AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂಬಿದ ಸ್ನೇಹಿತನಿಂದಲೇ ನಡೆಯಿತಾ ಮೋಸ? ಆತ್ಮಹತ್ಯೆಗೂ ಮುನ್ನ ಬರೆದಿದ್ದ ಡೆತ್​ನೋಟ್​ನಲ್ಲಿತ್ತು ನೊಂದವನ ಕರುಣಾಜನಕ ಕತೆ

ಲ ವರ್ಷದ ಹಿಂದೆ ಸುನಿಲ್ ಜೋಶಿಗೆ ಆರ್ಥಿಕಸಮಸ್ಯೆ ಉಂಟಾಗಿತ್ತು. ಆಗ ಸುನಿಲ್ ಧಾರವಾಡದ ಕೆವಿಜಿ ಬ್ಯಾಂಕ್ನಲ್ಲಿ ಸಾಲ ಮಾಡಿದ್ನಂತೆ. ಆ ಸಾಲಕ್ಕೆ ಕಾರ್ತಿಕ್ ಜಾಮೀನು ನೀಡಿದ್ದ. ಆದರೆ ಸುನಿಲ್ ಸಾಲ ತೀರಿಸದೇ ಇದ್ದಿದ್ದಕ್ಕೆ ಬ್ಯಾಂಕ್ ಆತನಿಗೆ ನೋಟಿಸ್ ಕೊಟ್ಟಿತ್ತು.

ನಂಬಿದ ಸ್ನೇಹಿತನಿಂದಲೇ ನಡೆಯಿತಾ ಮೋಸ? ಆತ್ಮಹತ್ಯೆಗೂ ಮುನ್ನ ಬರೆದಿದ್ದ ಡೆತ್​ನೋಟ್​ನಲ್ಲಿತ್ತು ನೊಂದವನ ಕರುಣಾಜನಕ ಕತೆ
ಮೃತ ಯುವಕ ಕಾರ್ತಿಕ್ ಕಾಟಕರ್
ಪೃಥ್ವಿಶಂಕರ
|

Updated on:Dec 26, 2020 | 9:51 AM

Share

ಧಾರವಾಡ: ಅವರಿಬ್ಬರೂ ಕುಚಿಕುಗಳು. ಒಬ್ಬರಿಗೊಬ್ಬರು ಜೀವ ಬೇಕಾದರೂ ಬಿಡುವಷ್ಟು ಆತ್ಮೀಯತೆ. ಇದೇ ಕಾರಣಕ್ಕೆ ಅದರಲ್ಲಿ ಒಬ್ಬನಿಗೆ ತೊಂದರೆಯಾದಾಗ ಮತ್ತೊಬ್ಬ ಸಹಾಯ ಮಾಡಿದ್ದ. ಆದ್ರೆ ಸಹಾಯ ಪಡೆದ ಗೆಳೆಯ ಮಾತ್ರ ಕೈಕೊಟ್ಟ. ಈ ಕಾರಣಕ್ಕೆ ಸಹಾಯ ಮಾಡಿದ್ದ ಯುವಕ ಪ್ರಪಂಚವನ್ನೇ ಬಿಟ್ಟು ಹೋಗಿದ್ದಾನೆ.

ಮೃತ ಯುವಕ ಕಾರ್ತಿಕ ಕಾಟಕರ್

ಈತನ ಹೆಸ್ರು ಕಾರ್ತಿಕ್ ಕಾಟಕರ್. 26 ವರ್ಷದ ಈ ಯುವಕ ಧಾರವಾಡ ನಗರದ ಗಾಂಧಿ ವೃತ್ತದ ಬಳಿಯ ನಿವಾಸಿ. ಲಾಂಡ್ರಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದ ಕಾರ್ತಿಕ್ ಮಟಮಟ ಮಧ್ಯಾಹ್ನವೇ ಜಗತ್ತನ್ನು ಬಿಟ್ಟು ಬಾರದ ಲೋಕಕ್ಕೆ ಹೋಗಿದ್ದಾನೆ. ಆದ್ರೆ ಇವನ ಆತ್ಮಹತ್ಯೆಗೆ ಕಾರಣ ಮಾತ್ರ ಕರುಣಾಜನಕವಾಗಿದ್ದು, ನಂಬಿದ ಸ್ನೇಹಿತನೇ ಈ ಘಟನೆಗೆ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಸ್ನೇಹದ ಮೇಲೆ ಭರವಸೆ ಇಟ್ಟು ಶ್ಯೂರಿಟಿ ಹಾಕಿದ ಗೆಳೆಯ.. ಹೌದು ಕಾರ್ತಿಕ್ ಕಾಟಕರ್ ಹಾಗೂ ಸುನಿಲ್ ಜೋಶಿ ಎಂಬಾತ ಆತ್ಮೀಯ ಗೆಳೆಯರು. ಕೆಲ ವರ್ಷದ ಹಿಂದೆ ಸುನಿಲ್ ಜೋಶಿಗೆ ಆರ್ಥಿಕಸಮಸ್ಯೆ ಉಂಟಾಗಿತ್ತು. ಆಗ ಸುನಿಲ್ ಧಾರವಾಡದ ಕೆವಿಜಿ ಬ್ಯಾಂಕ್ನಲ್ಲಿ ಸಾಲ ಮಾಡಿದ್ನಂತೆ. ಆ ಸಾಲಕ್ಕೆ ಕಾರ್ತಿಕ್ ಜಾಮೀನು ನೀಡಿದ್ದ. ಆದರೆ ಸುನಿಲ್ ಸಾಲ ತೀರಿಸದೇ ಇದ್ದಿದ್ದಕ್ಕೆ ಬ್ಯಾಂಕ್ ಆತನಿಗೆ ನೋಟಿಸ್ ಕೊಟ್ಟಿತ್ತು. 3 ತಿಂಗಳ ಹಿಂದೆ ಸುನಿಲ್ ಊರು ಬಿಟ್ಟು ಓಡಿ ಹೋಗಿದ್ದಾನಂತೆ. ಆತ ಎಲ್ಲಿದ್ದಾನೆ ಅನ್ನೋದು ಯಾರಿಗೂ ಗೊತ್ತಿಲ್ಲ. ಹೀಗಾಗಿ ಸುಮಾರು 4ರಿಂದ 5 ಲಕ್ಷ ಸಾಲವನ್ನು ಇದೀಗ ಕಾರ್ತಿಕ್ ತೀರಿಸೋ ಸ್ಥಿತಿ ನಿರ್ಮಾಣವಾಗಿತ್ತಂತೆ. ಈ ಹಿನ್ನೆಲೆಯಲ್ಲಿ ಡೆತ್ ನೋಟ್ ಬರೆದಿಟ್ಟು ಮನೆಯಲ್ಲೇ ಕಾರ್ತಿಕ್ ಕಾಟಕರ್ ನೇಣಿಗೆ ಶರಣಾಗಿದ್ದಾನೆ.

ಆತ್ಮಹತ್ಯೆಗೂ ಮುನ್ನ ಕಾರ್ತಿಕ್ ಡೆತ್ ನೋಟ್ ಬರೆದಿದ್ದು, ಅದರಲ್ಲಿ ತನ್ನ ಸಾವಿಗೆ ಕಾರಣ ಗೆಳೆಯ ಸುನಿಲ್ ಜೋಶಿ ಅಂತಾ ಸ್ಪಷ್ಟವಾಗಿ ದಾಖಲಿಸಿದ್ದಾನೆ. ಗೆಳೆಯನಾದ ಸುನಿಲ್ ಜೋಶಿ ನನ್ನ ಸಾವಿಗೆ ಕಾರಣ. ಕೆವಿಜಿ ಬ್ಯಾಂಕ್‌ನಲ್ಲಿ ಸುನಿಲ್ ಮಾಡಿದ್ದ ಸಾಲಕ್ಕೆ ಶ್ಯೂರಿಟಿ ಹಾಕಿದ್ದೆ. ಆತ ಬ್ಯಾಂಕ್​ಗೆ ಸಾಲ ಕಟ್ಟದೇ ಇದ್ದಿದ್ದಕ್ಕೆ ಆ ಸಾಲ ನಾನು ತೀರಿಸುವ ಪರಿಸ್ಥಿತಿ ಬಂದಿತ್ತು. ಸುನಿಲ್ ಜೋಶಿ ಕಾರಣದಿಂದಲೇ ನಾನು ಪ್ರಾಣ ಕಳೆದುಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್ನಲ್ಲಿ ಬರೆದಿದ್ದಾನೆ ಕಾರ್ತಿಕ್. ಅಲ್ದೆ ಅಣ್ಣ.. ಅಮ್ಮನ ಚೆನ್ನಾಗಿ ನೋಡ್ಕೋ, ನೀನು ಚೆನ್ನಾಗಿರು ಅಂತಾ ಕಾರ್ತಿಕ್ ನೋವನ್ನು ತೋಡಿಕೊಂಡಿದ್ದಾನೆ. ಮತ್ತೊಂದ್ಕಡೆ ಸ್ನೇಹಿತರು ಕಾರ್ತಿಕ್ ಡೆತ್ ನೋಟ್ ನೋಡಿ ಕಂಬನಿ ಮಿಡಿಯುತ್ತಿದ್ದಾರೆ.

ಈ ನಡುವೆ ಕಾರ್ತಿಕ್ ಆತ್ಮಹತ್ಯೆಗೆ ಇದೊಂದೇ ವಿಚಾರ ಕಾರಣವಲ್ಲ ಎನ್ನಲಾಗುತ್ತಿದೆ. ಯಾಕೆಂದರೆ ಕಾರ್ತಿಕ್​ಕೂಡ ಅನೇಕ ಕಡೆ ಸಾಲ ಮಾಡಿದ್ದನಂತೆ. ಆ ಸಾಲದ ಸಮಸ್ಯೆಯೊಂದಿಗೆ ಇದೀಗ ಸುನಿಲ್ ಮಾಡಿದ್ದ ಸಾಲವೂ ಸೇರಿ ಕಾರ್ತಿಕ್ ಇಂತಹ ನಿರ್ಧಾರಕ್ಕೆ ಬಂದಿರೋದು ವಿರ್ಪಯಾಸವೇ ಸರಿ.

ಧಾರವಾಡ: ಗಾಂಧಿ ವೃತ್ತದ ಬಳಿ ಮನೆಯಲ್ಲಿ ಯುವಕ ನೇಣಿಗೆ ಶರಣು

Published On - 9:50 am, Sat, 26 December 20

ಪಾಟ್ನಾದ ಆಸ್ಪತ್ರೆಗೆ ದಾಖಲಾಗಿದ್ದ ಕೊಲೆ ಆರೋಪಿಯನ್ನು ಶೂಟ್ ಮಾಡಿ ಕೊಲೆ
ಪಾಟ್ನಾದ ಆಸ್ಪತ್ರೆಗೆ ದಾಖಲಾಗಿದ್ದ ಕೊಲೆ ಆರೋಪಿಯನ್ನು ಶೂಟ್ ಮಾಡಿ ಕೊಲೆ
3 ನಿಮಿಷಗಳ ವಿಡಿಯೋದಲ್ಲಿ ಕೊಹ್ಲಿ ಏನು ಹೇಳಿದ್ದಾರೆ? ನೀವೇ ನೋಡಿ
3 ನಿಮಿಷಗಳ ವಿಡಿಯೋದಲ್ಲಿ ಕೊಹ್ಲಿ ಏನು ಹೇಳಿದ್ದಾರೆ? ನೀವೇ ನೋಡಿ
ಬಿಬಿಎಂಪಿಯನ್ನು 5 ಪಾಲಿಕೆಗಳನ್ನಾಗಿ ವಿಂಗಡಿಸಲು ನಿರ್ಧರಿಸಲಾಗಿದೆ: ಶಿವಕುಮಾರ
ಬಿಬಿಎಂಪಿಯನ್ನು 5 ಪಾಲಿಕೆಗಳನ್ನಾಗಿ ವಿಂಗಡಿಸಲು ನಿರ್ಧರಿಸಲಾಗಿದೆ: ಶಿವಕುಮಾರ
ರವಿಚಂದ್ರನ್ ಅವರನ್ನು ಅಳುವಂತೆ ಮಾಡಿದ ಏಕೈಕ ಸಿನಿಮಾ ಇದು
ರವಿಚಂದ್ರನ್ ಅವರನ್ನು ಅಳುವಂತೆ ಮಾಡಿದ ಏಕೈಕ ಸಿನಿಮಾ ಇದು
ಸೇತುವೆ ಲೋಕಾರ್ಪಣೆಗೆ ಬರಬೇಡವೆಂದು ಸಿಎಂಗೆ ಬಿಎಸ್​ವೈ ಹೇಳಿದ್ದರು: ಯತ್ನಾಳ್
ಸೇತುವೆ ಲೋಕಾರ್ಪಣೆಗೆ ಬರಬೇಡವೆಂದು ಸಿಎಂಗೆ ಬಿಎಸ್​ವೈ ಹೇಳಿದ್ದರು: ಯತ್ನಾಳ್
ವಿಶ್ವ ನಂ.1 ಕಾರ್ಲ್ಸನ್​ಗೆ ಸೋಲುಣಿಸಿದ ಮತ್ತೊಬ್ಬ ಭಾರತೀಯ
ವಿಶ್ವ ನಂ.1 ಕಾರ್ಲ್ಸನ್​ಗೆ ಸೋಲುಣಿಸಿದ ಮತ್ತೊಬ್ಬ ಭಾರತೀಯ
ಶಾಸಕರು ಅನುದಾನಗಳಿಗಾಗಿ ಸುರ್ಜೇವಾಲಾರನ್ನು ಭೇಟಿಯಾಗುತ್ತಿದ್ದಾರೆ: ನಿಖಿಲ್
ಶಾಸಕರು ಅನುದಾನಗಳಿಗಾಗಿ ಸುರ್ಜೇವಾಲಾರನ್ನು ಭೇಟಿಯಾಗುತ್ತಿದ್ದಾರೆ: ನಿಖಿಲ್
ಪೆಟ್ರೋಲ್ ವಾಹನಗಳಿಂದ ಎಲೆಕ್ಟ್ರಿಕ್ ವಾಹನಗಳಿಗೆ ಶಿಫ್ಟ್ ಆಗುತ್ತಿರುವ ಜನ
ಪೆಟ್ರೋಲ್ ವಾಹನಗಳಿಂದ ಎಲೆಕ್ಟ್ರಿಕ್ ವಾಹನಗಳಿಗೆ ಶಿಫ್ಟ್ ಆಗುತ್ತಿರುವ ಜನ
ಬಸ್ ಎದುರು ಹೋಗಿ ಕುಳಿತ ವ್ಯಕ್ತಿ, ಏಳೋಕೆ ರೆಡಿ ಇಲ್ಲ
ಬಸ್ ಎದುರು ಹೋಗಿ ಕುಳಿತ ವ್ಯಕ್ತಿ, ಏಳೋಕೆ ರೆಡಿ ಇಲ್ಲ
ಕೊಂದಿದ್ದು ಯಾರೂಂತ ಗೊತ್ತಿಲ್ಲ, ಜಗ ಮಾತ್ರ ನಮಗೆ ಪರಿಚಯ: ವಿಜಯಲಕ್ಷ್ಮಿ
ಕೊಂದಿದ್ದು ಯಾರೂಂತ ಗೊತ್ತಿಲ್ಲ, ಜಗ ಮಾತ್ರ ನಮಗೆ ಪರಿಚಯ: ವಿಜಯಲಕ್ಷ್ಮಿ