AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಕಠಿಣ‌ ನಿಯಮದ ಎಫೆಕ್ಟ್; ಊಟವನ್ನು ಹೊಳೆಗೆ ಸುರಿದ ವ್ಯಾಪಾರಿಗಳು

ಎಂಟು ಫಾಸ್ಟ್‌ಪುಡ್ ಅಂಗಡಿಗಳು ಹಾಗೂ ಬೇಕರಿಯ ಆಹಾರ ಪದಾರ್ಥಗಳನ್ನು ವ್ಯಾಪಾರಿಗಳು ಸುರಿದಿದ್ದಾರೆ. ಸರ್ಕಾರದಿಂದ ಬೀದಿ ಬದಿ ವ್ಯಾಪಾರಿಗಳಿಗೆ ಪರಿಹಾರ ನೀಡುವಂತೆ ಒತ್ತಾಯ ಮಾಡಿದ್ದಾರೆ.

ಕೊರೊನಾ ಕಠಿಣ‌ ನಿಯಮದ ಎಫೆಕ್ಟ್; ಊಟವನ್ನು ಹೊಳೆಗೆ ಸುರಿದ ವ್ಯಾಪಾರಿಗಳು
ಮೈಸೂರಿನಲ್ಲಿ ಊಟವನ್ನು ಹೊಳೆಗೆ ಸುರಿದ ಬೀದಿ ಬದಿಯ ವ್ಯಾಪಾರಿಗಳು
ಮದನ್​ ಕುಮಾರ್​
|

Updated on: Apr 24, 2021 | 8:08 AM

Share

ಮೈಸೂರು: ಒಂದೆಡೆ ಕೊರೊನಾ ನಿಯಂತ್ರಣ ಮಾಡಬೇಕಾದ ಅನಿವಾರ್ಯತೆ, ಇನ್ನೊಂದೆಡೆ ಬದುಕು ಸಾಗಿಸಲೇಬೇಕಾದ ಅನಿವಾರ್ಯತೆ. ಈ ಎರಡರ ನಡುವೆ ಜನರು ಸಿಕ್ಕಿಕೊಂಡು ಒದ್ದಾಡುವಂತ ಪರಿಸ್ಥಿತಿ ಎಲ್ಲೆಲ್ಲೂ ನಿರ್ಮಾಣ ಆಗಿದೆ. ಪ್ರತಿ ನಿತ್ಯ ದುಡಿದರೆ ಮಾತ್ರ ಹೊಟ್ಟೆಪಾಡು ನಡೆಯುತ್ತದೆ ಎಂಬಂತಹ ಜನರ ಬದುಕಿಗೆ ಲಾಕ್​ಡೌನ್​ ನಿಯಮಗಳಿಂದ ಹೆಚ್ಚು ತೊಂದರೆ ಆಗಿದೆ. ಮೈಸೂರಿನಲ್ಲಿ ಬೀದಿ ಬದಿಯ ವ್ಯಾಪಾರಿಗಳು ಕಂಗಾಲಾಗಿದ್ದಾರೆ.

ಮೈಸೂರಿನಲ್ಲಿ ಬೀದಿ ಬದಿಯ ವ್ಯಾಪಾರಿಗಳು ಚಿಂತೆಗೀಡಾಗಿದ್ದಾರೆ. ಕಠಿಣ ಲಾಕ್​ಡೌನ್​ ನಿಯಮಗಳಿಂದಾಗಿ ಅವರ ವ್ಯಾಪಾರಕ್ಕೆ ಹೊಡೆತಬಿದ್ದಿದೆ. ವ್ಯಾಪಾರಕ್ಕೆಂದು ಸಿದ್ಧ ಮಾಡಿಕೊಂಡು ತಂದಿದ್ದ ಅಡುಗೆಯನ್ನು ಹೊಳೆಗೆ ಸುರಿದಿರುವುದು ವರದಿ ಆಗಿದೆ. ಹುಣಸೂರು ಪಟ್ಟಣದ ಕಲ್ಕುಣಿಕೆಯಲ್ಲಿ ನಡೆದಿರುವ ಘಟ‌ನೆಯ ವಿಡಿಯೋ ಕೂಡ ವೈರಲ್​ ಆಗುತ್ತಿದೆ.

ನಗರದ ಬೀದಿ ಬದಿಯಲ್ಲಿ ಫಾಸ್ಟ್​ಫುಡ್​, ಬೇಕರಿ ಮುಂತಾದ ಅಂಗಡಿಗಳನ್ನು ಇಟ್ಟುಕೊಂಡು ಅನೇಕರು ಜೀವನ ಸಾಗಿಸುತ್ತಿದ್ದಾರೆ. ಲಾಕ್​ಡೌನ್​ ಆದೇಶದಿಂದಾಗಿ ಅವರೆಲ್ಲರ ವ್ಯಾಪಾರಕ್ಕೆ ತೊಂದರೆ ಆಗಿದೆ. ಈಗಾಗಲೇ ಸಿದ್ಧಪಡಿಸಿಕೊಂಡು ತಂದಿದ್ದ ಆಹಾರ ಪದಾರ್ಥಗಳನ್ನು ಹೊಳೆಗೆ ಸುರಿಯದೇ ಬೇರೆ ದಾರಿ ಇಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

‘ಊಟ ಹಳಸಿಹೋದರೆ ಅದರ ಕಥೆ ಮುಗಿಯಿತು. ಅದನ್ನು ತಿನ್ನುವುಂತಿಲ್ಲ. ಚಿಕನ್​ ಅಂಗಡಿಯವರಿಗೆ ನಾವು ದುಡ್ಡು ಎಲ್ಲಿಂದ ಕೊಡುವುದು? ನಾಳೆ ಸಂಘಕ್ಕೆ ದುಡ್ಡು ಕಟ್ಟಬೇಕು. ಬಡವರಿಗೆ ಹೀಗೆ ಮಾಡಿದರೆ ಕಷ್ಟ ಆಗುತ್ತದೆ. ತಿನ್ನುವ ಅನ್ನಕ್ಕೆ ಮಣ್ಣು ಹಾಕುತ್ತಿದ್ದಾರೆ’ ಎಂದು ಬೀದಿ ಬದಿಯ ಫಾಸ್ಟ್​ಫುಡ್​ ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಎಂಟು ಫಾಸ್ಟ್‌ಪುಡ್ ಅಂಗಡಿಗಳು ಹಾಗೂ ಬೇಕರಿಯ ಆಹಾರ ಪದಾರ್ಥಗಳನ್ನು ವ್ಯಾಪಾರಿಗಳು ಸುರಿದಿದ್ದಾರೆ. ಸರ್ಕಾರದಿಂದ ಬೀದಿ ಬದಿ ವ್ಯಾಪಾರಿಗಳಿಗೆ ಪರಿಹಾರ ನೀಡುವಂತೆ ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ: Corona Positive Report : ಕಣ್ಣಲ್ಲೇ ಅಳೆದು ಕೊರೊನಾ ಪಾಸಿಟಿವ್‌ ರಿಪೋರ್ಟ್‌ ಕೊಡ್ತಾರೆ ಆನೆಕಲ್‌ನ ಆಕ್ಷಫರ್ಡ್‌ ಆಸ್ಪತ್ರೆಯಲ್ಲಿ

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ