ಅರ್ಧಕ್ಕೆ ನಿಲ್ಲಿಸುವ ಅಪಾಯವಿದೆ. ಇದರಿಂದ ಪ್ರಯಾಣಿಕರು ಅತಂತ್ರರಾಗುವ ಸಮಸ್ಯೆ ಎದುರಾಗಬಹುದು.

ಉಡುಪಿಯಿಂದ ಮೈಸೂರು, ಹುಬ್ಬಳ್ಳಿ ಭಾಗಕ್ಕೆ ಹೋಗುವ ಬಸ್​ಗಳು ಬೆಳಗ್ಗೆ ನಿಲ್ದಾಣಕ್ಕೆ ಆಗಮಿಸಿದ್ದು, ಸಂಚಾರ ನಡೆಸಿವೆ. ಆದರೆ, ಪ್ರಯಾಣದಲ್ಲಿ ತೊಡಕುಂಟಾಗುವ ಸಾಧ್ಯತೆಯನ್ನು ಕಡೆಗಣಿಸುವಂತಿಲ್ಲ. ಉತ್ತರ ಕರ್ನಾಟಕ, ಬೆಂಗಳೂರು, ಮೈಸೂರು ಭಾಗಕ್ಕೆ ಹೊರಟಿರುವ ಪ್ರಯಾಣಿಕರು ಸಂಕಷ್ಟಕ್ಕೆ ತುತ್ತಾಗುವ ಅಪಾಯವಿದೆ.

ಉಡುಪಿಯಲ್ಲಿ ಪ್ರತಿನಿತ್ಯ ಸರಾಸರಿ 300 ಸರ್ಕಾರಿ ಬಸ್ಸ್​ಗಳು ಓಡಾಟ ನಡೆಸುತ್ತವೆ. ಆದರೆ, ನಿನ್ನೆ ಮತ್ತು ಇಂದು ಸರ್ಕಾರಿ ಬಸ್ ಸಂಚಾರ ಪ್ರಮಾಣ ಕಡಿಮೆಯಾಗಿದೆ. ನಿನ್ನೆ ಅಂದಾಜು 100ರಷ್ಟು ಬಸ್​ಗಳು ಸಂಚರಿಸಿದ್ದವು. ಇಂದು ಸುಮಾರು 30ರಷ್ಟು ಬಸ್​ಗಳು ಮಾತ್ರ ಡಿಪೋದಿಂದ ಹೊರ ಹೊರಟಿವೆ. ಮಂಗಳೂರಿನಲ್ಲೂ ಇದೇ ಪರಿಸ್ಥಿತಿ ಇದ್ದು ಹೊರ ಊರುಗಳಿಂದ ಬಸ್​ಗಳು ಡಿಪೋಕ್ಕೆ ಆಗಮಿಸುತ್ತಿಲ್ಲ. ಡಿಪೋಕ್ಕೆ ಬಸ್​ಗಳ ಆಗಮನದ ಪ್ರಮಾಣ ಕಡಿಮೆಯಾಗಿದೆ. ದೂರದೂರಿಗೆ ಸರ್ಕಾರಿ ಬಸ್​ಗಳಲ್ಲೇ ಪ್ರಯಾಣಿಸುವ ಅನಿವಾರ್ಯತೆ ಹೊಂದಿದವರು ತೊಂದರೆಗೆ ಒಳಗಾಗದಂತೆ ಎಚ್ಚರಿಕೆ ವಹಿಸಿ ತಮ್ಮ ಪ್ರಯಾಣ ಮುಂದೂಡಿದ್ದಾರೆ. ಹಾಗಾಗಿ ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಿದ್ದು, ಸರ್ಕಾರಿ ಬಸ್ ನಿಲ್ದಾಣಗಳು ಭಣಗುಡುತ್ತಿವೆ.

ಮತ್ತೊಂದೆಡೆ ಮಡಿಕೇರಿ ಬಸ್ ನಿಲ್ದಾಣದಲ್ಲಿ ನಿಂತಿರುವ ಬಸ್​ಗಳಿಗೆ ಆಯಾ ಡಿಪೋಗಳಿಗೆ ತೆರಳಲು ಸೂಚನೆ ನೀಡಲಾಗಿದೆ. ಮಡಿಕೇರಿಯಲ್ಲಿ ಮಂಗಳೂರು, ಚಾಮರಾಜನಗರ, ಕುಂದಾಪುರ, ಮೈಸೂರು, ಬೆಂಗಳೂರು ಸೇರಿದಂತೆ 17 ಡಿಪೋದ ಅಂದಾಜು 60ರಷ್ಟು ಬಸ್​ಗಳು ತಂಗಿವೆ. ಆಯಾ ಡಿಪೋಕ್ಕೆ ತೆರಳಿ, ಅಲ್ಲಿ ಬಸ್ ನಿಲ್ಲಿಸಲು ಮೈಕ್ ಮೂಲಕ ಎಲ್ಲಾ ಚಾಲಕರಿಗೆ ಸಂಚಾರ ನಿಯಂತ್ರಕರು ಸೂಚನೆ ನೀಡಿದ್ದಾರೆ.

ಪೊಲೀಸ್ ಭದ್ರತೆಯಲ್ಲಿ BMTC ಬಸ್ ಸಂಚಾರ: ಮೆಜೆಸ್ಟಿಕ್‌ಗೆ ಆಗಮಿಸಿದ 2 ಬಸ್‌ಗಳು

Published On - 2:47 pm, Sat, 12 December 20

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ